Just In
- 1 hr ago Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
- 1 hr ago ಯಾವುದೇ ಬೆಟ್ಟ, ಗುಡ್ಡಗಳು ಇದರ ಮುಂದೆ ಲೆಕ್ಕಕ್ಕಿಲ್ಲ: ಫೋರ್ಸ್ ಗೂರ್ಖಾ 5-ಡೋರ್ ಬಿಡುಗಡೆಗೆ ಸಜ್ಜು
- 1 hr ago 5 ರೂ. ಚಿಲ್ಲರೆ ಕೊಟ್ಟಿಲ್ಲವೆಂದು ರೊಚ್ಚಿಗೆದ್ದ ಪ್ರಯಾಣಿಕ: ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದೇನು ಗೊತ್ತಾ?
- 3 hrs ago ಆಕರ್ಷಕ ಯಮಹಾ ಏರಾಕ್ಸ್ 155 ವರ್ಷನ್ ಎಸ್ ಸ್ಕೂಟರ್ ಬಿಡುಗಡೆ
Don't Miss!
- News "ಅಲ್ಲಾ ಹೋ ಅಕ್ಬರ್" ಕೂಗಬೇಕು ಎಂದು ಮುಸ್ಲಿಂ ಗೂಂಡಾಗಳಿಂದ ಧಮ್ಕಿ ; ನಾವು ಪಾಕಿಸ್ತಾನದಲ್ಲಿ ಇದ್ದೇವಾ - ಆರ್.ಅಶೋಕ್
- Movies ಸುಶಾಂತ್ ಸಿಂಗ್ ರಜಪೂತ್ ಸತ್ತಾಗ ಯಾರು ದು:ಖಿಸಲಿಲ್ಲ ; ಜನರಿಗೆ ಬೇಕಿದ್ದಿದ್ದು 'ಮಸಾಲೆಯುಕ್ತ ಗಾಸಿಪ್' ಅಷ್ಟೇ..!
- Finance ನೆಸ್ಲೆಯ ಸೆರೆಲಾಕ್ ಶಿಶು ಹಾಲಿನಲ್ಲಿ ಸಕ್ಕರೆ ಅಂಶ ಪತ್ತೆ: ತನಿಖಾ ವರದಿಯಲ್ಲಿ ಬಹಿರಂಗ
- Technology ಬೋರಿಂಗ್ ಫೋನ್ಗಾಗಿ ಕೈಜೋಡಿಸಿದ HMD, ಹೈನೆಕೆನ್ ಮತ್ತು ಬೊಡೆಗಾ! ಯಾತಕ್ಕಾಗಿ ಈ ಫೋನ್?
- Lifestyle ಆಕಾಶದಲ್ಲಿ ಮತ್ತೆ ಕಾಣಿಸಿಕೊಂಡ ವಿಚಿತ್ರ ವಸ್ತು.! ಸ್ಪಷ್ಟನೆ ಬೇಕೆಂದ ನಿವಾಸಿಗಳು..!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೀಟು ಬೆಲ್ಟ್ ಧರಿಸುತ್ತಿದ್ದರೆ ಮುಂಡೆ ಪ್ರಾಣಾಪಾಯದಿಂದ ಪಾರಾಗುತ್ತಿದ್ದರು!
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗೋಪಿನಾಥ್ ಮುಂಡೆ (63) ಮಂಗಳವಾರ ದೆಹಲಿಯಲ್ಲಿ ಸಂಭವಿಸಿರುವ ಕಾರು ಅಪಘಾತದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಒಂದು ವೇಳೆ ಮುಂಡೆ ಸೀಟು ಬೆಲ್ಟ್ ಧರಿಸುತ್ತಿದ್ದಲ್ಲಿ ಪ್ರಾಣಾಪಾಯದಿಂದ ಪಾರಾಗುತ್ತಿದ್ದರು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಮಹಾರಾಷ್ಟ್ರದ
ಹಿಂದುಳಿದ
ವರ್ಗದ
ಜನಪ್ರಿಯ
ನಾಯಕರಾಗಿ
ಗುರುತಿಸಿಕೊಂಡಿದ್ದ
ಮುಂಡೆ
ಅಪಘಾತದ
ತೀವ್ರತೆಯಲ್ಲಿ
ತೀವ್ರ
ಆಘಾತಕ್ಕೊಳಗಾಗಿದ್ದರು.
ಇದರಿಂದ
ಹೃದಯಾಘಾತವಾಗಿದೆ
ಎಂದು
ವೈದ್ಯ
ಮೂಲಗಳು
ತಿಳಿಸಿವೆ.
ಸಚಿವರ
ಎಸ್ಎಕ್ಸ್4
ಕಾರಿಗೆ
ಢಿಕ್ಕಿ
ಹೊಡೆದಿದ್ದ
ಇಂಡಿಕಾ
ಕಾರಿನ
ಚಾಲಕ
ಸಿಗ್ನಲ್
ತಪ್ಪಿಸಿಕೊಂಡು
ಬಂದಿರುವುದು
ತನಿಖೆಯ
ವೇಳೆ
ಬಯಲಾಗಿದೆ.
ಈ
ಎಲ್ಲ
ವಿಚಾರಗಳನ್ನು
ಗಮನಿಸಿದಾಗ
ಶಾಲೆ
ಪಠ್ಯ
ಪುಸ್ತಕಗಳಲ್ಲೂ
ರಸ್ತೆ
ಸುರಕ್ಷತೆ
ಬಗ್ಗೆ
ಪಾಠ
ಕಡ್ಡಾಯಗೊಳಿಸಬೇಕೆಂಬ
ಬೇಡಿಕೆ
ಬಲವಾಗುತ್ತಿದೆ.
ಮರಣೋತ್ತರ ಪರೀಕ್ಷಾ ವರದಿಯ ಪ್ರಕಾರ, ಕಾರು ಅಪಘಾತದ ಬೆನ್ನಲ್ಲೇ ಆಂತರಿಕವಾಗಿ ಸಂಭವಿಸಿರುವ ಆಘಾತದಿಂದಾಗಿ ಹೃದಯಾಘಾತ ಸಂಭವಿಸಿದೆ ಎಂಬುದು ತಿಳಿದು ಬಂದಿದೆ.
ಎಐಐಎಂಎಸ್ ವೈದ್ಯ ಮೂಲಗಳ ಪ್ರಕಾರ, ಸಡನ್ ಅಪಘಾತ ಹಾಗೂ ಆಘಾತದಿಂದಾಗಿ ಮುಂಡೆ ಅವರ ಪಿತ್ತಕೋಶದಲ್ಲಿ ಗಾಯಗಳಾಗಿವೆ. ಪರಿಣಾಮ ತೀವ್ರ ಪ್ರಮಾಣದ ರಕ್ತಪಾತವಾಗಿದೆ. ಇದರಿಂದ ಹೃದಯಾಘಾತವಾಗಿದೆ ಎಂದಿದ್ದಾರೆ.
ಒಂದು ವೇಳೆ ಸೀಟು ಬೆಲ್ಟ್ ಧರಿಸುತ್ತಿದ್ದಲ್ಲಿ ಮುಂಡೆ ಪ್ರಾಣಾಪಾಯದಿಂದ ಪಾರಾಗುವ ಸಾಧ್ಯತೆಯಿತ್ತು. ಯಾಕೆಂದರೆ ಸೀಟು ಬೆಲ್ಟ್ ಧರಿಸುವುದರಿಂದ ಶರೀರದ ಆಂತರಿಕ ಭಾಗಗಳಿಗೆ ಉಂಟಾಗುವ ಆಘಾತದ ಪ್ರಯಾಣವನ್ನು ಕಡಿಮೆ ಮಾಡುತ್ತಿತ್ತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇಂತಹ ಅಪಘಾತ ಸನ್ನಿವೇಶಗಳು ನಿಮಗೂ ಎದುರಾಗಲೂಬಹುದು. ಹಾಗಾಗಿ ಸೀಟು ಬೆಲ್ಟ್ ಧರಿಸುವುದರ ಮಹತ್ವಗಳನ್ನು ತಿಳಿದುಕೊಳ್ಳಲು ಮುಂದಿನ ಒಂದೊಂದೇ ಪುಟವನ್ನು ತೆರೆದು ನೋಡಿರಿ. ಅಷ್ಟಕ್ಕೂ ಸೀಟು ಬೆಲ್ಟ್ ಐದು ವಿಧಗಳಲ್ಲಿ ಓರ್ವ ಪ್ರಯಾಣಿಕನ ಜೀವ ರಕ್ಷಿಸುತ್ತದೆ. ಅದು ಹೇಗೆ ಅಂತೀರಾ? ಮುಂದಕ್ಕೆ ಓದಿರಿ...
ಮಿಥ್ಯ ಕಲ್ಪನೆ
ಇದು ಸಾಮಾನ್ಯವಾಗಿ ಎಲ್ಲ ಪ್ರಯಾಣಿಕರನ್ನು ಕಾಡುವ ಪ್ರಶ್ನೆ. ಸೀಟು ಬೆಲ್ಟ್ ಧರಿಸುವುದರಿಂದ ಅಪಘಾತ ವೇಳೆಯಲ್ಲಿ ಪಾರಾಗಲು ಅಥವಾ ಕಾರಿನಿಂದ ಹೊರ ಹೋಗಲು ಸಾಧ್ಯವಿಲ್ಲ ಎಂಬ ಮಿಥ್ಯ ಕಲ್ಪನೆ ಕಾಡುತ್ತಿರುತ್ತದೆ. ಇದು ನಿಜವಾಗಿಯೂ ತಪ್ಪಾದ ಕಲ್ಪನೆಯಾಗಿದ್ದು, ಅಪಘಾತ ವೇಳೆಯಲ್ಲಿ ನಿಮಗೆ ಸ್ವಯಂ ರಕ್ಷಣೆಗೆ ಸಮಯವಿರುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿರಿ. ಹಾಗಾಗಿ ಸದಾ ಜೀವ ರಕ್ಷಕ ಸೀಟು ಬೆಲ್ಟ್ಗಳನ್ನು ಧರಿಸಲು ಮರೆಯದಿರಿ.
ವಿನ್ಯಾಸ
ಅಪಘಾತ ಸಂದರ್ಭಗಳಲ್ಲಿ ಆಘಾತದ ಪ್ರಮಾಣವನ್ನು ಶರೀರದ ಎಲ್ಲ ಭಾಗಗಳು ಒಂದೇ ರೀತಿಯಲ್ಲಿ ತಡೆಯುವ ರೀತಿಯಲ್ಲಿ ಸೀಟು ಬೆಲ್ಟ್ ವಿನ್ಯಾಸಗೊಳಿಸಲಾಗಿದೆ. ಇದು ನಿರ್ದಿಷ್ಟ ಭಾಗಕ್ಕೆ ಪೆಟ್ಟಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇದು ಎಡ ಭುಜದಿಂದ ಭುಜದ ಮೇಲ್ಬಾಗವಾಗಿ ಸೊಂಟದತ್ತ ಹಾಗೆಯೇ ಸೊಂಟದ ಸುತ್ತಲೂ ಇದು ಆವರಿಸಿಕೊಳ್ಳಲಿದೆ.
ಆಘಾತದ ಪ್ರಮಾಣ ಕಡಿಮೆ
ಮೇಲೆ ತಿಳಿಸಿದಂತೆಯೇ ಅಪಘಾತದ ತೀವ್ರತೆಯನ್ನು ಶರೀರದ ಒಂದೇ ಭಾಗದ ಮೇಲಿನ ಪ್ರಭಾವವನ್ನು ಕಡಿಮೆಗೊಳಿಸಲಿರುವ ಸೀಟು ಬೆಲ್ಟ್ಗಳು ಎಲ್ಲ ಭಾಗಗಳು ಒಂದೇ ರೀತಿಯಲ್ಲಿ ತಡೆಯುವಂತೆ ನೆರವಾಗಲಿದೆ. ಇದರಿಂದ ಬಲವಾಗಿ ಪೆಟ್ಟಾಗುವ ಸಾಧ್ಯತೆಯನ್ನು ಕಡಿಮೆ ಮಾಡಲಿದೆ.
ದೇಹ ಸಮತೋಲನ ಕಾಪಾಡಲಿದೆ
ಅವಘಡ ವೇಳೆಯಲ್ಲಿ ಸಡನ್ ಬ್ರೇಕ್ ಅಥವಾ ವೇಗವಾಗಿ ಢಿಕ್ಕಿಯಾಗುವ ಸಂಭವಿರುತ್ತದೆ. ಈ ವೇಳೆ ನಿಮ್ಮ ದೇಹದ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆಯಿದೆ. ಆದರೆ ಸೀಟು ಬೆಲ್ಟ್ಗಳು ದೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದಲ್ಲದೆ ಅಪಘಾತದ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ತಲೆಯ ಭಾಗಕ್ಕೆ ಪೆಟ್ಟಾಗದಂತೆ ನೋಡಿಕೊಳ್ಳುತ್ತದೆ.
ಸಹಜವಾಗಿಯೇ ಅಪಘಾತ ವೇಳೆಯಲ್ಲಿ ತಲೆಯ ಭಾಗಕ್ಕೆ ಪೆಟ್ಟಾದ್ದಲ್ಲಿ ವ್ಯಕ್ತಿ ಬೇಗನೇ ಸಾವಿಗೆ ಶರಣಾಗುತ್ತಾರೆ. ಆದರೆ ಸೀಟು ಬೆಲ್ಟ್ ಧರಿಸುವುದರಿಂದ ತಲೆಯ ಭಾಗಗಳಿಗೆ ಪೆಟ್ಟಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.