Just In
- 6 min ago ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- 31 min ago Vande Bharat: ವಂದೇ ಭಾರತ್ ಸ್ಲೀಪರ್ ವಿಶೇಷತೆಗಳು: ಇಂಟೀರಿಯರ್ಗೆ ಫಿದಾ ಆಗ್ತೀರ!
- 48 min ago ಎಲೆಕ್ಟ್ರಿಕ್ ಲೋಕಕ್ಕೆ ಎಸ್ಯುವಿ ದೈತ್ಯನ ಎಂಟ್ರಿ: ಇನ್ನು ಉಳಿದ ಕಾರುಗಳನ್ನು ದೇವರೇ ಕಾಪಾಡಬೇಕು!
- 1 hr ago Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
Don't Miss!
- News Rameshwar Cafe: ರಾಮೇಶ್ವರ ಕೆಫೆ ಬಾಂಬ್ ಸ್ಪೋಟ ಪ್ರಕರಣ: ದಾಳಿಗೆ ಸಹಾಯ ಮಾಡಿದ ವ್ಯಕ್ತಿ ಬಂಧನ- ತೀರ್ಥಹಳ್ಳಿ ಉಗ್ರನೊಂದಿಗೆ ಸಂಪರ್
- Lifestyle 2024: ಮದುವೆ, ಗಾಡಿ ಖರೀದಿ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಕ್ಕೆ ಏಪ್ರಿಲ್ನಲ್ಲಿರುವ ಶುಭ ದಿನಾಂಕಗಳಿವು
- Finance 2023 ಡಿಸೆಂಬರ್ ವೇಳೆಗೆ 160 ಲಕ್ಷ ಕೋಟಿ ರೂ. ದಾಟಿದ ಸರ್ಕಾರದ ಸಾಲ!
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Movies "ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೈಕ್ ಆಕ್ಸಿಡೆಂಟ್: ಬೆಂಗಳೂರು ನಂದಿ ಹಿಲ್ ಕ್ಲೈಂಬ್ ರೇಸ್ ರದ್ದು
ಅತಿ ದುರದೃಷ್ಟಕರ ಸಂಗತಿಯೊಂದರಲ್ಲಿ ಬೆಂಗಳೂರು ರೇಸರುಗಳ ಪಾಲಿಗೆ ಅತ್ಯಂತ ನೆಚ್ಚಿನ ರೇಸಿಂಗ್ ಸ್ಪರ್ಧೆಯಾಗಿದ್ದ ಹಾಗೂ ವರ್ಷಂಪ್ರತಿ ಆಯೋಜನೆಯಾಗುತ್ತಿದ್ದ ನಂದಿ ಹಿಲ್ ಕ್ಲೈಂಬ್ ರೇಸ್ ಅನ್ನು ಕಾರಣಾಂತರಗಳಿಂದಾಗಿ ರದ್ದುಗೊಳಿಸಲಾಗಿದೆ.
ಬಲ್ಲ
ಮೂಲಗಳ
ಪ್ರಕಾರ
ನಂದಿ
ಬೆಟ್ಟದ
1.5
ಕೀ.ಮೀ.
ದೂರದ
ರೇಸ್
ಟ್ರ್ಯಾಕ್ನಲ್ಲಿ
ಬೈಕ್
ಅಪಘಾತದ
ಬೆನ್ನಲ್ಲೇ
ಸಂಭವಿಸಿರುವ
ಕಳವಳಕಾರಿ
ಬೆಳವಣಿಗೆಯ
ಹಿನ್ನೆಲೆಯಲ್ಲಿ
ರೇಸ್
ಅನ್ನು
ಸಂಪೂರ್ಣವಾಗಿ
ಕೈಬಿಡಲು
ಆಯೋಜಕರು
ನಿರ್ಧರಿಸಿದ್ದಾರೆ.
ಘಟನೆಯ
ನಿಖರ
ಕಾರಣ
ತಿಳಿಯಲು
ಸ್ಲೈಡ್ನತ್ತ
ಮುಂದುವರಿಯಿರಿ...
ರೇಸ್ ಏಕೆ ರದ್ದಾಯಿತು?
ಇನ್ನರ್ ಲೈನ್ ರೇಸಿಂಗ್ ಪ್ರಾಯೋಜಕತ್ವದಲ್ಲಿ ನಂದಿ ಹಿಲ್ ಕ್ಲೈಂಬ್ ಕಾರು ಹಾಗೂ ಬೈಕ್ ರೇಸ್ ಜನವರಿ 20ರಿಂದ 22ರ ವರೆಗೆ ಆಯೋಜಿಸಲಾಗಿತ್ತು. ಇದರಂತೆ ಜನವರಿ 20ರಂದು ಅಭ್ಯಾಸ ರೇಸಿಂಗ್ ಕೂಡಾ ಯಶಸ್ವಿಯಾಗಿ ನಡೆದಿತ್ತು. ಇದಾದ ಬಳಿಕ ಜನವರಿ 21ರಂದು ಕಳೆದ ದಿನ ಕಡಿಮೆ ಸಿಸಿ ಬೈಕ್ಗಳ ರೇಸ್ ಕೂಡಾ ಆಯೋಜಿಸಲಾಗಿತ್ತು.
ಈ ನಡುವೆ ಸಾಯಂಕಾಲದ ವೇಳೆ ವೀಕ್ಷಣೆಗೆಂದು ಬಂದಿದ್ದ ಬೈಕ್ ಉತ್ಸಾಹಿಯೊಬ್ಬ ನಡೆಸಿದ್ದ ಬೈಕ್ ಕಸರತ್ತು ವೇಳೆ ದನವೊಂದಕ್ಕೆ ಢಿಕ್ಕಿಯಾದ ಪರಿಣಾಮ ಗಂಭೀರ ಅಪಘಾತಕ್ಕೊಳಗಾಗಿದ್ದರು. ಸ್ಥಳೀಯರ ಪ್ರಕಾರ ಬೈಕರ್ ಸ್ಥಿತಿ ಚಿಂತಾಜನಕವಾಗಿದೆ.
ರೇಸ್ನಲ್ಲಿ ಹೆಸರು ನೊಂದಾಯಿಸದ ಈತ ಈ ರೀತಿ ಬೈಕ್ ವೀಲಿಂಗ್ ಮಾಡಿರುವ ಎಡವಟ್ಟಿನಿಂದಾಗಿ ಇಂತಹದೊಂದು ಘಟನೆ ನಡೆದಿದೆ. ಇದರಿಂದಾಗಿ ಪ್ರೇಕ್ಷಕರನ್ನು ನಿಯಂತ್ರಿಸುವುದರಲ್ಲಿ ಹಾಗೂ ರೇಸ್ ಯಶಸ್ವಿಯಾಗಿ ಆಯೋಜಿಸುವುದರಲ್ಲಿ ಆಯೋಜಕರು ಸಂಪೂರ್ಣ ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇದಾದ ಬಳಿಕ ಕುಪಿತಗೊಂಡ ಸ್ಥಳೀಯರು ರೇಸ್ ಸ್ಥಗಿತಗೊಳಿಸಲು ಬಯಸಿದ್ದರೆಂಬ ಮಾತು ಕೇಳಿ ಬಂದಿದೆ. ತದಾ ಬಳಿಕ ರೇಸ್ ಕೈಬಿಡುವಂತೆ ಪೊಲೀಸರು ಆಯೋಜಕರಿಗೆ ತಿಳಿಸಿದ್ದರು ಎಂಬುದು ತಿಳಿದು ಬಂದಿದೆ.
ಒಟ್ಟಾರೆಯಾಗಿ ಪ್ರೇಕ್ಷಕರ ರೂಪದಲ್ಲಿ ರೇಸ್ ವೀಕ್ಷಣೆಗೆಂದು ಬಂದಿದ್ದ ಓರ್ವ ಬೈಕ್ ಉತ್ಸಾಹಿ ತೋರಿರುವ ಅತಿ ಬುದ್ಧಿವಂತಿಕೆಯಿಂದಾಗಿ ಸಂಪೂರ್ಣ ರೇಸ್ ರದ್ದಾಗುವಂತಾಗಿದ್ದು, ರೇಸಿಂಗ್ ಕನಸು ಹೊತ್ತುಕೊಂಡು ಬಂದಿದ್ದ ಅನೇಕ ವೃತ್ತಿಪರರ ಕನಸು ಭಗ್ನವಾಗಿದೆ.
ಈಗ ದುಡ್ಡು ಪಾವತಿಸಿ ರೇಸ್ಗೆ ಹೆಸರು ನೊಂದಾಯಿಸಿಕೊಂಡವರು ಅಧಿಕೃರನ್ನು ಸಂಪರ್ಕಿಸುತ್ತಿದ್ದು, ಹಣ ಹಿಂತಿರುಗಿ ನೀಡುವಂತೆ ಬೇಡಿಕೆಯಿರಿಸಿದ್ದಾರೆ.
ರೇಸರುಗಳು ಸಾವಿರಾರು ರುಪಾಯಿಗಳನ್ನು ಖರ್ಚು ಮಾಡಿಕೊಂಡು ನಂದಿ ಹಿಲ್ ಕ್ಲೈಂಬ್ ರೇಸ್ನಲ್ಲಿ ಭಾಗವಹಿಸಲು ಆಗಮಿಸಿದ್ದರು. ಆದರೆ ಇವರಿಗಾಗಿರುವ ನಷ್ಟವನ್ನು ಯಾರು ಭರಿಸಲಿದ್ದಾರೆ ಎಂಬುದು ಚರ್ಚೆಯ ವಿಷವಾಗಿದೆ.
ಒಟ್ಟಿನಲ್ಲಿ ರೇಸಿಂಗ್ ಎಂಬುದು ಮಕ್ಕಳಾಟವಲ್ಲ ಎಂಬ ವಿಚಾರವನ್ನು ಇಂತಹ ಬೈಕರ್ಗಳು ತಿಳಿದುಕೊಳ್ಳುವುದು ಉತ್ತಮ. ಇಲ್ಲದಿದ್ದಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆದರೆ ಹೇಳುವವರು ಕೇಳುವವರು ಯಾರು ಇರಲ್ಲ.