Just In
- 47 min ago ಭರ್ಜರಿ ಮೈಲೇಜ್, ಬಹುಬೇಡಿಕೆಯ ಮಾರುತಿ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್
- 1 hr ago BAJAJ CNG ಬೈಕ್ ಚಿತ್ರಗಳು ಸೋರಿಕೆ: ಬೆಲೆ ಕೇಳಿದರೆ ಶಾಕ್ ಆಗುವುದಂತೂ ಪಕ್ಕಾ!
- 1 hr ago Fujiyama EV: ಅಗ್ಗದ ಬೆಲೆಯಲ್ಲಿ ಹೊಸ ಇವಿ ಸ್ಕೂಟರ್ ಬಿಡುಗಡೆ: ಬೆಲೆ, ವಿಶೇಷತೆಗಳೇನು?
- 2 hrs ago Self-Driving Car: ಭಾರತೀಯರು ಅಸಮಾನ್ಯರು... ಬೊಲೆರೋದಲ್ಲಿ ಭವಿಷ್ಯ ಬದಲಿಸುವ ತಂತ್ರಜ್ಞಾನ!
Don't Miss!
- News ನಾನೊಬ್ಬ ಸ್ಟ್ರಾಂಗ್ ಸಿಎಂ, ನಿಮ್ಮ ಹಾಗೆ ವೀಕ್ ಪಿಎಂ ಅಲ್ಲ: ಸಿದ್ದರಾಮಯ್ಯ ಹೀಗೆ ಹೇಳಿದ್ಯಾಕೆ?
- Technology Airtel & Noise: ಇನ್ಮುಂದೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಸ್ಮಾರ್ಟ್ವಾಚ್ನದ್ದೇ ಹವಾ! ಟ್ಯಾಪ್-ಟು-ಪೇ ಫೀಚರ್ಸ್..
- Finance ಬಾಬಾ ರಾಮ್ದೇವ್ಗೆ ಖುದ್ದು ಹಾಜರಾಗುವಂತೆ ಖಡಕ್ ಸೂಚನೆ ನೀಡಿದ ಸುಪ್ರೀಂ ಕೋರ್ಟ್
- Lifestyle ಈರುಳ್ಳಿ ಹಾಕದೆ 3 ಪದಾರ್ಥ ಹಾಕಿ 5 ನಿಮಿಷದಲ್ಲಿ ಚಟ್ನಿ ಮಾಡಬಹುದು.! ಇಲ್ಲಿದೆ ರೆಸಿಪಿ
- Sports ಜೆರ್ಸಿ ನಂ.18, ವಿರಾಟ್ ಕೊಹ್ಲಿ ಜೊತೆಗಿನ ಹೋಲಿಕೆ ಬಗ್ಗೆ ಸ್ಮೃತಿ ಮಂಧಾನ ಹೇಳಿದ್ದೇನು?
- Movies ಐಪಿಎಲ್ ಸೈಡ್ ಎಫೆಕ್ಟ್ ; ಅವತಾರ ಪುರುಷ 2 ಬಿಡುಗಡೆ ದಿನಾಂಕ ಮುಂದಕ್ಕೆ, ಛೂ ಮಂತರ್ ಕಥೆ ಏನು..?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೇಳುವವರು ಕೇಳುವವರಿಲ್ಲದೆ ಹಾಳು ಬಿದ್ದ ಮೊದಲ ಮಾರುತಿ 800
ಹೌದು, ಹೇಳುವವರು ಕೇಳುವವರಿಲ್ಲದೆ ಹಾಳು ಬಿದ್ದಿರುವ ದೇಶದ ಮೊದಲ ಮಾರುತಿ 800 ಕಾರು ತುಕ್ಕು ಹಿಡಿಯುತ್ತಿದೆ. 1983ನೇ ಇಸವಿಯಲ್ಲಿ ಬಿಡುಗಡೆಯಾಗಿದ್ದ ದೇಶದ ಜನಸಾಮಾನ್ಯ ಕಾರು ಮಾರುತಿ 800 ಈಗ ಆಶ್ರಯದಾತರಿಲ್ಲದೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಕೋ ಎನ್ನುತ್ತಿದೆ.
ಮೂರು
ದಶಕಗಳಷ್ಟು
ಕಾಲ
ದೇಶದ
ಮಧ್ಯಮ
ವರ್ಗದ
ಕಾರೆನಿಸಿಕೊಂಡಿದ್ದ
ಮಾರುತಿ
800
ಕಾರಿನ
ಮೊದಲ
ಮಾಲಿಕರನ್ನು
ಲಕ್ಕಿ
ಡ್ರಾ
ಮೂಲಕ
ಆರಿಸಲಾಗಿತ್ತು.
ಇದರಂತೆ
ಸರ್ದಾರ್
ಹರ್ಪಾಲ್
ಸಿಂಗ್
ಎಂಬವರಿಗೆ
ಮೊದಲ
ಮಾಲಿಕರಾಗುವ
ಅದೃಷ್ಟ
ಒಲಿದು
ಬಂದಿತ್ತು.
ಆದರೆ
2010ರಲ್ಲಿ
ಹರ್ಪಾಲ್
ಸಿಂಗ್
ಇಹಲೋಕ
ತ್ಯಜಿಸಿದ
ಬಳಿಕ
ಮಾರುತಿ
800
ಕಾರಿಗೆ
ರಕ್ಷಣೆ
ಇಲ್ಲದಂತಾಗಿದೆ.
ದಿವಂಗತ ಹರ್ಪಾಲ್ ಸಿಂಗ್ ಅವರಿಗೆ ಇಬ್ಬರು ಹೆಣ್ಮಕ್ಕಳು. ಇಬ್ಬರ ವಿವಾಹಿತರಾಗಿದ್ದು, ತಮ್ಮ ತಮ್ಮ ಫ್ಯಾಮಿಲಿ ಜೊತೆ ಜೀವನ ಸಾಗಿಸುತ್ತಿದ್ದಾರೆ. ಇನ್ನು ಹರ್ಪಾಲ್ ಸಿಂಗ್ ಪತ್ನಿ 2012ರಲ್ಲೇ ಮೃತಪಟ್ಟಿದ್ದರು.
ಮಾಜಿ ಪ್ರಧಾನಿ ಇಂಧಿರಾ ಗಾಂಧಿ ಅವರ ದಿವ್ಯ ಹಸ್ತಗಳಿಂದ ಮೊದಲ ಮಾರುತಿ 800 ಕೀಲಿ ಪಡೆದಿದ್ದ ಹರ್ಪಾಲ್ ಸಿಂಗ್ ತಮ್ಮ ಕುಟುಂಬದ ಸದಸ್ಯರಂತೆ ಮಾರುತಿ ಕಾರನ್ನು ಲಾಲನೆ ಪಾಲನೆ ಮಾಡಿದ್ದರು.
ಪುತ್ರಿ ಗೋವಿಂಧರ್ ಪಾಲ್ ಕೌರ್ ಹೇಳುವ ಪ್ರಕಾರ, ತಂದೆಯ ಮರಣಾಂತರ ಕಾರಿನ ನಿರ್ವಹಣೆ ಕಷ್ಟವೆನಿಸಿದೆ. ಇದರಿಂದಾಗಿ ಪಾಳು ಬಿದ್ದಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ತಮ್ಮ ವ್ಯಥೆ ತೋಡಿಕೊಂಡಿರುವ ಹರ್ಪಾಲ್ ಸಿಂಗ್ ಅಳಿಯ ತೆಜಿಂಧರ್ ಅಹ್ಲುವಾಲಿಯಾ, ದೇಶದ ಮೊದಲ ಮಾರುತಿ 800 ಕಾರಿನ ರಕ್ಷಣೆಗೆ ಮಾರುತಿ ಸುಜುಕಿ ಮುಂದೆ ಬರಬೇಕಾಗಿ ವಿನಂತಿಸಿದ್ದಾರೆ.
ನಾವು ಯಾವುದೇ ರೀತಿ ಹಣಕಾಸು ನೆರವನ್ನು ಯಾಚಿಸುತ್ತಿಲ್ಲ. ಬದಲಾಗಿ ಐಕಾನಿಕ್ ಮಾರುತಿ 800 ಕಾರನ್ನು ಸಂಗ್ರಹಾಲಯದಲ್ಲಿರಿಸಬೇಕು ಎಂದವರು ಆಗ್ರಹಿಸಿದ್ದಾರೆ.
ದೇಶದ ಮಧ್ಯಮ ವರ್ಗದ ಕಾರು ಎಂದು ಗುರುತಿಸಿಕೊಂಡಿದ್ದ ಮಾರುತಿ 800 ಅಂದಿನ ಅತ್ಯುತ್ತಮ ಮಾಡೆಲ್ ಗಳಾದ ಅಂಬಾಸಿಡರ್ ಹಾಗೂ ಫಿಯೆಟ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿ ಹೊರಬಂದಿತ್ತು.
ಸಾಮಾನ್ಯ ಜನರಿಗೆ ಕೈಗೆಟುಕುವ ದರಗಳಲ್ಲಿ ಕಾರೊಂದನ್ನು ತುಲುಪಿಸುವುದು ಅಂದಿನ ಪ್ರಧಾನಿ ಇಂಧಿರಾ ಗಾಂಧಿ ಇರಾದೆಯಾಗಿತ್ತು. ಇದರಂತೆ ಜಪಾನ್ ಮೂಲದ ಸುಜುಕಿ ಜೊತೆ ಕೈಜೋಡಿಸಿಕೊಂಡಿದ್ದ ಮಾರುತಿ ಅಗ್ಗದ ಕಾರನ್ನು ಬಿಡುಗಡೆಗೊಳಿಸಲಾಗಿತ್ತು.
ಇಷ್ಟೆಲ್ಲ ಆದರೂ ಕಂಪನಿಯ ಮಧ್ಯ ಪ್ರವೇಶವನ್ನು ಬಯಸುವುದಕ್ಕಿಂತ ಮೊದಲು ಕನಿಷ್ಠ ಪಕ್ಷ ತುಕ್ಕು ಹಿಡಿಯುತ್ತಿರುವ ಮಾರುತಿ 800 ಕಾರನ್ನು ರಕ್ಷಿಸುವ ಪ್ರಾಮಾಣಿಕ ಪ್ರಯತ್ನವನ್ನು ತೆಜಿಂಧರ್ ಮಾಡಬಹುದಿತ್ತು ಎಂಬುದು ನಮ್ಮ ಅಭಿಮತವಾಗಿದೆ.
ತೆಜಿಂಧರ್ ಮಾತಿನಲ್ಲೇ ಹೇಳುವ ಪ್ರಕಾರ ತಮ್ಮ ಪಾಲಿಗೆ ವರದಾನವಾಗಿರುವ ಮಾರುತಿ 800 ಓರ್ವ ಕುಟುಂಬ ಸದಸ್ಯನ ರೀತಿಯಲ್ಲಿ ನೋಡಿಕೊಂಡಿದ್ದಾರಂತೆ. ಹಾಗಿದ್ದರೆ ಹಾಳು ಬಿದ್ದಿರುವ ಕಾರಿಗೆ ಕನಿಷ್ಠ ಪಕ್ಷ ಒಂದು ಕವರ್ ಕೂಡಾ ಹಾಕಬಹುದಿತ್ತಲ್ಲವೇ? ಅಥವಾ ನಿರಂತರ ಅಂತರಾಳದಲ್ಲಿ ಶುಚಿಯಾಗಿಡಬಹುದಿತ್ತಲ್ಲವೇ? ಎಂಬ ಸಾಮಾನ್ಯ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಇಲ್ಲದಂತಾಗಿದೆ.
ಒಟ್ಟಿನಲ್ಲಿ ಮಾರುತಿ ಸಂಸ್ಥೆಯಾದರೂ ಈ ನಿಟ್ಟಿನಲ್ಲಿ ಮುಂದೆ ಬಂದು ಉಚಿತ ಕ್ರಮ ಕೈಗೊಳ್ಳಲಿ ಎಂಬುದು ನಮ್ಮ ಆಶಯವಾಗಿದೆ.