Just In
- 8 hrs ago Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- 9 hrs ago ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- 10 hrs ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 10 hrs ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
Don't Miss!
- Movies Shobha Shetty ; ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ ನಟಿ ಶೋಭಾ ಶೆಟ್ಟಿ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೇಳುವವರು ಕೇಳುವವರಿಲ್ಲದೆ ಹಾಳು ಬಿದ್ದ ಮೊದಲ ಮಾರುತಿ 800
ಹೌದು, ಹೇಳುವವರು ಕೇಳುವವರಿಲ್ಲದೆ ಹಾಳು ಬಿದ್ದಿರುವ ದೇಶದ ಮೊದಲ ಮಾರುತಿ 800 ಕಾರು ತುಕ್ಕು ಹಿಡಿಯುತ್ತಿದೆ. 1983ನೇ ಇಸವಿಯಲ್ಲಿ ಬಿಡುಗಡೆಯಾಗಿದ್ದ ದೇಶದ ಜನಸಾಮಾನ್ಯ ಕಾರು ಮಾರುತಿ 800 ಈಗ ಆಶ್ರಯದಾತರಿಲ್ಲದೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಕೋ ಎನ್ನುತ್ತಿದೆ.
ಮೂರು
ದಶಕಗಳಷ್ಟು
ಕಾಲ
ದೇಶದ
ಮಧ್ಯಮ
ವರ್ಗದ
ಕಾರೆನಿಸಿಕೊಂಡಿದ್ದ
ಮಾರುತಿ
800
ಕಾರಿನ
ಮೊದಲ
ಮಾಲಿಕರನ್ನು
ಲಕ್ಕಿ
ಡ್ರಾ
ಮೂಲಕ
ಆರಿಸಲಾಗಿತ್ತು.
ಇದರಂತೆ
ಸರ್ದಾರ್
ಹರ್ಪಾಲ್
ಸಿಂಗ್
ಎಂಬವರಿಗೆ
ಮೊದಲ
ಮಾಲಿಕರಾಗುವ
ಅದೃಷ್ಟ
ಒಲಿದು
ಬಂದಿತ್ತು.
ಆದರೆ
2010ರಲ್ಲಿ
ಹರ್ಪಾಲ್
ಸಿಂಗ್
ಇಹಲೋಕ
ತ್ಯಜಿಸಿದ
ಬಳಿಕ
ಮಾರುತಿ
800
ಕಾರಿಗೆ
ರಕ್ಷಣೆ
ಇಲ್ಲದಂತಾಗಿದೆ.
ದಿವಂಗತ ಹರ್ಪಾಲ್ ಸಿಂಗ್ ಅವರಿಗೆ ಇಬ್ಬರು ಹೆಣ್ಮಕ್ಕಳು. ಇಬ್ಬರ ವಿವಾಹಿತರಾಗಿದ್ದು, ತಮ್ಮ ತಮ್ಮ ಫ್ಯಾಮಿಲಿ ಜೊತೆ ಜೀವನ ಸಾಗಿಸುತ್ತಿದ್ದಾರೆ. ಇನ್ನು ಹರ್ಪಾಲ್ ಸಿಂಗ್ ಪತ್ನಿ 2012ರಲ್ಲೇ ಮೃತಪಟ್ಟಿದ್ದರು.
ಮಾಜಿ ಪ್ರಧಾನಿ ಇಂಧಿರಾ ಗಾಂಧಿ ಅವರ ದಿವ್ಯ ಹಸ್ತಗಳಿಂದ ಮೊದಲ ಮಾರುತಿ 800 ಕೀಲಿ ಪಡೆದಿದ್ದ ಹರ್ಪಾಲ್ ಸಿಂಗ್ ತಮ್ಮ ಕುಟುಂಬದ ಸದಸ್ಯರಂತೆ ಮಾರುತಿ ಕಾರನ್ನು ಲಾಲನೆ ಪಾಲನೆ ಮಾಡಿದ್ದರು.
ಪುತ್ರಿ ಗೋವಿಂಧರ್ ಪಾಲ್ ಕೌರ್ ಹೇಳುವ ಪ್ರಕಾರ, ತಂದೆಯ ಮರಣಾಂತರ ಕಾರಿನ ನಿರ್ವಹಣೆ ಕಷ್ಟವೆನಿಸಿದೆ. ಇದರಿಂದಾಗಿ ಪಾಳು ಬಿದ್ದಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ತಮ್ಮ ವ್ಯಥೆ ತೋಡಿಕೊಂಡಿರುವ ಹರ್ಪಾಲ್ ಸಿಂಗ್ ಅಳಿಯ ತೆಜಿಂಧರ್ ಅಹ್ಲುವಾಲಿಯಾ, ದೇಶದ ಮೊದಲ ಮಾರುತಿ 800 ಕಾರಿನ ರಕ್ಷಣೆಗೆ ಮಾರುತಿ ಸುಜುಕಿ ಮುಂದೆ ಬರಬೇಕಾಗಿ ವಿನಂತಿಸಿದ್ದಾರೆ.
ನಾವು ಯಾವುದೇ ರೀತಿ ಹಣಕಾಸು ನೆರವನ್ನು ಯಾಚಿಸುತ್ತಿಲ್ಲ. ಬದಲಾಗಿ ಐಕಾನಿಕ್ ಮಾರುತಿ 800 ಕಾರನ್ನು ಸಂಗ್ರಹಾಲಯದಲ್ಲಿರಿಸಬೇಕು ಎಂದವರು ಆಗ್ರಹಿಸಿದ್ದಾರೆ.
ದೇಶದ ಮಧ್ಯಮ ವರ್ಗದ ಕಾರು ಎಂದು ಗುರುತಿಸಿಕೊಂಡಿದ್ದ ಮಾರುತಿ 800 ಅಂದಿನ ಅತ್ಯುತ್ತಮ ಮಾಡೆಲ್ ಗಳಾದ ಅಂಬಾಸಿಡರ್ ಹಾಗೂ ಫಿಯೆಟ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿ ಹೊರಬಂದಿತ್ತು.
ಸಾಮಾನ್ಯ ಜನರಿಗೆ ಕೈಗೆಟುಕುವ ದರಗಳಲ್ಲಿ ಕಾರೊಂದನ್ನು ತುಲುಪಿಸುವುದು ಅಂದಿನ ಪ್ರಧಾನಿ ಇಂಧಿರಾ ಗಾಂಧಿ ಇರಾದೆಯಾಗಿತ್ತು. ಇದರಂತೆ ಜಪಾನ್ ಮೂಲದ ಸುಜುಕಿ ಜೊತೆ ಕೈಜೋಡಿಸಿಕೊಂಡಿದ್ದ ಮಾರುತಿ ಅಗ್ಗದ ಕಾರನ್ನು ಬಿಡುಗಡೆಗೊಳಿಸಲಾಗಿತ್ತು.
ಇಷ್ಟೆಲ್ಲ ಆದರೂ ಕಂಪನಿಯ ಮಧ್ಯ ಪ್ರವೇಶವನ್ನು ಬಯಸುವುದಕ್ಕಿಂತ ಮೊದಲು ಕನಿಷ್ಠ ಪಕ್ಷ ತುಕ್ಕು ಹಿಡಿಯುತ್ತಿರುವ ಮಾರುತಿ 800 ಕಾರನ್ನು ರಕ್ಷಿಸುವ ಪ್ರಾಮಾಣಿಕ ಪ್ರಯತ್ನವನ್ನು ತೆಜಿಂಧರ್ ಮಾಡಬಹುದಿತ್ತು ಎಂಬುದು ನಮ್ಮ ಅಭಿಮತವಾಗಿದೆ.
ತೆಜಿಂಧರ್ ಮಾತಿನಲ್ಲೇ ಹೇಳುವ ಪ್ರಕಾರ ತಮ್ಮ ಪಾಲಿಗೆ ವರದಾನವಾಗಿರುವ ಮಾರುತಿ 800 ಓರ್ವ ಕುಟುಂಬ ಸದಸ್ಯನ ರೀತಿಯಲ್ಲಿ ನೋಡಿಕೊಂಡಿದ್ದಾರಂತೆ. ಹಾಗಿದ್ದರೆ ಹಾಳು ಬಿದ್ದಿರುವ ಕಾರಿಗೆ ಕನಿಷ್ಠ ಪಕ್ಷ ಒಂದು ಕವರ್ ಕೂಡಾ ಹಾಕಬಹುದಿತ್ತಲ್ಲವೇ? ಅಥವಾ ನಿರಂತರ ಅಂತರಾಳದಲ್ಲಿ ಶುಚಿಯಾಗಿಡಬಹುದಿತ್ತಲ್ಲವೇ? ಎಂಬ ಸಾಮಾನ್ಯ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಇಲ್ಲದಂತಾಗಿದೆ.
ಒಟ್ಟಿನಲ್ಲಿ ಮಾರುತಿ ಸಂಸ್ಥೆಯಾದರೂ ಈ ನಿಟ್ಟಿನಲ್ಲಿ ಮುಂದೆ ಬಂದು ಉಚಿತ ಕ್ರಮ ಕೈಗೊಳ್ಳಲಿ ಎಂಬುದು ನಮ್ಮ ಆಶಯವಾಗಿದೆ.