Just In
- 54 min ago ಭಾರತದಲ್ಲಿ ಎಪ್ರಿಲಿಯಾ ಶ್ರೇಣಿಯ ನವೀಕರಣ... ಸೂಪರ್ ಬೈಕ್ ಸಂಸ್ಕೃತಿಗೆ ಅಡಿಪಾಯ
- 1 hr ago ಫ್ಯಾಮಿಲಿ ಕಾರಾಗಿ ಜನರ ಮನಗೆದ್ದ ಇನ್ನೋವಾ ಹೈಕ್ರಾಸ್ನ ಹೊಸ ರೂಪಾಂತರದ ವಿಶೇಷತೆಗಳೇನು?
- 2 hrs ago Bengaluru: ಇಂದಿನಿಂದ ಹೆಬ್ಬಾಳ ಮೇಲ್ಸೇತುವೆ ಮೇಲೆ ಈ ವಾಹನಗಳ ಸಂಚಾರ ಬಂದ್.. ಪರ್ಯಾಯ ಮಾರ್ಗಗಳಾವುವು?
- 4 hrs ago ಮಹೀಂದ್ರಾ ಬೊಲೆರೋ ನಿಯೋ ಪ್ಲಸ್ 9-ಸೀಟರ್ ಎಸ್ಯುವಿ ಬೆಲೆ, ವಿಶೇಷತೆಗಳು!
Don't Miss!
- News Namma Yatri: ಕ್ಯಾಬ್ ಸೇವೆ ಆರಂಭಿಸಿದ ನಮ್ಮ ಯಾತ್ರಿ; 25,000 ಚಾಲಕರ ನೇಮಕ
- Technology HMD ಪಲ್ಸ್ ನ ಕಲರ್ ಹಾಗೂ ಫೀಚರ್ಸ್ ಲೀಕ್! ಶೀಘ್ರದಲ್ಲೇ ಲಾಂಚ್...
- Lifestyle ರಾಮನವಮಿ ವಿಶೇಷ: ಬಾಲರಾಮನಿಗೆ ಸೂರ್ಯರಶ್ಮಿ ಅಭಿಷೇಕದ ಅದ್ಭುತ ದೃಶ್ಯಾವಳಿ..!
- Finance ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಕ್ಯಾಬ್ ಸೇವೆ ಪ್ರಾರಂಭ, ಶೂನ್ಯ ಕಮಿಷನ್ ಭರವಸೆ
- Sports RCB: ಇದೇ ಆರ್ಸಿಬಿ ಸಮಸ್ಯೆ ಮೂಲ; ವಿದೇಶಿ ಕೋಚಿಂಗ್ ಸ್ಟಾಫ್ ವಿರುದ್ಧ ಸಿಡಿಮಿಡಿಗೊಂಡ ವೀರೇಂದ್ರ ಸೆಹ್ವಾಗ್
- Movies ದ್ವಾರಕೀಶ್ ನಿಧನಕ್ಕೆ ಪಿಎಂ ಮೋದಿ ಸಂತಾಪ.. ಶಿವಣ್ಣ ಅಂತಿಮ ದರ್ಶನ; ಇಲ್ಲಿದೆ 'ಪ್ರಚಂಡ ಕುಳ್ಳ'ನ ಅಂತ್ಯಕ್ರಿಯೆ ಡಿಟೈಲ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಿ.ಜಿ ಲಾಕರ್ ಇದ್ರೆ ನೀವ್ ಡಿಎಲ್ ಕೈಯಲ್ಲಿ ಹಿಡ್ಕೊಂಡು ಓಡಾಡಬೇಕಾಗಿಲ್ಲ...!!
ಡಿಜಿ ಲಾಕರ್ ಒಂದು ವೈಯಕ್ತಿಕ ಸಂಗ್ರಹ ಸ್ಥಳ, ಇದನ್ನು ಪ್ರತಿ ನಿವಾಸಿಯ ಆಧಾರ್ ಸಂಖ್ಯೆಯನ್ನು ಆಧರಿಸಿ ಲಿಂಕ್ ಮಾಡಲಾಗಿ ಮೀಸಲಿಟ್ಟ ವೈಯಕ್ತಿಕ ಸಂಗ್ರಹ ಸ್ಥಳ ಎಂದು ಪರಿಗಣಿಸಬಹುದು.
ಮೊದಲೆಲ್ಲ ವಾಹನ ಪರವಾನಗಿ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ಕಾಲವೊಂದಿತ್ತು, ಪ್ರತಿಯೊಬ್ಬರೂ ತಮ್ಮ ಪರವಾನಗಿ ಪತ್ರದ ನಕಲು ಹಿಡಿದು ತೆರಳಬೇಕಾದ ಅವಶ್ಯಕತೆ ಇತ್ತು. ಈಗ ಕಾಲ ಬದಲಾಗಿದೆ. ಪ್ರತಿಯೊಂದು ಡಿಜಿಟಲೀಕರಣ ಆಗುತ್ತಿರುವ ಹೊತ್ತಿನಲ್ಲಿ, ಡಿಎಲ್ ಕೂಡ ಡಿಜಿಟಲ್ ಆಗುವತ್ತ ಧಾಪುಗಾಲಿಟ್ಟಿದೆ.
ಡಿಜಿ ಲಾಕರ್ ಅಂದ್ರೆ ಏನು ?
ಡಿಜಿ ಲಾಕರ್ ಒಂದು ವೈಯಕ್ತಿಕ ಸಂಗ್ರಹ ಸ್ಥಳ, ಇದನ್ನು ಪ್ರತಿ ನಿವಾಸಿಯ ಆಧಾರ್ ಸಂಖ್ಯೆಯನ್ನು ಆಧರಿಸಿ ಲಿಂಕ್ ಮಾಡಲಾಗಿ ಮೀಸಲಿಟ್ಟ ವೈಯಕ್ತಿಕ ಸಂಗ್ರಹ ಸ್ಥಳ ಎಂದು ಪರಿಗಣಿಸಬಹುದು.
ಇ-ದಾಖಲೆಗಳು, ಯುನಿಫಾರ್ಮ್ ರಿಸೋರ್ಸ್ ಐಡೆಂಟಿಫೈಯರ್ (ಯುಆರ್ಐ) (ಧ್ವನಿ ಮುದ್ರಿಕೆ, ವಿಡಿಯೋ, ಬರಹ) ಇತ್ಯಾದಿಗಳನ್ನೂ ಇದರಲ್ಲಿ ಶೇಖರಿಸಿಡಬಹುದು. ಡಿ ಜಿ ಲಾಕರ್ ಅನ್ನು ವೆಬ್ ಪೋರ್ಟಲ್ ಅಥವಾ ಮೊಬೈಲ್ ಅಪ್ಲೀಕೆಷನ್ ಮೂಲಕ ಪ್ರವೇಶಿಸಬಹುದಾಗಿದೆ.
ಡಿ ಜಿ ಲಾಕರ್ನ ಬಹುಮುಖ್ಯ ಭಾಗಗಳು:
1) ಡ್ಯಾಶ್ ಬೋರ್ಡ್
2) ನೀಡಲಾಗಿರುವ ದಾಖಲೆಗಳು.
3) ಅಪ್ಲೋಡ್ಡಾ ಕ್ಯುಮೆಂಟ್ಸ್:
4) ಹಂಚಿಕೆ ಮಾಡಲಾದ ಡಾಕ್ಯುಮೆಂಟ್ಗಳು.
5) ಚಟುವಟಿಕೆ (ಆಕ್ಟಿವಿಟಿ )
6) ವಿತರಕರು (ಇಸ್ಸೂರ್ಸ್)
ಖಾತೆಯನ್ನು ಹೇಗೆ ತೆರೆಯಬೇಕು ?
ಆ್ಯಪ್ ಡೌನ್ಲೋಡ್ ಮಾಡಿಕೊಂಡ ನಂತರ ಸೈನ್ ಇನ್ ಆಯ್ಕೆ ಕ್ಲಿಕ್ ಮಾಡಿ ಲಾಗಿನ್ ಆಗಿ. ಇಲ್ಲಿ ನಿಮ್ಮ ಅಧಿಕೃತ ಮೊಬೈಲ್ ನಂಬರ್ ನೀಡಬೇಕು. ಆ ನಂಬರ್ಗೆ ಒನ್ ಟೈಮ್ಪಾಸ್ವರ್ಡ್ (ಒಟಿಪಿ) ಬರುತ್ತದೆ.
ಓಟಿಪಿ ನಂಬರ್ ಬಳಸಿ ಮೊಬೈಲ್ ನಂಬರನ್ನು ಖಚಿತ ಪಡಿಸಿ. ಇದೇ ವೇಳೆ ಆ್ಯಪ್ ನಿಮ್ಮ ಯೂಸರ್ ನೇಮ್, ಪಾಸ್ವರ್ಡ್ ಹಾಕಲೂ ಹೇಳುತ್ತದೆ. ಪಾಸ್ ವರ್ಡ್ ನೀಡಿದ ಬಳಿಕ ನಿಮ್ಮ ಆಧಾರ್ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
ನಂತರ ಬಲಭಾಗದಲ್ಲಿರುವ "ಲಿಂಕ್ ಆಧಾರ್' ಬಟನ್ ಅದುಮಿ 12 ಸಂಖ್ಯೆಗಳ ಆಧಾರ್ ಅನ್ನು ನಮೂದಿಸಿ. "ಕಂಟಿನ್ಯೂ' ಕೊಟ್ಟಾಗ ನಿಮ್ಮ ಅಧಿಕೃತ ಮೊಬೈಲ್ ನಂಬರ್ಗೆ ಒಟಿಪಿ ಬರುತ್ತದೆ.
ಹೋಂಸ್ಕ್ರೀನ್ ಬಲಭಾಗದಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡಲು ಅಪ್ಲೋಡ್ ಬಟನ್ ಮತ್ತು ದಾಖಲೆಗಳನ್ನು ಪ್ರತ್ಯೇಕವಾಗಿಡಲು ಫೋಲ್ಡರ್ ಮಾಡುವ ಸೌಲಭ್ಯವೂ ಇದೆ.
ಡಿಜಿಲಾಕರ್ನಿಂದ ಸರ್ಕಾರದ ಯಾವುದೇ ಇಲಾಖೆಗೆ ನಿಮ್ಮ ದಾಖಲೆ ಕಳಿಸಬಹುದು. ಕಳಿಸಬೇಕಾದ ಇಲಾಖೆ ಹೆಸರು ನೀಡಿ "ಷೇರ್' ಬಟನ್ ಅದುಮಿದರೆ ನಿಮ್ಮ ದಾಖಲೆ ಅವರಿಗೆ ಲಭ್ಯ. ಆ ಇಲಾಖೆ ನಿಮ್ಮ ದಾಖಲೆಯನ್ನು ಪರಿಶೀಲಿಸಿದರೆ, ಈ ಬಗ್ಗೆ ನಿಮ್ಮ ಮೊಬೈಲ್, ಇಮೇಲ್ ಐಡಿಗೆ ಹಿಮ್ಮಾಹಿತಿ ಬರುತ್ತದೆ.
ಡಿಜಿ ಲಾಕರ್ ಸುರಕ್ಷತೆ ಹೇಗೆ ?
1. ಪಾಸ್ವರ್ಡ್ ಬಗ್ಗೆ ಎಚ್ಚರವಿರಲಿ
2. ಪಾಸ್ವರ್ಡ್ ಆಯ್ದುಕೊಳ್ಳುವಾಗ ಕೊಂಚ ಜಾಣ್ಮೆ ವಹಿಸಿ
3. ಒಂದೇ ತೆರನಾದ ಪಾಸ್ವರ್ಡ್ ಬಳಕೆ ಕೈಬಿಡಿ
4. ಉಚಿತ ವೈ-ಫೈನಿಂದ ದೂರವಿರಿ:ಅಗತ್ಯವಿದ್ದರೆ ಮಾತ್ರ ಬಳಸಿ
5. ಕೊಡುಗೆಗಳ ಹೆಸರಲ್ಲಿ ವಂಚನೆ ನೆಡೆಸುತ್ತಾರೆ, ಎಚ್ಚರವಿರಲಿ
6. ಖಾತೆ ಬಗ್ಗೆ ಯಾರೊಂದಿಗೂ ವಿವರ ಹಂಚಿಕೊಳ್ಳದಿರಿ
ಡಿಜಿ ಲಾಕರ್ನ ಉಪಯೋಗಗಳು ಏನು ?
- ದಾಖಲೆಗಳನ್ನು ಸುರಕ್ಷಿತ ಮಾರ್ಗದಲ್ಲಿ ಹಂಚಿಕೆ ಮಾಡಬಹುದು
- ನಿಮ್ಮ ದಾಖಲೆಗಳ ನಕಲಿ ಬಳಕೆ ಮಾಡಲು ಅವಕಾಶ ಇರುವುದಿಲ್ಲ
- ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ದಾಖಲೆಗಳನ್ನು ಪಡೆದುಕೊಳ್ಳಬಹುದು
- ನಿಮ್ಮ ದಾಖಲೆಗಳ ಅನವಶ್ಯಕ ಉಪಯೋಗ ತಡೆದು ಸವಕಳಿ ಆಗದಂತೆ ಮಾಡುತ್ತದೆ
- 10 ಎಂಬಿ ಡಾಟಾ ಅವಕಾಶ ನಿಮ್ಮ ಬಳಿ ಇರುತ್ತದೆ
ನನ್ನ ಡಿಜಿಟಲ್ ಲಾಕರ್ ಇ-ದಾಖಲೆಗಳನ್ನು ಹೇಗೆ ಹಂಚಿಕೊಳ್ಳಬಹುದು?
ನಿಮ್ಮ ಇ ಡಾಕ್ಯುಮೆಂಟ್ ಹಂಚಿಕೊಳ್ಳಲು ( ‘ಅಪ್ಲೋಡ್ ಡಾಕ್ಯುಮೆಂಟ್ಸ್' ಉಪವಿಭಾಗ ಅಡಿಯಲ್ಲಿ ‘ಡಿಜಿಟಲ್ ಡಾಕ್ಯುಮೆಂಟ್ಸ್' ಉಪವಿಭಾಗ ಅಡಿಯಲ್ಲಿ URI ಎಂದು ಸೂಚಿಸಲಾಗಿದೆ) ನೀವು ಹಂಚಿಕೊಳ್ಳಲು ಬಯಸುವ ಡಾಕ್ಯುಮೆಂಟ್ ಮುಂದೆ ಒದಗಿಸಿದ ‘ಹಂಚಿಕೊಳ್ಳಿ' ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
ಒಂದು ಸಂವಾದ ಪೆಟ್ಟಿಗೆಯ ಪಾಪ್ ಅಪ್ ತೋರಿಬರುತ್ತದೆ . ದಯವಿಟ್ಟು ಸಂವಾದ ಪೆಟ್ಟಿಗೆಯಲ್ಲಿ ಸ್ವೀಕರಿಸುವವರ ಇಮೇಲ್ ವಿಳಾಸವನ್ನು ನಮೂದಿಸಿ ಮತ್ತು ‘ಹಂಚಿಕೊಳ್ಳಿ' ಬಟನ್ ಕ್ಲಿಕ್ ಮಾಡಿ.
ಯಾವ ದಾಖಲೆ ಸಂಗ್ರಹಿಸಿಡಬಹುದು?
ಶಿಕ್ಷಣ ಪ್ರಮಾಣಪತ್ರಗಳು
ಆಧಾರ್ ಮಾಹಿತಿ
ಡ್ರೈವಿಂಗ್ ಲೈಸೆನ್ಸ್
ಪಾಸ್ಪೋರ್ಟ್
ಪಡಿತರ ಪತ್ರ
ಪಾನ್ ಕಾರ್ಡ್
ಚುನಾವಣೆ ಗುರುತು ಚೀಟಿ
ಆದರೆ ಈ ದಾಖಲೆಗಳು ಪಿಡಿಎಫ್, ಎಕ್ಸ್ಎಂಎಲ್, ಜೆಪೆಗ್, ಜೆಪಿಜಿ, ಪಿಎನ್ಜಿ, ಬಿಎಂಪಿ, ಜಿಫ್ ಮಾದರಿಗಳಲ್ಲೇ ಇರಬೇಕಾದ್ದು ಅಗತ್ಯವಾಗುತ್ತದೆ. ಪ್ರತಿ ಫೈಲ್ 1 ಎಂ.ಬಿ.ಗಿಂತ ಹೆಚ್ಚು ಇರಬಾರದು.
ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!
ವಾಹನ ನೋಂದಣಿ ಹಾಗೂ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇನ್ಮುಂದೆ ನೀವು ಹರಸಾಹಸ ಪಡಬೇಕಿಲ್ಲ. ಯಾಕೇಂದ್ರೆ ಕೇಂದ್ರ ಸರ್ಕಾರ ಬಿಡುಗಡೆಗೊಳಿಸುತ್ತಿರುವ ಹೊಸ ಆ್ಯಪ್ ನಿಮ್ಮ ಸಹಾಯಕ್ಕೆ ಬರಲಿದೆ.
ಹೊಸ ಯೋಜನೆ ಕುರಿತು ರಾಜ್ಯ ಸಭೆಯಲ್ಲಿ ಮಾತನಾಡಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ರಾಜ್ಯ ಖಾತೆ ಸಚಿವ ಪಿ.ರಾಧಾಕೃಷ್ಣನ್, ಭ್ರಷ್ಟಾಚಾರ ತಡೆಯುವಲ್ಲಿ ಈ ಯೋಜನೆ ಸಹಕಾರಿಯಾಗಿದೆ ಎಂದಿದ್ದಾರೆ. ಹೀಗಾಗಿ ವಾಹನ ನೋಂದಣಿ, ಡ್ರೈವಿಂಗ್ ಲೆಸೆನ್ಸ್ ಪಡೆಯುವುದು ಇನ್ನು ಎಲ್ಲವೂ ಆನ್ಲೈನ್ ಮೂಲಕವೇ ನಡೆಯಲಿದೆ.
ವಾಹನ ನೋಂದಣಿ ಹೇಗೆ?
ಕೇಂದ್ರ ಸರ್ಕಾರ ವಾಹನ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಿದ್ದು, ಇದಕ್ಕಾಗಿ "ವಾಹನ್ 4.0" ಎಂಬ ಆ್ಯಪ್ ಬಿಡುಗಡೆ ಮಾಡಲಾಗಿದೆ. ಈ ಮೂಲಕ ನೀವು ಅರ್ಜಿ ಸಲ್ಲಿಸಬಹುದಾಗಿದೆ.
ಏನಿದು "ವಾಹನ್ 4.0"..?
ಇದೊಂದು ಮೊಬೈಲ್ ಅಪ್ಲಿಕೇಷನ್ ಆಗಿದ್ದು, ನೀವು ಈ ಮೂಲಕವೇ ವಾಹನ ನೋಂದಣಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಇದರಿಂದಾಗಿ ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಬಿಳಲಿದ್ದು, ಅಧಿಕಾರಿಗಳ ಭ್ರಷ್ಟಾಚಾರಕ್ಕೂ ಕಡಿವಾಣ ಬಿಳಲಿದೆ.
ಲೈಸೆನ್ಸ್ ಪಡಿಯೋಕೆ "ಸಾರಥಿ 4.0"
ಹೊಸದಾಗಿ ಅಭಿವೃದ್ಧಿಗೊಳ್ಳುತ್ತಿರುವ "ಸಾರಥಿ 4.0" ಆ್ಯಪ್ ಮೂಲಕ ನೀವು ಲೈಸೆನ್ಸ್ ಪಡೆಯಬಹುದಾಗಿದೆ. ಇದರಿಂದಗಾಗಿ ಅನಾವಶ್ಯಕವಾಗಿ ತಿರುಗುವುದು ತಪ್ಪುವುದಲ್ಲದೇ ಮಧ್ಯವರ್ತಿಗಳು ಕೇಳಿದಷ್ಟು ಹಣ ಕೊಡುವುದು ತಪ್ಪಲಿದೆ.
ಡಿಜಿಟಲ್ ಇಂಡಿಯಾಕ್ಕೆ ಮನ್ನಣೆ
ಡಿಜಿಟಲ್ ಇಂಡಿಯಾ ಯೋಜನೆ ಅಂಗವಾಗಿಯೇ ಈ ಹೊಸ ಆ್ಯಪ್ ಬಿಡುಗಡೆಗೊಂಡಿದೆ. ಇದರಿಂದ ಸಾರ್ವಜನಿಕರು ದಿನಗಟ್ಟಲೇ ಅರ್ಜಿ ಹಿಡಿದು ನಿಲ್ಲುವ ತಾಪತ್ರಯ ತಗ್ಗಲಿದ್ದು, ನಿಗದಿತ ಅವಧಿಯಲ್ಲಿ ನಿಮ್ಮ ವಾಹನ ನೋಂದಣಿ ಮತ್ತು ಡ್ರೈವಿಂಗ್ ಲೈಸೆನ್ಸ್ ದೊರೆಯಲಿದೆ.
ಹೊಸ ಯೋಜನೆಯಿಂದ ಲಾಭವೇನು?
ಆರ್ಟಿಓ ಕಚೇರಿಗಳಿಗೆ ಅಲೆದು ಇಲ್ಲವೇ ಮಧ್ಯವರ್ತಿಗಳು ಕೇಳಿದಷ್ಟು ಹಣ ನೀಡಿ ಡಿಎಲ್ ಪಡೆಯುವ ಸಮಸ್ಯೆ ಇನ್ನು ಮುಂದೆ ಇರುವುದಿಲ್ಲ. ಕಾರಣ ಆನ್ ಲೈನ್ನಲ್ಲೇ ವಾಹನ ನೋಂದಣಿ ಹಾಗೂ ಲೈಸೆನ್ಸ್ ಸಿಗಲಿದ್ದು, ಸಾರ್ವಜನಿಕರು ನೆಮ್ಮದಿಯಿಂದ ಇರಬಹುದಾಗಿದೆ.
ಅನೇಕ ಜನ ವಾಹನಗಳನ್ನು ಅದೇಗೋ ಖರೀದಿ ಮಾಡ್ತಾರೆ. ಆದ್ರೆ ವಾಹನ ನೋಂದಣಿ ಮತ್ತು ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅವರು ಪಡೋ ಕಷ್ಟ ಅಷ್ಟಿಲ್ಲ. ಹೀಗಾಗಿ ಸಾರಾಥಿ 4.0 ಮತ್ತು ವಾಹನ್ 4.0 ಆ್ಯಪ್ ಸಹಾಯವಾಗಲಿವೆ.
ವಾಹನ ನೋಂದಣಿ ವೇಳೆ ಒಂದಿಲ್ಲೊಂದು ಕಾರಣ ಹೇಳಿ ಆಗುಬಹುದಾದ ನೋಂದಣಿಗೂ ಸತಾಯಿಸುವ ಅಧಿಕಾರಿಗಳು, ಲಂಚ ಕೊಟ್ಟರೆ ಮಾತ್ರ ನಿಮ್ಮ ಕೆಲಸ ಎನ್ನುವ ಮಟ್ಟಕ್ಕೆ ಬಂದಿದ್ದಾರೆ. ಹೀಗಾಗಿ ಹೊಸ ಆ್ಯಪ್ ಈ ಎಲ್ಲಾ ಸಮಸ್ಯೆಗಳಿಗೂ ಬ್ರೇಕ್ ಹಾಕಲಿದೆ.
ಸಾರಾಥಿ 4.0 ಮತ್ತು ವಾಹನ್ 4.0 ಆ್ಯಪ್ಗಳನ್ನು ಈಗಾಗಲೇ ಹಲವಾರು ಜನ ಡೌನ್ಲೋಡ್ ಮಾಡಿದ್ದು, ಈ ಮೂಕವೇ ಅರ್ಜಿ ಸಲ್ಲಿಸುತ್ತಿದ್ದಾರೆ.
ಒಟ್ಟಿನಲ್ಲಿ ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ಹೊಸ ಯೋಜನೆ ಸಾರ್ವಜನಿಕರಿಗೆ ಅನುಕೂಲಕರವಾಗಲಿದೆ. ಜೊತೆಗೆ ಭ್ರಷ್ಟಾಚಾರಕ್ಕೂ ಕಡಿವಾಣ ಬಿಳಲಿದ್ದು, ಮಧ್ಯವರ್ತಿಗಳ ಹಾವಳಿಯೂ ತಗ್ಗಲಿದೆ.