Just In
- 2 hrs ago ಹ್ಯುಂಡೈ ವೆರ್ನಾ ಕಾರಿಗೆ ಭಾರೀ ಡಿಸ್ಕೌಂಟ್: ರಾಶಿ ಫೀಚರ್ನ ಕಾರಿಗೆ ಇಷ್ಟು ಆಫರ್ ಯಾಕೆಂದ ನೆಟ್ಟಿಗರು!
- 15 hrs ago ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಲು ಹೊಸ ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ಅನಾವರಣ
- 17 hrs ago Air Taxi: ಬೆಂಗಳೂರು ಸೇರಿ ಈ ನಗರಗಳಲ್ಲಿ ಏರ್ ಟ್ಯಾಕ್ಸಿ.. ಆಕಾಶದಲ್ಲೇ ಆಫೀಸ್ಗೆ ಹೋಗಬಹುದು, ಕಡಿಮೆ ಖರ್ಚು!
- 17 hrs ago ಐಷಾರಾಮಿ ಸ್ಪೋರ್ಟ್ಸ್ ಕಾರಿನಂತೆ ಮಾರ್ಪಾಡಾದ ಬಡವರ ಮಾರುತಿ ಆಲ್ಟೋ ಕಾರಿಗೆ ನೆಟ್ಟಿಗರು ಫಿದಾ
Don't Miss!
- News ಮಾಜಿ ಶಾಸಕ ಎಂ. ಕೃಷ್ಣಾರೆಡ್ಡಿ ವಿರುದ್ಧದ ಪ್ರಕರಣಕ್ಕೆ ಕೋರ್ಟ್ ತಡೆ
- Sports IPL 2024: ವಿರಾಟ್ ಕೊಹ್ಲಿ ವಿವಾದಾತ್ಮಕ ಔಟ್; ಅಂಪೈರಿಂಗ್ ವಿರುದ್ಧ ಕೆಂಡಕಾರಿದ ಮೊಹಮ್ಮದ್ ಕೈಫ್!
- Finance ರಿಲಯನ್ಸ್ ಇಂಡಸ್ಟ್ರೀಸ್ ನಾಲ್ಕನೇ ತ್ರೈಮಾಸಿಕ ಫಲಿತಾಂಶ ಪ್ರಕಟ; ನಿವ್ವಳ ಲಾಭ 18,951 ಕೋಟಿ ರೂಪಾಯಿ
- Lifestyle ಮನೆಯಲ್ಲಿ ಘಮ ಘಮಿಸುವ ಮಲ್ಲಿಗೆ ಗಿಡ ಬೆಳೆಸೋದು ಹೇಗೆ..? ಇಲ್ಲಿದೆ ಮಾಹಿತಿ
- Technology ಇಂದು ಮೊಟೊ G64 5G ಫೋನ್ ಫಸ್ಟ್ ಸೇಲ್!..ಈ ಫೋನಿನ ಪ್ಲಸ್ ಪಾಯಿಂಟ್ ಏನು?
- Movies ಈ ಬಾಲಿವುಡ್ ನಟ-ನಟಿಯರು ಭಾರತದಲ್ಲಿ ಯಾಕೆ ಮತ ಚಲಾಯಿಸಲ್ಲ; ಕಾರಣವೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಗೆ ಉಗುಳುವ ಬಸ್ ಹಿಡ್ಕೊಡಿ ಬಹುಮಾನ ಗೆಲ್ಲಿರಿ!
ಪರಿಸರ ಮಾಲಿನ್ಯಕ್ಕೆ ತಡೆ ಹಾಕಲು ವಿನೂತನ ಮಾರ್ಗದೊಂದಿಗೆ ಮುಂದೆ ಬಂದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ತೀವ್ರವಾಗಿ ಹೊಗೆ ಉಗುಳುವ ಬಸ್ಸುಗಳನ್ನು ಪತ್ತೆಹಚ್ಚುವ ಸಾರ್ವಜನಿಕರಿಗೆ ಬಹುಮಾನ ನೀಡಲು ನಿರ್ಧರಿಸಿದೆ.
ಸಾರ್ವಜನಿಕರು
ನೀಡುವ
ದೂರಿನನ್ವಯ
ಬಸ್ಸುಗಳನ್ನು
ತಪಾಸಣೆಗೊಳಪಡಿಸಲಿರುವ
ಅಧಿಕಾರಿಗಳು
ಅಂತಹ
ದೋಷಯುಕ್ತ
ಬಸ್ಸುಗಳನ್ನು
ಸೇವೆಯಿಂದಲೇ
ವಜಾಗೊಳಿಸಲಿದೆ.
ಅಲ್ಲದೆ
ಪತ್ತೆ
ಹಚ್ಚಿದ
ಸಾರ್ವಜನಿಕನಿಗೆ
1000
ರು.ಗಳ
ನಗದು
ಬಹುಮಾನವನ್ನು
ನೀಡಲಾಗುವುದು.
ನಗರದಲ್ಲಿ ಹೊಗೆ ಉಗುಳುವ ಬಸ್ಸುಗಳ ಬಗ್ಗೆ ಮಾಹಿತಿ ನೀಡುವಂತೆ ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಸಾರ್ವಜನಿಕರನ್ನು ವಿನಂತಿಸಿಕೊಂಡಿದೆ. ಇದು 'ಗೊ ಗ್ರೀನ್' ಯೋಜನೆಯ ಭಾಗವಾಗಿರಲಿದೆ.
ಕೆಎಸ್ಆರ್ಟಿಸಿ ಅಧಿಕಾರಿಗಳು ನೀಡುವ ಮಾಹಿತಿಗಳ ಪ್ರಕಾರ, ಪ್ರಸಕ್ತ ಸಾಲಿನಲ್ಲಿ ಕಪ್ಪು ಹೊಗೆ ಹೊರಬಿಡುವ ಮೂರು ಬಸ್ಸುಗಳನ್ನು ನಾಗರಿಕರು ಪತ್ತೆ ಹಚ್ಚಿದ್ದಾರೆ. ಅವರಿಗೆ ಸೂಕ್ತವಾದ ಬಹುಮಾನ ನೀಡಲಾಗುವುದು ಎಂದಿದ್ದಾರೆ.
ಪ್ರಸ್ತುತ ಯೋಜನೆಯನ್ನು ಬೆಂಗಳೂರು ಸೇರಿದಂತೆ 15 ಜಿಲ್ಲೆಗಳಿಗೆ ವಿಸ್ತರಿಸಲಾಗುವುದು. ಈ ಎಲ್ಲದರ ಮುಖಾಂತರ ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಳ್ಳಲಿದೆ.
ಹೆಚ್ಚು ಹೊಗೆ ಉಗುಳುವುದು ಕಂಡುಬxದರೆ ನೀವು ಇಲಾಖೆಯ ಗಮನಕ್ಕೆ ತರಬಹುದಾಗಿದೆ. ಬಳಿಕ ಪರೀಶೀಲನೆಯಲ್ಲಿ 65 ಹಾರ್ಟ್ರಿಡ್ಜ್ ಸ್ಪೋಕ್ ಯುನಿಟ್ ಗಿಂತಲೂ ಹೆಚ್ಚು ಹೊಗೆ ಉಗುಳುವುದು ಕಂಡುಬಂದ್ದಲ್ಲಿ ತಕ್ಷಣವೇ ಸೇವೆಯಿಂದ ರದ್ದುಗೊಳಿಸಲಾಗುವುದು.
ಬಸ್ಸಿನಿಂದ ಹೊರಬಿಡುವ ಕಾರ್ಬನ್ ಮಾನಾಕ್ಸೈಡ್, ಕಾರ್ಬನ್ ಡೈಆಕ್ಸೈಡ್, ನೈಟ್ರೊಜನ್ ಆಕ್ಸೈಡ್ ಮತ್ತು ಪ್ರೊಮೆಥಿಯಮ್ ಪರಿಸರಕ್ಕೆ ಅತಿ ಹೆಚ್ಚು ಮಾರಾಕವೆನಿಸಿದೆ. ಅಂತಹ ಬಸ್ಸುಗಳನ್ನು ಬದಲಾಯಿಸಲು ನಾವು ಬದ್ಧರಾಗಿದ್ದೇವೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.
ಹಾಗೊಂದು ವೇಳೆ ಮುಂದಿನ ಬಾರಿ ನಿಮ್ಮ ಕಣ್ಣಿಗೂ ಹೊಗೆ ಉಗುಳುವ ಬಸ್ ಸಿಕ್ಕಿ ಬಿದ್ದಲ್ಲಿ ಬಿಎಂಟಿಸಿ ಸಹಾಯವಾಣಿ ಸಂಖ್ಯೆಗೆ (1-800-425-1663) ಕರೆ ಮಾಡಲು ಮರೆಯದಿರಿ.