Just In
- 43 min ago ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಮಸ್ಯೆ ತಂದಿಟ್ಟ ಪತಿ: ಐಷಾರಾಮಿ ಕಾರುಗಳು ಸೀಜ್!
- 1 hr ago ಕ್ರ್ಯಾಶ್ ಟೆಸ್ಟ್ನಲ್ಲಿ ಕಳಪೆ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದ ಮಧ್ಯಮ ವರ್ಗದ ಮೆಚ್ಚಿನ ಸ್ವದೇಶಿ ಕಾರು
- 2 hrs ago ಕ್ರ್ಯಾಶ್ಟೆಸ್ಟ್ನಲ್ಲಿ ಈ ಹೋಂಡಾ ಕಾರಿಗೆ ಕೇವಲ 2 ಸ್ಟಾರ್: ಆದರೂ ಭಾರತೀಯರಿಗೆ ಈ ಕಾರು ಅಚ್ಚುಮೆಚ್ಚು!
- 2 hrs ago ಹ್ಯುಂಡೈ ಕ್ರೆಟಾಗೆ ಪೈಪೋಟಿ ನೀಡಲು ಬರಲಿವೆ ಟಾಟಾ, ಸಿಟ್ರನ್ ಕಾರುಗಳು.. ಇವೇ ಜನಸಾಮಾನ್ಯರ ಲ್ಯಾಂಬೋರ್ಗಿನಿಗಳು!
Don't Miss!
- News Lok Sabha Election: ಚಾಮರಾಜನಗರ ಕ್ಷೇತ್ರ ಸಿಎಂಗೆ ಪ್ರತಿಷ್ಠೆಯ ಕಣ
- Finance ಬೆಂಗಳೂರು, ನೋಯ್ಡಾ, ಪುಣೆಯಲ್ಲಿ ಶೀಘ್ರದಲ್ಲೇ ಹೊಸ ಆಪಲ್ ಸ್ಟೋರ್ ಪ್ರಾರಂಭ
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Lifestyle ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸಬಹುದು.! ಹೇಗೆ ಗೊತ್ತಾ?
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Movies ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಪ್ರಕರಣ: ಮತ್ತೆ ಬಾಗಿಲು ತೆರೆದ ಬಾಷ್ ಕಂಪನಿ
ಕಲುಷಿತ ಬೆಳ್ಳಂದೂರು ಕೆರೆ ಜಲಾನಯನ ಪ್ರದೇಶದ ಎಲ್ಲಾ 488 ಕೈಗಾರಿಕೆಗಳನ್ನು ಸ್ಥಗಿತಗೊಳಿಸುವಂತೆ ಕೆಎಸ್ಪಿಸಿಬಿ ಆದೇಶ ಹಿನ್ನೆಲೆ ತಾತ್ಕಾಲಿಕವಾಗಿ ಕದ ಮುಚ್ಚಿದ್ದ ಬಾಷ್ ಕಂಪನಿ ಇಂದು ಮತ್ತೆ ಪುನಾರಂಭಗೊಂಡಿದೆ.
ಆಟೋ ಮೊಬೈಲ್ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಬಾಷ್ ಸಂಸ್ಥೆಯು, ಕಳೆದ 2 ದಿನಗಳ ಹಿಂದೆ ಕೆಎಸ್ಪಿಸಿಬಿ ಆದೇಶದಂತೆ ಆಡುಗೋಡಿಯಲ್ಲಿರುವ ಘಟಕವನ್ನು ಬಂದ್ ಮಾಡಿತ್ತು. ಆದ್ರೆ ಇದೀಗ ಪರಿಸರ ಸ್ನೇಹಿ ಕ್ರಮಗಳನ್ನು ಕೈಗೊಂಡ ಹಿನ್ನೆಲೆ ಮತ್ತೆ ಪುನಾರಂಭಗೊಂಡಿದೆ.
ಜರ್ಮನ್ ಮೂಲದ ಬಾಷ್ ಸಂಸ್ಥೆಯು ಭಾರತದ ಪ್ರಮುಖ ಕಡೆಗಳಲ್ಲಿ ತನ್ನ ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಬೆಳ್ಳಂದೂರು ಕೆರೆಗೆ ವಿಷಕಾರಿ ತ್ಯಾಜ್ಯ ಬಿಡುತ್ತಿರುವ ಬಗ್ಗೆ ಆರೋಪ ಎದುರಾಗಿತ್ತು.
ಬೆಳ್ಳಂದೂರು ಕೆರೆಗೆ ಹಾನಿಕಾರಕ ತಾಜ್ಯಗಳನ್ನ ಬಿಡುತ್ತಿದ್ದ ಆರೋಪದ ಮೇಲೆ ಮಾಲಿನ್ಯ ನಿಯಂತ್ರಣ ಮಂಡಳಿಯು, ಕೋರಮಂಗಲ ಹಾಗೂ ಆಡುಗೋಡಿಯಲ್ಲಿರುವಘಟಕಗಳನ್ನ ಮುಚ್ಚುವಂತೆ ಆದೇಶಿಸಲಾಗಿತ್ತು.
ಕೆಎಸ್ಪಿಸಿಬಿ ಆದೇಶದಂತೆ ಮೇ 6ರಂದು 2 ಘಟಕಗಳನ್ನ ಬಂದ್ ಮಾಡಿದ್ದ ಬಾಷ್ ಸಂಸ್ಥೆಯು, ತಕ್ಷಣವೇ ಪರಿಸರ ಸ್ನೇಹಿ ಕ್ರಮಗಳನ್ನ ಕೈಗೊಂಡಿದ್ದರಿಂದ ಪುನಾಂರಭಕ್ಕೆ ಅನುಮತಿ ನೀಡಲಾಗಿದೆ.
ಬಾಷ್ ಸಂಸ್ಥೆಯು ತನ್ನ ಎರಡು ಘಟಕಗಳಿಂದಲೂ ವಿಲೇವಾರಿ ಮಾಡುವ ತ್ಯಾಜ್ಯಗಳನ್ನು ಶುದ್ಧಿಕರಿಸಿ ಬಿಡಲು ನಿರ್ಧರಿಸಿದ್ದು, ಕೆಎಸ್ಪಿಸಿಬಿ ನಿಯಮಗಳನ್ನು ತುರ್ತಾಗಿ ಅಳವಡಿಸಿಕೊಂಡಿದೆ.
ರಾಸಾಯನಿಕ ಪದಾರ್ಥಗಳನ್ನು ಕೈಗಾರಿಕೆಗಳು ಹೊರ ಹಾಕುತ್ತಿರುವ ಕುರಿತು ಜಂಟಿ ಪರಿಶೀಲನಾ ಸಮಿತಿ ಪರೀಕ್ಷಿಸುವವರೆಗೂ ಜಲಾನಯನ ಪ್ರದೇಶದ ಯಾವುದೇ
ಕೈಗಾರಿಕೆ ಕಾರ್ಯನಿರ್ವಹಿಸಲು ಅವಕಾಶ ನೀಡಬಾರದು ಎಂದು ಎನ್ ಜಿಟಿ ಆದೇಶದ ಮೇರೆಗೆ ಕೆಎಸ್ ಪಿಸಿಬಿ ಮೇಲ್ಕಂಡ ನಿರ್ಣಯ ಕೈಗೊಂಡಿತ್ತು. ಆದ್ರೆ ಬಾಷ್ ದಿಢೀರ್ ಪುನಾರಂಭಗೊಂಡಿದೆ.
ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ರಾಷ್ಟ್ರೀಯ ಹಸಿರು ಪ್ರಾಧಿಕಾರ (ಎನ್ ಜಿಟಿ) ಬೆಳ್ಳಂದೂರು ಕೆರೆ ಸುತ್ತಮುತ್ತಲಿನ ಕೈಗಾರಿಕೆಗಳನ್ನು ತಕ್ಷಣವೇ ಮುಚ್ಚಬೇಕೆಂದು ಮಧ್ಯಂತರ ಆದೇಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಕೇವಲ ಬಾಷ್ ಅಷ್ಟೇ ಅಲ್ಲಾ ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರಿ, ಎಚ್ಎಎಲ್ನ ಏಳು ಘಟಕಗಳು, ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ), ಕರ್ನಾಟಕ ಸಾವಯವ ಗೊಬ್ಬರ ಅಭಿವೃದ್ಧಿ ನಿಗಮದ (ಕೆಸಿಡಿಸಿ) ಘಟಕ ಸೇರಿದಂತೆ ಇತರೆ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳಿಗೂ ಭೀತಿ ಎದುರಾಗಿದೆ.
ಕೆರೆಯಲ್ಲಿ ಮತ್ತೆ ಕಾಣಿಸಿಕೊಂಡ ಬೆಂಕಿ
ತುರ್ತು ಕ್ರಮ ಕೈಗೊಂಡರೂ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಸ್ಥಳೀಯರು ಕಂಗಾಲಾಗಿದ್ದು, ಸ್ವಲ್ಪ ಹೊತ್ತಿನ ನಂತರ ಬೆಂಕಿ ತಾನಾಗಿಯೇ ನಂದಿ ಹೋಗಿದೆ.