Just In
- 3 hrs ago ಪೆಟ್ರೋಲ್ ಎಂಜಿನ್ಗಳಲ್ಲಿ ಮಾತ್ರ ಬರಲಿದೆ ರೆನಾಲ್ಟ್ನ ಬ್ರಹ್ಮಾಸ್ತ್ರ ಡಸ್ಟರ್
- 4 hrs ago Nissan Magnite: ನಿಸ್ಸಾನ್ ಮ್ಯಾಗ್ನೆಟ್ನ ಈ ಮಾದರಿಗಳನ್ನು ಹಿಂಪಡೆಯಲು ನಿರ್ಧಾರ.. ಕಾರಣವೇನು?
- 6 hrs ago Maruti Suzuki: ಮಾರುತಿ ಸುಜುಕಿಯ ಸುರಕ್ಷಿತ ಕಾರುಗಳಿವು.. 8 ಲಕ್ಷ ಆರಂಭಿಕ ಬೆಲೆ
- 6 hrs ago 11 ರೀತಿಯ ವಾಹನಗಳ ಲೈಸೆನ್ಸ್ ಹೊಂದಿರುವ ಅಜ್ಜಿ: ಇವರ ಜೀವನೋತ್ಸಾಹಕ್ಕೆ ನೆಟ್ಟಿಗರು ಫಿಧಾ
Don't Miss!
- News Dwarakish: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ದ್ವಾರಕೀಶ್ ಪಡೆದಿದ್ದ ಮತಗಳೆಷ್ಟು?
- Movies Divya Uruduga: ಈ ನಟಿ 8 ವರ್ಷ ಧಾರಾವಾಹಿಗಳನ್ನು ಒಪ್ಪಿಕೊಳ್ಳದೆ ಇರಲು ಕಾರಣವೇನು?
- Sports KKR vs RR IPL 2024: ಸುನಿಲ್ ನರೈನ್ ಚೊಚ್ಚಲ ಐಪಿಎಲ್ ಶತಕ; ರಾಜಸ್ಥಾನ್ಗೆ ಬೃಹತ್ ಗುರಿ ನೀಡಿದ ಕೋಲ್ಕತ್ತಾ
- Lifestyle ಸೌದಿಯಲ್ಲಿ ಮಳೆ, ಪ್ರವಾಹ...ಮರುಭೂಮಿ ಮರೆಯಾಗಿ ನಳನಳಿಸುವ ಹಸಿರು...! ಇದು ಹೇಗೆ ಸಾಧ್ಯ ಗೊತ್ತಾ?
- Finance ಇಸ್ರೇಲ್-ಇರಾನ್ ಯುದ್ಧದ ಪರಿಣಾಮ ಷೇರು ಪೇಟೆಯಲ್ಲಿ ಭಾರಿ ನಷ್ಟ
- Technology YouTube: ಯೂಟ್ಯೂಬ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್! ಆಡ್ ಬ್ಲಾಕರ್ ವಿರುದ್ಧ ಸಮರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೇಶದಲ್ಲಿ ಸಂಭವಿಸುವ ಅಪಘಾತದಲ್ಲಿ ಪ್ರತಿ ತಾಸಿಗೆ 16 ಬಲಿ!
ಯಾಕೋ ಭಾರತೀಯ ರಸ್ತೆಗಳೆಂದರೆ ಯಮರಾಜನಿಗೆ ಬಲುಪ್ರಿಯ ಎಂಬಂತಿದೆ. ಇದೀಗ ಬಂದಿರುವ ಬೆಚ್ಚಿ ಬೀಳಿಸುವ ಅಧ್ಯಯನ ವರದಿಯೊಂದರಲ್ಲಿ 2014ರಲ್ಲಿ ದೇಶದಲ್ಲಿ ಸಂಭವಿಸಿರುವ ಅಪಘಾತದಲ್ಲಿ ಪ್ರತಿ ತಾಸಿಗೆ ಸರಾಸರಿ 16 ಮಂದಿಯಷ್ಟು ಬಲಿಯಾಗಿದ್ದಾರೆ.
Also Read : ಬೈಕ್ ಅಪಘಾತಕ್ಕಿರುವ 10 ಅತಿ ಸಾಮಾನ್ಯ ಕಾರಣಗಳು
ಹೌದು,
ರಾಷ್ಟ್ರೀಯ
ಅಪರಾಧ
ದಾಖಲೆಗಳ
ಸಂಸ್ಥೆ
ಬಿಡುಗಡೆ
ಮಾಡಿರುವ
ವರದಿಯಲ್ಲಿ
ಈ
ಬೆಚ್ಚಿ
ಬೀಳಿಸುವ
ವರದಿ
ದಾಖಲಾಗಿದೆ.
ವರದಿಯ
ಪ್ರಕಾರ
ಕರ್ನಾಟಕಕ್ಕೆ
ಸಂಬಂಧಿಸಿದ
ಮತ್ತಷ್ಟು
ಆಘಾತಕಾರಿ
ಸುದ್ದಿಗಾಗಿ
ಫೋಟೊ
ಸ್ಲೈಡ್
ನತ್ತ
ಭೇಟಿ
ಕೊಡಿರಿ...
ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ ಬಿಡುಗಡೆ ಮಾಡಿರುವ ವರ ಪ್ರಕಾರ 2014ನೇ ಸಾಲಿನಲ್ಲಿ ಒಟ್ಟು 1.41 ಲಕ್ಷ ಮಂದಿ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ.
ಅಲ್ಲದೆ 2013ನೇ ಸಾಲಿಗೆ ಹೋಲಿಸಿದಾಗ ಅಪಘಾತಗಳಲ್ಲಿ ಸಾವಿಗೀಡಾದ ಪ್ರಮಾಣ ಶೇಕಡಾ 3ರಷ್ಟು ಹೆಚ್ಚಾಗಿದೆ.
ಅಪಘಾತಗಳು ಹಾಗೂ ಪ್ರಯಾಣಿಕರು ಗಾಯಗೀಡಾಗಿರುವ ಸಂಖ್ಯೆಯಲ್ಲೂ ಗಣನೀಯವಾಗಿ ವರ್ಧನೆಯುಂಟಾಗಿದ್ದು, ಇವೆರಡು ಅನುಕ್ರಮವಾಗಿ 4.5 ಹಾಗೂ 4.8 ಲಕ್ಷಗಳಷ್ಟು ದಾಖಲಾಗಿವೆ.
ಅಮಿತ ವೇಗ ಹಾಗೂ ಅಪಾಯಕಾರಿ ಚಾಲನೆಯೇ ಅತ್ಯಧಿಕ ರಸ್ತೆ ಅಪಘಾತ ಪ್ರಕರಣಕ್ಕೆ ಕಾರಣವಾಗಿದೆ ಎಂಬುದನ್ನು ಎನ್ ಸಿಆರ್ ಬಿ ಉಲ್ಲೇಖಿಸಿದೆ.
ಮೇಲೆ ತಿಳಿಸಿರುವ ಸಾವಿನ ಸಂಖ್ಯೆಯ ಪ್ರಮಾಣದ ಅರ್ಧದಷ್ಟು ಮಂದಿ ರಸ್ತೆಗಳಲ್ಲಿ ಸಂಭವಿಸಿರುವ ದ್ವಿಚಕ್ರ, ಟ್ರಕ್ ಹಾಗೂ ಲಾರಿ ಅಪಘಾತಗಳಲ್ಲೇ ಸಾವನ್ನಪ್ಪಿದ್ದಾರೆ.
13,787 ದ್ವಿಚಕ್ರ ವಾಹನ ಚಾಲಕರು ಸಾವನ್ನಪ್ಪಿದ್ದರೆ ಇದೇ ವಾಹನಗಳಿಂದಾಗಿ ಸಂಭವಿಸಿರುವ ಅಪಘಾತದಲ್ಲಿ ಹೆಚ್ಚುವರಿ 23,529 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ 1.4 ಲಕ್ಷದಷ್ಟು ಮಂದಿ ಗಾಯಗೊಂಡಿದ್ದಾರೆ.
ಇನ್ನು ಅಮಿತ ವೇಗದಿಂದಾಗಿ ಸಂಭವಿಸಿರುವ 1.7 ಲಕ್ಷದಷ್ಟು ಅಪಘಾತ ಪ್ರಕರಣಗಳಲ್ಲಿ 49,000ದಷ್ಟು ಮಂದಿ ಸಾವನ್ನಪ್ಪಿದ್ದಾರೆ.
ಹಾಗೆಯೇ ಅಪಾಯಕಾರಿ, ಅಜಾಗರೂಕ ಚಾಲನೆ ಹಾಗೂ ಓವರ್ ಟೇಕಿಂಗ್ ನಿಂದಾಗಿ ಸಂಭವಿಸಿರುವ 1.4 ಲಕ್ಷದಷ್ಟು ಅಪಘಾತಗಳಲ್ಲಿ 42,000ಗಿಂತಲೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ದೇಶದಲ್ಲೇ ಅಪಘಾತಗಳಲ್ಲಾಗಿ ಮರಣ ಸಂಭವಿಸಿರುವ ಟಾಪ್ 5 ರಾಷ್ಟ್ರಗಳಲ್ಲಿ ಕರ್ನಾಟಕವೂ ಕಾಣಿಸಿಕೊಂಡಿದ್ದು, ಉತ್ತರ ಪ್ರದೇಶ, ತಮಿಳುನಾಡು, ಮಹಾರಾಷ್ಟ ಮತ್ತು ರಾಜಸ್ತಾನ ಇದೇ ಸಾಲಿನಲ್ಲಿ ಸೇರಿಕೊಂಡಿದೆ. ಈ ಎಲ್ಲ ಐದು ರಾಜ್ಯಗಳು ಸೇರಿ ದೇಶದ ಒಟ್ಟು ಸಾವಿನ ಪ್ರಮಾಣದ ಶೇಕಡಾ 40ರಷ್ಟನ್ನು ಆಕ್ರಮಿಸಿಕೊಂಡಿದೆ.
ಈ ಪೈಕಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 16,284 ಮಂದಿ ಮೃತಪಟ್ಟಿದ್ದರೆ, ತಮಿಳುನಾಡಿನಲ್ಲಿ 15,000 ಸಾವಿನ ಸಂಖ್ಯೆಯೊಂದಿಗೆ ಎರಡನೇ ಸ್ಥಾನದಲ್ಲಿದೆ.
ಮೆಗಾ ನಗರಗಳ ಪೈಕಿ ದೆಹಲಿ ಅಗ್ರಸ್ಥಾನದಲ್ಲಿ (2199 ಸಾವು), ಚೆನ್ನೈ ಎರಡು (1046 ಸಾವು), ಭೋಪಾಲ ಮೂರು (1,015) ಹಾಗೂ ಜೈಪುರ (844 ಸಾವು) ನಾಲ್ಕನೇ ಸ್ಥಾನದಲ್ಲಿದೆ.
ಕಾರು ಅಪಘಾತಕ್ಕೆ 25 ಕಾರಣ ಹಾಗೂ ಅವುಗಳನ್ನು ತಡೆಗಟ್ಟುವ ವಿಧಾನ