Just In
- 49 min ago Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- 59 min ago ಬೈಕಿನಂತೆ ಮೈಲೇಜ್ ಕೊಡೋದ್ರಿಂದ ಈ ಹ್ಯುಂಡೈ ಕಾರಿನ ಮಾಲೀಕರು ಫುಲ್ ಖುಷ್
- 1 hr ago ಮಹೀಂದ್ರಾ ಪ್ರೀಯರಿಗೆ ಭಾರೀ ಸಿಹಿಸುದ್ದಿ: ಗಲ್ಲಿಗಲ್ಲಿಯಲ್ಲಿ ಶುರುವಾಗುತ್ತಾ ಸ್ಕಾರ್ಪಿಯೋ ಹವಾ!
- 2 hrs ago ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡುತ್ತವೆ!
Don't Miss!
- News Karnataka rain: ಗುಡುಗು, ಸಿಡಿಲು ಬಡಿತದಿಂದ ರಕ್ಷಣೆ ಪಡೆಯಲು ಏನೇನು ಮಾಡಬೇಕು? ಸಲಹೆಗಳು ಇಲ್ಲಿವೆ
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Movies ಹಳೇ ಟ್ವೀಟ್ ಹಾಕಿ ರಕ್ಷಿತ್ ಶೆಟ್ಟಿ ಹೇಳಿದ್ದೇನು? 'ರಿಚರ್ಡ್ ಆಂಟನಿ' ಕಥೆ ಏನಾಯ್ತು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಿಜೆಪಿ ಹೈಟೆಕ್ ಗಾಡಿ
16ನೇ ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಪ್ರಕ್ರಿಯೆ ಈಗಾಗಲೇ ಆರಂಭವಾಗಿರುವಂತೆಯೇ ನಮ್ಮ ಕರ್ನಾಟಕ ರಾಜ್ಯದಲ್ಲೂ ಪ್ರಚಾರ ಭರಾಟೆ ಜೋರಾಗಿಯೇ ಸಾಗುತ್ತಿದೆ. ಇನ್ನೇನು ಪ್ರಚಾರದ ಅಬ್ಬರ ಕೆಲವೇ ದಿನಗಳಲ್ಲಿ ಕೊನೆಗೊಳ್ಳಲಿರುವಂತೆಯೇ ಭಾರತೀಯ ಜನತಾ ಪಕ್ಷ (ಬಿಜೆಪಿ) ಪ್ರಚಾರಕ್ಕೆ ಇನ್ನಷ್ಟು ಬಿಸಿ ಮುಟ್ಟಿಸಿದೆ.
ನಿಮ್ಮ
ಮಾಹಿತಿಗಾಗಿ,
ಕರ್ನಾಟಕದಲ್ಲಿ
ಐದನೇ
ಹಂತದಲ್ಲಿ
ಲೋಕಸಭಾ
ಚುನಾವಣೆ
ನಡೆಯಲಿದೆ.
ರಾಜ್ಯದೆಲ್ಲೆಡೆ
ಮೇ
17ರಂದು
ಏಕಕಾಲದಲ್ಲಿ
ಚುನಾವಣೆ
ನಡೆಯಲಿದೆ.
ಈ
ನಡುವೆ
ಪ್ರಚಾರಕ್ಕೆ
ಬೆರಳಣಿಕೆಯಷ್ಟು
ದಿನಗಳಷ್ಟು
ಮಾತ್ರ
ಬಾಕಿ
ಉಳಿದಿರುವಂತೆಯೇ
ಬಿಜೆಪಿ,
ಲೋಕಸಭಾ
ಚುನಾವಣಾ
ಪ್ರಚಾರಕ್ಕಾಗಿ
'ವಿಜಯ
ಭಾರತ
ರಥ'
ಎಂಬ
ಲಗ್ಷುರಿ
ಬಸ್ಸನ್ನು
ರಸ್ತೆಗಿಳಿಸಿದೆ.
ಅಷ್ಟಕ್ಕೂ
ಬಿಜೆಪಿಯಿಂದ
ಬಿಡುಗಡೆಯಾಗಿರುವ
ಹೈಟೆಕ್
ಕ್ಯಾಂಪರ್
ವ್ಯಾನ್ನಲ್ಲಿರುವ
ವೈಶಿಷ್ಟ್ಯಗಳೇನು?
ವಿವರಗಳಿಗಾಗಿ
ಸ್ಲೈಡರ್ನತ್ತ
ಮುಂದುವರಿಯಿರಿ...
ಈ ಹೈಟೆಕ್ ಬಸ್ಸಿಗೆ ಬೆಂಗಳೂರಿನ ಜಗನ್ನಾಥ ಭವನದಲ್ಲಿ ಉತ್ತರ ಲೋಕಸಭಾ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ವಿದ್ಯುಕ್ತ ಚಾಲನೆ ನೀಡಿದರು.
ಇನ್ನೇನು ರಾಜ್ಯ ನಾಯಕರ ಪ್ರವಾಸಕ್ಕೆ ಬಳಕೆಯಾಗಲಿರುವ ಈ ಹೈಟೆಕ್ ಬಸ್ಸು ಅನ್ನು ಮಾಜಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಕೊಡುಗೆಯಾಗಿ ನೀಡಿದ್ದಾರೆ.
ಸ್ವರಾಜ್ ಮಾಜ್ದಾ ಕಂಪನಿಯ ಈ ಬಸ್ಸನ್ನು ಪಂಜಾಬ್ನಿಂದ ತಯಾರಿಸಲಾಗಿದ್ದು, ಚಾಸೀಗೆ ಮುಂಬೈನ ಡಿಸಿ ಡಿಸೈನ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ವಿಶೇಷ ವಿನ್ಯಾಸಗೊಳಿಸಿದೆ.
ಇದರಲ್ಲಿ ಆಧುನಿಕ ಸೌಲಭ್ಯಗಳಿದ್ದು, ಎಂಟು ಜನರಿಗೆ ಆರಾಮದಾಯಕವಾಗಿ ಪ್ರವಾಸ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಹೈಡ್ರಾಲಿಕ್ ಲಿಫ್ಟ್ ಮುಖಾಂತರ ಮೇಲ್ಛಾವಣಿಯಿಂದಲೇ ಭಾಷಣ ಮಾಡುವ ವ್ಯವಸ್ಥೆಯಿರುತ್ತದೆ.
ಇದರಿಂದಾಗಿ ತುರ್ತು ಸಂದರ್ಭಗಳಲ್ಲಿ ನಾಯಕರು ಪ್ರವಾಸದ ಮಧ್ಯೆ ಗ್ರಾಮ ಹಾಗೂ ತಾಲೂಕು ಪ್ರದೇಶಗಳಲ್ಲಿ ರೋಡ್ ಶೋ ಜತೆ ಬಿರುಸಿನ ಪ್ರಚಾರ ನಡೆಸಲು ಅನುಕೂಲವಾಗಲಿದೆ.
ಇನ್ನು ನಾಯಕರು ವಾಹನದಲ್ಲಿಯೇ ಪ್ರವಾಸದ ಮಧ್ಯೆ ಮಾಧ್ಯಮಗಳಿಗೆ ಸಂದರ್ಶನವನ್ನು ಸಹ ನೀಡಬಹುದಾಗಿದೆ. ಇನ್ನುಳಿದಂತೆ ಡಿಶ್ ಟಿ.ವಿ ಸೌಲಭ್ಯವನ್ನು ಹೊಂದಿದ್ದು, ನಾಯಕರು ವಾಹನದಲ್ಲಿರುವ ಎರಡು ಎಲ್ಸಿಡಿ ಮುಖಾಂತರ ಟಿ.ವಿಯನ್ನು ವೀಕ್ಷಿಸಬಹುದು.
ಹಾಗೆಯೇ ಸಮರ್ಪಕ ಜನರೇಟರ್, ಎಸಿ, ಫ್ರಿಡ್ಜ್, ಸಿಸಿ ಟಿವಿ, ಧ್ವನಿವರ್ಧಕ, ಟೇಬಲ್, ಕಪ್ ಹೋಲ್ಡರ್ ಹಾಗೂ ಶೌಚಾಲಯ ವ್ಯವಸ್ಥೆಗಳನ್ನು ಈ ಹೈಟೆಕ್ ಬಸ್ ಹೊಂದಿರುತ್ತದೆ.
ವಾಹನದ ಹೊರಗಡೆ ಎಲ್ಲ ಪ್ರಮುಖ ನಾಯಕರ ಭಾವಚಿತ್ರಗಳು, ಬಿಜೆಪಿ ಲಾಂಛನ ಜತೆಗೆ 'ಈ ಬಾರಿ ಮೋದಿ ಸರ್ಕಾರ' ಎಂಬ ದೊಡ್ಡಕ್ಷರದ ಘೋಷವಾಕ್ಯವನ್ನು ನೋಡಬಹುದಾಗಿದೆ.
ಹಾಗೆಯೇ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಭಾವಚಿತ್ರ ಮತ್ತು 'ನಾನು ಜನನಾಯಕನಲ್ಲ, ಜನಸೇವಕ' ಎಂಬ ಘೋಷವಾಕ್ಯವನ್ನು ಉಲ್ಲೇಖಿಸಲಾಗಿದೆ.
'ಕೇವಲ ಬದಲಾವಣೆಯನ್ನು ಅಪೇಕ್ಷಿಸಬೇಡಿ, ಬದಲಾವಣೆಗಾಗಿ ಮತ ನೀಡಿ, ಬಿಜೆಪಿಯನ್ನು ಚುನಾಯಿಸಿ'. 'ಭಾರತಕ್ಕಾಗಿ ಮತ ನೀಡಿ, ಭಾರತ ಗೆಲ್ಲಿಸಿ' ಎಂಬ ಉಲ್ಲೇಖವನ್ನು ಕಾಣಬಹುದು.
ಒಟ್ಟಿನಲ್ಲಿ ಈ ಹೈಟೆಕ್ ಗಾಡಿಯ ಬೆಲೆ ಎಷ್ಟು ಎಂಬುದು ತಿಳಿದು ಬಂದಿಲ್ಲ. ಪ್ರಸ್ತುತ ಬಸ್ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಬಿಸಿ ಮುಟ್ಟಿಸಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.