Just In
- 16 min ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
- 56 min ago Hero: ಮಧ್ಯಮ ವರ್ಗದವರ ನೆಚ್ಚಿನ ಬೈಕ್.. ರೂ.75 ಸಾವಿರ ಬೆಲೆ.. ಮೈಲೇಜ್ನಲ್ಲಿ ಸರಿ ಸಾಟಿಯಿಲ್ಲ!
- 1 hr ago Hyundai: ಹ್ಯುಂಡೈ ಎಕ್ಸ್ಟರ್ ಮೊದಲ ಅಪಘಾತ: ಮುಗಿಬಿದ್ದು ಖರೀದಿಸಿದವರು ಇದನ್ನೊಮ್ಮೆ ನೋಡಿ
- 1 hr ago Maruti Suzuki: 1 ವರ್ಷದಲ್ಲಿಯೇ ಹೊಸ ದಾಖಲೆ.. 134,735 ಫ್ರಾಂಕ್ಸ್ ಕಾರುಗಳು ಮಾರಾಟ, ಬೆಲೆ ರೂ.7.51 ಲಕ್ಷ
Don't Miss!
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Sports ಟಿ20 ವಿಶ್ವಕಪ್ಗೆ 15 ಸದಸ್ಯರ ಭಾರತ ತಂಡದ ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ಸಂಜು, ರಾಹುಲ್ಗೆ ಸ್ಥಾನವಿಲ್ಲ!
- News SSLC Result 2024: ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ ಯಾವಾಗ? ಪರಿಶೀಲಿಸುವುದೇಗೆ?-ಮಾಹಿತಿ, ವಿವರ
- Movies ಮದುವೆ ಆಗದೇ ಗರ್ಭಿಣಿಯಾಗಿದ್ರಾ ಮಾಧುರಿ ದಿಕ್ಷಿತ್? ವಿವಾದಾತ್ಮಕ ಟ್ವೀಟ್ಗೆ ಫ್ಯಾನ್ಸ್ ಆಕ್ರೋಶ!
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎರಡು ಬೃಹತ್ ಟ್ರಕ್ ಗಳ ನಡುವೆ ಕಾರು ಅಪ್ಪಚ್ಚಿ; ಐವರ ದುರ್ಮರಣ
ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ಅತ್ಯಂತ ಹೃದಯ ವಿದ್ರಾವಕ ಅಪಘಾತ ಪ್ರಸಂಗವೊಂದು ನಡೆದಿದ್ದು, ಮುಖಾಮುಖಿಯಾಗಿ ಬರುತ್ತಿದ್ದ ಎರಡು ಲಾರಿಗಳು ಕಾರೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸಂಭವಿಸಿರುವ ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಸಿಸಿಟಿವಿಯಲ್ಲಿ
ಈ
ಭೀಕರ
ದೃಶ್ಯಗಳು
ಸರೆಯಾಗಿದ್ದು,
ಲಾರಿ
ಅಪ್ಪಳಿಸಿದ
ರಭಸಕ್ಕೆ
ಕಾರು
ಅಪ್ಪಚ್ಚಿಯಾಗಿದೆ.
ಬಳಿಕ
ತನಿಖೆ
ಆರಂಭಿಸಿರುವ
ಪೊಲೀಸರು
ಮೃತರನ್ನು
ಮರಣೋತ್ತರ
ಪರೀಕ್ಷೆಗೆ
ಒಳಪಡಿಸಿದ್ದಾರೆ.
ಉನ್ನತ ಶಿಕ್ಷಣಕ್ಕಾಗಿ ಮಕ್ಕಳನ್ನು ಕಾಲೇಜಿಗೆ ಸೇರಿಸಲು ತೆರಳುತ್ತಿದ್ದ ಕಾರು ಸರ್ಕಲ್ ತಲುಪುತ್ತಿದ್ದಂತೆಯೇ ಬಲಕ್ಕೆ ತಿರುಗಲು ಯತ್ನಸಿತ್ತು.
ಈ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಟ್ರಕ್ ಬಲಕ್ಕೆ ತಿರುಗಲು ಯತ್ನಿಸುತ್ತಿದ್ದ ಕಾರನ್ನು ಏಕಾಏಕಿ ತನ್ನ ರಭಸಕ್ಕೆ ಸೆಳೆದುಕೊಂಡಿತ್ತು.
ಇನ್ನೇನು ಕೆಲವೇ ಕ್ಷಣಗಳಲ್ಲಿ ಮುಂಭಾಗದಿಂದ ಬಂದ ಟ್ರಕ್ ಲಾರಿಗೆ ಮುಖಾಮುಖಿಯಾಗಿ ಢಿಕ್ಕಿ ಹೊಡೆದಿತ್ತು.
ಈ ವೇಳೆಯಲ್ಲಿ ಮಧ್ಯದಲ್ಲಿ ಸಿಕ್ಕಿಯಾಗಿಕೊಂಡ ಕಾರು ಲಾರಿಗಳೆಡೆಯಲ್ಲಿ ಸಿಲುಕಿ ಅಪ್ಪಚ್ಚಿಯಾಗಿತ್ತು.
ಪ್ರತ್ಯಕ್ಷದರ್ಶಿಗಳ ಪ್ರಕಾರ ಶವಗಳು ಗುರುತು ಸಿಗದಷ್ಟು ವಿರೂಪಗೊಂಡಿದ್ದವು. ಸ್ಥಳದಲ್ಲಿ ರಕ್ತದ ಕೋಡಿ ಮಡು ಗಟ್ಟಿ ನಿಂತಿತ್ತು.
ಮೃತಪಟ್ಟವರನ್ನು ಪ್ರವೀಣ್ ಮತ್ತವರ ಪುತ್ರಿ ನಿಖಿತಾ, ಪುತ್ರ ಭರತ್, ಲಕ್ಷ್ಮಣ್ ಮತ್ತು ಮತ್ತವರ ಪುತ್ರ ಹರ್ಷಾ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಲಾರಿ ಚಾಲಕ ಸಹ ಗಂಭೀರ ಗಾಯಗೊಂಡಿದ್ದಾನೆ.
ಒಟ್ಟಿನಲ್ಲಿ ಹಲವಾರು ಕನಸುಗಳನ್ನು ಹೊತ್ತುಕೊಂಡು ಕಾರಿನಲ್ಲಿ ಸಾಗುತ್ತಿದ್ದ ಕುಟಂಬವು ಕರುಣಾಜನಕ ಅಂತ್ಯ ಕಂಡಿರುವುದು ಬೇಸರಕ್ಕೆ ಕಾರಣವಾಗಿದೆ.
ಭೀಕರ ಅಪಘಾತದ ವಿಡಿಯೋ ವೀಕ್ಷಿಸಲು ಕ್ಲಿಕ್ಕಿಸಿ