Just In
- 5 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 6 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 8 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 9 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೈಕೊಟ್ಟ ಲ್ಯಾಂಡ್ ಕ್ರೂಸರ್; ಸೂರತ್ ಮಾಲಿಕನಿಂದ ಕತ್ತೆ ಸೇವೆ!
ಐಷಾರಾಮಿ ಕಾರುಗಳು ಕೈಕೊಟ್ಟಾಗ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲು ಮಾಲಿಕರು ಇಂತಹ ವಿಚಿತ್ರ ನೀತಿ ಅನುಸರಿಸುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಇದರಿಂದ ಕಾರು ಸಂಸ್ಥೆಗೆ ಅವಮಾನವಾಗುವುದಲ್ಲದೆ ಮಾಲಿಕರು ತಮ್ಮ ಕೋಪವನ್ನು ತೀರಿಸಿಕೊಳ್ಳುತ್ತಾರೆ.
ಇಂತಹದೊಂದು
ಘಟನೆ
ಗುಜರಾತ್
ನ
ಸೂರತ್
ನಿಂದ
ವರದಿಯಾಗಿದೆ.
ಒಂದು
ಕೋಟಿ
ಬೆಲೆ
ಬಾಳುವ
ಐಷಾರಾಮಿ
ಕಾರು
ಖರೀದಿಸಿದ್ದ
ಸೂರತ್
ಉದ್ಯಮಿ
ಕಳಪೆ
ಸರ್ವಿಸ್
ಹಿನ್ನೆಲೆಯಲ್ಲಿ
ತಮ್ಮ
ಆಕ್ರೋಶವನ್ನು
ಕತ್ತೆ
ಸೇವೆ
ಮೂಲಕ
ತೋರ್ಪಡಿಸಿದ್ದಾರೆ.
ನಿಮ್ಮ ಮಾಹಿತಿಗಾಗಿ ದೇಶದಲ್ಲಿ ಬೆರಳಣಿಕೆ ಮಾತ್ರದಲ್ಲಿ ಕೇವಲ 20ರಷ್ಟು ಶ್ರೀಮಂತ ವ್ಯಕ್ತಿಗಳು ಮಾತ್ರ ಲ್ಯಾಂಡ್ ಕ್ರೂಸರ್ ಹೊಂದಿದ್ದಾರೆ. ಇವರಲ್ಲಿ ಬಾಲಿವುಡ್ನ ಖ್ಯಾತ ನಟ ಅಮಿತಾಬ್ ಬಚ್ಚನ್ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದ್ದಾರೆ.
ಜಪಾನ್ ಮೂಲದ ಜನಪ್ರಿಯ ಸಂಸ್ಥೆಯಾಗಿರುವ ಟೊಯೊಟಾ ಐದು ವರ್ಷಗಳ ಹಿಂದೆ ಲ್ಯಾಂಡ್ ಕ್ರೂಸರ್ ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಇದರಂತೆ ಸೂರತ್ ನ ಶ್ರೀಮಂತ ಬಿಲ್ಡರ್ ತುಷಾರ್ ಗಿಲಾನ್ ತಮ್ಮದಾಗಿಸಿಕೊಂಡಿದ್ದರು.
ಆದರೆ ಕಾರು ಖರೀದಿಸಿದ ಬಳಿಕ ಪರಿಸ್ಥಿತಿ ಬದಲಾಯಿತು. ಕಾರಿನಲ್ಲಿ ಪದೇ ಪದೇ ಸಮಸ್ಯೆ ಕಾಣಿಸಿಕೊಂಡರೂ ಈ ಬಗ್ಗೆ ದೂರು ನೀಡಿದರೂ ಡೀಲರ್ ಗಳು ಅತ್ತ ತಿರುಗಿಯೂ ನೋಡುತ್ತಿರಲಿಲ್ಲ.
ಕಾರು ಖರೀದಿಸಿದ ಐದನೇ ದಿನದಲ್ಲೇ ಕೀ ಲಾಕ್ ಗೆ ಕೇಡು ಸಂಭವಿಸಿತ್ತು. ಮಾರುಕಟ್ಟೆಯಲ್ಲಿ 50 ರು.ಗಳಿಗೆ ಲಭ್ಯವಿರುವ ಈ ಕೀ ಲಾಕ್ ಗೆ 1500 ರುಪಾಯಿ ಚಾರ್ಚ್ ಮಾಡಿಸಿದ್ದರಲ್ಲದೆ ಇದನ್ನು ಸರಿಪಡಿಸಿ ಕೊಡಲು ಐದು ದಿನಗಳೇ ಬೇಕಾಯಿತು ಎಂದು ತುಷಾರ್ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಾರೆ.
ಇಲ್ಲಿಗೆ ಸಮಸ್ಯೆ ಕೊನೆಗೊಳ್ಳುವುದಿಲ್ಲ. ಪ್ರತಿ 5,000 ಕೀ.ಮೀ.ಗಳಿಗೊಮ್ಮೆ ಲೈನರ್ ಬದಲಾಯಿಸಬೇಕಾಗುತ್ತದೆ. ಈ ಬಗ್ಗೆ ಡೀಲರ್ ಗಳನ್ನು ಸಂಪರ್ಕಿಸಿದರೆ ಅವರಿಂದ ಸ್ಪಷ್ಟ ಉತ್ತರವೇ ದೊರಕುತ್ತಿರಲಿಲ್ಲ.
ಇವೆಲ್ಲದರಿಂದ ಬೆಸತ್ತಿರುವ ಲ್ಯಾಂಡ್ ಕ್ರೂಸರ್ ಮಾಲಿಕ ತುಷಾರ್ ತಮ್ಮ ಕಾರಿಗೆ ಕತ್ತೆ ಸೇವೆ ಮಾಡಿಸಿರುತ್ತಾರೆ. ಈ ಮೂಲಕ ಸಂಸ್ಥೆ ಹಾಗೂ ಡೀಲರ್ ಗಳ ಕಳಪೆ ಸೇವೆಗೆ ತಕ್ಕ ಉತ್ತರ ನೀಡಿದ್ದಾರೆ.
ತುಷಾರ್ ಪ್ರಕಾರ, ವರ್ಷಂಪ್ರತಿ ವಿಮೆಗಾಗಿ ಎಂಟು ಲಕ್ಷ ರು.ಗಳನ್ನು ಪಾವತಿಸುತ್ತಿದ್ದಾರೆ. ಆದರೆ ಡೀಲರ್ ಗಳ ನಿರ್ಲಕ್ಷದಿಂದಾಗಿ ತನ್ನ ಗಾಡಿ ಕತ್ತೆ ಗಾಡಿಗಿಂತಲೂ ಕಡೆಯಾಗಿದೆ. ನನಗೀಗ ಈ ಕಾರು ಖರೀದಿಸಿ ಬೇಸರವಾಗುತ್ತಿದೆ ಎಂದು ಮನನೊಂದಿದ್ದಾರೆ.
ಇದರ ಬದಲು ನಾನೊಂದು ನ್ಯಾನೋ ಖರೀದಿಸಿದ್ದರೆ ಉತ್ತಮವಾಗಿರುತ್ತಿತ್ತು. ಕಡಿಮೆ ಪಕ್ಷ ಬಿಡಿಭಾಗಗಳು ಬಹಳ ಸುಲಭವಾಗಿ ದೊರಕುತ್ತಿದ್ದವು ಎಂದಿದ್ದಾರೆ.
ಪ್ರಸ್ತುತ ಡೀಲರುಗಳು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಸಿದ್ಧರಾಗುತ್ತಿಲ್ಲ. ಅವರು ಮಾತನಾಡುವುದನ್ನು ಕಂಪನಿ ನಿರ್ಬಂಧಿಸಿದೆ ಎಂದು ತುಷಾರ್ ಆರೋಪ ಮಾಡುತ್ತಿದ್ದಾರೆ.
ಇನ್ನೊಂದೆಡೆ ಹೇಳಿಕೆ ಕೊಟ್ಟಿರುವ ಸಂಸ್ಥೆಯು, ಇತ್ತೀಚೆಗಿನ ಸಮಯಗಳಲ್ಲಿ ಟೊಯೊಟಾ ಕಿರ್ಲೊಸ್ಕರ್ ಮೋಟಾರ್ಸ್ ಅಥವಾ ಡೀಲರ್ ಗೆ ಆಗಿರಲಿ ಅಂತಹ ಯಾವುದೇ ದೂರುಗಳು ದಾಖಲಾಗಿಲ್ಲ. ಹಾಗಿದ್ದರೂ ಗ್ರಾಹಕರ ಸಂಪರ್ಕದಲ್ಲಿದ್ದು, ಅವರ ಸಮಸ್ಯೆಗಳನ್ನು ಅರಿತುಕೊಂಡು ತನಿಖೆ ನಡೆಸಲಿದ್ದೇವೆ ಎಂದಿದೆ.