Just In
- 8 hrs ago ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- 9 hrs ago KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- 10 hrs ago ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- 10 hrs ago Maruti Suzuki: 2024ರ ಮಾರುತಿ ಸ್ವಿಫ್ಟ್ ವಿಶೇಷತೆಗಳು: ಸನ್ರೂಫ್, 35 ಕಿ.ಮೀ ಮೈಲೇಜ್!
Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಮಾನ್ಸೂನ್ನಲ್ಲಿ ಕೈಗೊಳ್ಳಬೇಕಾದ 8 ಕರಾವಳಿ ಪಯಣಗಳು
ಮುಂಗಾರು ಮಳೆ ಆರಂಭವಾಗಿದೆ. ಒಂದೆಡೆ ತಂಪಾಗಿ ಬೀಸುವ ಗಾಳಿ ಇನ್ನೊಂದೆಡೆ ಕಡಲಿನ ಅಬ್ಬರವು ಮೈ ಮತ್ತು ಮನಸ್ಸು ಎರಡಕ್ಕೂ ಹಿತವಾದ ಅನುಭವ ನೀಡುತ್ತದೆ. ಮಳೆ ಜೋರಾದಂತೆ ಸಮುದ್ರ ಅಲೆಗಳ ನರ್ತನವು ಜೋರಾಗುತ್ತದೆ.
Also Read : ಸಾವಿನ ರಸ್ತೆಯಲ್ಲೊಂದು ಧಕ್ ಧಕ್ ಪಯಣ
ಪದೇ
ಪದೇ
ಸುರಿಯುವ
ತುಂತುರು
ಹನಿಗಳು
ನಿಮ್ಮ
ಪ್ರಯಾಣವನ್ನು
ಇಂಪಾದ
ಹಾಡಿನಷ್ಟು
ಮಧುರವಾಗಿಸಲಿದೆ.
ಇಂದಿನ
ಲೇಖನದಲ್ಲಿ
ಭಾರತದಲ್ಲಿ
ಈ
ಮಾನ್ಸುನ್
ವೇಳೆಯಲ್ಲಿ
ದೇಶದಲ್ಲಿ
ನೀವು
ಕೈಗೊಳ್ಳಬೇಕಾಗಿರುವ
ಎಂಟು
ರಸ್ತೆ
ಪಯಣಗಳ
ಬಗ್ಗೆ
ತಿಳಿಸಲಿದ್ದೇವೆ.
ಇದಕ್ಕಾಗಿ
ಫೋಟೊ
ಸ್ಲೈಡ್
ನತ್ತ
ಮುಂದುವರಿಯಿರಿ...
08. ಡಿಘಾದಿಂದ ಚಂಡೀಪುರ
ಡಿಘಾ - ಪಶ್ಚಿಮ ಬಂಗಾಳ
ಚಂಡೀಪುರ - ಒಡಿಸ್ಸಾ
ದಕ್ಷಿಣ ಪೂರ್ವಭಾಗ ಒಡಿಸ್ಸಾದ ಚಂಡೀಪುರದಿಂದ ಆರಂಭವಾಗುವ ಈ 105 ಕೀ.ಮೀ. ಪಯಣವು ನಿಮ್ಮನ್ನು ಪಶ್ಚಿಮ ಬಂಗಾಳದ ಡಿಘಾ ಕಡಲ ಕಿನಾರೆಯನ್ನು ತಲುಪಿಸಲಿದೆ. ರಜಾ ದಿನಗಳಲ್ಲಿ ಜಾಲಿ ರೈಡ್ ಹೋಗುವವರಿಗೆ ಇದೊಂದು ಪರಿಪೂರ್ಣ ಆಯ್ಕೆಯಾಗಿರಲಿದೆ. ಈ ನಡುವೆ ನಿಮಗೆ ತಲ್ಸಾರಿ, ಕಾಷಾಫಲ್ ಗಳಂತಹ ಮನೋಹರ ತೀರ ಪ್ರದೇಶಗಳನ್ನು ತಲುಪಿಸಲಿದೆ.
07. ಮುಙಪ್ಪಿಲಾಂಘಾಡ್ ಡ್ರೈವ್ ಇನ್ ಬೀಚ್
ರಾಜ್ಯ: ಕೇರಳ
ಕೇರಳದಲ್ಲಿ ಅದೆಷ್ಟೋ ವರ್ಣಮಯ ತೀರ ಪ್ರದೇಶಗಳಿದ್ದರೂ ಏಷ್ಯಾದಲ್ಲೇ ಏಕೈಕ ಚಾಲನಾ ಯೋಗ್ಯವಾದ ಬೀಚ್ ಎಂಬ ಕೀರ್ತಿಯನ್ನು ಮುಙಪ್ಪಿಲಾಂಘಾಡ್ (Muzhappilangad) ಡ್ರೈವ್ ಇನ್ ಬೀಚ್ ಕಟ್ಟಿಕೊಂಡಿದೆ. ರಾಷ್ಟ್ರೀಯ ಹೆದ್ದಾರಿ 17ಕ್ಕೆ ಸಮಾನಂತರವಾಗಿ ಹಾದು ಹೋಗುವ ಪ್ರಸ್ತುತ ಕಡಲ ಕಿನಾರೆಯಲ್ಲಿ ಕಾರು, ಬೈಕ್ ಪ್ರಿಯರು ಅಬ್ಬರಿಸುವ ಕಡಲಲ್ಲಿ ತಮ್ಮ ಸಾಹಸ ಪಯಣ ಹಮ್ಮಿಕೊಳ್ಳಬಹುದಾಗಿದೆ. ಇಲ್ಲಿಗೆ ಭೇಟಿ ಕೊಡಬಹುದಾದ ಸೂಕ್ತ ಕಾಲ ಎಪ್ರಿಲ್ ತಿಂಗಳಾಗಿದ್ದು, ವಾರ್ಷಿಕ ಬೀಚ್ ಹಬ್ಬವು ಆಯೋಜನೆಯಾಗುತತ್ದೆ.
06. ವಿಶಾಖಪಟ್ಟಣದಿಂದ ರಾಜಮುಂಡ್ರಿ
ರಾಜ್ಯ: ಆಂಧ್ರಪ್ರದೇಶ
ವಿಶಾಖಪಟ್ಟಣದಿಂದ ರಾಜಮುಂಡ್ರಿ ವರೆಗಿನ ರಾಷ್ಟ್ರೀಯ ಹೆದ್ದಾರಿ 5ರ ಪಯಣವು ಚಾಲಕರಿಗೆ ಹೆಚ್ಚಿನ ಆನಂದವನ್ನು ನೀಡಲಿದೆ. ನಿಮಗೂ ಬಂಗಾಳ ಕೊಲ್ಲಿಯ ತೀರ ಪ್ರದೇಶವನ್ನು ಆನಂದಿಸುವ ಮೋಹವಿದ್ದಲ್ಲಿ ಇದೊಂದು ಅತ್ಯುತ್ತಮ ಆಯ್ಕೆಯಾಗಿರಲಿದೆ.
05. ಧನುಷ್ಕೋಡಿಯಿಂದ ಕನ್ಯಾಕುಮಾರಿ
ರಾಜ್ಯ: ತಮಿಳುನಾಡು
ಭಾರತದ ದಕ್ಷಿಣದ ತುತ್ತ ತುದಿಯಲ್ಲಿರುವ ಕನ್ಯಾಕುಮಾರಿ ವರ್ಷದಲ್ಲಿ ಅಸಂಖ್ಯಾತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇಲ್ಲಿ ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರ ಸೇರಿದಂತೆ ಮೂರು ಸಮುದ್ರಗಳು ಸೇರುವ ಸಂಗಮ ಸ್ಥಳವಾಗಿದೆ. ಇಲ್ಲಿನ ಸೂರ್ಯೋದಯ, ಸೂರ್ಯಾಸ್ಥ, ಕಡಲ ರಮಣೀಯ ದೃಶ್ಯಗಳು ನಿಮ್ಮಲ್ಲಿ ಮಗದೊಂದು ಮಾಯಾನಗರಿಗೆ ಕರೆದೊಯ್ದಂತೆ ಭಾಸವನ್ನುಂಟು ಮಾಡಲಿದೆ. ಪ್ರವಾಸಿಗರ ಪ್ರಕಾರ, ಜೀವನದಲ್ಲಿ ಎಂದಾದರೂ ಒಂದು ದಿನವಾದರೂ ಕನ್ಯಾಕುಮಾರಿಯಿಂದ ಧನುಷ್ಕೋಡಿಗೆ ಪ್ರಯಾಣವನ್ನು ಹಮ್ಮಿಕೊಳ್ಳಬೇಕು. ಅಲ್ಲಿನ ಸೌಂದರ್ಯವೇ ಇದಕ್ಕೆ ಸಾಕ್ಷಿ.
04. ಮುಂಬೈನಿಂದ ರತ್ನಗಿರಿ
ರಾಜ್ಯ: ಮಹಾರಾಷ್ಟ್ರ
ಪಶ್ಚಿಮ ಘಟ್ಟದ ಘಾಟಿ ಪ್ರದೇಶದ ಮೂಲದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಪಯಣವು ನಿಮ್ಮನ್ನು ಪಶ್ಚಿಮದಲ್ಲಿ ಸ್ಥಿತಗೊಂಡಿರುವ ಸಮುದ್ರಗಳ ರಾಣಿ ಅರಬೀ ಕಡಲನ್ನು ತಲುಪಿಸಲಿದೆ. ಕಾರು ಪಯಣ ಇಲ್ಲಿ ಅತ್ಯುತ್ತಮ ಆಯ್ಕೆಯಾಗಿರಲಿದ್ದು, ವನ್ಯ ಜೀವಿಗಳ ದರ್ಶನವು ನಿಮಗಾಗಲಿದೆ.
03. ಚೆನ್ನೈನಿಂದ ಟ್ರಾಂಕ್ವಿಬಾರ್
ರಾಜ್ಯ: ತಮಿಳುನಾಡು
ದೇಶದ ಅತ್ಯಂತ ಚಿತ್ತಾಕರ್ಷಕ ಡ್ರೈವಿಂಗ್ ಅನುಭವವನ್ನು ಚೆನ್ನೈನ ಪೂರ್ವ ಕರಾವಳಿ ಪ್ರದೇಶದಲ್ಲಿ ಪಡೆಯಬಹುದಾಗಿದೆ. ಹೆಸರಾಂತ ಪ್ರವಾಸಿ ತಾಣ ಪಾಂಡಿಚೇರಿ ಹಾದು ಹೋಗುವ ಈ ಪಯಣದಲ್ಲಿ ಬಂಗಾಳಕೊಲ್ಲಿಯಲ್ಲಿ ಮೀನುಗಾರಿಕೆ ನಡೆಸುವ ಬೆಸ್ತರು ನಿಮ್ಮಲ್ಲಿ ವಿಶಿಷ್ಟ ಅನುಭವಕ್ಕೆ ಕಾರಣವಾಗಲಿದೆ.
02. ಕಾಸರಗೋಡಿನಿಂದ ಕೊಚ್ಚಿ
ರಾಜ್ಯ: ಕೇರಳ
ಅಚ್ಚ ಕನ್ನಡಿಗರ ಬೀಡು ಕಾಸರಗೋಡು ಸಪ್ತ ಭಾಷಾ ಸಂಗಮ ಭೂಮಿ. ಪ್ರಸ್ತುತ ಕೇರಳದ ಭಾಗವಾಗಿರುವ ತುಳುನಾಡು, ಕರ್ನಾಟಕದ ಜೊತೆ ಗಡಿ ನಾಡನ್ನು ಹಂಚಿಕೊಂಡಿದೆ. ಇತಿಹಾಸ ಪ್ರಸಿದ್ಧ ಬೇಕಲ ಕೋಟೆ, ಚಂದ್ರಗಿರಿ, ಕಣ್ಣೂರು ಜಿಲ್ಲೆಯ ತಲಶ್ಶೇರಿ ಮತ್ತು ಶತಮಾನದ ಹಿಂದೆ ಪೋರ್ಚ್ ಗೀಸ್ ಯಾತ್ರಿಕ ವಾಸ್ಕೋಡಿಗಾಮಾ ಕಲ್ಲಿಕೋಟೆಯ ಕಪ್ಪಾಡ್ ಗೆ ಆಗಮಿಸಿ ಸ್ಥಳವು ನಿಮನ್ನು ಇತಿಹಾಸದತ್ತ ಕೊಂಡೊಯ್ಯಲಿದೆ.
01. ಕಾರವಾರದಿಂದ ಮಂಗಳೂರು
ರಾಜ್ಯ: ಕರ್ನಾಟಕ
ನಮ್ಮ ಕರ್ನಾಟಕದಲ್ಲಿ ಮಂಗಳೂರಿನಿಂದ ಕಾರವಾರದ ವರೆಗೆ ಹಾದು ಹೋಗುವ ಕರಾವಳಿ ತೀರ ಪ್ರದೇಶವು ಹೆಚ್ಚು ರಮಣೀಯವಾಗಿದ್ದು, ಪಶ್ಚಿಮ ಘಟ್ಟದ ಸೌಂದರ್ಯವನ್ನು ಸವಿಯಬಹುದಾಗಿದೆ. ಒಂದು ಬದಿಯಲ್ಲಿ ಶಾಂತಚಿತ್ತವಾದ ಅರಬೀ ಸಮುದ್ರ ಇನ್ನೊಂದೆಡೆ ಮಲೆನಾಡಿನ ಸೌಂದರ್ಯ ಇಲ್ಲಿನ ನಿತ್ಯ ದರ್ಶನವಾಗಲಿದೆ. ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಹಾದು ಹೋಗುವ ಈ 270 ಕೀ.ಮೀ. ದೂರದ ಪಯಣವನ್ನು ನಿಮ್ಮಲ್ಲಿ ಸ್ಮರಣೀಯ ಅನುಭವವಾಗಿಸಲಿದೆ.
ದೇಶದ 15 ನಯನ ಮನೋಹರ ಕಡಲ ತೀರಕ್ಕೆ ಜಾಲಿ ರೈಡ್