Just In
- 9 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 10 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 11 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 11 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೇಮಾಮಾಲಿನಿ ಕಾರು ಅಪಘಾತಕ್ಕೆ ಅಮಿತ ವೇಗವೇ ಕಾರಣ?
ಕಳೆದ
ದಿನ
ರಾತ್ರಿ
(ಜುಲೈ
02,
ಗುರುವಾರ)
ಸಂಭವಿಸಿದ
ಕಾರು
ಅಪಘಾತದಲ್ಲಿ
ಬಿಜೆಪಿ
ಸಂಸದೆ
ಹಾಗೂ
ಬಾಲಿವುಡ್ನ
ಹಿರಿಯ
ನಟಿ
ಹೇಮಾಮಾಲಿನಿ
ಗಂಭೀರ
ಗಾಯಗೊಂಡಿದ್ದರು.
ಪ್ರಕರಣದಲ್ಲಿ
ನಾಲ್ಕು
ವರ್ಷದ
ಬಾಲಕಿ
ಮೃತಪಟ್ಟಿದ್ದರೆ
ನಾಲ್ವರಿಗೆ
ತೀವ್ರತರಹದ
ಗಾಯಗಾಳಾಗಿದ್ದವು.
ಸೀಟು
ಬೆಲ್ಟ್
ಧರಿಸುತ್ತಿದ್ದರೆ
ಮುಂಡೆ
ಪ್ರಾಣಾಪಾಯದಿಂದ
ಪಾರಾಗುತ್ತಿದ್ದರು
ಹೇಮಾಮಾಲಿನಿ
ಸಂಚರಿಸುತ್ತಿದ್ದ
ಮರ್ಸಿಡಿಸ್
ಬೆಂಝ್
ಮುಂಭಾಗದಿಂದ
ಬರುತ್ತಿದ್ದ
ಆಲ್ಟೊ
ಕಾರಿಗೆ
ಬಲವಾಗಿ
ಢಿಕ್ಕಿ
ಹೊಡೆದ
ಪರಿಣಾಮ
ಈ
ದುರಂತ
ಸಂಭವಿಸಿದೆ.
ಇದರಂತೆ
ಸ್ಥಳೀಯ
ಪೊಲೀಸರು
ತನಿಖೆ
ಕೈಗೆತ್ತಿಗೊಂಡಿದ್ದು,
ಅಪಘಾತಕ್ಕೆ
ಸಂಬಂಧಿಸಿದಂತೆ
ಪ್ರಾಥಮಿಕ
ವರದಿ
ಬಿಡುಗಡೆ
ಮಾಡಿದ್ದಾರೆ.
ಹೇಮಾಮಾಲಿನಿ ಅವರ ಕಾರು ಅಮಿತ ವೇಗದಲ್ಲಿ ಸಂಚರಿಸಿರುವುದೇ ಅಪಘಾತಕ್ಕೆ ಕಾರಣವಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಈ ಸಂಬಂಧ ಪೊಲೀಸರು ಹೇಮಾಮಾಲಿನಿ ಕಾರಿನ ಚಾಲಕರನ್ನು ಬಂಧಿಸಿದ್ದಾರೆ.
ತುರ್ತು ಸಂದರ್ಭದಲ್ಲಿ ಏರ್ ಬ್ಯಾಗ್ ತೆರೆದುಕೊಂಡಿರುವುದೇ ಹೇಮಾಮಾಲಿನಿ ಪ್ರಾಣಪಾಯಾದಿಂದ ಪಾರಾಗಲು ಕಾರಣವಾಗಿದೆ ಎನ್ನಲಾಗುತ್ತಿದೆ.[ಜೀವರಕ್ಷಕ ಏರ್ ಬ್ಯಾಗ್ ಕಾರ್ಯನಿರ್ವಹಿಸುವ ವಿಧಾನ ಹೇಗೆ?]
ರಾಜಸ್ಥಾನದ ದೌಸಾ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ಹೈವೇಗೆ ಪ್ರವೇಶಿಸುವ ವೇಳೆ ಆಲ್ಟೊ ಚಾಲಕ ಸಹ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಬಗ್ಗೆಯೂ ಉಲ್ಲೇಖವಿದೆ.
ಘಟನೆಯಲ್ಲಿ ಆಲ್ಟೊ ಕಾರಿನಲ್ಲಿ ಸಂಚರಿಸುತ್ತಿದ್ದ ನಾಲ್ಕು ವರ್ಷದ ಬಾಲಕಿ ಸೋನಮ್ ಸಾವನ್ನಪ್ಪಿದ್ದರೆ ಇತರ ನಾಲ್ವರಾದ ಸೀಮಾ (40), ಹನುಮಾನ್ (38), ಶಿಖಾ ದೇವಿ (35) ಮತ್ತು ಸುಮಿಲ್ (5) ಗಾಯಗೊಂಡಿದ್ದರು. ಬಾಲಕಿ ಸೋನಮ್ ಅವರು ಹನುಮಾನ್ ಮತ್ತು ಶಿಖಾ ದಂಪತಿಯ ಮಗಳಾಗಿದ್ದಾರೆ.
ಎಂಟ್ರಿ ಲೆವೆಲ್ ಕಾರಾಗಿರುವ ಆಲ್ಟೊದಲ್ಲಿ ಯಾವುದೇ ರೀತಿಯ ಸುರಕ್ಷತೆಯ ವ್ಯವಸ್ಥೆಯಿರುವುದಿಲ್ಲ. ಇನ್ನೊಂದೆಡೆ ಬೆಂಝ್ ಕಾರಿನಲ್ಲಿ ಮುಂದುಗಡೆ ಹಾಗೂ ಹಿಂಭಾಗದ ಪ್ರಯಾಣಿಕರ ಸುರಕ್ಷತೆಯ ನಿಟ್ಟಿನಲ್ಲಿ ಗಾಳಿಚೀಲದ ವ್ಯವಸ್ಥೆಯನ್ನು ಒದಗಿಸಲಾಗುತ್ತದೆ.
ಭಾರತದಲ್ಲಿ ಏರ್ ಬ್ಯಾಗ್ ಸೇವೆಯ ಪ್ರಾಮುಖ್ಯತೆ ಬಗ್ಗೆ ಪ್ರಯಾಣಿಕರು ನಿರ್ಲಕ್ಷ್ಯ ವಹಿಸುತ್ತಾರೆ ಅಥವಾ ಅವರಿಗೆ ಇದರ ಮಹತ್ವದ ಬಗ್ಗೆ ಅರಿವಿರುವುದಿಲ್ಲ.
ಇನ್ನು ಚಾಲನೆ ವೇಳೆ ಮುಂಭಾಗ ಹಾಗೂ ಹಿಂಭಾಗದ ಪ್ರಯಾಣಿಕರು ಕಡ್ಡಾಯವಾಗಿ ಸೀಟು ಬೆಲ್ಟ್ ಧರಿಸಬೇಕಾಗಿದೆ. ಇವೆಲ್ಲವೂ ಚಾಲನೆ ವೇಳೆ ಮೈಗೂಡಿಸಿಕೊಳ್ಳಬೇಕಾದ ಪ್ರಾಥಮಿಕ ಕರ್ತ್ಯವ್ಯವೂ ಹೌದು [ನೀವು ಜೀವ ರಕ್ಷಕ ಸೀಟ್ ಬೆಲ್ಟ್ ಏಕೆ ಧರಿಸಬೇಕು?].
ಇವೆಲ್ಲದಕ್ಕೂ ಮಿಗಿಲಾಗಿ ನಿಧಾನವಾಗಿ ಚಾಲನೆ ಮಾಡುವುದನ್ನು ಕರಗತ ಮಾಡಿಕೊಳ್ಳಬೇಕು. ಯಾಕೆಂದರೆ 'ಅವಸರವೇ ಅಪಘಾತಕ್ಕೆ ಕಾರಣ'ವಾಗಿದ್ದು, ರಸ್ತೆ ಎಂಬುದು ರೇಸ್ ಟ್ರ್ಯಾಕ್ ಅಲ್ಲ ಎಂಬುದನ್ನು ಯಾವತ್ತೂ ಮರೆಯಬಾರದು.
ಸೀಟ್ ಬೆಲ್ಟ್ ತೊಡದಿರುವುದೇ ಜಸ್ಪಾಲ್ ಸಾವಿಗೆ ಕಾರಣ