Just In
- 6 hrs ago ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- 7 hrs ago ಟೊಯೊಟಾದ ಫಾರ್ಚ್ಯೂನರ್ನಲ್ಲೂ ಸಿಗಲಿದೆ ಹೈಬ್ರಿಡ್: ಇದರ ಮೈಲೇಜ್ ಕೇಳಿ ಸುಸ್ತಾದ ಗ್ರಾಹಕರು!
- 7 hrs ago ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- 9 hrs ago ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
Don't Miss!
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಮುನಾ ಎಕ್ಸ್ಪ್ರೆಸ್ವೇನಲ್ಲಿ ಯುದ್ಧ ವಿಮಾನ ತುರ್ತು ಲ್ಯಾಂಡಿಂಗ್
ಶೀರ್ಷಿಕೆ ಓದಿ ಗಾಬರಿಯಾಗಬೇಡಿರಿ! ವಿಷಯ ಏನೆಂದರೆ ದೇಶದ ಹೆಸರಾಂತ ಯಮುನಾ ಎಕ್ಸ್ಪ್ರೆಸ್ವೇ (Yamuna Expressway) ಹೆದ್ದಾರಿಯಲ್ಲಿ ಭಾರತೀಯ ವಾಯುಪಡೆಯ (ಐಎಎಫ್) ಮೀರಾಜ್ 2000 (IAF's Mirage 2000) ಯುದ್ಧ ವಿಮಾನವು ಯಶಸ್ವಿ ಭೂಸ್ಪರ್ಶವನ್ನು ಮಾಡಿದೆ.
ಸಾಮಾನ್ಯವಾಗಿ
ವಿಮಾನಗಳಿಗೆ
ಪ್ರತ್ಯೇಕವಾಗಿ
ಸಿದ್ಧಪಡಿಸಲಾದ
ರನ್ವೇ
ಟ್ರ್ಯಾಕ್
ನಲ್ಲಿ
ಲ್ಯಾಂಡಿಂಗ್ಗೆ
ಅವಕಾಶ
ಮಾಡಿಕೊಡಲಾಗುತ್ತದೆ.
ಆದರೆ
ಇವೆಲ್ಲದಕ್ಕಿಂತಲೂ
ವಿಭಿನ್ನವಾಗಿ
ತುರ್ತು
ಪರಿಸ್ಥಿತಿ
ವೇಳೆ
ಲ್ಯಾಂಡಿಂಗ್ಗಾಗಿ
ಇಂತಹದೊಂದು
ಪರೀಕ್ಷೆ
ಹಮ್ಮಿಕೊಳ್ಳಲಾಗಿತ್ತು.
ಅಪತ್ಕಾಲ ಪರಿಸ್ಥಿತಿಯಲ್ಲಿ ತುರ್ತು ಲ್ಯಾಂಡಿಂಗ್ಗಾಗಿ ಯಮುನಾ ಎಕ್ಸ್ ಪ್ರೆಸ್ ವೇ ಹೆದ್ದಾರಿಗಳನ್ನು ಬಳಕೆ ಮಾಡಲಾಗುವುದು. ಇದರಂತೆ ಅಧಿಕಾರಿಗಳ ಸನ್ಮುಖದಲ್ಲಿ ಭಾರತ ವಾಯುಪಡೆಯ ವಿಮಾನವು ತುರ್ತು ಭೂಸ್ಪರ್ಶವನ್ನು ಕಂಡಿದೆ.
ದೆಹಲಿ ಹೊರವಲಯದಲ್ಲಿರುವ ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ಪರೀಕ್ಷೆ ಮಾಡಲಾಗಿತ್ತು. ಇದಕ್ಕಾಗಿ ಭಾರತ ವಾಯುಸೇನೆಯ ಮೀರಾಜ್ 2000 ಯುದ್ಧ ವಿಮಾನವನ್ನು ಆಯ್ಕೆ ಮಾಡಲಾಗಿದೆ.
ಈಗ ಹೆದ್ದಾರಿಯಲ್ಲಿ ತುರ್ತು ಭೂಸ್ಪರ್ಶ ಮಾಡುವ ಮೂಲಕ ದೇಶದ ರಕ್ಷಣಾ ಪಡೆ ಇನ್ನಷ್ಟು ಬಲಿಷ್ಠಗೊಂಡಿದೆ. ಈ ಸಂಬಂಧ ವಾಯುಪಡೆ ಅಧಿಕಾರಿಗಳು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಯುದ್ಧ ಕಾಲ ಪರಿಸ್ಥಿತಿಯಲ್ಲಿ ಶತ್ರು ರಾಷ್ಟ್ರಗಳು ವಿಮಾನ ನಿಲ್ದಾಣಗಳನ್ನು ಗುರಿ ಮಾಡುವ ಸಾಧ್ಯತೆಯಿದೆ ಅಥವಾ ವಿಮಾನ ನಿಲ್ದಾಣಗಳ ಸೇವೆಯನ್ನು ಮುಚ್ಚುಗಡೆಗೊಳಿಸಬೇಕಾಗುತ್ತದೆ. ಇಂತಹ ಅಪತ್ಕಾಲ ಪರಿಸ್ಥಿತಿ ತಲೆದೋರಿದ್ದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಹೆದ್ದಾರಿಗಳಲ್ಲೇ ಲ್ಯಾಂಡಿಂಗ್ ಪ್ರಕ್ರಿಯೆಗೆ ಅನುವು ಮಾಡಿಕೊಡಲಾಗುವುದು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಐಎಎಫ್ ಹಿರಿಯ ಅಧಿಕಾರಿಯೊಬ್ಬರು, "1971 ಭಾರತ-ಪಾಕಿಸ್ತಾನ ಯುದ್ಧ ವೇಳೆಯಲ್ಲಿ ಪಾಕ್ ಜೆಟ್ ವಿಮಾನವೊಂದು ಆಗ್ರಾ ವರೆಗೆ ಬಂದು ತಲುಪಿತ್ತು. ಈಗ ಆಗ್ರಾ-ಲೋಕ್ನೋ ಎಕ್ಸ್ ಪ್ರೇ ಹೆದ್ದಾರಿಯಲ್ಲಿ ತುರ್ತು ಲ್ಯಾಂಡಿಂಗ್ ತೆರೆದುಕೊಳ್ಳುವ ಮೂಲಕ ದೇಶದ ವಾಯು ಕಾರ್ಯಾಚರಣೆಯು ಇನ್ನಷ್ಟು ಬಲಗೊಂಡಿರುವುದಾಗಿ" ತಿಳಿಸಿದ್ದಾರೆ.
ಇನ್ನು ಮೀರಾಜ್ 2000 ಯುದ್ಧ ವಿಮಾನದ ಬಗ್ಗೆ ಮಾತನಾಡುವುದಾದ್ದಲ್ಲಿ ಇದು ಮೂಲತ: ಫ್ರಾನ್ಸ್ನ ದಸ್ಸಾಲ್ಟ್ ಮೀರಾಜ್ 2000 ಆಗಿದೆ. ಬಹು ಕಾರ್ಯಾಚರಣೆಯ ಸಿಂಗಲ್ ಎಂಜಿನ್ ನಾಲ್ಕನೇ ಜನರೇಷನ್ ಜೆಟ್ ಯುದ್ಧ ವಿಮಾನ ಇದಾಗಿದ್ದು, ದಸ್ಸಾಲ್ಟ್ ಎವಿವೇಷನ್ ಉತ್ಪಾದಿಸುತ್ತದೆ.
1980ರಲ್ಲಿ ಭಾರತೀಯ ವಾಯುಪಡೆಯು ಫ್ರಾನ್ಸ್ ನಿಂದ 49ರಷ್ಟು ಮೀರಾಜ್ 2000 ಜೆಟ್ ಗಳನ್ನು ಖರೀದಿಸಿತ್ತು. ಈ ಪೈಕಿ 42 ಸಿಂಗಲ್ ಸೀಟರ್ ಹಾಗೂ ಏಳು ಟು ಸೀಟರ್ ವಿಮಾನಗಳು ಒಳಗೊಂಡಿದ್ದವು.
ಇನ್ನು 1999ರಲ್ಲಿ ಪಾಕಿಸ್ತಾನ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಮೀರಾಜ್ 2000 ನಿರ್ಣಾಯಕ ಪಾತ್ರ ವಹಿಸಿತ್ತು. ಅಲ್ಲದೆ ಅತ್ಯಂತ ಎತ್ತರದ ಹಿಮಾಲಯ ಪರ್ವತ ಶಿಖರಗಳ ನಡುವೆ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗಿತ್ತು.
ಇನ್ನು 2006ರಲ್ಲಿ ಪರಿಷ್ಕೃತ ಮೀರಾಜ್ 2000 ಜೆಟ್ ವಿಮಾನ ಖರೀದಿಗೆ ಭಾರತೀಯ ವಾಯುಪಡೆ ಒಲವು ತೋರಿತ್ತು. ಇದರಂತೆ ನಡೆದ ಬಹುಕೋಟಿ ಒಪ್ಪಂದದಂತೆ 2015ರಲ್ಲಿ ಮತ್ತೆರಡು ಮೀರಾಜ್ 2000 ಭಾರತೀಯ ವಾಯುಸೇನೆಗೆ ಬಂದು ಸೇರಿತ್ತು.
ಒಟ್ಟಿನಲ್ಲಿ ವಾಯು ಶಕ್ತಿಯಲ್ಲಿ ಭಾರತ ಇನ್ನಷ್ಟು ಪ್ರಬಲಗೊಂಡಿದೆಯೇ? ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿರಿ.
ರೋಚಕ ವೀಡಿಯೋ ವೀಕ್ಷಿಸಿ