Just In
- 4 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 6 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 6 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 7 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತದಲ್ಲಿ ಏಷ್ಯಾದ ಅತಿ ದೊಡ್ಡ ರೈಲ್ವೆ ಹಾಗೂ ರಸ್ತೆ ಸೇತುವೆ
ಏಷ್ಯಾದಲ್ಲೇ ಅತಿ ದೊಡ್ಡ ಡಬಲ್ ಡೆಕ್ಕರ್ ರೈಲ್ವೆ-ರಸ್ತೆ ಸೇತುವೆ ಭಾರತದಲ್ಲಿ ನಿರ್ಮಾಣವಾಗುತ್ತಿದೆ. ಪೂರ್ವ ಭಾರತದ ಬ್ರಹ್ಮಪುತ್ರ ನದಿಯಲ್ಲಿ ತಲೆಯೆತ್ತಲಿರುವ 'ಬೋಗಿಬೀಲ್' ರೈಲು ಹಾಗೂ ರಸ್ತೆ ಸೇತುವೆಯು 2018ರ ವೇಳೆಗೆ ಲೋಕರ್ಪಣೆಯಾಗಲಿದೆ.
ಅಸ್ಸಾಂನ
ದಿಬ್ರುಘರ
ಜಿಲ್ಲೆಯಲ್ಲಿ
ನಿರ್ಮಾಣವಾಗಲಿರುವ
ರೈಲ್ವೆ
ಹಾಗೂ
ರಸ್ತೆ
ಸೇತುವೆಯು
ಬ್ರಹ್ಮಪುತ್ರ
ನದಿಯಲ್ಲಿ
ಉತ್ತರ
ಹಾಗೂ
ದಕ್ಷಿಣ
ಭಾಗಗಳನ್ನು
ಸಂಪರ್ಕಿಸಲಿದೆ.
ಈ ಮಹತ್ತರ ಸೇತುವೆ ಕಾಮಗಾರಿ ಪೂರ್ಣಗೊಂಡ್ಡಲ್ಲಿ ಅಸ್ಸಾಂ ಹಾಗೂ ಅರುಣಾಚಲ ಪ್ರದೇಶಗಳಂತಹ ಕಡಿಮೆ ಅಭಿವೃದ್ಧಿ ಹೊಂದಿರುವ ರಾಜ್ಯಗಳಿಗೆ ನೆರವಾಗಲಿದೆ.
ಈ ಡಕ್ಕರ್ ಡೆಕ್ಕರ್ ರೈಲ್ವೆ-ರೆಸ್ತೆ ಸೇತುವೆಯ ವಿಶೇಷತೆ ಏನೆಂದರೆ ಕಳಗಡೆಯಿಂದ ಎರಡು ಹಾದಿಯ ರೈಲ್ವೆ ಟ್ರ್ಯಾಕ್ ಹಾಗೂ ಮೇಲ್ಪಾಗದಲ್ಲಿ ಮೂರು ಹಾದಿಗಳ ರಸ್ತೆ ಮಾರ್ಗವು ಜೋಡಣೆಯಾಗಲಿದೆ.
ವಿಶಿಷ್ಟತೆ ಕಾಪಾಡಿಕೊಂಡಿರುವ ಈ ರೈಲ್ವೆ ಹಾಗೂ ರಸ್ತೆ ಸೇತುವೆಯು 4.9 ಕೀ.ಮೀ.ಗಳಷ್ಟು (4940 ಮೀಟರ್) ಉದ್ದವನ್ನು ಹೊಂದಿರಲಿದೆ.
ಇಲ್ಲಿ ಬ್ರಹ್ಮ ಪುತ್ರ ನದಿಯ ಉತ್ತರದಿಂದ ದಕ್ಷಿಣ ಭಾಗಕ್ಕೆ ಸಂಪರ್ಕ ಸೇರಿದಂತೆ 74 ಕೀ.ಮೀ. ಗಳಷ್ಟು ಉದ್ದದ ರೈಲ್ವೆ ಮಾರ್ಗವು ನಿರ್ಮಾಣವಾಗಲಿದೆ.
ದಕ್ಷಿಣದಲ್ಲಿ ದಿಬ್ರುಘರದಿಂದ 5.83 ಕೀ.ಮೀಗಳಷ್ಟು ದೂರದಲ್ಲಿರುವ ಚೋವಾಲ್ ಖೋವಾ ಹಾಗೂ ಉತ್ತರದಲ್ಲಿ ಸಿಸಿ ಬೋರ್ಗಾಂವ್ ಹಾಗೂ ಸಿರ್ಪನಿಗಳನ್ನು ನದಿ ತಟವನ್ನು ಸಂಪರ್ಕಿಸಲಿದೆ.
ಸಂಪೂರ್ಣ ಬೋಗಿ ಬೀಲ್ ಸೇತುವೆ ಯೋಜನೆಗೆ ಬರೋಬ್ಬರಿ 4,857 ಕೋಟಿ ರುಪಾಯಿಗಳನ್ನು ಅಂದಾಜಿಸಲಾಗಿದೆ.
ಸೇತುವೆ ನಿರ್ಮಾಣಕ್ಕಾಗಿ ಬ್ರಹ್ಮಪುತ್ರ ನದಿಯ ಅಗಲವನ್ನು 10 ಕೀ.ಮೀ. ಗಳಿಂದ 5 ಕೀ.ಮೀ. ಗಳಷ್ಟು ಕಿರಿದು ಮಾಡಬೇಕಾಗುತ್ತದೆ. ಅಲ್ಲದೆ ಸವೆತವನ್ನು ತಡೆಯಬಲ್ಲ ಬಹಳ ಗಟ್ಟಿಮುಟ್ಟಾದ 'ಗೈಡ್ ಬಂಡ್ಸ್' ಆಧಾರ ಸ್ತಂಭಗಳನ್ನು ನಿರ್ಮಿಸಲಾಗುತ್ತದೆ. ಕಾಮಗಾರಿಯು ಅತ್ಯಂತ ಸವಾಲಿನಿಂದ ಕೂಡಿರಲಿದೆ ಎಂದು ರೈಲ್ವೆ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.
ಸೇತುವೆ ನಿರ್ಮಾಣಕ್ಕಾಗಿ ಸ್ವಿಡನ್ ಹಾಗೂ ಡೆನ್ಮಾರ್ಕ್ ತಂತ್ರಗಾರಿಕೆಗಳನ್ನು ಬಳಕೆ ಮಾಡಲಾಗುತ್ತದೆ. ಹಾಗೆಯೇ ಇದು ಹಗುರ ಭಾರದ ಸೇತುವೆಯಾಗಿರಲಿದೆ.