Just In
- 40 min ago ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- 45 min ago 'ಬಾಹುಬಲಿ' ಎಸ್ಯುವಿ ಪರಾಕ್ರಮ: ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ವಿಶೇಷತೆಗಳೇನು?
- 46 min ago Honda: ಭಾರತ ನಿರ್ಮಿಸಿದ ಹೋಂಡಾ ಕಾರಿಗೆ ಮುಗಿಬಿದ್ದ ಜಪಾನ್ ಜನ!
- 56 min ago ಮತ್ತೆ ಅಖಾಡಕ್ಕೆ ಅಮೇರಿಕನ್ ಆಫ್ರೋಡ್ ಕಿಂಗ್: 2024 ಜೀಪ್ ರಾಂಗ್ಲರ್ ಫೇಸ್ಲಿಫ್ಟ್ ರಿವ್ಯೂ!
Don't Miss!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕ್ಯಾಶ್ಲೆಸ್ ವ್ಯವಹಾರಕ್ಕೂ ಮುನ್ನ ಎಚ್ಚರ..!! ಟೋಲ್ ಬೂತ್ನಲ್ಲಿ 4 ಲಕ್ಷ ಕಳೆದುಕೊಂಡ ಮೈಸೂರಿನ ವೈದ್ಯ..!!
ಕ್ಯಾಶ್ಲೆಸ್ ವ್ಯವಹಾರಕ್ಕಾಗಿ ದೇಶದಲ್ಲಿ ಹೊಸ ಕ್ರಾಂತಿಯೇ ಶುರುವಾಗಿದೆ. ಆದ್ರೆ ಕಾರ್ಡ್ ಬಳಕೆಗೂ ಮುನ್ನ ಎಚ್ಚರ ತಪ್ಪಿದರೆ ನಿಮ್ಮ ಜೇಬಿಗೆ ಕತ್ತರಿ ಗ್ಯಾರೆಂಟಿ ಅನ್ನೋದನ್ನು ಮರೆಯಬೇಡಿ.
ಈಗ ಎಲ್ಲಿಗೆ ಹೋದ್ರು ಪ್ರತಿಯೊಂದಕ್ಕೂ ಕಾರ್ಡ್ ಮೂಲಕ ಬಿಲ್ ಪಾವತಿಸಿ ಎನ್ನುವ ನಾಮಫಲಕಗಳನ್ನು ನಾವು ದಿನನಿತ್ಯ ಶಾಪ್ಗಳು, ಪೆಟ್ರೋಲ್ ಬಂಕ್ಗಳ ಮುಂದೆ ನೋಡುವುದು ಕಾಮನ್. ಆದ್ರೆ ಕಾರ್ಡ್ ಬಳಕೆಗೂ ಮುನ್ನ ಈ ಸುದ್ದಿ ಓದಿದರೇ ಎಂತರಿಗೂ ಶಾಕ್ ಆಗದೇ ಇರಲಾರದು.
ನಿನ್ನೆ ತಡರಾತ್ರಿಯಷ್ಟೇ ಮೈಸೂರು ಮೂಲದ ವೈದ್ಯರೊಬ್ಬರು ತಮ್ಮ ಕಾರಿನಲ್ಲಿ ಕೊಚ್ಟಿನ್ ಟು ಮುಂಬೈ ಹೆದ್ದಾರಿಯಲ್ಲಿ ಪ್ರಯಾಣ ಮಾಡ್ತಾ ಇದ್ದರು. ಹೆದ್ದಾರಿಯಲ್ಲಿ ಪ್ರಯಾಣ ಅಂದರೆ ಶುಲ್ಕು ಪಾವತಿ ಮಾಡುವುದು ಸಾಮಾನ್ಯ ಅಲ್ಲವೇ, ಹೀಗಾಗಿ ಎಂದಿನಂತೆ ಅವರು ಕೂಡಾ ಟೋಲ್ ಬೂತ್ನಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಶುಲ್ಕ ಪಾವತಿ ಮಾಡಿದ್ದಾರೆ. ಆದ್ರೆ ನಿಮಿಷಾರ್ಧದಲ್ಲೇ ಅವರಿಗೆ ಒಂದು ಶಾಕ್ ಕಾದಿತ್ತು.
ಮುಂಬೈನಿಂದ ಬಂದಿದ್ದ ಮೈಸೂರು ವೈದ್ಯ ಡಾ. ರಾವ್ ಉಡುಪಿ ಬಳಿ ಇರುವ ಗುಂಡಮಿ ಟೋಲ್ನಲ್ಲಿ 40 ರೂ. ಪಾವತಿಸಲು ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದ್ದಾರೆ. ಆದ್ರೆ 40 ರೂಪಾಯಿ ಬದಲು ಅವರ ಖಾತೆಯಿಂದ ಪಾವತಿ ಎಷ್ಟು ಗೊತ್ತಾ? ಬರೋಬ್ಬರಿ 4 ಲಕ್ಷ ರೂಪಾಯಿ..!!
ಅವರ ಖಾತೆಯಿಂದ ಹಣ ಪಾವತಿಯಾಗುತ್ತಿದ್ದಂತೆ ವೈದ್ಯನ ಮೊಬೈಲ್ಗೆ ನೆಟ್ ಬ್ಯಾಕಿಂಗ್ ಸಂದೇಶ ಬಂದಿದೆ. ಮೊಬೈಲ್ನಲ್ಲಿರುವ ಸಂದೇಶ ನೋಡಿದ ವೈದ್ಯನಿಗೆ ಒಂದು ನಿಮಿಷ ಏನ್ ಮಾತನಾಡಬೇಕೇಂದು ತಿಳಿಯದೇ ಗಾಬರಿಯಾಗಿದ್ದಾರೆ.
40 ರೂಪಾಯಿ ಬದಲಿಗೆ 4 ಲಕ್ಷ ಪಾವತಿಯಾಗಿದ್ದನ್ನು ನೋಡಿದ ಮೈಸೂರು ವೈದ್ಯ, ತಕ್ಷಣವೇ ಕಾರಿನಿಂದ ಇಳಿದು ಬಂದಿದ್ದಾರೆ. 4 ಲಕ್ಷ ರೂಪಾಯಿ ಕಟ್ ಆಗಿದ್ದರ ಕುರಿತು ಟೋಲ್ ಸಿಬ್ಬಂದಿ ಬಳಿ ಮಾತಿನ ಚಕಮಕಿ ನಡೆಸಿದಾಗ 40 ರೂಪಾಯಿ ಬದಲು 4 ಲಕ್ಷ ಪಾವತಿಯಾಗಿದ್ದರ ಬಗ್ಗೆ ಸಿಬ್ಬಂದಿ ತಪ್ಪೊಪ್ಪಿಕೊಂಡಿದ್ದಾನೆ.
ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಮೈಸೂರು ಮೂಲದ ಡಾ.ರಾವ್, ಆಗಿರುವ ಘಟನೆ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾರೆ. ದೂರು ಹಿನ್ನೆಲೆ ಟೋಲ್ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಆದ ತಪ್ಪಿನ ಬಗ್ಗೆ ಕ್ಷಮೆ ಕೋರಿದ್ದು, ಚೆಕ್ ರೂಪದಲ್ಲಿ ಹಣ ವಾಪಸ್ ಮಾಡುವುದಾಗಿ ಪೊಲೀಸರಿಗೆ ಮನವಿ ಮಾಡಿದ್ದಾನೆ.
ಆದ್ರೆ ಟೋಲ್ ಸಿಬ್ಬಂದಿ ಮಾತು ಕೇಳದ ಡಾ. ರಾವ್, ತನಗೆ ಹಣ ರೂಪದಲ್ಲೇ 4 ಲಕ್ಷ ವಾಪಸ್ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದ ಟೋಲ್ ಸಿಬ್ಬಂದಿ, ಕಾರ್ಡ್ ಮೂಲಕ ಕಟ್ ಆಗಿದ್ದ ಹೆಚ್ಚುವರಿ ಮೊತ್ತವನ್ನು ಹಣ ರೂಪದಲ್ಲೇ ವಾಪಸ್ ಮಾಡಿದ್ದಾನೆ.
ಸದ್ಯ ರೂ. 3,99,960 ಹಣ ಪಡೆದಿರುವ ಡಾ.ರಾವ್ ಆದ ಘಟನೆ ಕುರಿತು ಗಾಬರಿಯಾಗಿದ್ದು ಸುಳ್ಳಲ್ಲ. ಮೊದಮೊದಲು ಹೆಚ್ಚುವರಿ ಹಣ ಕಟ್ ಆಗಿದ್ದರ ಬಗ್ಗೆ ನಿರಾಕರಿಸಿದ್ದ ಟೋಲ್ ಸಿಬ್ಬಂದಿ, ಸೂಕ್ತ ದಾಖಲೆ ತೊರಿಸಿದ ನಂತರವಷ್ಟೇ ತಪ್ಪೊಪ್ಪಿಕೊಂಡಿದ್ದ.
ಪೊಲೀಸರ ಮಧ್ಯಪ್ರವೇಶದಿಂದ ಡಾ. ರಾವ್ ಅವರಿಗೆ 4 ಲಕ್ಷ ರೂಪಾಯಿ ವಾಪಸ್ ಏನೋ ಬಂತು. ಆದ್ರೆ ಇದೇ ಅನುಭವ ಒಬ್ಬ ಮಹಿಳೆಗೆ ಆಗಿದ್ದರೆ ಆ ರಾತ್ರಿ ವೇಳೆ ಪೊಲೀಸ್ ಠಾಣೆಗೆ ಹೋಗಿ ಬೂತ್ ಸಿಬ್ಬಂದಿಯಿಂದ ಹಣ ಪಡೆಯಲು ಸಾಧ್ಯವೇ ಎಂಬ ಅನುಮಾನ ಸೃಷ್ಠಿಯಾಗುತ್ತೆ.
ಇದಷ್ಟೇ ಅಲ್ಲಾ ಈ ಘಟನೆಯಿಂದಾಗಿ ನಮ್ಮಲ್ಲೇ ಹತ್ತಾರು ಪ್ರಶ್ನೆಗಳು ಶುರುವಾಗುತ್ತವೆ. ಕ್ಯಾಶ್ಲೆಸ್ ವ್ಯವಹಾರ ಎಷ್ಟು ಸೇಫ್ ಅಂತಾ. ಜೊತೆಗೆ ಟೋಲ್ಗಳಲ್ಲಿ ಹಗಲು ದರೋಡೆ ನಡೆಯುತ್ತಿರುವ ಬಗ್ಗೆಯೂ ಗುಮಾನಿ ಶುರುವಾಗುತ್ತಿದೆ. ಆದ್ರೆ ಅದೇನೇ ಇರಲಿ ನೀವು ಕೂಡಾ ಕ್ಯಾಶ್ಲೆಸ್ ವ್ಯವಹಾರಕ್ಕೂ ಇಂತವರ ಬಗ್ಗೆ ಎಚ್ಚದಿಂದ ಇರುವುದು ಒಳಿತು.
ಹೊಚ್ಚ ಹೊಸ ಮಾರುತಿ ಇಗ್ನಿಸ್ ಕಾರಿನ ಫೋಟೋಗಳನ್ನು ವೀಕ್ಷಿಸಲು ಈ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.