Just In
- 8 min ago Tata Curvv Vs Citroen Basalt: ಟಾಟಾಗೆ ಸೆಡ್ಡು ಹೊಡೆಯುವ ತಾಕತ್ತಿದೆಯೇ?
- 1 hr ago ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- 1 hr ago Vande Bharat: ವಂದೇ ಭಾರತ್ ಸ್ಲೀಪರ್ ವಿಶೇಷತೆಗಳು: ಇಂಟೀರಿಯರ್ಗೆ ಫಿದಾ ಆಗ್ತೀರ!
- 1 hr ago ಎಲೆಕ್ಟ್ರಿಕ್ ಲೋಕಕ್ಕೆ ಎಸ್ಯುವಿ ದೈತ್ಯನ ಎಂಟ್ರಿ: ಇನ್ನು ಉಳಿದ ಕಾರುಗಳನ್ನು ದೇವರೇ ಕಾಪಾಡಬೇಕು!
Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Movies "ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೂರತ್ ಆಯ್ತು, ಈಗ ಮಂಗಳೂರು ಉದ್ಯಮಿಯಿಂದ ಕಾರು ಮೆಗಾ ಗಿಫ್ಟ್
ಕಂಪನಿಯ ಏಳಿಗೆಯಲ್ಲಿ ಪಾತ್ರಧಾರಿಗಳಾಗಿರುವ ನಿಮಗೆ ವರ್ಷಾಂತ್ಯದಲ್ಲಿ ಏನು ಉಡುಗೊರೆ ದೊರೆಯುತ್ತದೆ? ಗರಿಷ್ಠ ಅಂದರೆ ನಗದು ಬೋನಸ್ ತಾನೇ? ಹೌದು, ನಾವಿಂದು ಹೇಳಲಿರುವ ವಿಚಾರ ನಿಮ್ಮಲ್ಲಿ ಅಚ್ಚರಿಗೆ ಕಾರಣವಾಗಲಿದೆ.
ಇವನ್ನೂ ಓದಿ: ವಜ್ರದ ವ್ಯಾಪಾರಿಯಿಂದ ನೌಕರರಿಗೆ 500 ಕಾರು ಉಡುಗೊರೆ
ಕಳೆದ
ವರ್ಷವಷ್ಟೇ
ಸೂರತ್
ಮೂಲದ
ವಜ್ರದ
ವ್ಯಾಪಾರಿಯೊಬ್ಬರು
ತಮ್ಮ
ಸಂಸ್ಥೆ
ವಾರ್ಷಿಕ
ಗುರಿ
ಮುಟ್ಟಿರುವ
ಹಿನ್ನಲೆಯಲ್ಲಿ
500ರಷ್ಟು
ನೌಕರರಿಗೆ
ಹೊಚ್ಚ
ಹೊಸ
ಫಿಯೆಟ್
ಪುಂಟೊ
ಕಾರನ್ನು
ಉಡುಗೊರೆಯಾಗಿ
ನೀಡಿದ್ದರು.
ಈಗ
ಇದಕ್ಕೆ
ಸಮಾನವಾದ
ರೀತಿಯಲ್ಲಿ
ಮಂಗಳೂರು
ಉದ್ಯಮಿ
ಕೂಡಾ
ಸುದ್ದಿಯಲ್ಲಿದ್ದಾರೆ.
ಪುಣೆ ತಳಹದಿಯ ಸಿಎನ್ಸಿ ಬಾಲ್ಸ್ ಸ್ಕ್ರೂ ಮತ್ತು ಬೇರಿಂಗ್ ಸಂಸ್ಥೆಯ ನಿರ್ದೇಶಕರಾಗಿರುವ ವರದರಾಜ್ ಕಮಲೇಶ್ ನಾಯಕ್ ತಮ್ಮ 12ರಷ್ಟು ನೌರಕರರಿಗೆ ನ್ಯಾನೋ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಪ್ರಸ್ತುತ ಸಂಸ್ಥೆಯು ವಾರ್ಷಿಕ ಎರಡು ಕೋಟಿ ರು.ಗಳ ವಹಿವಾಟು ನಡೆಸಿದೆ. ಇದು ಸೂರತ್ ಮೂಲದ ವಜ್ರದ ವ್ಯಾಪಾರಿಯ ಲಾಭದ ಮೊತ್ತದ ಸಮೀಪ ತಲುಪುವುದಿಲ್ಲವಾದರೂ ಇರ್ವರು ಒಂದೇ ರೀತಿಯ ಭಾವನೆ ಹಂಚಿಕೊಂಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ನಾಯಕ್ 'ನನ್ನ ಸಂಪತ್ತು ವೃದ್ಧಿಗೆ ಸಹಕರಿಸಿದವರೊಂದಿಗೂ ನನ್ನ ಸಂಪತ್ತನ್ನು ಹಂಚಿಕೊಳ್ಳಬೇಕು' ಎಂದಿದ್ದಾರೆ.
ವರದರಾಜ್ ಅವರು 28 ವರ್ಷಗಳ ಹಿಂದೆ ತಮ್ಮ ಸಂಸ್ಥೆಯನ್ನು ಆರಂಭಿಸಿದ್ದರು. ಅಲ್ಲದೆ ಸಂಸ್ಥೆಯ ಯಶಸ್ಸಿನಲ್ಲಿ ಮಂಗಳೂರು ಘಟಕವು ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದಿದ್ದಾರೆ.
ವರದರಾಜ್ ಅವರ ಸಂಸ್ಥೆಯು ಎನ್ಇಎಫ್ಎ ಜರ್ಮನಿ ಆಟೋಮೇಷನ್ ಅವಾರ್ಡ್ ಜೊತೆಗೆ ಹಲವಾರು ಪ್ರಶಸ್ತಿಗಳಿಗೂ ಭಾಜನವಾಗಿದೆ. ಸಂಸ್ಥೆಯ ಏಳಿಗೆಯಲ್ಲಿ ನೌಕರರ ಪಾತ್ರ ಮಹತ್ತರವಾಗಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.