Just In
- 33 min ago ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- 59 min ago ಎಲೆಕ್ಟ್ರಿಕ್ ಅವತಾರದಲ್ಲಿ ಬರಲಿದೆ ಹೋಂಡಾ ಆಕ್ಟಿವಾ: ಎಲೆಕ್ಟ್ರಿಕ್ ಸ್ಕೂಟರ್ಗಳ ರಾಜ ಆಗುತ್ತಾ?
- 59 min ago ಪ್ರೇರಣಾತ್ಮಕ ಕಥೆ: ಮನೆ ಕೆಲಸದಾಕೆಗೆ 'ಸೈಕಲ್' ಖರೀದಿಸಲು ಸಹಾಯ ಮಾಡಿದ ಮಾಲೀಕ.. ವಿಡಿಯೋ ವೈರಲ್
- 2 hrs ago ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
Don't Miss!
- News ಕಾಂಗ್ರೆಸ್ನಿಂದಲೇ 'ನೇಹಾ ಕೊಲೆ' ತನಿಖೆ ದಾರಿ ತಪ್ಪಿಸಲು ಯತ್ನ: ತಂದೆಯನ್ನೇ ಕೊಲ್ಲಲು ಹೋಗಿದ್ದ ಫಯಾಜ್: ನಿರಂಜನ್ ಹಿರೇಮಠ
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Movies ನಿತೇಶ್ ತಿವಾರಿ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಅಲ್ಲ, ಯಶ್ ಹೀರೋ? ಏನಿದು ಟ್ವಿಸ್ಟ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇತಿಹಾಸ ತಿರುಚಿದ ಅಮೆರಿಕನ್ನರು; ವ್ರೈಟ್ ಬ್ರದರ್ಸ್ ಅಲ್ಲ, ಮೊದಲ ವಿಮಾನ ಹಾರಿಸಿದ್ದು ಭಾರತೀಯ!
ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತದ ಶಿಕಾರಿಯಾಗಿದ್ದ ಸ್ವಾತಂತ್ರ್ಯ ಪೂರ್ವ ಭಾರತೀಯನ ಸಾಧನೆಯನ್ನು ಅಳಿಸಿ ಹಾಕಿರುವುದು ಬಹಳ ಖೇದಕರ ಸಂಗತಿಯಾಗಿದೆ.
ಬಹಳ
ಚಿಕ್ಕವನಿಂದಲೇ
ನಾವು
ಪಾಠ
ಪುಸಕ್ತಗಳಲ್ಲಿ
ವ್ರೈಟ್
ಸಹೋದರರು
ಪ್ರಪಂಚದ
ಮೊಟ್ಟ
ಮೊದಲನೆಯ
ವಿಮಾನ
ತಯಾರಕರು
ಹಾಗೂ
ಪ್ರಪಂಚದ
ಮೊಟ್ಟ
ಮೊದಲನೆಯ
ಸಫಲ
ಯಾತ್ರಿಗಳೆಂಬ
ಪಾಠವನ್ನು
ಕಲಿತುಕೊಂಡು
ಬಂದಿದ್ದೇವೆ.
ಆದರೆ
ಇತಿಹಾಸ
ತಿದ್ದುವ
ಸಮಯ
ಹತ್ತಿರ
ಬಂದಿದ್ದು,
ವಿಶ್ವದ
ಮೊತ್ತ
ಮೊದಲನೇ
ವಿಮಾನವನ್ನು
ಹಾರಿಸಿದ್ದು
ಭಾರತೀಯ
ಎಂಬ
ಸತ್ಯ
ಬಯಲಾಗಿದೆ.
1903 ಡಿಸೆಂಬರ್ 17ರಂದು ಒರ್ವಿಲ್ಲೆ ಹಾಗೂ ವಿಲ್ಬರ್ ಮೊದಲ ವಿಮಾನ ಹಾರಾಟವನ್ನು ನಡೆಸಿದ್ದರು. ಆದರೆ ಇದಕ್ಕಿಂತ ಎಂಟು ವರ್ಷಗಿಂತಲೂ ಮೊದಲೇ ಭಾರತೀಯ ವಿಶ್ವದ ಚೊಚ್ಚಲ ವಿಮಾನವನ್ನು ಕಂಡುಹುಡುಕಿದ್ದರು ಎಂಬ ವರದಿಯೀಗ ಎಲ್ಲರನ್ನು ಆಶ್ಚರ್ಯಚಕಿತಗೊಳಿಸುತ್ತಿದೆ.
ಸಂಸ್ಕೃತ ವಿದ್ವಾಂಸ ಹಾಗೂ ಪಂಡಿತ ಶಿವಕುಮಾರ್ ಬಾಪೂಜಿ ತಲ್ಪಾದೆ, ವ್ರೈಟ್ ಸೋದರರಿಗಿಂತಲೂ ಮೊದಲೇ ಹೆಸರಿಡದ ವಿಮಾನವನ್ನು ಅವಿಷ್ಕರಿಸಿದ್ದರು.
ನಿಖರವಾಗಿ ಹೇಳುವುದಾದ್ದಲ್ಲಿ 1895ರಲ್ಲಿ ಶಿವಕುಮಾರ್ ಬಾಪೂಜಿ ತಲ್ಪಾದೆ ಅವರು 'ಮಾರುತ್ ಶಕ್ತಿ' ಎಂಬ ವಿಮಾನವನ್ನು ವಿನ್ಯಾಸಗೊಳಿಸಿದ್ದರು.
ಪ್ರಾಚೀನ ಸಂಸ್ಕೃತ ಹಸ್ತಪ್ರತಿಗಳಲ್ಲಿ ಉಲ್ಲೇಖಖಿಸಲಾಗಿರುವ ವೇದಗಳ ತಂತ್ರಜ್ಞಾನದಲ್ಲಿ 'ಗಾಳಿಯ ಶಕ್ತಿ' ಎಂಬ ಅರ್ಥ ನೀಡುವ ವಿಮಾನವನ್ನು ಅಭಿವೃದ್ಧಿಪಡಿಸಿದ್ದರು.
ಕಾಗದದ ಹಾಳೆಯಲ್ಲಿ 120 ಅಡಿ ದೂರದ ವರೆಗೆ ಹಾರಾಟ ನಡೆಸಿದ ಓರ್ವಿಲ್ಲೆ ವ್ರೈಟ್, ವಿಮಾನದಲ್ಲಿ ಹಾರಿದ ವಿಶ್ವದ ಮೊದಲ ವ್ಯಕ್ತಿಯೆನಿಸಿಕೊಂಡಿದ್ದಾರೆ. ಆದರೆ ಇದಕ್ಕಿಂತಲೂ ಮೊದಲು ಸಂಸ್ಕೃತ ಪಂಡಿತರು ಬಾಂಬೆ ಚೌಪಥಿ ಕಡಲ ಕಿನಾರೆಯಲ್ಲಿ ನೂರಾರು ಜನರ ಮುಂದೆ ಇದೇ ಸಾಧನೆಯನ್ನು ಮಾಡಿರುವುದು ಇನ್ನು ಬೆಳಕಿಗೆ ಬಂದಿಲ್ಲ.
ಇತಿಹಾಸಗಾರ ಎವನ್ ಕೋಶ್ಕ ಸಹ ಇದನ್ನೇ ಬೊಟ್ಟು ಮಾಡಿ ತೋರಿಸುತ್ತಿದ್ದು ತಲ್ಪಾದೆ, ಹೆಸರಿಡದ ವಿಮಾನವನ್ನು 1,500 ಅಡಿ ಎತ್ತರದ ವರೆಗೆ ಹಾರಿಸಿದ್ದರು. ಇವರೇ ವಿಮಾನದ ಜನಕ ಎಂದು ಬಿಂಬಿಸುತ್ತಾರೆ.
ಈ ಐತಿಹಾಸಿಕ ಸುದ್ದಿಯನ್ನು ಪುಣೆಯ ಅಂದಿನ ಪತ್ರಿಕೆ ಕೇಸರಿಯಲ್ಲಿ ಪ್ರಕಟಗೊಂಡಿತ್ತು. ಆದರೆ ದುರದುಷ್ಟವಶಾತ್ 1895ನೇ ಇಸವಿಯ ಯಾವ ದಿನದಂದು ದಾಖಲೆಗೆ ಅರ್ಹವಾಗಿತ್ತು ಎಂಬುದು ಉಲ್ಲೇಖಿಸಲಾಗಿಲ್ಲ.
ಈ ಸ್ಮರಣೀಯ ಕ್ಷಣಕ್ಕೆ ಭಾರತದ ನ್ಯಾಯಾಧೀಶ ಹಾಗೂ ರಾಷ್ಟ್ರೀಯವಾದಿಗಳಾಗಿರುವ ಮಹದೇವ ಗೋವಿನ್ ಡಾ ರನಾಡೆ ಮತ್ತು ಎಚ್ ಎಚ್ ಸಯಾಜಿ ರಾವೂ ಗಾಯಕ್ ವಾಡ್ ಸಾಕ್ಷ್ಯ ವಹಿಸಿದ್ದರು.
ಇಲ್ಲಿ ಗಮನಾರ್ಹ ಸಂಗತಿಯೆಂದರೆ ತಲ್ಪಾದೆ ಮೂಲತ: ಓರ್ವ ವಿಜ್ಞಾನಿಯಾಗಿರಲಿಲ್ಲ. ಬದಲಾಗಿ ಸಾಧಾರಣ ಸಂಸ್ಕೃತ ಪಾಂಡಿತ್ಯವನ್ನು ಕರಗತ ಮಾಡಿಕೊಂಡಿದ್ದರು.
ಇದು ಭಾರತದ ಪ್ರಾಚೀನ ವೇದ ಪಾಠದ ಶ್ರೀಮಂತಿಕೆಗೆ ಜೀವಂತ ಉಹಾರಣೆಯಾಗಿದೆ. ವೇದವೆಂದರೆ ಜ್ಞಾನ, ತಿಳುವಳಿಕೆ ಎಂಬ ಅರ್ಥವನ್ನು ನೀಡುತ್ತದೆ.
ಬಾಂಬೆಯ ಚೀರಾಬಜಾರ್ ಪ್ರದೇಶದಲ್ಲಿ 1864ನೇ ಇಸವಿಯಲ್ಲಿ ಹುಟ್ಟಿದ ಶಿವಕುಮಾರ್ ಬಾಪೂಜಿ ತಲ್ಪಾದೆ, ಚಿಕ್ಕವನಿಂದಲೇ ಮಹಾಋಷಿ ಭಾರಧ್ವಾಜಾ ಅವರ 'ಮೈಮಾನಿಕ ಶಾಸ್ತ್ರ'ದಿಂದ ಬಹಳಷ್ಟು ಪ್ರಭಾವಿತರಾಗಿದ್ದರು.
ಭಾರತೀಯ ಪುರಾಣ ಹಾಗೂ ವೇದಗಳಲ್ಲಿ ವಿಮಾನಗಳ ಬಗ್ಗೆ ಉಲ್ಲೇಖವಿದೆ. ಆದರೆ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.
ವ್ಯೋಮಯಾನ ಇತಿಹಾಸದಲ್ಲಿ 1800ರಿಂದ 1900ರ ವರೆಗಿನ ಕಾಲಘಟ್ಟವನ್ನು ನೂತನ ಅವಿಷ್ಕಾರಗಳ ಅವಧಿಯಾಗಿ ಪರಿಗಣಿಸಲಾಗುತ್ತಿದೆ. ಆದರೆ ಸಾಮ್ರಾಜ್ಯಶಾಹಿ ಬ್ರಿಟಿಷರ ಆಡಳಿತದಲ್ಲಿದ್ದ ಭಾರತೀಯನ ಸಾಧನೆ ಮಾತ್ರ ಮರೆ ಮಾಚಿದಂತಾಗಿದೆ.
ದುರಷ್ಟವಶಾತ್ ಬಾಪೂಜಿ ಅವರ ಮೊದಲ ಹಾರಾಟವು ಪತನದಲ್ಲಿ ಅಂತ್ಯಗೊಂಡಿತ್ತು. ಬಳಿಕ ಪ್ರಾಯೋಜಕರ ಹಾಗೂ ಸಹಾಯನಿಧಿಯ ಕೊರತೆಯಿಂದಾಗಿ ತಮ್ಮ ಯೋಜನೆಯನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದರು.
ಭಾರತೀಯ ರಾಷ್ಟೀಯವಾದಿ, ಸಮಾಜ ಸುಧಾರಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ಬಾಲ ಗಂಗಾಧರ ತಿಲಕ ಅವರು ಕೇಸರಿ ಮರಾಠಿ ಪತಿಕ್ರೆಯ ಸ್ಥಾಪಕರು ಮತ್ತು ಮುಖ್ಯ ಸಂಪಾದಕರಾಗಿದ್ದರು ಎಂಬುದಿಲ್ಲಿ ಗಮನಾರ್ಹವೆನಿಸುತ್ತದೆ.
ಒಟ್ಟಿನಲ್ಲಿ ಪತ್ನಿಯ ಮರಣದ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಬಾಪೂಜಿ 1917ರಲ್ಲಿ ತಮ್ಮ 53ನೇ ಹರೆಯದಲ್ಲಿ ಪ್ರಾಣ ತೊರೆದಿದ್ದರು. ಅಲ್ಲದೆ ಅವರ ಸಾಧನೆ ಇಂದಿಗೂ ಕಟ್ಟುಕಥೆಯಾಗಿ ಮಾತ್ರ ಉಳಿಯುವಂತಾಗಿದೆ.
ಇವನ್ನೂ ಓದಿ:
01. ನಿಮಗೂ ಗೊತ್ತಿರದ ವಿಮಾನಯಾನದ 25 ರೋಚಕ ಸತ್ಯಗಳು!
02. ಅಮೆರಿಕದಲ್ಲಿ ವಿಮಾನಗಳಿಗೂ ಸ್ಮಶಾನ..?
03. ಮೃದುವಾದ ಹಕ್ಕಿ ಢಿಕ್ಕಿಯಿಂದ ವಿಮಾನ ಪತನ; ಏನಿದರ ಮರ್ಮ?