Just In
- 4 min ago Mahindra: ಫ್ಯಾಮಿಲಿ ಕಾರು ಮಹೀಂದ್ರಾ ಎಕ್ಸ್ಯುವಿ700 ಖರೀದಿಸುವವರಿಗೆ ಸಿಹಿಸುದ್ದಿ.. ಇನ್ನೂ ತಿಂಗಳೇ ಸಾಕು!
- 1 hr ago Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- 1 hr ago ಬೈಕಿನಂತೆ ಮೈಲೇಜ್ ಕೊಡೋದ್ರಿಂದ ಈ ಹ್ಯುಂಡೈ ಕಾರಿನ ಮಾಲೀಕರು ಫುಲ್ ಖುಷ್
- 1 hr ago ಮಹೀಂದ್ರಾ ಪ್ರೀಯರಿಗೆ ಭಾರೀ ಸಿಹಿಸುದ್ದಿ: ಗಲ್ಲಿಗಲ್ಲಿಯಲ್ಲಿ ಶುರುವಾಗುತ್ತಾ ಸ್ಕಾರ್ಪಿಯೋ ಹವಾ!
Don't Miss!
- News ವೃದ್ಧರ ಗೌಪ್ಯ ಮತದಾನ ವೇಳೆ ಅಕ್ರಮ: ಸಿಪಿಎಂ ಏಜೆಂಟ್ ಹಸ್ತಕ್ಷೇಪ: Video Viral
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Movies ಹಳೇ ಟ್ವೀಟ್ ಹಾಕಿ ರಕ್ಷಿತ್ ಶೆಟ್ಟಿ ಹೇಳಿದ್ದೇನು? 'ರಿಚರ್ಡ್ ಆಂಟನಿ' ಕಥೆ ಏನಾಯ್ತು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಎಸ್ಆರ್ ಪಕ್ಷ; ರಾಮುಲು 'ಹಮ್ಮರ್' ಹಮ್ಮು ಬಿಮ್ಮು
ಕರ್ನಾಟಕದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇವೆ. ಇದೀಗಷ್ಟೇ ನೂತನ ಪಕ್ಷ ಕಟ್ಟಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯೆಬ್ಬಿಸಿದ್ದರು.
ಇದಾದ ಬೆನ್ನಲ್ಲೇ ಬಳ್ಳಾರಿ ರೆಡ್ಡಿ ಗಣಿ ಧನಿಗಳ ಚುನಾವಣೆ ಪ್ರಚಾರಕ್ಕೆ ಬಿಸಿ ಮುಟ್ಟಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ಜಾರಿ ನಿರ್ದೇಶನಾಲಯಗಳಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಬಳ್ಳಾರಿ ಗಣಿಧನಿಗಳು ಅಷ್ಟು ಬೇಗ ಸೋಲೊಪ್ಪಿಕೊಳ್ಳಲು ಸಿದ್ಧರಿಲ್ಲ.
ಇದರಿಂದಾಗಿ ಚುನಾವಣೆಗೆ ಸಕಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಬಿಸ್ಸಾರ್ ಕಾಂಗ್ರೆಸ್ ಎಂಬ ಪ್ರತ್ಯೇಕ ಪ್ರಾದೇಶಿಕ ಪಕ್ಷ ಕಟ್ಟಿರುವ ಶ್ರೀರಾಮುಲು ನೂತನ ರಾಜಕೀಯ ಸವಾಲುಗಳನ್ನು ಎದುರಿಸಲು ಸಿದ್ಧರಾಗಿದ್ದಾರೆ.
ಮೂಲಗಳ ಪ್ರಕಾರ ಶ್ರೀರಾಮುಲು ಅದ್ಧೂರಿ ಪ್ರಚಾರಕ್ಕೆ ಕಾರೊಂದರ ಎಂಟ್ರಿಯಾಗುತ್ತಿದೆ. ಅದು ಅಂತಿಥ ಕಾರಲ್ಲ. ದೇಶದ ಕೆಲವೇ ಕೆಲವು ಗಣ್ಯ ವ್ಯಕ್ತಿಗಳ ಬಳಿಯಿರುವ ದುಬಾರಿ 'ಹಮ್ಮರ್' ಕಾರು. ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಸ್ಪಿನ್ ಮಾಂತ್ರಿಕ ಹರಭಜನ್ ಸಿಂಗ್ ಹಾಗೂ ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ಅವರಂತಹ ಸೆಲೆಬ್ರಿಟಿಗಳ ಬಳಿ ಮಾತ್ರ ಹಮ್ಮರ್ ಕಾರಿದೆ.
ಇನ್ನು ಹೆಚ್ಚು ಹೇಳಬೆಂಕೆಂದರೆ ಹಮ್ಮರ್ ಕಾರು ಭಾರತದಲ್ಲಿ ಉತ್ಪಾದನೆಯಾಗುತ್ತಿಲ್ಲ. ಇದನ್ನು ಅಲ್ಲಿ ದೂರದ ಅಮೆರಿಕದಿಂದ ಆಮದು ಮಾಡಿಕೊಳ್ಳಬೇಕಾಗಿದೆ. ಹಾಗಾಗಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಈ ಹಮ್ಮರ್ ಕಾರನ್ನು ಪ್ರಚಾರಕ್ಕಾಗಿ ಬಳಸಲು ಶ್ರೀರಾಮುಲುಗೆ ದುಡ್ಡು ಎಲ್ಲಿಂದ ಬಂತು ಎಂಬುದಕ್ಕೆ ಜನಸಾಮಾನ್ಯರು ಉತ್ತರ ನೀಡಬೇಕಾಗಿದೆ.
ಏನೇ ಆದರೂ ಯಡಿಯೂರಪ್ಪ ತಮ್ಮ ಪ್ರಚಾರಕ್ಕೆ ದುಬಾರಿ ಪ್ರಾಡೋ ಕಾರನ್ನು ಬಳಸಬಹುದಾದರೆ ಶ್ರೀರಾಮುಲುಗೆ ಯಾಕೆ ದುಬಾರಿ ಹಮ್ಮರ್ ಬಳಸಬಾರದು? ಈ ಪರಿ ಇದೇ ರೀತಿ ಮುಂದುವರಿದರೆ ಇನ್ನಿತರ ರಾಜಕೀಯ ಪಕ್ಷಗಳ ನಾಯಕರು ಇನ್ಯಾವ ಕಾರು ಬಳಸಲಿದ್ದಾರೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ದೊರಕಲಿದೆ.
ಸದ್ಯ ಹೈದರಾಬಾದ್ನ ಚಂಚಲಗೂಡ ಜೈಲಿನಲ್ಲಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಂದ ಶ್ರೀರಾಮುಲು ಅರಿಗೆ ಸ್ಪಷ್ಟ ಸಂದೇಶ ಬಂದಿರುವುದು ನಿಜ. ಇದರಂತೆ ಪಕ್ಷದ ಸಂಘಟನಾ ಚಟುವಟಿಕೆಗಳಿಗೆ ಇನ್ನಷ್ಟು ಚುರುಕು ಮುಟ್ಟಿದೆ.
ಇದೇ
ಸಂದರ್ಭದಲ್ಲಿ
ಶ್ರೀರಾಮುಲು
ತಮ್ಮ
ಪ್ರಚಾರಕ್ಕಾಗಿ
ಹೆಲಿಕಾಪ್ಟರ್ವೊಂದರನ್ನು
ಗುತ್ತಿಗೆ
ಆಧಾರದಲ್ಲಿ
ಪಡೆದುಕೊಂಡಿರುವುದರ
ಬಗ್ಗೆಯೂ
ಮಾಹಿತಿ
ಬಂದಿದೆ.
ಒಟ್ಟಾರೆಯಾಗಿ
ರಾಜ್ಯ
ರಾಜಕೀಯದಲ್ಲಿ
ಏನೆಲ್ಲ
ಬೆಳವಣಿಗೆ
ನಡೆಯಲಿದೆ
ಎಂಬುದಕ್ಕೆ
ಮುಂದಿನ
ದಿನಗಳಲ್ಲಿ
ಉತ್ತರ
ಸಿಗಲಿದೆ.
ಅಂದ ಹಾಗೆ ಹಮ್ಮರ್ ದರ ಎಷ್ಟು ಗೊತ್ತೇ?
ದೆಹಲಿ ಎಕ್ಸ್ ಶೋ ರೂಂಗಳಲ್ಲಿ ಹಮ್ಮರ್ ದರ 40 ಲಕ್ಷ ರೂಪಾಯಿಗಳಿದ್ದು, ಇದು ಆನ್ ರೋಡ್ ತಲುಪುವಾಗ 50 ಲಕ್ಷಕ್ಕೂ ಹೆಚ್ಚಾಗುವ ಸಾಧ್ಯತೆಯಿದೆ.
ಎಸ್ಯುವಿ ಟಾಪ್ ಎಂಡ್ ವೆರಿಯಂಟ್ ಕಾರು ಆಗಿರುವ ಹಮ್ಮರ್ ಸದ್ಯ ದೇಶಕ್ಕೆ ಆಮದು ಆಗುತ್ತಿರುವ ಅತಿ ದುಬಾರಿ ಕಾರುಗಳಲ್ಲಿ ಒಂದಾಗಿದೆ.
ಐಷಾರಾಮಿ ಹಮ್ಮರ್ ಹಲವು ವೆರಿಯಂಟ್ಗಳಲ್ಲಿ ಆಮದಾಗುತ್ತಿದ್ದು, ಈ ಪೈಕಿ ಎಚ್3 ಅತಿ ಜನಪ್ರಿಯವಾಗಿದೆ.
ಹಮ್ಮರ್ ಐಷಾರಾಮಿ ಇಂಟಿರಿಯರ್ ಲುಕ್
ಕರ್ನಾಟಕದ ರಾಜಕೀಯದಲ್ಲಿ ನೂತನ ಬಿರುಗಾಳಿಯೆಬ್ಬಿಸಲಿದೆಯೇ ಬಿಎಸ್ಆರ್ ಕಾಂಗ್ರೆಸ್ ಪಕ್ಷ?
ಶ್ರೀರಾಮುಲು ಬಿಎಸ್ಆರ್ ಪಕ್ಷಕ್ಕೆ 'ಹಮ್ಮರ್' ಬಲ
ಇವನ್ನೂ ಓದಿ: ಪ್ರಾಡೋ ಕಾರಲ್ಲಿ ಬಿಎಸ್ವೈ ರೋಡ್ ಶೋ