Just In
- 3 min ago ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಮಸ್ಯೆ ತಂದಿಟ್ಟ ಪತಿ: ಐಷಾರಾಮಿ ಕಾರುಗಳು ಸೀಜ್!
- 43 min ago ಕ್ರ್ಯಾಶ್ ಟೆಸ್ಟ್ನಲ್ಲಿ ಕಳಪೆ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದ ಮಧ್ಯಮ ವರ್ಗದ ಮೆಚ್ಚಿನ ಸ್ವದೇಶಿ ಕಾರು
- 1 hr ago ಕ್ರ್ಯಾಶ್ಟೆಸ್ಟ್ನಲ್ಲಿ ಈ ಹೋಂಡಾ ಕಾರಿಗೆ ಕೇವಲ 2 ಸ್ಟಾರ್: ಆದರೂ ಭಾರತೀಯರಿಗೆ ಈ ಕಾರು ಅಚ್ಚುಮೆಚ್ಚು!
- 1 hr ago ಹ್ಯುಂಡೈ ಕ್ರೆಟಾಗೆ ಪೈಪೋಟಿ ನೀಡಲು ಬರಲಿವೆ ಟಾಟಾ, ಸಿಟ್ರನ್ ಕಾರುಗಳು.. ಇವೇ ಜನಸಾಮಾನ್ಯರ ಲ್ಯಾಂಬೋರ್ಗಿನಿಗಳು!
Don't Miss!
- News Lok Sabha election: ಬೆಂಗಳೂರಿನಲ್ಲಿ ಒಂದು ಕೋಟಿ ದಾಟಿದ ಮತದಾರರ ಸಂಖ್ಯೆ
- Lifestyle ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸಬಹುದು.! ಹೇಗೆ ಗೊತ್ತಾ?
- Technology SmartGlass: ಮೆಟಾ ರೇ-ಬ್ಯಾನ್ ಸ್ಮಾರ್ಟ್ ಗ್ಲಾಸ್ ಬಳಕೆದಾರರು ಇನ್ಮುಂದೆ ವಿಡಿಯೋ ಕಾಲ್ ಮಾಡಬಹುದು!
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Movies ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
- Finance ಬೆಂಗಳೂರಿನಲ್ಲಿ ಈ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧ, ದಿನಾಂಕ, ಸಮಯ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೇಶದ ಪ್ರಪ್ರಥಮ ಬಯೋಡೀಸೆಲ್ ಚಾಲಿತ ಬಸ್ಸುಗಳಿಗೆ ಬೆಂಗಳೂರಿನಲ್ಲಿ ಚಾಲನೆ
ದೇಶದ ಮೊತ್ತ ಮೊದಲ ಬಯೋಡೀಸೆಲ್ ಅಥವಾ ಜೈವಿಕ ಇಂಧನ ಚಾಲಿತ ಬಸ್ಸುಗಳಿಗೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದೆ.
ಕರ್ನಾಟಕ
ರಾಜ್ಯ
ರಸ್ತೆ
ಸಾರಿಗೆ
ನಿಗಮ
(ಕೆಎಸ್ಆರ್ಟಿಸಿ)
ದೇಶದ
ಮೊತ್ತ
ಮೊದಲ
ಬಯೋಡೀಸೆಲ್
ಅಥವಾ
ಜೈವಿಕ
ಇಂಧನ
ಚಾಲಿತ
ಬಸ್ಸುಗಳಿಗೆ
ನಮ್ಮ
ಬೆಂಗಳೂರಿನಲ್ಲಿ
ಕಳೆದ
ಶನಿವಾರದಂದು
ಚಾಲನೆ
ನೀಡಲಾಗಿದೆ.
ಜೈವಿಕ ಇಂಧನ ಚಾಲಿತ 25ರಷ್ಟು ಐಷಾರಾಮಿ ಮಲ್ಟಿ ಆಕ್ಸೆಲ್ ಸ್ಕಾನಿಯಾ ಬಸ್ಸುಗಳನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಿದರು.
ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಂಡಿರುವ ಬಯೋಡೀಸೆಲ್ ಬಸ್ಸುಗಳು ಡೀಸೆಲ್ ಇಂಧನ ಚಾಲಿತ ಬಸ್ಸುಗಿಂತಲೂ ಅಗ್ಗವೆನಿಸಲಿದೆ.
ಕೆಆಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂಧರ್ ಕುಮಾರ್ ಕಟರಿಯಾ ಹೇಳುವಂತೆಯೇ ಬಯೋ ಡೀಸೆಲ್ ಬಸ್ಸುಗಳು ಡೀಸೆಲ್ ಬಸ್ಸಿಗಿಂತಲೂ ಶೇಕಡಾ 60ರಿಂದ 70ರಷ್ಟು ಕಡಿಮೆ ಮಾಲಿನ್ಯವನ್ನು ಹೊರದಬ್ಬಲಿದೆ. ಇನ್ನು ಇಂಧನ ಕ್ಷಮತೆಯ ಮೇಲೂ ಯಾವುದೇ ಧಕ್ಕೆಯುಂಟಾಗುವುದಿಲ್ಲ.
ನೂತನ ಐರಾವತ ಬಸ್ಸುಗಳು ಬೆಂಗಳೂರು-ಕುಂದಾಪುರ, ಬೆಂಗಳೂರು-ಬೀದರ್, ಬೆಂಗಳೂರು-ತಿರುಪತಿ ಮತ್ತು ಬೆಂಗಳೂರು-ಚೆನ್ನೈ ನಡುವಣ ಓಡಾಡಲಿದೆ.
ಸ್ಕಾನಿಯಾ ಹೈ ಎಂಡ್ ಬಸ್ಸುಗಳಲ್ಲಿ ಬಯೋ ಡೀಸೆಲ್ ಕಿಟ್ ಲಗತ್ತಿಸಲಾಗುತ್ತಿದೆ. ಇದಕ್ಕಾಗಿ ಎಂಜಿನ್ ಮಾನದಂಡಗಳಲ್ಲಿ ಹೆಚ್ಚಿನ ಬದಲಾವಣೆ ತರುವ ಅಗತ್ಯವಿಲ್ಲ ಎಂಬುದನ್ನು ಕೆಎಸ್ ಆರ್ ಟಿಸಿ ವಿವರಿಸಿದೆ.
ಈಗಿರುವ ಸಾಮಾನ್ಯ ಡೀಸೆಲ್ ಬಸ್ಸುಗಳನ್ನು ಕೆಎಸ್ಆರ್ಟಿಸಿ 80ರಷ್ಟು ಡೀಸೆಲ್ ಹಾಗೂ 20ರಷ್ಟನ್ನು ಜೈವಿಕ ಇಂಧನ ಚಾಲಿತ ಬಸ್ಸುಗಳನ್ನಾಗಿ ಪರಿವರ್ತಿಸಲಿದೆ.