Just In
- 10 hrs ago Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- 10 hrs ago ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- 11 hrs ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 11 hrs ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
Don't Miss!
- News Karnataka LS Election 2024 LIVE: ಇಂದು ದೇಶದಲ್ಲಿ ಎರಡನೇ ಹಂತದ, ರಾಜ್ಯದಲ್ಲಿ ಮೊದಲ ಹಂತದ ಮತದಾನ
- Movies Shobha Shetty ; ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ ನಟಿ ಶೋಭಾ ಶೆಟ್ಟಿ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
2017ರ ಮಾರುತಿ ಸುಜುಕಿ ದಕ್ಷಿಣ ಡೇರ್ ರ್ಯಾಲಿ- ಪ್ರಶಸ್ತಿಗಾಗಿ ಅಂತಿಮ ಹಂತದಲ್ಲಿ ರೋಚಕ ಹಣಾಹಣಿ
ಮೊಬಿಲ್ ಒನ್ ಸಂಸ್ಥೆಯ ನೇತೃತ್ವದಲ್ಲಿ ನಡೆಯುತ್ತಿರುವ 2017ರ ಮಾರುತಿ ಸುಜುಕಿ ದಕ್ಷಿಣ ಡೇರ್ ಮೋಟಾರ್ ರ್ಯಾಲಿಯು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ನಾಲ್ಕನೇ ದಿನ ನಡೆದ ಮೋಟಾರ್ ಸ್ಪರ್ಧೆಯ ಮಹತ್ವದ ಮಾಹಿತಿ ಇಲ್ಲಿದೆ.
ಮೊಬಿಲ್ ಒನ್ ಸಂಸ್ಥೆಯ ನೇತೃತ್ವದಲ್ಲಿ ನಡೆಯುತ್ತಿರುವ 2017ರ ಮಾರುತಿ ಸುಜುಕಿ ದಕ್ಷಿಣ ಡೇರ್ ಮೋಟಾರ್ ರ್ಯಾಲಿಯು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ನಾಲ್ಕನೇ ದಿನ ನಡೆದ ಮೋಟಾರ್ ಸ್ಪರ್ಧೆಯ ಮಹತ್ವದ ಮಾಹಿತಿ ಇಲ್ಲಿದೆ.
ಬೆಂಗಳೂರಿನಿಂದ ಆರಂಭವಾಗಿರುವ 15ನೇ ಆವೃತ್ತಿಯ ದಕ್ಷಿಣ ಡೇರ್ ಮೋಟಾರ್ ರ್ಯಾಲಿಯು ಐದನೇ ದಿನಕ್ಕೆ ಕಾಲಿಟ್ಟಿದ್ದು, ನಾಲ್ಕನೇ ದಿನ ಅಂತ್ಯಕ್ಕೆ ಸೂಪರ್ ಸ್ಪೆಷಲ್ ಸ್ಪೇಜ್ ವಿಭಾಗದಲ್ಲಿ ನಡೆದ ಸ್ಪರ್ಧೆಗಳು ಭಾರೀ
ರೊಚಕತೆಯಿಂದ ಕೂಡಿದ್ದವು.
ಈ ಮೂಲಕ ಕರ್ನಾಟಕ ಗಡಿದಾಟಿರುವ ಮೋಟಾರ್ ಸ್ಪೋರ್ಟ್ ಸ್ಪರ್ಧಿಗಳು ಸದ್ಯ ಮಹಾರಾಷ್ಟ್ರದ ಕೊಲ್ಲಾಪುರ ತಲುಪಿದ್ದು, ಕುದುರೆಮಾಣಿಯಲ್ಲಿ ನಡೆದ ಕೆಸರು ಸ್ಪರ್ಧೆಗಳು ಮೋಟಾರ್ ರೇಸ್ ಸ್ಪರ್ಧಿಗಳಿಗೆ ಕುತೂಹಲ ಹುಟ್ಟಿಸಿದ್ದು ಸುಳ್ಳಲ್ಲ.
ಅಲ್ಟಿಮೆಟ್ ಕಾರು ರೇಸ್ ವಿಭಾಗ ಮತ್ತು ಅಲ್ಟಿಮೆಟ್ ಬೈಕ್ ರೇಸ್ ವಿಭಾಗಗಳಲ್ಲಿ ಸ್ಪರ್ಧೆಗಳ ನಡುವೆ ತೀವ್ರ ಹಣಾಹಣಿ ನಡೆಯುತ್ತಿದ್ದು, ನಾಲ್ಕನೇ ದಿನದ ಅಂತ್ಯಕ್ಕೆ ಒಟ್ಟು 329 ಕಿಮಿ ದೂರವನ್ನು ಕ್ರಮಿಸಿರುವ ರ್ಯಾಲಿಯು ಇಂದು ನಿಗದಿತ ಗುರಿ ತಲುಪಲಿದೆ.
ಅಲ್ಟಿಮೇಟ್ ಕಾರುಗಳು ವಿಭಾಗದಲ್ಲಿ ಮಾರುತಿ ಸುಜುಕಿ ತಂಡದ ಸುರೇಶ್ ರಾಣಾ, ಅಶ್ವಿನ್ ನಾಯ್ಕ್ ಪ್ರಥಮ ಸ್ಥಾನದಲ್ಲೇ ಮುನ್ನಡೆ ಕಾಯ್ದುಕೊಂಡಿದ್ದು, ಎನ್ಎಸ್ ನಿಜಾಮಿ, ಸಮರ್ಥ್ ಯಾದವ್ ಎರಡನೇ ಸ್ಥಾನಕ್ಕೆ ಮತ್ತು ಸಂದೀಪ್ ಶರ್ಮಾ, ಕರಣ್ ಆಚಾರ್ಯ ಮೂರನೇ ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಅದೇ ರೀತಿಯಾಗಿ ಅಲ್ಟಿಮೆಟ್ ಬೈಕ್ ವಿಭಾಗದಲ್ಲಿ ಆರ್.ನಟರಾಜ್ ಪ್ರಥಮ ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಎರಡನೇ ಸ್ಥಾನದಲ್ಲಿ ಅಬ್ದುಲ್ ವಾಹೀದ್ ಮತ್ತು ಮೂರನೇ ಸ್ಥಾನದಲ್ಲಿ ಸಂಜಯ್ ಕುಮಾರ್ ಮುನ್ನಡೆ ಸಾಧಿಸಿದ್ದಾರೆ.
ಇನ್ನು ಹತ್ತು ಹಲವು ಕಸರತ್ತುಗಳ ಮೂಲಕ ಸ್ಪರ್ಧೆಯ ಆರಂಭದ ಸ್ಥಳದಿಂದ 2 ಸಾವಿರ ಕಿ.ಮಿ ಸಾಗಿರುವ ಮೋಟಾರ್ ಸ್ಪರ್ಧಿಗಳು ಇಂದು ಅಂತಿಮ ಹಂತವನ್ನು ತಲುಪಲಿದ್ದು, ದಿನದ ಅಂತ್ಯಕ್ಕೆ ಮಹತ್ವದ ಫಲೀತಾಂಶ ಹೊರಬಿಳಲಿದೆ.