Just In
- 1 hr ago Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- 14 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 15 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 16 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
Don't Miss!
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- News ಲೋಕಸಭಾ ಚುನಾವಣೆ: ಮತದಾನದ ದಿನ Rapidoದಿಂದ ಉಚಿತ ಸೇವೆ, ಯಾರಿಗೆ ಲಭ್ಯ..?
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಾಜ್ಮಹಲ್ ಸುತ್ತಮುತ್ತ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಸಂಚಾರ ನಿಷೇಧ
ತಾಜ್ ಟ್ರಪೀಜಿಯಂ ವಲಯ(TTZ) ಪ್ರಾಧಿಕಾರವು ವಿಶ್ವವಿಖ್ಯಾತ ತಾಜ್ಮಹಲ್ ಅಮೃತಶಿಲೆ ಕಟ್ಟಡದ ಸುತ್ತಮುತ್ತ ಸರಿ ಸುಮಾರು 500 ಮೀಟರ್ಗಳಷ್ಟು ಅಂತರದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಸಂಚಾರವನ್ನು ನಿಷೇಧಿಸಿದೆ.
ತಾಜ್ ಟ್ರಪೀಜಿಯಂ ವಲಯ(TTZ) ಪ್ರಾಧಿಕಾರವು ವಿಶ್ವವಿಖ್ಯಾತ ತಾಜ್ಮಹಲ್ ಅಮೃತಶಿಲೆ ಕಟ್ಟಡದ ಸುತ್ತಮುತ್ತ ಸರಿ ಸುಮಾರು 500 ಮೀಟರ್ಗಳಷ್ಟು ಅಂತರದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಸಂಚಾರವನ್ನು ನಿಷೇಧಿಸಿದೆ.
ಕೇಂದ್ರ ಪರಿಸರ ಸಚಿವ, ಹರ್ಷವರ್ಧನ್ ನೀಡಿರುವ ಲಿಖಿತ ಉತ್ತರದಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದು, ಅಧ್ಯಯನದ ಪ್ರಕಾರ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಉಗುಳುವ ಕಾರ್ಬನ್ನಿಂದಾಗಿ ಸ್ಮಾರಕ ನಿರ್ಮಿಸಲು ಬಳಸಲಾಗಿರುವ ಅಪ್ಪಟ ಬಿಳಿ ಬಣ್ಣದ ಅಮೃತಶಿಲೆಗಳು ಹಳದಿ ಬಣ್ಣದ ಕಡೆ ತಿರುಗುತ್ತಿದೆ ಎಂದಿದೆ.
ಸ್ಮಾರಕದ ಸಂರಕ್ಷಣೆ ಮತ್ತು ಸುರಕ್ಷತೆಯ ಬಗ್ಗೆ ಹೆಚ್ಚು ಗಮನ ಹರಿಸಿರುವ ಇಲಾಖೆ ಈ ಕಟ್ಟುನಿಟ್ಟಿನ ನಿರ್ಧಾರವನ್ನು ತೆಗೆದುಕೊಂಡಿದೆ ಮತ್ತು ಇದನ್ನು ಪಾಲಿಸಲು ಈಗಾಗಲೇ ಸಕಲ ಸಿದ್ಧತೆ ನೆಡೆಸುತ್ತಿದೆ.
ಅಲ್ಲದೆ, ತಾಜ್ ಟ್ರಪೀಜಿಯಂ ವಲಯ(TTZ) ಪ್ರಾಧಿಕಾರ ಆಗುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಹಗುರ ವಾಹನಗಳನ್ನು ಸಿಎನ್ಜಿ ಇಂಧನಕ್ಕೆ ಬದಲಾಯಿಸಿಕೊಳ್ಳುವಂತೆ ಆದೇಶ ನೀಡಿದೆ.
"ತಾಜ್ ಟ್ರಪೀಜಿಯಂ ವಲಯ ಪ್ರಾಧಿಕಾರವು ತಾಜ್ಮಹಲ್ ಕಟ್ಟಡದ ಸುತ್ತಮುತ್ತ 500 ಮೀಟರ್ಗಳಷ್ಟು ಅಂತರದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಸಂಚಾರವನ್ನು ನಿಷೇಧಿಸಿದೆ ಹಾಗು ಹಗುರ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಸಿಎನ್ಜಿ ಇಂಧನಕ್ಕೆ ಬದಲಾಯಿಸಿಕೊಳ್ಳುವಂತೆ ಆದೇಶಿಸಿದೆ" ಎಂದು ಮಂತ್ರಿಗಳು ತಿಳಿಸಿದರು.
ಜಾರಿ ಮಾಡಲಾಗಿರುವ ಪ್ರತಿ ಹಂತದ ನಿಯಮಗಳನ್ನು ಕಾರ್ಯಗತ ಮಾಡುವ ಕಡೆಗೆ ಸರ್ಕಾರ ಈಗಾಗಲೇ ಹೆಜ್ಜೆ ಇಟ್ಟಿದ್ದು, ಈ ನಿರ್ಧಾರವನ್ನು ದಿಕ್ಕರಿಸಿರುವ ಕೆಲವು ವಾಹನ ಮಾಲೀಕರಿಗೆ ಈಗಾಗಲೇ ನೋಟೀಸ್ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ತಾಜ್ಮಹಲ್ ಕಟ್ಟಡ ಹಳದಿ ಬಣ್ಣಕ್ಕೆ ತಿರುಗುತ್ತಿರುವ ವಿಚಾರ ಹಲವಾರು ವರ್ಷಗಳಿಂದ ದೊಡ್ಡ ಸಮಸ್ಯೆಯಾಗಿದ್ದು, ವಾಹನಗಳು ನಿಷೇಧಿಸುವ ನಡೆ ಶುಭ ಸೂಚಕವಾಗಿದೆ. ಆದರೆ, ವಾಯು ಮಾಲಿನ್ಯ ವಿಚಾರಕ್ಕೆ ಬಂದಾಗ 500 ಮೀಟರ್ ಅಷ್ಟೇನೂ ಪರಿಣಾಮಕಾರಿಯಾಗಿರುವುದಿಲ್ಲ ಎನ್ನಬಹುದು.