Just In
- 44 min ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 1 hr ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 3 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 4 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
Don't Miss!
- News ಕ್ವಿಟ್ ಎನ್ಡಿಎ ಮತ್ತು ಸೇವ್ ಇಂಡಿಯಾ: ಪ್ರೊ. ಮಹೇಶ್ಚಂದ್ರಗುರು
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Movies 3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡ್ರೈವಿಂಗ್ ಲೈಸೆನ್ಸ್ಗಾಗಿ ಅರ್ಜಿ ಹಾಕಿದ್ದೀರಾ? ಹಾಗಿದ್ರೆ ಸದ್ಯಕ್ಕೆ ಸಿಗೋದಿಲ್ಲ ಬಿಡಿ..!!
ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲವಾದ್ರೆ ಎನೆಲ್ಲಾ ಆಗುತ್ತೆ ಅನ್ನೋದಕ್ಕೆ ಇದೇ ಸಾಕ್ಷಿ. ಯಾಕೇಂದ್ರೆ ಆರ್ಟಿಓ ಅಧಿಕಾರಿಗಳು ಮಾಡಿರುವ ಎಡವಟ್ಟು ಇದೀಗ ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿದೆ.
ಡ್ರೈವಿಂಗ್ ಲೈಸೆನ್ಸ್ಗಾಗಿ ನೀವು ಅರ್ಜಿ ಸಲ್ಲಿಸಿದ್ರೆ ಸದ್ಯಕ್ಕೆ ಸುಮ್ಮನಾಗುವುದೇ ಒಳಿತು. ಒಂದು ವೇಳೆ ಮಧ್ಯವರ್ತಿಗಳನ್ನು ನಂಬಿ ದುಡ್ಡು ಕೊಟ್ಟಿದ್ದರು ಲೈನೆಸ್ಸ್ ಪಡೆಯುವುದು ಅಷ್ಟು ಸುಲಭದ ಮಾತಲ್ಲಾ.
ಸಮಸ್ಯೆಗೆ ಕಾರಣವಾದ್ರೂ ಏನು?
ಅಧಿಕಾರಿಗಳು ಮತ್ತು ಗುತ್ತೆಗೆದಾರರ ನಡುವಿನ ಕಿತ್ತಾಟದಿಂದಾಗಿ ಆರ್ಟಿಓ ಕಚೇರಿಗೆ ಸ್ಮಾರ್ಟ್ ಕಾರ್ಡ್ಗಳೇ ಬಂದಿಲ್ಲ. ಹೀಗಾಗಿ ಅರ್ಜಿ ಹಾಕಿರುವ ಸಾವಿರಾರು ವಾಹನ ಚಾಲಕರು ಹೊಸ ಲೈಸೆನ್ಸ್ ಪಡೆಯಲು ಪರದಾಡುವಂತಾಗಿದೆ.
ಕೇವಲ ಡಿಎಲ್ ಅಷ್ಟೇ ಅಲ್ಲದೇ ಹೊಸ ವಾಹನಗಳ ರಿಜಿಸ್ಟ್ರೇಷನ್ ಸರ್ಟಿಫಿಕೆಟ್ ಪಡೆಯುವುದು ಕೂಡಾ ಕಷ್ಟವಾಗುತ್ತಿದೆ. ಇದಕ್ಕೆಲ್ಲಾ ಮೂಲ ಕಾರಣ ಸ್ಮಾರ್ಟ್ ಕಾರ್ಡ್ಗಳ ಪೂರೈಕೆ ಇಲ್ಲದಿರುವುದು.
ಕಳೆದ 2 ತಿಂಗಳಿನಿಂದಲೇ ಈ ಸಮಸ್ಯೆ ಶುರುವಾಗಿದ್ದು, ಅಧಿಕಾರಿಗಳು ಮತ್ತು ಸ್ಮಾರ್ಟ್ ಕಾರ್ಡ್ ಪೂರೈಕೆ ವಿಚಾರವಾಗಿ ಕಿತ್ತಾಟ ನಡೆಯುತ್ತಲೇ ಇದೆ.
ಸದ್ಯ ಸ್ಟಾಕ್ ಇದ್ದ ಎಲ್ಲ ಸ್ಮಾರ್ಟ್ ಕಾರ್ಡ್ಗಳು ಖಾಲಿಯಾಗಿದ್ದು, ಹೊಸದಾಗಿ ಅರ್ಜಿ ಹಾಕಿದ ವಾಹನ ಸವಾರರು ಇನ್ನು ಕೆಲ ದಿನಗಳವರೆಗೆ ಕಾಯಲೇಬೇಕಾದ ಅನಿರ್ವಾಯತೆ ಉಂಟಾಗಿದೆ.
ಬೆಂಗಳೂರು ಸೇರಿದಂತೆ ಮೈಸೂರು, ಹುಬ್ಬಳ್ಳಿ ಮತ್ತು ಕಲಬುರಗಿ ವಿಭಾಗಗಳ ಆರ್ಟಿಓ ಕಚೇರಿಗಳಲ್ಲೂ ಇದೇ ಸಮಸ್ಯೆ ಸೃಷ್ಠಿಯಾಗಿದ್ದು, ಹೊಸದಾಗಿ ಡಿಎಲ್ ಪಡೆಯುವರರ ಕಥೆ ಹೇಳತಿರದು.
ಬೆಂಗಳೂರು ನಗರ ಪ್ರದೇಶ ಒಂದರಲ್ಲೇ ಪ್ರತಿ ದಿನ ಸಾವಿರದಿಂದ ಒಂದೂವರೆ ಸಾವಿರ ಜನ ಡಿಎಲ್ಗಾಗಿ ಅರ್ಜಿ ಸಲ್ಲಿಸುತ್ತಾರೆ. ಇದೀಗ ಸ್ಮಾರ್ಟ್ ಕಾರ್ಡ್ ಇಲ್ಲವಾದ್ದರಿಂದ ದಿನಂಪ್ರತಿ ಸಾವಿರಾರು ಜನ ಡಿಲ್ಎಲ್ಗಾಗಿ ಅಲೆದಾಡುವಂತಾಗಿದೆ.
ಇದಷ್ಟೇ ಅಲ್ಲದೇ ಡಿಎಲ್ ಪಡೆಯಲು ಈಗಾಗಲೇ ಹಲವರು ಡ್ರೈವಿಂಗ್ ಟೆಸ್ಟ್ ಪಾಸ್ ಮಾಡಿದ್ದರು ಲೈನೆಸ್ಸ್ ಪಡೆಯಲು ಇನ್ನು ಕೆಲ ತಿಂಗಳು ಕಾಯಲೇಬೇಕಿದೆ.
ಸದ್ಯಕ್ಕಿಲ್ಲ ಪರಿಹಾರ
ಹೌದು...ಆರ್ಟಿಓ ಅಧಿಕಾರಿಗಳು ಮತ್ತು ಸ್ಮಾರ್ಟ್ ಕಾರ್ಡ್ ಪೂರೈಕೆ ಮಾಡುವ ಗುತ್ತಿಗೆದಾರರ ನಡುವಿನ ಆಂತರಿತ ಕಲಹ ಇನ್ನು ಮುಗಿದಿಲ್ಲ. ಹೀಗಾಗಿ ಹೊಸ ಕಾರ್ಡ್ ಪೂರೈಕೆಯಾಗುವ ತನಕ ಈ ಸಮಸ್ಯೆ ತಪ್ಪಿದಲ್ಲ.
ಇನ್ನು ಸ್ಮಾರ್ಟ್ ಕಾರ್ಡ್ ಸಮಸ್ಯೆ ಕುರಿತಂತೆ ಹಿರಿಯ ಆರ್ಟಿಓ ಅಧಿಕಾರಿಗಳನ್ನು ಕೇಳಿದ್ರೆ ಹೇಳೋದೆ ಬೇರೆ, ನಾವು ಈಗಾಗಲೇ ಸಮಸ್ಯೆ ಕುರಿತ ಚರ್ಚೆ ಮಾಡಿದ್ದು, ಇನ್ನು ಕೆಲ ದಿನಗಳಲ್ಲಿ ಸಮಸ್ಯೆ ನಿವಾರಣೆಯಾಗಲಿದೆ ಎಂದಿದ್ದಾರೆ. ಆದ್ರೆ ಅದು ಯಾವಾಗ ಆಗುತ್ತೋ ದೇವರೇ ಬಲ್ಲ.
ಆರ್ಟಿಓ ಕಚೇರಿಗಳ ಮುಂದೆ ತಪ್ಪದ ಕ್ಯೂ
ಇನ್ನು ಆರ್ಟಿಓ ಕಚೇರಿಗಳಲ್ಲಿನ ಆಂಕರಿತ ಸಮಸ್ಯೆ ಜನಸಾಮನ್ಯರಿಗೆ ಗೊತ್ತಾಗುತ್ತಿಲ್ಲಾ. ಈ ನಡುವೆ ಆರ್ಟಿಓ ಕಚೇರಿಗಳ ಮುಂದೆ ಡಿಎಲ್ಗಾಗಿ ಅರ್ಜಿ ಹಿಡಿದು ನಿಂತಿರುವ ಸಾವಿರಾರು ವಾಹನ ಸವಾರರು, ಮಧ್ಯವರ್ತಿಗಳ ಹಾವಳಿಗೆ ಬೇಸತ್ತು ಹೊಗಿದ್ದಾರೆ.
ಈಗಲಾದ್ರೂ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕಿರುವ ಹಿರಿಯ ಅಧಿಕಾರಿಗಳು ಆದಷ್ಟೂ ಬೇಗ ಸಮಸ್ಯೆ ಬಗೆಹರಿಸಿ ಡಿಎಲ್ ಸ್ಮಾರ್ಟ್ ಕಾರ್ಡ್ಗಳನ್ನು ಒದಗಿಸಲು ಕ್ರಮಕೈಗೊಳ್ಳಬೇಕಿದೆ. ಜೊತೆಗೆ ಡಿಎಲ್ ಪ್ರಕ್ರಿಯೆಯನ್ನು ಸರಳಗೊಳಿಸಬೇಕಿದೆ.
ಇನ್ನು ಡ್ರೈವಿಂಗ್ ಇಲ್ಲದೇ ವಾಹನ ಸವಾರಿ ಮಾಡುವಂತಿಲ್ಲ. ಒಂದು ವೇಳೆ ಡಿಎಲ್ ಇಲ್ಲದೇ ರಸ್ತೆಗಿಳಿದ್ರೆ ನಿಮ್ಮ ಜೇಬಿಗೆ ಕತ್ತರಿ ಬಿಳೋದು ಗ್ಯಾರಂಟಿ. ಹೀಗಿರುವಾಗ ಡಿಎಲ್ ಇಲ್ಲದ ವಾಹನ ಸವಾರರ ಪರಿಸ್ಥಿತಿ ಉಹಿಸಿಕೊಳ್ಳಲು ಸಾಧ್ಯವೇ ನೀವೇ ಹೇಳಿ.
ಲಂಚ ಕೋಡಬೇಡಿ
ವಾಹನಗಳ ನೋಂದಣಿ ಸಂದರ್ಭದಲ್ಲಿ ಸಾರಿಗೆ ಇಲಾಖೆಯಲ್ಲಿ ನಡೆಯುವ ವ್ಯಾಪಕ ಭ್ರಷ್ಟಾಚಾರವನ್ನು ತಡೆಯಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಹೀಗಾಗಿ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಇನ್ನು ಸುಲಭದ ಕೆಲಸ ಎಂದರೇ ತಪ್ಪಾಗಲಾರದು.
ವಾಹನ ನೋಂದಣಿ ಹೇಗೆ?
ಕೇಂದ್ರ ಸರ್ಕಾರ ವಾಹನ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಿದ್ದು, ಇದಕ್ಕಾಗಿ "ವಾಹನ್ 4.0" ಎಂಬ ಆ್ಯಪ್ ಬಿಡುಗಡೆ ಮಾಡಲಾಗಿದೆ. ಈ ಮೂಲಕ ನೀವು ಅರ್ಜಿ ಸಲ್ಲಿಸಬಹುದಾಗಿದೆ.
ಏನಿದು "ವಾಹನ್ 4.0"..?
ಇದೊಂದು ಮೊಬೈಲ್ ಅಪ್ಲಿಕೇಷನ್ ಆಗಿದ್ದು, ನೀವು ಈ ಮೂಲಕವೇ ವಾಹನ ನೋಂದಣಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಇದರಿಂದಾಗಿ ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಬಿಳಲಿದ್ದು, ಅಧಿಕಾರಿಗಳ ಭ್ರಷ್ಟಾಚಾರಕ್ಕೂ ಕಡಿವಾಣ ಬಿಳಲಿದೆ.
ಲೈಸೆನ್ಸ್ ಪಡಿಯೋಕೆ "ಸಾರಥಿ 4.0"
ಹೊಸದಾಗಿ ಅಭಿವೃದ್ಧಿಗೊಳ್ಳುತ್ತಿರುವ "ಸಾರಥಿ 4.0" ಆ್ಯಪ್ ಮೂಲಕ ನೀವು ಲೈಸೆನ್ಸ್ ಪಡೆಯಬಹುದಾಗಿದೆ. ಇದರಿಂದಗಾಗಿ ಅನಾವಶ್ಯಕವಾಗಿ ತಿರುಗುವುದು ತಪ್ಪುವುದಲ್ಲದೇ ಮಧ್ಯವರ್ತಿಗಳು ಕೇಳಿದಷ್ಟು ಹಣ ಕೊಡುವುದು ತಪ್ಪಲಿದೆ.
ಕರ್ನಾಟಕದಲ್ಲಿ ಈಗಾಗಲೇ ಹಲವು ಕಡೆ ಸಾರಥಿ 4.0 ಆ್ಯಪ್ನ್ನು ಆರ್ಟಿಓ ಕಚೇರಿಗಳಲ್ಲೇ ಜಾರಿಗೆ ತಂದಿದ್ದು, ಖುದ್ದು ನೀವೇ ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ. ಇದರಿಂದ ಅರ್ಜಿ ಸಲ್ಲಿಸುವ ವೇಳೆ ಯಾವುದೇ ಸಮಸ್ಯೆ ಇರುವುದಿಲ್ಲ.
ಅನೇಕ ಜನ ವಾಹನಗಳನ್ನು ಅದೇಗೋ ಖರೀದಿ ಮಾಡ್ತಾರೆ. ಆದ್ರೆ ವಾಹನ ನೋಂದಣಿ ಮತ್ತು ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅವರು ಪಡೋ ಕಷ್ಟ ಅಷ್ಟಿಲ್ಲ. ಹೀಗಾಗಿ ಸಾರಾಥಿ 4.0 ಮತ್ತು ವಾಹನ್ 4.0 ಆ್ಯಪ್ ಸಹಾಯವಾಗಲಿವೆ.
ಆದ್ರೆ ಡಿಎಲ್ ಪಡೆಯಲು ಇಷ್ಟೇಲ್ಲಾ ಅನುಕೂಲತೆಗಳಿದ್ದರೂ ಕರ್ನಾಟಕ ಆರ್ಟಿಓ ಅಧಿಕಾರಿಗಳು ಮತ್ತು ಸ್ಮಾರ್ಟ್ ಕಾರ್ಡ್ ಗುತ್ತಿಗೆದಾರರ ನಡುವಿನ ಸಂಘರ್ಷ ಹೊಸ ಸಮಸ್ಯೆಗೆ ನಾಂದಿಯಾಗಿದೆ. ಹೀಗಾಗಿ ಹಿರಿಯ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಡಿಎಲ್ ವಿತರಣೆಗೆ ಹೊಸ ಮಾರ್ಗ ಕಂಡುಕೊಳ್ಳಬೇಕಿದೆ.