Just In
- 1 hr ago ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
- 1 hr ago ಅತ್ಯಾಧುನಿಕ ಅಡಾಸ್ನೊಂದಿಗೆ ಬರಲಿದೆ ಈ ಕಿಯಾ ಕಾರು: ಟಾಟಾ ಪಂಚ್ಗೆ ಇನ್ನು ದೇವರೇ ಗತಿ!
- 1 hr ago ಸಾಯಿಬಾಬಾ ಭಕ್ತರಿಗೆ ಸಿಹಿಸುದ್ದಿ: ಇಲ್ಲಿಂದ ಶಿರಡಿಗೆ ಪಲ್ಲಕ್ಕಿ ಬಸ್.. ಕಡಿಮೆ ಖರ್ಚಿನಲ್ಲಿ ಹೋಗಬಹುದು!
- 4 hrs ago Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
Don't Miss!
- News Heavy Rain: ಮಳೆ.. ಮಳೆ.. ಭಾರಿ ಮಳೆಗೆ 100 ಜನ ಬಲಿ!
- Lifestyle ಹೌಸ್ವೈಫ್ ಆಗಿರುವ ಈ ಮಹಿಳೆ ದಿನದಲ್ಲಿ 2 ಗಂಟೆ ಕೆಲಸ ಮಾಡಿ ಲಕ್ಷ ಗಳಿಸುತ್ತಿದ್ದಾರಂತೆ!
- Movies ಕನ್ನಡ ಚಿತ್ರರಂಗಕ್ಕೆ ಬಂದ ಕಾಲಿವುಡ್ನ ಕಿನ್ನರಿ ; ಡಾಲಿಯ 'ಉತ್ತರಕಾಂಡ'ಕ್ಕೆ ಇವರೇ ನಾಯಕಿ..?
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Finance ಅಂಬುಜಾ ಸಿಮೆಂಟ್ ಮೇಲೆ ಅದಾನಿ ಗ್ರೂಪ್ನಿಂದ 8,339 ಕೋಟಿ ರೂ. ಹೂಡಿಕೆ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೊಡ್ಡಣ್ಣನಿಗೆ ಸವಾಲು - ಇಂಧನ ಬೆಲೆ ಇಳಿಕೆ ಹಿಂದಿನ ಮೋದಿ ತಾಕತ್ತು..!
ಕಳೆದ ಒಂದು ತಿಂಗಳಿನಿಂದ ದೇಶದೆಲ್ಲೆಡೆ ಇಂಧನ ಬೆಲೆಗಳಲ್ಲಿ ಕಡಿಮೆಯಾಗಿದೆ, ಕೆಂದ್ರ ಸರ್ಕಾರವು ಇರಾನ್ ದೇಶದಿಂದ ಕಚ್ಚಾ ತೈಲವನ್ನು ಆಮದು ಮಾಡುಕೊಳ್ಳುತ್ತಿರುವ ಕಾರಣ ಬೆಲೆ ಕಡಿಮೆ ಆಗಿದೆ ಎಂದು ಕೂಡಾ ಹಲವರಿಗೆ ತಿಳಿದೆ ಇದೆ.
ಮೇ ತಿಂಗಳಿನಲ್ಲಿ ಅಮೆರಿಕಾ ಇರಾನ್ ದೇಶದೊಂದಿಗೆ ನಡೆಸುತ್ತಿದ್ದ ನ್ಯೂಕ್ಲಿಯರ್ ಪವರ್ ಡೀಲ್ ಅನ್ನು ವಾಪಸ್ ಹಿಂತೆಗೆದುಕೊಂಡಿದ್ದು, ಇದೀಗ ಯುನೈಟೆಡ್ ಸ್ಟೇಟ್ಸ್ ಸರ್ಕಾರವು ಎಲ್ಲಾ ಮೂಲೆಗಳಿಂದ ಇರಾನ್ ಸರ್ಕಾರವನ್ನ ಹತ್ತಿಕ್ಕಲು ಹಲವಾರು ಸವಾಲುಗಳನ್ನು ಎದುರಿಸುವಂತೆ ಮಾಡುತ್ತಿದೆ.
ಇದರಲ್ಲಿ ಬಹು ಮುಖ್ಯವಾದಾದು ಇರಾನ್ ದೇಶದಿಂದ ಇನ್ನಿತರೆ ದೇಶದವರು ಕಚ್ಚಾ ತೈಲವನ್ನ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕೆಂದು ಆದೇಶಿಸಲಾಗಿದ್ದು, ಜೊತೆಗೆ ಈ ಆದೇಶವನ್ನು ಉಲ್ಲಂಘಿಸುವ ರಾಷ್ಟ್ರಗಳಲ್ಲಿ ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ಅಮೆರಿಕ ಸರ್ಕಾರ ಎಚ್ಚರಿಸಿದೆ.
ನಮ್ಮ ದೇಶಕ್ಕೆ ಕಚ್ಚಾ ತೈಲವನ್ನು ಕಳುಹಿಸುವ ಪ್ರಮುಖ ದೇಶಗಳಲ್ಲಿ ಇರಾನ್ ಮೂರನೆಯ ಸ್ಥಾನದಲ್ಲಿದ್ದು, ಇದೀಗ ಟ್ರಂಪ್ ಆದೇಶದಂತೆ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದರೆ ದೇಶದಲ್ಲಿ ಮತ್ತೊಮೆ ಇಂಧನ ಬೆಲೆಯಲ್ಲಿ ಏರಿಕೆಯಾಗಲಿದೆ.
ಕಚ್ಚಾ ತೈಲವನ್ನು ಆಮದು ಮಾಡುವುದನ್ನು ನಿಲ್ಲಿಸಬೇಕು ಎಂದು ನವೆಂಬರ್ 4, 2018ರ ವರೆಗು ಗಡುವನ್ನು ನೀಡಲಾಗಿತ್ತು, ಆದರೂ ಸಹ ಭಾರತ ಸೇರಿದಂತೆ ಇನ್ನಿತರೆ ದೇಶಗಳು ಇರಾನ್ ಸರ್ಕಾರದ ನೆರವಿನೊಂದಿಗೆ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ನಿಲಿಸಲಿಲ್ಲ.
ಯುಎಸ್ ಸರ್ಕಾರವು ತೆಗೆದುಕೊಂಡ ಈ ನಿರ್ಧಾರದಿಂದ ಇಂಧನದ ಬೇಡಿಕೆಯು ಹೆಚ್ಚಿರುವ ದೇಶಗಳಲ್ಲಿ ತೊಂದರೆ ಉಂಟಾಗುತ್ತದೆ. ಏಕೆಂದರೆ ಇಂಧನ ಆಧಾರಿತ ವಾಹನಗಳೇ ಹೆಚ್ಚು ಚಲಿಸುತ್ತಿರುವ ಕಾರಣ ಬೇಡಿಕೆಯು ಕೂಡಾ ಹೆಚ್ಚುತ್ತಿದೆ.
ಈಗಾಗಲೆ ಇರಾನ್ ದೇಶದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಚೀನಾ, ಜಪಾನ್, ಸೌತ್ ಕೊರಿಯಾ, ಇಟಾಲಿ, ಟರ್ಕಿ, ಗ್ರೀಸ್, ಭಾರತ ಮತ್ತು ತೈವಾನ್ ದೇಶಗಳಿಗೆ ಕಚ್ಚಾ ತೈಲವನ್ನು ಆಮದು ಮಾಡುವುದನ್ನ ನಿಲ್ಲಿಸಲು ಅಮೆರಿಕಾ ಆದೇಶಿಸಿದೆ.
ಆದರೆ ಈ ದೇಶಗಳಲ್ಲಿ ಇಂಧನಗಳ ಬೇಡಿಕೆಯು ಹೆಚ್ಚಾಗಿಯೆ ಇರುವ ಕಾರಣ ಬೇರೆ ದಾರಿ ಇಲ್ಲದೇ ಯುಎಸ್ ಸರ್ಕಾರ ನೀಡಿದ ಗಡುವಿನ ನಂತರವೂ ಇರಾನ್ ದೇಶದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ.
ಆದುದರಿಂದ ಈ ಎಂಟು ರಾಷ್ಟ್ರಗಳಿಗೆ 6 ತಿಂಗಳವರೆಗೆ ವಿನಾಯಿತಿಯನ್ನು ನೀಡಲಾಗುತ್ತಿದ್ದು, 6 ತಿಂಗಳ ಬಳಿಕ ಸಂಪೂರ್ಣವಾಗಿ ಇರಾನ್ ದೇಶದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕೆಂಬ ಅಮೆರಿಕಾ ಆದೇಶಕ್ಕೆ ಮೋದಿ ಕ್ಯಾರೇ ಎಂದಿಲ್ಲ.
ಭಾರತದಲ್ಲಿ ದಿನದಿಂದ ದಿನಕ್ಕೆ ಇಂಧನದ ಬೇಡಿಕೆಯು ಹೆಚ್ಚುತ್ತಲೇ ಇದೆ, ಆದುದರಿಂದ ಯುಎಸ್ ಸರ್ಕಾರ ನೀಡಿದ ಆದೇಶದ ಮೆರೆಗೆ ಪ್ರಧಾನಿ ಮೋದಿಯವರು ಯಾವ ರೀತಿಯ ನಿರ್ಣಯವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಕಾಯ್ದು ನೋಡಬೇಕಿದ್ದು, ಇರಾನ್ ದೇಶದಿಂದ ಒಮ್ಮೆ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದ್ದಲ್ಲಿ, ಮತ್ತೊಮ್ಮೆ ಇಂಧನದ ಬೆಲೆಯು ಏರಿಕೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಲಾಗುತ್ತಿದೆ.
2018ರ ಅಕ್ಟೋಬರ್ ತಿಂಗಳಿನಲ್ಲಿ ಭಾರತವು ಇರಾನ್ ದೇಶದಿಂದ 2.57 ಮಿಲಿಯನ್ ಟನ್ಗಳ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದ್ದರೆ, ಇನ್ನು 2017ರಲ್ಲಿ ಸುಮಾರು 1.89 ಮಿಲಿಯನ್ ಟನ್ಗಳ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿತ್ತು. ಅಂದರೆ ಕಳೆದ ವರ್ಷಕ್ಕಿಂತಾ ಈ ವರ್ಷದ ಆಕ್ಟೋಬರ್ನಲ್ಲಿ ಶೇಕಡ 36ರಷ್ಟು ಹೆಚ್ಚಾಗಿ ಆಮದು ಮಾಡಿಕೊಂಡಿದೆ.
2018ರ ಮೊದಲ ಅರ್ಧ ಹಣಕಾಸು ವರ್ಷದಲ್ಲಿ (ಎಪ್ರಿಲ್-ಅಕ್ಟೋಬರ್) ಭಾರತವು ಇರಾನ್ನಿಂದ ಬರೊಬ್ಬರಿ 17.62 ಮಿಲಿಯನ್ ಟನ್ಗಳ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲಾಗಿದ್ದು, 2017ರ ಹಣಾಕಾಸು ವರ್ಷದಲ್ಲಿ ಮಾಡಿಕೊಂಡ ಆಮದುಗಿಂತಾ ಶೇಕಡಾ 38.41ರಷ್ಟು ಹೆಚ್ಚಾಗಿ ಆಮದು ಮಾಡಿಕೊಳ್ಳಲಾಗಿದೆ.
ಈ ವರ್ಷದ ದಸರಾ ಹಬ್ಬದ ಮುಂಚೆ ದೇಶದಲ್ಲಿ ಇಂಧನದ ಬೆಲೆಯು ಹಲವಾರು ಪ್ರಮುಖ ನಗರಗಳಲ್ಲಿ ರೂ. 93ಕ್ಕೆ ದಾಟಿತ್ತು, ಹಬ್ಬದ ನಂತರ ಇಲ್ಲಿಯ ವರೆಗು ಇಂಧನದ ಬೆಲೆಯು ಕಡಿಮೆ ಆಗಿದೆ. ಇನ್ನು ಇರಾನ್ ದೇಶದಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದ್ದೆ ಆದಲ್ಲಿ ಮತ್ತೊಮ್ಮೆ ಬೇಡಿಕೆಗೆ ಅನುಗುಣವಾಗಿ ಇಂಧನ ಬೆಲೆಯಲ್ಲಿ ಏರಿಕೆಯಾದರೂ ಆಗಬಹುದು.
ಸದ್ಯ ದೇಶದಲ್ಲಿ ಇಂಧನ ಬೆಲೆ ಇಳಿಕೆಯ ವಿಚಾರವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದು, ಮುಂಬರುವ ಲೋಕಸಭಾ ಚುನಾವಣೆಗಾಗಿ ಪ್ರಧಾನಿ ಮೋದಿಯವರು ಹೆಚ್ಚಿನ ಸ್ಥಾನಗಳನ್ನ ಗಳಿಸಲು ಬೆಲೆ ಇಳಿಕೆ ತಂತ್ರವನ್ನ ಅನುಸರಿಸುತ್ತಿದ್ದಾರೆ ಎಂದು ಪ್ರತಿ ಪಕ್ಷಗಳು ವಾಗ್ದಾಳಿ ನಡೆಸುತ್ತಿವೆ. ಹಾಗಾದರೆ ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು.?
ಮಹೀಂದ್ರಾ ಸಂಸ್ಥೆಯು ಬಿಡುಗಡೆಗೊಳಿಸಿದ ಮೊದಲ ಐಷಾರಾಮಿ ಎಸ್ಯುವಿ ಆಲ್ಟುರಾಸ್ ಜಿ4 ಕಾರಿನ ಚಿತ್ರಗಳು ಇಲ್ಲಿದೆ ನೋಡಿ..