ಕಾರು ಚಾಲಕನ ನಿರ್ಲಕ್ಷದಿಂದ ನಡೆಯಿತು ಭೀಕರ ಅಪಘಾತ

ಬಹುತೇಕ ಪ್ರಕರಣಗಳು ರಸ್ತೆ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದ ಹಿನ್ನೆಲೆಯೇ ನಡೆದ ದುರಂತಗಳಾಗಿವೆ. ಇದೀಗ ಇಂತದ್ದೇ ಭೀಕರ ಅಪಘಾತ ನಡೆದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ.

By Praveen Sannamani

ದೇಶಾದ್ಯಂತ ಪ್ರತಿದಿನ ಹತ್ತಾರು ಭೀಕರ ಅಪಘಾತ ಪ್ರಕರಣಗಳ ನಡೆಯುತ್ತಲೇ ಇವೆ. ಇದರಲ್ಲಿ ಬಹುತೇಕ ಪ್ರಕರಣಗಳು ರಸ್ತೆ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದ ಹಿನ್ನೆಲೆಯೇ ನಡೆದ ದುರಂತಗಳಾಗಿವೆ. ಇದೀಗ ಇಂತದ್ದೇ ಭೀಕರ ಅಪಘಾತ ನಡೆದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಕಾರು ಚಾಲಕನ ನಿರ್ಲಕ್ಷದಿಂದ ನಡೆಯಿತು ಭೀಕರ ಅಪಘಾತ

ಅಂದಹಾಗೆ ಈ ಘಟನೆ ನಡೆದಿರುವುದು ಕೇರಳದ ಕೊಲ್ಲಂನಲ್ಲಿ. ನಿನ್ನೆ ಬೆಳಗಿನ ಜಾವ ಈ ಘಟನೆ ನಡೆದಿದ್ದು, ರಸ್ತೆ ಕ್ರಾಸ್ ಮಾಡುತ್ತಿದ್ದ ಹ್ಯುಂಡೈ ಐ10 ಹ್ಯಾಚ್‌ಬ್ಯಾಕ್ ಕಾರೊಂದು ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದಲ್ಲದೇ ಕಾರು ಚಾಲಕನಿಗೆ ಗಂಭೀರ ಗಾಯಗಳಾಗಿವೆ.

ಕಾರು ಚಾಲಕನ ನಿರ್ಲಕ್ಷದಿಂದ ನಡೆಯಿತು ಭೀಕರ ಅಪಘಾತ

ಅತಿಯಾದ ವೇಗ ಜೀವಕ್ಕೆ ಅಪಾಯ ಅಂತಾ ಗೊತ್ತಿದ್ರು ಕೆಲವರಿಗಂತೂ ಸ್ಪೀಡ್​ನ ಹುಚ್ಚು ಕಡಿಮೆಯಾಗುವುದೇ ಇಲ್ಲ. ಶೋಕಿಗಾಗಿ ಹೆಚ್ಚು ಜನ ಸಂದಣಿ ಇರುವ ಪ್ರದೇಶಗಳಲ್ಲೂ ಮಿತಿ ಮೀರಿದ ವೇಗದಲ್ಲಿ ವಾಹನಗಳನ್ನ ಚಾಲನೆ ಮಾಡ್ತಾರೆ.

ಕಾರು ಚಾಲಕನ ನಿರ್ಲಕ್ಷದಿಂದ ನಡೆಯಿತು ಭೀಕರ ಅಪಘಾತ

ಅದರ ಪರಿಣಾಮವೇ ಭೀಕರ ಅಪಘಾತಗಳು. ಇಲ್ಲೂ ಕೂಡಾ ಆಗಿದ್ದು ಅದೇ. ರಸ್ತೆ ಕ್ರಾಸ್ ಮಾಡುವ ಮುನ್ನ 5 ಸೇಕೆಂಡು ಅತ್ತ ಇತ್ತ ಕಣ್ಣ ಹಾಯಿಸಿದ್ದರೂ ಈ ಅನಾಹುತವನ್ನು ತಪ್ಪಿಸಬಹುದಾಗಿತ್ತು. ಆದರೂ ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳನ್ನು ಹೊರತು ಪಡಿಸಿ ಯಾರಿಗೂ ಏನು ಆಗಿಲ್ಲ.

ಕಾರು ಚಾಲಕನ ನಿರ್ಲಕ್ಷದಿಂದ ನಡೆಯಿತು ಭೀಕರ ಅಪಘಾತ

ಇನ್ನು ಕಾರು ಗುದ್ದಿದ ರಭಸಕ್ಕೆ ಖಾಸಗಿ ಬಸ್ಸಿಗೂ ಕೂಡಾ ಹಾನಿಯಾಗಿದ್ದು, ಕಿಟಕಿ ಪಕ್ಕದಲ್ಲಿ ಕುಳಿತದ್ದವರಿಗೆ ಯಾವುದೇ ತೊಂದರೆ ಆಗಿಲ್ಲವೆಂದು ತಿಳಿದುಬಂದಿದೆ. ಆದರೂ ಕಾರು ಚಾಲಕ ಮಾಡಿದ ಒಂದು ಸಣ್ಣ ತಪ್ಪು ಇತದೊಂದು ಅನಾಹುತಕ್ಕೆ ಕಾರಣವಾಗಿದ್ದು ಮಾತ್ರ ಸುಳ್ಳಲ್ಲ.

ಕಾರು ಚಾಲಕನ ನಿರ್ಲಕ್ಷದಿಂದ ನಡೆಯಿತು ಭೀಕರ ಅಪಘಾತ

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳ ಪ್ರಕಾರ, ಕಾರು ಚಾಲಕನದ್ದೆ ತಪ್ಪು ಎಂಬುವುದು ಸ್ಪಷ್ಟವಾಗಿ ಕಾಣುತ್ತಿದ್ದು, ಮುಖ್ಯ ರಸ್ತೆಯಲ್ಲಿ ವೇಗವಾಗಿ ಬರುತ್ತಿದ್ದ ಖಾಸಗಿ ಬಸ್ಸ್‌ಗೆ ಹ್ಯುಂಡೈ ಐ10 ಕಾರು ಮಾಲೀಕನು ರೋಡ್ ಕ್ರಾಸ್ ಮಾಡುವ ಭರದಲ್ಲಿ ಡಿಕ್ಕಿ ಹೊಡೆಯುತ್ತಿರುವ ದೃಶ್ಯ ಹೋಟೆಲ್ ಒಂದರ ಸಿಸಿಟಿವಿ ಸೆರೆಯಾಗಿದೆ.

ಕಾರು ಚಾಲಕನ ನಿರ್ಲಕ್ಷದಿಂದ ನಡೆಯಿತು ಭೀಕರ ಅಪಘಾತ

ಘಟನೆ ನಂತರ ಗಂಭೀರವಾಗಿ ಗಾಯಗೊಂಡಿದ್ದ ಕಾರು ಚಾಲಕನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ ಪೊಲೀಸರು ಕಾರು ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂಬ ಮಾಹಿತಿಯು ಲಭ್ಯವಾಗಿದೆ.

ಕಾರು ಚಾಲಕನ ನಿರ್ಲಕ್ಷದಿಂದ ನಡೆಯಿತು ಭೀಕರ ಅಪಘಾತ

ಕಾರು ಚಾಲನೆ ವೇಳೆ ಮೊಬೈಲ್ ಬಳಕೆ..!

ಅಂದಹಾಗೆ ಘಟನೆ ನಿಖರ ಕಾರಣ ಏನು ಎಂದು ಪರಿಶೀಲನೆ ಮಾಡಿದಾಗ ಕಾರು ಮಾಲೀಕನು ಕಾರು ಚಾಲನೆ ಸಂದರ್ಭದಲ್ಲಿ ಮೊಬೈಲ್ ಬಳಕೆ ಮಾಡುತ್ತಿದ್ದರ ಬಗ್ಗೆ ಕಾರು ಮಾಲೀಕನೇ ತಪ್ಪೊಪ್ಪಿಕೊಂಡಿದ್ದಾನೆ. ಹೀಗಾಗಿಯೇ ಮುಖ್ಯ ರಸ್ತೆಯಲ್ಲಿ ಬರುತ್ತಿದ್ದ ಖಾಸಗಿ ಬಸ್ ಬಗ್ಗೆ ಗಮನಹರಿಸಲು ಸಾಧ್ಯವಾಗಲಿಲ್ಲ ಎಂದಿದ್ದಾನೆ.

ಘಟನಾ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಗಳನ್ನು ಗಮನಿಸಿದ್ದಲ್ಲಿ ಅಪಘಾತ ತೀವ್ರತೆ ಹೇಗಿತ್ತು ಎಂಬುವುದು ಸ್ಪಷ್ಟವಾಗುತ್ತೆ.

ಕಾರು ಚಾಲಕನ ನಿರ್ಲಕ್ಷದಿಂದ ನಡೆಯಿತು ಭೀಕರ ಅಪಘಾತ

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಡ್ರೈವಿಂಗ್ ಮಾಡ್ತಾ ಮೊಬೈಲ್ ಬಳಕೆ ಮಾಡಿದ್ರೆ ಈ ಶಿಕ್ಷೆ ತಪ್ಪಿದಲ್ಲ.....

ಬಿಡುಗಡೆಯಾಗಲಿರುವ ವಿನೂತನ 7 ಸೀಟರ್ ವ್ಯಾಗನರ್ ಬೆಲೆ ಎಷ್ಟು ಗೊತ್ತಾ?

ಕಾರು ಚಾಲಕರೇ ಎಚ್ಚರ- ಟೈರ್ ಬಸ್ಟ್‌ ಹಿನ್ನೆಲೆ ಲಾರಿಗೆ ಡಿಕ್ಕಿ ಹೊಡೆದ ಫೋರ್ಡ್ ಇಕೋ ಸ್ಪೋರ್ಟ್

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್....

ನಿಯಂತ್ರಣ ತಪ್ಪಿ 20 ಅಡಿ ಹಳ್ಳಕ್ಕೆ ಬಿದ್ದ ಟಾಟಾ ನೆಕ್ಸಾನ್- ಕಾರಿನಲ್ಲಿದ್ದವರಿಗೆ ಪರಿಸ್ಥಿತಿ ಏನಾಯ್ತು ಗೊತ್ತಾ?

Most Read Articles

Kannada
Read more on accident ಅಪಘಾತ
English summary
Car drives straight into bus: Caught on cam.
Story first published: Saturday, May 5, 2018, 17:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X