Just In
- 9 min ago ಬೈಕಿನಂತೆ ಮೈಲೇಜ್ ಕೊಡೋದ್ರಿಂದ ಈ ಹ್ಯುಂಡೈ ಕಾರಿನ ಮಾಲೀಕರು ಫುಲ್ ಖುಷ್
- 12 min ago ಮಹೀಂದ್ರಾ ಪ್ರೀಯರಿಗೆ ಭಾರೀ ಸಿಹಿಸುದ್ದಿ: ಗಲ್ಲಿಗಲ್ಲಿಯಲ್ಲಿ ಶುರುವಾಗುತ್ತಾ ಸ್ಕಾರ್ಪಿಯೋ ಹವಾ!
- 1 hr ago ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡುತ್ತವೆ!
- 3 hrs ago Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
Don't Miss!
- News Soumya Reddy in Tirupati:ಸೌಮ್ಯ ರೆಡ್ಡಿ ಫೋಟೋ ಹಿಡಿದು ತಿರುಪತಿ ದೇವಸ್ಥಾನದ ಮುಂದೆ ಫೋಸ್ ಕೊಟ್ಟ ಭಕ್ತ!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Movies ಹಳೇ ಟ್ವೀಟ್ ಹಾಕಿ ರಕ್ಷಿತ್ ಶೆಟ್ಟಿ ಹೇಳಿದ್ದೇನು? 'ರಿಚರ್ಡ್ ಆಂಟನಿ' ಕಥೆ ಏನಾಯ್ತು?
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಿಎಸ್ಟಿ ಇಳಿಸುವಂತೆ ಬಿಡಿಭಾಗ ತಯಾರಿಕರಿಂದ ಆಗ್ರಹ
ಆಟೋಮೊಬೈಲ್ ಉದ್ಯಮವು ಕಳೆದ ಒಂದು ವರ್ಷದಿಂದ ಮಂದಗತಿಯಲ್ಲಿ ಸಾಗುತ್ತಿದೆ. ಹೊಸ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾದ ಕಾರಣ ಮಾರಾಟ ಕಡಿಮೆಯಾಗಿದೆ ಎಂಬುದು ಆಟೋ ಬಿಡಿಭಾಗ ತಯಾರಕರ ವಾದ. ಇದಲ್ಲದೆ ಅವರ ಜಿಎಸ್ಟಿ ಮರುಪಾವತಿ ವಿಳಂಬವಾಗಿದೆ ಎಂದು ಹೇಳುತ್ತಿದ್ದಾರೆ. ಅಲ್ಲದೇ ಜಿಎಸ್ಟಿ ದರವನ್ನು ಇಳಿಸಬೇಕೆಂದು ಆಗ್ರಹಿಸಿದ್ದಾರೆ.
ಆಟೋ ಬಿಡಿಭಾಗ ತಯಾರಕರ ಸಂಘದ ಅಧ್ಯಕ್ಷ ಗುರ್ಪರ್ಗತ್ ಸಿಂಗ್ ಕಹ್ಲೋನ್ ಅವರು, ಈ ಸಮಸ್ಯೆ ಪ್ರತಿದಿನವೂ ಹೆಚ್ಚಾಗುತ್ತಿದೆ ಮತ್ತು ವಾಹನ ಉದ್ಯಮವು ಕಳೆದ ಒಂದು ವರ್ಷದಿಂದ ಮಂದಗತಿಯಲ್ಲಿ ಸಾಗುತ್ತಿದೆ. ಆಟೋ ಬಿಡಿಭಾಗ ತಯಾರಕರು ತೀವ್ರ ಸಂಕಷ್ಟದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.
ಹೊಸ ವಾಹನಗಳಿಗೆ ಬೇಡಿಕೆ ಕಡಿಮೆಯಾದ ಕಾರಣ ಕಡಿಮೆ ಉತ್ಪಾದನೆ ನಡೆಸಬೇಕಾದ ಅನಿವಾರ್ಯತೆ. ತಮ್ಮ ಉದ್ಯಮಕ್ಕೆ ದೊಡ್ಡ ಸಮಸ್ಯೆ ಎಂದರೇ ಜಿಎಸ್ಟಿ ದರದ ಪ್ರಮಾಣವು ಅಧಿಕವಾಗಿದೆ. ಜಿಎಸ್ಟಿ ದರವು ಪ್ರಸ್ತುತ ಶೇ.28 ರಷ್ಟು ಹೊಂದಿದ್ದು ಇದು ಅಧಿಕವಾದ ಕಾರಣ ಶೇ.18ಕ್ಕೆ ಇಳಿಸಲು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಹೆಚ್ಚಿನ ಜಿಎಸ್ಟಿ ದರದಿಂದ ಸರ್ಕಾರದ ಬುಕ್ಕಸ ತುಂಬುತ್ತದೆ ಅಷ್ಟೇ. ಆದರೆ ಆಟೋಮೊಬೈಲ್ ಉದ್ಯಮದಲ್ಲಿ ಭಾರೀ ಕುಸಿತ ಕಂಡಿದ್ದು, ವಾಹನ ಉತ್ಪಾದಕರು ದೊಡ್ಡ ಸಂಕಷ್ಟದಲ್ಲಿ ಇದ್ದಾರೆ. ಸರ್ಕಾರವು ಆಟೋಮೊಬೈಲ್ ಉದ್ಯಮದಲ್ಲಿ ದೊಡ್ಡ ಕುಸಿತ ಸಂಭವಿಸಿದೆ ಎಂಬುದನ್ನು ಒಪ್ಪಿಕೊಳ್ಳಲು ಸಿದ್ದವಿಲ್ಲ. ಅಲ್ಲದೇ ಉದ್ಯಮ ಚೇತರಿಕೆಗೆ ಉತ್ತೇಚೆನ ಹಣ ನೀಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.
ಆಟೋ ಪಾರ್ಟ್ಸ್ ತಯಾರಕರಾದ ಸ್ವಿಂದರ್ ಸಿಂಗ್ ಹುಂಜನ್ ಮಾತನಾಡಿ, ಶೇ.28 ಜಿಎಸ್ಟಿ ದರವು ನಮ್ಮ ಉದ್ಯಮಕ್ಕೆ ಗಂಭೀರ ಸಮಸ್ಯೆಯಾಗಿದೆ ಮತ್ತು ಇದನ್ನು ಕಡಿಮೆಗೊಳಿಸಿದರೆ ವಾಹನ ಉದ್ಯಮದಲ್ಲಿ ಚೇತರಿಕೆ ಕಾಣುವುದಕ್ಕೆ ಸಹಾಯವಾಗುತ್ತದೆ . ಮುಂದಿನ ಆಟೋಮೊಬೈಲ್ ಉದ್ಯಮದ ಭವಿಷ್ಯದ ದೃಷ್ಟಿಯಿಂದಲೂ ಉತ್ತಮ ನಿರ್ಧಾರವಾಗುತ್ತದೆ.
ಆಟೋ ಪಾರ್ಟ್ಸ್ ತಯಾರಕರಾದ ಸ್ವಿಂದರ್ ಸಿಂಗ್ ಹುಂಜನ್ ಮಾತನಾಡಿ, ಶೇ.28 ಜಿಎಸ್ಟಿ ದರವು ನಮ್ಮ ಉದ್ಯಮಕ್ಕೆ ಗಂಭೀರ ಸಮಸ್ಯೆಯಾಗಿದೆ ಮತ್ತು ಇದನ್ನು ಕಡಿಮೆಗೊಳಿಸಿದರೆ ವಾಹನ ಉದ್ಯಮದಲ್ಲಿ ಚೇತರಿಕೆ ಕಾಣುವುದಕ್ಕೆ ಸಹಾಯವಾಗುತ್ತದೆ . ಮುಂದಿನ ಆಟೋಮೊಬೈಲ್ ಉದ್ಯಮದ ಭವಿಷ್ಯದ ದೃಷ್ಟಿಯಿಂದಲೂ ಉತ್ತಮ ನಿರ್ಧಾರವಾಗುತ್ತದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!
ಮರುಪಾವತಿಗಳ ಪ್ರಕ್ರಿಯೆಯಲ್ಲಿನ ವಿಳಂಬವು ಪ್ರತಿ ಆಟೋ ಬಿಡಿಭಾಗ ತಯಾರಕರಿಗೆ ದೊಡ್ಡ ಸಮಸ್ಯೆಯಲ್ಲದಿದ್ದರೂ, ಜಿಎಸ್ಟಿ ಶೇ.28 ರಷ್ಟು ಹೆಚ್ಚಿನ ದರ ಹೊಂದಿರುವುದರಿಂದ ಎಲ್ಲರಿಗೂ ಸಮಸ್ಯೆಯಾಗಿದೆ ಆಟೋ ಬಿಡಿಭಾಗ ಉತ್ಪಾದನಾ ಉದ್ಯಮವು ಎದುರಿಸುತ್ತಿರುವ ಗಂಭೀರ ಸಮಸ್ಯೆಯನ್ನು ಸರ್ಕಾರ ಅರಿತುಕೊಳ್ಳಬೇಕು ಮತ್ತು ಜಿಎಸ್ಟಿ ದರವನ್ನು ಶೇ.18 ಕ್ಕೆ ಇಳಿಸಬೇಕು. ಇದರಿಂದ ನಾವು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಅವರು ಹೇಳಿದರು.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್
ಜಿಎಸ್ಟಿ ಕಡಿತಗೊಳಿಸುವಂತೆ ಆಟೋ ಬಿಡಿಭಾಗ ತಯಾರಕರ ಮನವಿಯು ಸಮರ್ಥವಾಗಿದೆ ಎಂದು ನಿರೀಕ್ಷಿಸುತ್ತೇವೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಭಾರೀ ಕುಸಿತ ಕಂಡಿರುವುದರಿಂದ ಅದರ ಚೇತರಿಕೆಗಾಗಿ ಸರ್ಕಾರವು ಕೆಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ ಕೆಲವು ಕೈಗಾರಿಕೆಗಳು ನಿರ್ಲಕ್ಷ್ಯ ತೋರುತ್ತಿವೆ. ಆದರೆ ದ್ವಿತೀಯ ಕೈಗಾರಿಕೆಗಳಿಗೂ ಸರ್ಕಾರ ಬೆಂಬಲ ನೀಡಬೇಕಾಗಿದೆ.