Just In
- 7 hrs ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- 10 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 10 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
- 11 hrs ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
Don't Miss!
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಬಿಎಂಪಿಗೆ ಹೈ-ಕೋರ್ಟ್ನಿಂದ ಖಡಕ್ ವಾರ್ನಿಂಗ್. ಏನದು.?
ರಾಜಧಾನಿ ಬೆಂಗಳೂರಿನಲ್ಲಿ ವಾಹನದ ಸಂಚಾರವು ಎಷ್ಟರ ಮಟ್ಟಿಗೆ ಇರುತ್ತೆ ಅಂತ ಪ್ರತ್ಯೇಕವಾಗಿ ಹೆಳಬೇಕಿಲ್ಲ. ನಗರದಲ್ಲಿರುವ ರಸ್ತೆಗಳ ಗುಂಡಿಯನ್ನು ಎಷ್ಟು ಬಾರಿ ರಿಪೇರಿ ಮಾಡಿದರೂ ಸಹ ಮುಂದಿನ ಕೆಲವೇ ದಿನಗಳಲ್ಲಿ ಮತ್ತದೇ ಜಾಗದಲ್ಲಿ ಗುಂಡಿ ಕಾಣಿಸಿಕೊಂಡಿರುತ್ತೆ. ಈ ಗುಂಡಿ ಭರಿತ ರಸ್ತೆಗಳಲ್ಲಿ ವಾಹನ ಸಂಚಾರ ಅಷ್ಟು ಸುಲಭವಲ್ಲ. ಇಂತಹ ರಸ್ತೆಗಳಲ್ಲಿ ಹೆಚ್ಚಾಗಿ ತೊಂದರೆಗೊಳಗಾಗುವುದು ದ್ವಿಚಕ್ರ ವಾಹನ ಚಾಲಕರು.
ಬೆಂಗಳೂರಿನ ರಸ್ತೆಯಲ್ಲಿರುವ ಗುಂಡಿಗಳ ಮತ್ತು ಕಳಪೆ ರಸ್ತೆ ನಿರ್ಮಾಣದ ಕಾರಣದಿಂದಾಗಿ ಹಲವಾರು ಅಪಘಾತಗಳು ಸಂಭವಿಸುತ್ತಿವೆ. ಅದರಲ್ಲಿಯೂ ಮಳೆ ಬಂದಾಗ ನಮ್ಮ ರಸ್ತೆಗಳ ಪರಿಸ್ಥಿತಿಯಂತೂ ಯಾವುದೋ ನದಿ ದಂಡೆಯ ಮೇಲೆ ವಾಹನ ಚಾಲನೆ ಮಾಡಿದ ಹಾಗಿರುತ್ತೆ. ಇಂತಹ ಕಳಪೆ ರಸ್ತೆ ನಿರ್ಮಾಣವನ್ನು ಮಾಡುತ್ತಿರುವ ಬಿಬಿಎಂಪಿಗೆ ಹೈ-ಕೋರ್ಟ್ ಒಂದು ಆದೇಶವನ್ನು ನೀಡಲಾಗಿದ್ದು, ಈ ಆದೇಶವು ವಾಹನ ಚಾಲಕರಿಗೆ ಮತ್ತು ಪಾದಚಾರಿಗಳಿಗೆ ಬಹಳ ಉಪಯುಕ್ತವಾಗಿದೆ.
ಅದೆನೆಂದರೆ ಬೆಂಗಳೂರಿನ ರಸ್ತೆಗಳಲ್ಲಿರುವ ಗುಂಡಿಗಳ ಕಾರಣದಿಂದಾಗಿ ಮತ್ತು ಕಳಪೆ ಫುಟ್ಪಾತ್ಗಳಿಂದ ವಾಹನ ಚಾಲಕರು ಮತ್ತು ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಇಷ್ಟೆ ಅಲ್ಲದೆಯೆ ಕಳಪೆ ರಸ್ತೆ ನಿರ್ಮಾಣದಿಂದಾಗಿ ರಸ್ತೆಯಲ್ಲಿರುವ ಗುಂಡಿಗಳ ಕಾರಣದಿಂದಾಗಿ ಹಲವಾರು ದ್ವಿಚಕ್ರ ವಾಹನ ಚಾಲಕರು ಅಪಘಾತಕ್ಕೀಡಾಗುತ್ತಿದ್ದಾರೆ. ಹೀಗಾಗಿ ಅಪಘಾತಕ್ಕೀಡಾದ ಚಾಲಕರಿಗೆ ಪರಿಹಾರ ನೀಡಬೇಕಾಗಿ ಹೈ ಕೋರ್ಟ್ ಬಿಬಿಎಂಪಿಗೆ ಆದೇಶವನ್ನು ನೀಡಲಾಗಿದೆ.
ತೆರಿಗೆ ಪಾವತಿ ಮಾಡುತ್ತಿರುವ ನಾಗರೀಕರು ಈ ಕಳಪೆ ರಸ್ತೆಗಳಿಂದ ಗಾಯಗೊಳ್ಳುವ ಅಪಾಯವನ್ನು ಅನುಭವಿಸುತ್ತಿದ್ದಾರೆ ಮತ್ತು ನ್ಯಾಯಾಲಯದ ಪ್ರಕರಣಗಳನ್ನು ತಪ್ಪಿಸಲು, ಪೀಡಿತ ಪಕ್ಷವು ಸೂಕ್ತ ಪರಿಹಾರಕ್ಕಾಗಿ ನೇರವಾಗಿ ನಾಗರಿಕ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಆದೇಶವನ್ನು ಹೈ ಕೋರ್ಟ್ ನೀಡಿದೆ.
ಮುಂಬೈ ಮತ್ತು ಬೆಂಗಳೂರಿನಂತಹ ಕೆಲವು ಮೆಟ್ರೋ ನಗರಗಳಲ್ಲಿನ ರಸ್ತೆಗಳ ಸ್ಥಿತಿ ವಿಶೇಷವಾಗಿ ಆತಂಕಕಾರಿಯಾಗಿದೆ ಮತ್ತು ದ್ವಿಚಕ್ರ ವಾಹನಗಳು ಗಂಭೀರ ಅಪಘಾತಗಳಲ್ಲಿ ಸಿಲುಕಿರುವ ಬಗ್ಗೆ ನಿಯಮಿತವಾಗಿ ವರದಿಗಳಿವೆ. ಕೆಲವು ದಿನಗಳ ಹಿಂದೆ, ವೋಕ್ಸ್ವ್ಯಾಗನ್ ಪೊಲೊ ಮುಂಬೈನಲ್ಲಿ ಒಂದು ಗುಂಡಿಗೆ ಅಪ್ಪಳಿಸಿ ಅದರ ಏರ್ಬ್ಯಾಗ್ಗಳು ನಿಯೋಜಿಸಲಾಗಿತ್ತು. ಅಂತಹ ಬಹಳಷ್ಟು ಪ್ರಕರಣಗಳು ನಿಯಮಿತವಾಗಿ ನಡೆಯುತ್ತವೆ ಮತ್ತು ಈ ನಿರ್ಧಾರವನ್ನು ಅದೇ ಘಟನೆಯಿಂದ ನೇಮಕ ಮಾಡಿಕೊಳ್ಳಲಾಗಿದೆ.
ತೀರ್ಪು ನೀಡಿದ ನ್ಯಾಯಾಲಯದ ನ್ಯಾಯಪೀಠವು ಸಾರ್ವಜನಿಕರು ಬಳಸಬಹುದಾದ ಮೊಬೈಲ್ ಫೋನ್ ಅಪ್ಲಿಕೇಶನ್ನಂತಹ ಕುಂದುಕೊರತೆ ನಿವಾರಣಾ ವ್ಯವಸ್ಥೆಯನ್ನು ಸ್ಥಾಪಿಸಲು ಬಿಬಿಎಂಪಿಗೆ ನಿರ್ದೇಶನ ನೀಡಿದೆ. ಅವರು ಲಾಗ್ ಮಾಡಿದ ದೂರಿನ ಮೇಲೆ ಕೈಗೊಂಡ ಕ್ರಮಗಳ ಬಗ್ಗೆ ಬಿಬಿಎಂಪಿ ದೂರುದಾರರಿಗೆ ತಿಳಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಈ ಆದೇಶವು ಬಾಂಬೆ ಹೈಕೋರ್ಟ್ನ ನ್ಯಾಯಪೀಠವು ಒಂದೆರಡು ವರ್ಷಗಳ ಹಿಂದೆ ಅಂಗೀಕರಿಸಿದ ಆದೇಶಕ್ಕೆ ಸ್ವಲ್ಪಮಟ್ಟಿಗೆ ಹೋಲುತ್ತದೆ. ನ್ಯಾಯಾಲಯದ ಇತ್ತೀಚಿನ ತೀರ್ಪಿನ ಪ್ರಕಾರ, ಸಂವಿಧಾನದ 21 ನೇ ವಿಧಿ ಅಡಿಯಲ್ಲಿ ಒಬ್ಬ ನಾಗರಿಕನಿಗೆ ಅರ್ಥಪೂರ್ಣ ಮತ್ತು ಘನತೆಯ ಜೀವನಕ್ಕೆ ಎಲ್ಲ ಹಕ್ಕಿದೆ ಮತ್ತು ಅವರಿಗೆ ಉತ್ತಮ ರಸ್ತೆಗಳು ಅವಶ್ಯಕವಾಗಿದೆ.
ರಸ್ತೆಗಳ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಂತೆ ವಾರ್ಡ್ ಸಮಿತಿಗೆ ಮತ್ತು ಸಂಚಾರಿ ಪೊಲೀಸರಿಗೆ ನ್ಯಾಯಾಲಯವು ಹೇಳಲಾಗಿದೆ. ಈ ಸಮಿತಿಗಳು ತಮ್ಮ ವ್ಯಾಪ್ತಿಯಲ್ಲಿರುವ ರಸ್ತೆಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು ಮತ್ತು ಅವುಗಳ ನಿರ್ವಹಣೆ ಮತ್ತು ದುರಸ್ತಿಗೆ ಅಸಮರ್ಪಕತೆಗಳ ಬಗ್ಗೆ ವರದಿ ಮಾಡಬೇಕಿದೆ.
ಇಷ್ಟೇ ಅಲ್ಲದೆಯೆ ಕೇಬಲ್ಗಳು ಮತ್ತು ಕೊಳವೆಗಳನ್ನು ಹಾಕಲು ರಸ್ತೆಗಳನ್ನು ಅಗೆದ ಬಿಡಬ್ಲ್ಯೂಎಸ್ಎಸ್ಬಿ, ಕೆಪಿಟಿಸಿಎಲ್ ಮುಂತಾದ ಉಪಯುಕ್ತತೆಗಳಿಂದ ಅವರ ಕಾರ್ಯವಾದ ನಂತರ ರಸ್ತೆಯನ್ನು ಸರಿಯಾಗಿ ಮುಚ್ಚಿದ್ದಾರೆಯೆ ಎಂದು ಪರಿಶೀಲಿಸಬೇಕು. ಮತ್ತು ರಸ್ತೆ ಕೊರೆದ ಸಂಸ್ಥೆಗಳು ಪ್ರತೀ ತಿಂಗಳ ಅಂತ್ಯದೊಳಗೆ ಐದು ದಿನಗಳಲ್ಲಿ ವರದಿಯನ್ನು ಬಿಬಿಎಂಪಿ ಆಯುಕ್ತರಿಗೆ ಸಲ್ಲಿಸಬೇಕು ಎಂದು ಸಹ ಕೋರ್ಟ್ ಹೇಳಿದೆ.
ಭಾರತದಲ್ಲಿ ಕೇವಲ ರಸ್ತೆಯ ಮೇಲಿರುವ ಗುಂಡಿಗಳ ಕಾರಣದಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆಯನ್ನ ಪರಿಶೀಲಿಸಿದರೆ, ಕಳೆದ ವರ್ಷ ಭಾರತದಲ್ಲಿ ಸುಮಾರು 3,597 ಮಂದಿ ಜೀವ ಕಳೆದುಕೊಂಡಿದ್ದಾರೆ. ಅಂದ್ರೆ ದಿನಕ್ಕೆ ಸುಮಾರು 10 ಮಂದಿ ರಸ್ತೆಯಲ್ಲಿನ ಗುಂಡಿಯ ಕಾರಣದಿಂದಲೇ ಪ್ರಾಣ ಬಿಡುತ್ತಿದ್ದಾರೆ.
ಗುಂಡಿ ಇರುವ ರಸ್ತೆಗಳ ಕಾರಣದಿಂದಾಗಿ 2017ರಲ್ಲಿ ಮರಣ ಹೊಂದಿರುವ ಸಂಖ್ಯೆಯನ್ನು ಹೋಲಿಸಿದರೆ, 2018ರಲ್ಲಿ ಎರಡರಷ್ಟು ಅಧಿಕಗೊಂಡಿದೆ. ಮತ್ತೆ 2019ರಲ್ಲಿ ಈ ಸಂಖ್ಯೆಯು ಎಷ್ಟು ಇರುತ್ತೆ ಎಂದು ಊಹಿಸಲು ಅಸಾಧ್ಯ. ದೇಶವ್ಯಾಪ್ತಿಯಲ್ಲಿ ಬೀಳುತ್ತಿರುವ ಧಾರಕಾರ ಮಳೆಯಿಂದಾಗಿ ಈಗಾಗಲೇ ಹಲವರು ತಮ್ಮ ಪ್ರಾಣಕಳೆದುಕೊಂಡಿದ್ದಾರೆ.
ಗುಂಡಿಗಳಿರುವ ರಸ್ತೆಗಳ ಕಾರಣದಿಂದಾಗಿ ವರ್ಷಕ್ಕೆ ಸಾವಿರದ ಸಂಖ್ಯೆಯಲ್ಲಿ ಜನ ಸಾವನ್ನಪ್ಪುತ್ತಿರುವುದು ಅರಗಿಸಿಕೊಳ್ಳಲಾದ ಕಹಿ ಸತ್ಯ. ಇದಲ್ಲದೇ ಪ್ರಪಂಚದ ಅಂಕಿಅಂಶಗಳೊಂದಿಗೆ ಹೋಲಿಕೆ ಮಾಡಿದ್ರೆ ಗುಂಡಿಯಿರುವ ರಸ್ತೆಯ ಕಾರಣದಿಂದಾಗಿಯೇ ಜೀವ ಕಳೆದುಕೊಂಡವರ ಸಂಖ್ಯೆ ಅಧಿಕವಾಗಿಯೇ ಇದೆ ಎನ್ನಬಹುದು.
ಡ್ರೈನೇಜ್ ಸಿಸ್ಟಮ್, ರಸ್ತೆ ನಿರ್ಮಾಣದ ಗುಣಮಟ್ಟ, ಸರಿಯಾದ ವ್ಯವಸ್ಥೆ ಇಲ್ಲದೆಯೇ ರಸ್ತೆ ನಿರ್ಮಿಸಲಾಗುತ್ತಿರುವ ಕಾರಣದಿಂದಾಗಿ ರಹದಾರಿಗಳು ಕಳಪೆಯಾಗುತ್ತಿವೆ. ಇದರೊಂದಿಗೆ ಪ್ರತೀ ವರ್ಷ ಮಳೆಗಾಲವನ್ನು ಎದುರುಗೊಳ್ಳಲೂ ನಗರ ಪಾಲಿಕೆಯವರು ಮತ್ತು ನಗರ ಅಭಿವೃದ್ಧಿ ಇಲಾಖೆಯ ಅಧಿಕಾರುಗಳು ಸೋಲುತ್ತಲೇ ಇದ್ದಾರೆ.
Source: TOI