Just In
- 10 min ago ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- 1 hr ago ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
- 2 hrs ago ಅತ್ಯಾಧುನಿಕ ಅಡಾಸ್ನೊಂದಿಗೆ ಬರಲಿದೆ ಈ ಕಿಯಾ ಕಾರು: ಟಾಟಾ ಪಂಚ್ಗೆ ಇನ್ನು ದೇವರೇ ಗತಿ!
- 2 hrs ago ಸಾಯಿಬಾಬಾ ಭಕ್ತರಿಗೆ ಸಿಹಿಸುದ್ದಿ: ಇಲ್ಲಿಂದ ಶಿರಡಿಗೆ ಪಲ್ಲಕ್ಕಿ ಬಸ್.. ಕಡಿಮೆ ಖರ್ಚಿನಲ್ಲಿ ಹೋಗಬಹುದು!
Don't Miss!
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ದರ್ಶನ ಪ್ರಚಾರ ಮಾಡಿದ್ದು ಏಕೆ? ಇದಕ್ಕೂ ಸುಮಲತಾಗೂ ಸಂಬಂಧ ಇದೆಯಾ?
- Lifestyle ರಸ್ತೆ ಬದಿಯ ಮರಗಳಿಗೆ ಬಣ್ಣ ಏಕೆ ಬಳಿದಿರುತ್ತಾರೆ..? ಕೆವಿನ್ ಪೀಟರ್ಸನ್ಗೆ ಈ ಪ್ರಶ್ನೆ ಕಾಡಿದ್ದೇಕೆ..?
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Movies ಕನ್ನಡ ಚಿತ್ರರಂಗಕ್ಕೆ ಬಂದ ಕಾಲಿವುಡ್ನ ಕಿನ್ನರಿ ; ಡಾಲಿಯ 'ಉತ್ತರಕಾಂಡ'ಕ್ಕೆ ಇವರೇ ನಾಯಕಿ..?
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶೀಘ್ರವೇ ಬ್ಯಾನ್ ಆಗಲಿವೆ 150ಸಿಸಿಗಿಂತಲೂ ಕಡಿಮೆ ಸಾಮರ್ಥ್ಯದ ವಾಹನಗಳು
ದೇಶದಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರವು 10 ವರ್ಷಕ್ಕಿಂತಲೂ ಮೇಲ್ಪಟ್ಟ ಪೆಟ್ರೋಲ್ ಮತ್ತು 15 ವರ್ಷಕ್ಕಿಂತಲೂ ಮೇಲ್ಪಟ್ಟ ಡೀಸೆಲ್ ವಾಹನಗಳನ್ನು ಬ್ಯಾನ್ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದು, ಜೊತೆಗೆ ಬಿಎಸ್6 ಎಂಜಿನ್ ಆಧಾರಿತ ವಾಹನಗಳನ್ನು ಇನ್ಮುಂದೆ ತಯಾರಿ ಮಾಡಬೇಕು ಎಂಬ ಆದೇಶವನ್ನು ಎಲ್ಲಾ ವಾಹನ ತಯಾರಕ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.
ಬಿಎಸ್-6 ಜಾರಿಗೆ ತರುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರವು ಮತ್ತೊಂದು ಹೊಸ ರೂಲ್ಸ್ ಅನ್ನು ತರಲಾಗುತ್ತಿದ್ದು, ಈ ರೂಲ್ಸ್ ಬಂದಲ್ಲಿ ಸದ್ಯ ಮಾರಾಟವಾಗುತ್ತಿರುವ 150ಸಿಸಿಗಿಂತಲೂ ಕಡಿಮೆ ಸಾಮರ್ಥ್ಯವಿರುವ ವಾಹನಗಳು ಮಾರುಕಟ್ಟೆಯಿಂದ ದೂರ ಸರಿಯಲಿವೆ. ಹೌದು, ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಆಧಾರಿತ ವಾಹನಗಳಿಂದ ಉಂಟಾಗುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ಎಲೆಕ್ಟ್ರಿಕ್ ವಾಹನಗಳನ್ನು ಕಡ್ಡಾಯವಾಗಿ ಬಳಸಲೇಬೇಕು ಎಂಬ ಉದ್ದೇಶದಿಂದ ಶೀಘ್ರವೇ 150ಸಿಸಿ ಗಿಂತಲೂ ಕಡಿಮೆ ಸಾಮರ್ಥ್ಯದ ವಾಹನಗಳ ಮಾರಾಟವನ್ನು ಸ್ಥಗಿತಗೊಳಿಸಲು ಚಿಂತನೆ ನಡೆಸಲಾಗುತ್ತಿದೆ.
ಈ ಹೊಸ ನಿಯಮವು ಜಾರಿಗೊಳ್ಳಲು ಇನ್ನು ಸುಮಾರು 6 ವರ್ಷಗಳ ಕಾಲಾವಕಾಶವಿದ್ದು, 2023ರಿಂದಲೇ ದೇಶದಲ್ಲಿ ಕೇವಲ ಎಲೆಕ್ಟ್ರಿಕ್ ಆಟೋ ರಿಕ್ಷಾಗಳು ಮತ್ತು 2025ರಿಂದ 150ಸಿಸಿ ಗಿಂತಲು ಕಡಿಮೆ ಸಾಮರ್ಥ್ಯದ ಸ್ಕೂಟರ್ ಮತ್ತು ಬೈಕ್ಗಳ ಸ್ಥಾನದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಕಡ್ಡಾಯವಾಗಲಿವೆ.
ಹೊಸ ನಿಯಮಾವಳಿಗಳು ಹೇಳುವ ಹಾಗೆ ನೀಡಲಾದ ಗಡುವಿನೊಳಗೆ ಯಾವ ವಾಹನಗಳು ಮಾರಾಟವಾಗುತ್ತಿರುತ್ತದೆಯೊ ಅವುಗಳನ್ನು ಹಾಗೆಯೇ ಇರಿಲಿ, ಗಡುವಿನ ನಂತರ ಯಾವ ವಾಹನಗಳು ಮಾರಾಟವಾಗುತ್ತದೆಯೊ ಅವುಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಒಟ್ಟಿನಲ್ಲಿ ಈ ಮಹತ್ವದ ನಿರ್ಧಾರವು ಜಾರಿಗೆ ಬಂದಲ್ಲಿ ದೇಶಿಯ ಆಟೋಮೊಬೈಲ್ ಕ್ಷೇತ್ರದಲ್ಲಿ ಭಾರೀ ಬದಲಾವಣೆಯಾಗಲಿದೆ.
ಹೊಸ ಯೋಜನೆಯ ಹಿಂದಿನ ಕಾರಣ.?
ವರ್ಷಕ್ಕೆ ಸುಮಾರು 2 ಕೋಟಿಗೂ ಅಧಿಕವಾಗಿ ದ್ವಿಚಕ್ರ ಮತ್ತು ಆಟೋ ರಿಕ್ಷಾಗಳು ಮಾರಾಟವಾಗುತ್ತಿರುವ ಕಾರಣ ಅವುಗಳಿಂದಾಗಿ ಉಂಟಾಗುತ್ತಿರುವ ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಇರುವ ಏಕೈಕ ಮಾರ್ಗ ಎಂದರೆ ಅದು ಎಲೆಕ್ಟ್ರಿಕ್ ವಾಹನಗಳಾನ್ನು ಬಳಸುವುದು. ಇದರಿಂದ ಬಹುತೇಕವಾಗಿ ರಸ್ತೆಗಳ ಮೇಲೆ ಕೇವಲ ಎಲೆಕ್ಟ್ರಿಕ್ ವಾಹನಗಳೇ ಸಂಚರಿಸಬೇಕೆಂಬುದು ಇದರ ಹಿಂದಿನ ಕಾರಣ.
ಶಾಲಾ ವಾಹನ ಮತ್ತು ಸಿಟಿ ಬಸ್ಗಳ ಮೇಲೆಯು ಬೀರಲಿದೆ ಪ್ರಭಾವ
ಹೌದು, ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ನೇತೃತ್ವದಲ್ಲಿ ನಡೆದ ಅಂತರ್-ಮಂತ್ರಿಮಂಡಲದ ಸ್ಟೀರಿಂಗ್ ಸಮಿತಿಯು ಡೆಲಿವರಿ ವಾಹನಗಳು, ಶಾಲಾ ವಾಹನಗಳು ಮತ್ತು ನಗರದಲ್ಲಿ ಸಂಚರಿಸುವ ಬಸ್ಗಳ ಮೇಲೆಯೂ ಸಹ ಈ ಗಡುವನ್ನು ಸ್ಥಾಪಿಸಲು ಸಾಧ್ಯವಿದ್ದು, ಈ ನಿರ್ಧಾರವು ಆಟೋಮೊಬೈಲ್ ಉದ್ಯಮದಲ್ಲಿ ಅಸಮಾಧಾನ ವಾತಾವರಣವನ್ನು ಉಂಟು ಮಾಡಬಹುದಾಗಿದೆ.
ಸಮಿತಿಯು ಎಲೆಕ್ಟ್ರಿಕ್ ಆಟೋ ರಿಕ್ಷಾಗಳ ಖರೀದಿಯ ಮೇಲೆ ಸುಮಾರು ರೂ. 20,000 ಕಿಲೋ ವ್ಯಾಟ್ ಸಬ್ಸಿಡಿಯನ್ನು ನೀಡಲಿದ್ದು, ಆಟೋ ಚಾಲಕರಿಗೆ ಹಣ ಹೂಡಿಕೆಯ ಭಾರವನ್ನು ಕಡಿಮೆ ಮಾಡಲಿದೆ. ಹಾಗೆಯೇ ಇವುಗಳ ಜೊತೆಗೆ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಕಠಿಣವಾದ ಇಂಧನ ದಕ್ಷತೆಯ ನಿಯಮಗಳನ್ನು ಶಿಫಾರಸು ಮಾಡುವ ಮೂಲಕ ಸರ್ಕಾರವು ವಿದ್ಯುತ್ ವಿಭಾಗಕ್ಕೆ ಆರ್ಥಿಕ ಮತ್ತು ರಿಯಾಯಿತಿಯನ್ನು ನೀಡಲಿದೆ.
2030 ರ ಹೊತ್ತಿಗೆ ಎಲ್ಲಾ ಹೊಸ ಕಾರುಗಳು ಮತ್ತು ಯುಟಿಲಿಟಿ ವಾಹನಗಳನ್ನು ವಿದ್ಯುಜ್ಜನಕಗೊಳಿಸಲು 2017 ರಲ್ಲಿ ಪ್ರಧಾನಿ ಮೋದಿ ಸರಕಾರ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದ್ದರು. ಆದರೆ ಆಟೋಮೊಬೈಲ್ ಉದ್ಯಮದಿಂದ ಪ್ರತಿರೋಧವನ್ನು ನೀಡಿದ ಕಾರಣ ಇದೀಗ ಮತೊಮ್ಮೆ ಯೋಜನೆಯನ್ನು ಮರಳಿ ತರಲು ಒತ್ತಾಯಿಸಲಾಗುತ್ತಿದೆ. ಐದು ವರ್ಷಗಳಲ್ಲಿ ವಿದ್ಯುತ್ ವಾಹನಗಳ ಮಾರಾಟಗಳಲ್ಲಿ ಶೇ.15 ಪ್ರತಿ ಶತದಷ್ಟು ಮಾಡಲು ಸರಕಾರ ನಿರೀಕ್ಷಿಸಿದೆ.
ಆಟೋಮೊಬೈಲ್ ಉದ್ಯಮದ ಮೇಲೆ ಅಧಿಕವಾಗಲಿದೆ ಒತ್ತಡ..!
ಪೆಟ್ರೋಲ್ ಆಧಾರಿತ ದ್ವಿಚಕ್ರ ವಾಹನಗಳ ಮೇಲಿನ ನಿಷೇಧವು ದ್ವಿಚಕ್ರ ವಾಹನಗಳ ತಯಾರಕರ ಮೇಲೆ ಹೆಚ್ಚು ಬಂಡವಾಳ ಮತ್ತು ಹೆಚ್ಚಿನ ಮಟ್ಟದಲ್ಲಿನ ಹೂಡಿಕೆ ಮಾಡಲು ತಳ್ಳುತ್ತದೆ. ಎಲೆಕ್ಟ್ರಿಕ್ ವಾಹನಗಳ ಮಾರಾಟವು ಅಧಿಕವಾಗಲು ಸರ್ಕಾರವು ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಎಲೆಕ್ಟ್ರಿಕ್ ಬೈಕ್ಗಳ ಖರೀದಿಯ ಮೇಲೆ ಅಧಿಕವಾದ ಸಬ್ಸಿಡಿಯನ್ನು ನೀಡಲು ಯೋಜನೆ ಮಾಡಲಾಗಿದೆ.
ಹಾಗೆಯೇ ವಿದ್ಯುತ್ ವಾಹನ ಖರೀದಿದಾರರಿಗೆ ಸಬ್ಸಿಡಿಯನ್ನು ನೀಡುವ ಸಲುವಾಗಿ ಪೆಟ್ರೋಲ್ ಸ್ಕೂಟರ್ ಮತ್ತು ಮೋಟಾರು ಸೈಕಲ್ನ ಖರೀದಿದಾರರಿಗೆ ಹೆಚ್ಚುವರಿ ತೆರಿಗೆ ವಿಧಿಸಲಾಗುತ್ತದೆ. ಒಟ್ಟಿನಲ್ಲಿ ಶೀಘ್ರವೇ ಜಾರಿಯಾಗುವ ಈ ನಿಯಮಾವಳಿಯು ಪರಿಸರ ಪ್ರೆಮಿಗಳಿಗೆ ಸಂತಸ ತಂದರೂ ಸಹ, ಮಧ್ಯಮ ವರ್ಗದ ಗ್ರಾಹಕರಿಗೆ ಮತ್ತು ವಾಹನ ತಯಾರಕ ಸಂಸ್ಥೆಗಳ ಮೇಳೆ ಒತ್ತಡ ಜಾಸ್ತಿಯಾಗಲಿದೆ ಎಂದು ಹೇಳಬಹುದು.
Source: Times Of India