Just In
- 1 hr ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 1 hr ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- 2 hrs ago ಹ್ಯುಂಡೈನ ಈ ಕಾರಿಗೆ ಭಾರತದಲ್ಲಿ ಭರ್ಜರಿ ಡಿಸ್ಕೌಂಟ್: ಇದಕ್ಕಿಂತ ಉತ್ತಮ ಆಫರ್ ಸದ್ಯಕ್ಕಿಲ್ಲ!
- 2 hrs ago ರೈತರ ವಿಶ್ವಾಸದೊಂದಿಗೆ 40 ಲಕ್ಷ ಟ್ರ್ಯಾಕ್ಟರ್ ಮಾರಾಟ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ
Don't Miss!
- Sports Rishabh Pant: ಟಿ20 ವಿಶ್ವಕಪ್ಗೆ ರಿಷಭ್ ಪಂತ್ ಭಾರತ ತಂಡದಲ್ಲಿರಬೇಕು
- News ಬಿಸಿಲಿನ ಶಾಖಕ್ಕೆ ಬೇಸತ್ತು ಎಸಿ ಹೆಲ್ಮೆಟ್ ಮೊರೆಹೋದ ಟ್ರಾಫಿಕ್ ಪೊಲೀಸರು-ಎಲ್ಲಿ?
- Movies 3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಸಂಚಾರಿ ನಿಯಮ ಜಾರಿ ವಿಚಾರದಲ್ಲಿ ಗೋವಾ ಸರ್ಕಾರದ ನಡೆಯನ್ನೇ ಮೆಚ್ಚಲೇಬೇಕು..!
ದೇಶಾದ್ಯಂತ ಹೊಸ ಸಂಚಾರಿ ನಿಯಮದಡಿ ತಪ್ಪು ಮಾಡುವ ವಾಹನ ಸವಾರರಿಂದ ಭಾರೀ ಪ್ರಮಾಣದ ದಂಡವನ್ನು ವಸೂಲಿ ಮಾಡಲಾಗುತ್ತಿದ್ದು, ಪಕ್ಕದ ರಾಜ್ಯ ಗೋವಾ ಮಾತ್ರ ಇದುವರೆಗೂ ಹೊಸ ಸಂಚಾರಿ ನಿಯಮವನ್ನು ಜಾರಿತರಲಾಗಿಲ್ಲ. ಆದರೆ ಹೊಸ ನಿಯಮ ಜಾರಿಗೂ ಮುನ್ನು ಗೋವಾ ಸರ್ಕಾರ ಪ್ರಕಟಿಸಿರುವ ನಿರ್ಧಾರವನ್ನು ಮಾತ್ರ ನಾವು ಮೆಚ್ಚಲೇಬೇಕು.
ಹೌದು, ಕೇಂದ್ರ ಸರ್ಕಾರದ ಹೊಸ ಸಂಚಾರಿ ನಿಯಮದಂತೆ ದೇಶದ್ಯಾಂತ ಬಹುತೇಕ ರಾಜ್ಯಗಳು ಭಾರೀ ಪ್ರಮಾಣದ ದಂಡ ವಸೂಲಿ ಮಾಡುತ್ತಿದ್ದು, ಇನ್ನು ಕೆಲವು ರಾಜ್ಯಗಳನ್ನು ಹೊಸ ಸಂಚಾರಿ ನಿಯಮ ಜಾರಿಗೆ ಹಿಂದೇಟು ಹಾಕುತ್ತಿವೆ. ಗೋವಾ ಮತ್ತು ಪಶ್ಚಿಮ ಬಂಗಾಳ ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳನ್ನು ಹೊಸ ಸಂಚಾರಿ ನಿಯಮ ಜಾರಿಗೆ ಬಂದಿದ್ದು, ಪಶ್ಚಿಮ ಬಂಗಾಳ ಸರ್ಕಾರದ ನಡೆ ರಾಜಕೀಯವಾಗಿ ಕಂಡರೂ ಸಹ ಗೋವಾ ಸರ್ಕಾರದ ನಿರ್ಧಾರದಲ್ಲಿ ಒಂದು ಅರ್ಥವಿದೆ ಅನ್ನಿಸದೆ ಇರಲಾರದು.
ಹೊಸ ಸಂಚಾರಿ ನಿಯಮ ಜಾರಿಗೂ ಮುನ್ನು ರಸ್ತೆಗಳ ಸುಧಾರಣೆ ಮಾಡುವ ಅವಶ್ಯಕತೆಯಿದೆ ಎಂದಿರುವ ಗೋವಾ ಸರ್ಕಾರವು ಕೆಟ್ಟ ರಸ್ತೆಗಳನ್ನು ಸುಧಾರಣೆ ಮಾಡಿದ ತನಂತರವೇ ಹೊಸ ನಿಯಮದಂತೆ ದಂಡವಿಧಿಸಲಾಗುವುದು ಎಂದು ತಿಳಿಸಿದೆ.
ಇನ್ನು ಹೊಸ ನಿಯಮ ಜಾರಿ ವಿಚಾರವಾಗಿ ಭಾರೀ ಪರ-ವಿರೋಧ ವ್ಯಕ್ತವಾಗುತ್ತಿದ್ದಂತೆ ಹೊಸ ದಂಡಗಳ ಮೊತ್ತದಲ್ಲಿ ವಿನಾಯ್ತಿ ನೀಡಲು ಮುಂದಾಗಿರುವ ರಾಜ್ಯ ಸರ್ಕಾರಗಳು ಶೇ.50 ರಷ್ಟು ಕಡಿತಗೊಳಿಸುವ ಮುನ್ಸೂಚನೆ ನೀಡಿವೆ.
ಗುಜರಾತ್ ಸರ್ಕಾರವು ಈಗಾಗಲೇ ಅಧಿಕೃತವಾಗಿಯೇ ಹೊಸ ದಂಡಗಳ ಮೊತ್ತದಲ್ಲಿ ಶೇ.50ರಷ್ಟು ಇಳಿಕೆ ಮಾಡಿ ಆದೇಶ ಹೊರಡಿಸಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಗುಜರಾತ್ ಮಾದರಿಯಲ್ಲಿ ದಂಡ ಇಳಿಕೆ ಸೂಚಿಸಲಾಗಿದೆ ಎಂದಿದ್ದಾರೆ. ಹೀಗಾಗಿ ಹೊಸ ದಂಡದ ಪರಿಷ್ಕರಣೆಗೆ ಬಗ್ಗೆ ಅಧಿಕೃತ ಘೋಷಣೆ ಮಾತ್ರವೇ ಬಾಕಿಯಿದ್ದು, ಗುಜರಾತ್ ಸರ್ಕಾರದ ಆದೇಶದಂತೆ ದಂಡಗಳಲ್ಲಿ ಮಾರ್ಪಾಡು ಮಾಡಲಾಗುತ್ತಿದೆ.
ದಂಡ ಕಟ್ಟುವ ಮುನ್ನ ಇತ್ತ ಗಮನಿಸಿ..!
ಈ ಹಿಂದೆ ಇದ್ದ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ದಂಡದ ಮೊತ್ತವು ರೂ. 100 ರಿಂದ ಇದೀಗ ಹತ್ತು ಸಾವಿರಕ್ಕೆ ಏರಿಕೆಯಾಗಿದ್ದು, ಕೆಲವು ವಾಹನ ಮಾಲೀಕರಿಗೆ ವಾಹನದ ಬೆಲೆಗಿಂತ ದಂಡದ ಮೊತ್ತವೇ ಹೊರೆಯಾಗಿದೆ. ಆದ್ರೆ ನೀವು ಹೊಸ ಸಂಚಾರಿ ನಿಯಮ ಉಲ್ಲಂಘನೆಯ ಹೊರತಾಗಿಯೂ ದುಬಾರಿ ದಂಡದಿಂದ ತಪ್ಪಿಸಿಕೊಳ್ಳಲು ಒಂದು ಅವಕಾಶವಿದೆ. ಹಾಗಂತ ಇದು ಎಲ್ಲಾ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿಗೂ ಅನ್ವಯವಾಗುವುದಿಲ್ಲ.
ಕೆಲವೊಮ್ಮೆ ವಾಹನ ಮಾಲೀಕರು ಪ್ರಯಾಣದ ವೇಳೆ ವಾಹನಗಳ ಮೂಲ ದಾಖಲೆಗಳನ್ನು ಕೊಂಡೊಯ್ಯುವುದನ್ನ ಮರೆತುಬಿಡಬಹುದು. ಈ ವೇಳೆ ಒಂದು ಸಣ್ಣ ತಪ್ಪಿನಿಂದಾಗಿ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ದು ಸಾವಿರಾರು ದಂಡ ಪಾವತಿಸುವ ಪರಿಸ್ಥಿತಿ ಎದುರಾಗಬಹುದು.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?
ಆದ್ರೆ ನೀವು ವಾಹನ ಚಾಲನೆ ವೇಳೆ ಮೂಲ ಪ್ರತಿ ತಂದಿಲ್ಲ ಎಂಬ ಕಾರಣಕ್ಕೆ ಹೆದರಬೇಕಿಲ್ಲ. ಹೌದು, ಒಂದು ವೇಳೆ ನಿಮ್ಮ ಬಳಿ ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಹೊಂದಿದ್ದು, ಅವುಗಳನ್ನು ಪ್ರಯಾಣದ ವೇಳೆ ತೆಗೆದುಕೊಂಡ ಬಂದಿಲ್ಲ ಎಂಬ ಕಾರಣಕ್ಕೆ ಸಾವಿರಾರು ರೂಪಾಯಿ ದಂಡಕಟ್ಟಬೇಕಿಲ್ಲ.
MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!
ಟ್ರಾಫಿಕ್ ಪೊಲೀಸರ ತಪಾಸಣೆ ವೇಳೆ ವಾಹನಕ್ಕೆ ಸಂಬಂಧಿಸಿದ ದಾಖಲೆಗಳು ಇಲ್ಲವಾದಲ್ಲಿ ಸಾವಿರಾರು ರೂಪಾಯಿ ದಂಡದ ಬದಲಾಗಿ ರೂ.100 ಚಲನ್ ಪಡೆದುಕೊಂಡು 15 ದಿನದೊಳಗಾಗಿ ಕೋರ್ಟ್ಗೆ ಮೂಲಪ್ರತಿಗಳನ್ನು ಸಲ್ಲಿಸುವ ಅವಕಾಶವಿದ್ದು, ಯಾವುದೇ ಕಾರಣಕ್ಕೂ ಭಯಕ್ಕೆ ಬಿದ್ದು ದಂಡ ಪಾವತಿ ಮಾಡುವುದಾಗಲಿ ಅಥವಾ ಲಂಚ ನೀಡಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಬೇಡಿ.
ನಿಮ್ಮ ಬಳಿ ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಸರಿಯಾಗಿದ್ದು, ಒಂದು ವೇಳೆ ಮನೆಯಲ್ಲಿ ಅಥವಾ ಕಚೇರಿಗಳಲ್ಲಿ ಮರೆತುಬಿಟ್ಟುಬಂದಾಗ ಮಾತ್ರವೇ ಈ ಅವಕಾಶವು ನಿಮ್ಮ ಸಹಾಯಕ್ಕೆ ಬರಲಿದೆ. ಕೇವಲ ರೂ.100 ದಂಡದೊಂದಿಗೆ ಕೋರ್ಟ್ಗೆ ಮೂಲಪ್ರತಿಗಳನ್ನು ಸಲ್ಲಿಕೆ ಮಾಡಿದಾಗ ಮಾತ್ರವೇ ಭಾರೀ ದಂಡದಿಂದ ಪಾರಾಗಬಹುದು.
ಕೆಲವೊಮ್ಮೆ ಅವಸರದಲ್ಲಿ ಡ್ರೈವಿಂಗ್ ಲೆಸೆನ್ಸ್, ವಾಹನದ ಆರ್ಸಿ, ಮಾಲಿನ್ಯ ತಪಸಣಾ ಪತ್ರ ಅಥವಾ ವಿಮಾ ದಾಖಲೆಗಳನ್ನು ಮರೆತುಬಿಟ್ಟು ಪ್ರಯಾಣ ಮಾಡುವ ಸಂದರ್ಭದಲ್ಲಿ ಇದು ಸಹಾಯಕ್ಕೆ ಬರಲಿದ್ದು, ಇನ್ನುಳಿದ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಇದು ಯಾವುದೇ ಕಾರಣಕ್ಕೂ ಅನ್ವಯವಾಗುದಿಲ್ಲ.
ಹೆಲ್ಮೆಟ್ ರಹಿತ ಪ್ರಯಾಣ, ಸೀಟ್ ಬೆಲ್ಟ್ ಇಲ್ಲದೇ ಕಾರು ಚಾಲನೆ, ತ್ರಿಬಲ್ ರೈಡಿಂಗ್, ರಾಂಗ್ ಸೈಡ್ ಪಾರ್ಕಿಂಗ್, ಡ್ರಂಕ್ ಅಂಡ್ ಡ್ರೈವ್, ಸಿಗ್ನಲ್ ಜಂಪ್, ಓವರ್ ಲೋಡ್ ಕ್ಯಾರಿ ಪ್ರಕರಣಗಳಿಗೆ ಸ್ಥಳದಲ್ಲೇ ದಂಡವಸೂಲಿ ಮಾಡಲಿದ್ದು, ವಾಹನ ದಾಖಲೆಗಳನ್ನು ಮರೆತುಬರುವ ಮಾಲೀಕರಿಗೆ ಮಾತ್ರ ದಂಡದಿಂದ ಬಚಾವ್ ಆಗುವ ಒಂದು ಅವಕಾಶ ನೀಡಲಾಗಿದೆ.
ಹಾಗಂತ ಪೊಲೀಸ್ ತಪಾಸಣೆ ವೇಳೆ ಎಲ್ಲಾ ದಾಖಲೆಗಳು ಇವೆ ಎಂದು ತಾತ್ಕಲಿಕವಾಗಿ ಚಲನ್ ಪಡೆದು ತಪ್ಪಿಸಿಕೊಂಡರು ಸಹ ಕೊನೆ ಗಳಿಗೆಯಲ್ಲಿ ದಾಖಲೆಗಳನ್ನು ಸಲ್ಲಿಸಲು ವಿಫಲವಾದಲ್ಲಿ ಕೋರ್ಟ್ ಯಾವುದೇ ಕಾರಣಕ್ಕೂ ನಿಮ್ಮನ್ನು ಬಿಡುವುದಿಲ್ಲ.
ಇದರಿಂದ ಯಾವ ವಾಹನ ಮಾಲೀಕರು ಸರಿಯಾದ ದಾಖಲೆಗಳನ್ನು ಹೊಂದಿರುತ್ತಾನೋ ಅಂತವರಿಗೆ ಮಾತ್ರವೇ ಈ ಅವಕಾಶ ನೆರವಿಗೆ ಬರಲಿದ್ದು, ಅಪಘಾತಕ್ಕೆ ಕಾರಣವಾಗಬಲ್ಲ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಯಾವುದೇ ಕಾರಣಕ್ಕೂ ಇಂತಹ ಅವಕಾಶ ನೀಡುವುದಿಲ್ಲ ಎಂಬುವುದು ನೆನಪಿರಲಿ.