Just In
- 1 hr ago Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- 1 hr ago ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- 2 hrs ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 3 hrs ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
Don't Miss!
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Movies ''ಹೆಣ್ಮಕ್ಕಳು ಎಲ್ಲೆಲ್ಲೋ ಹೋದರು'' ಎಂದ ಶ್ರುತಿಗೆ ಮಹಿಳಾ ಆಯೋಗ ನೋಟಿಸ್ ; 07 ದಿನದ ಗಡುವು..!
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇನ್ಮುಂದೆ ವಾಹನ್ ವೆಬ್ಸೈಟ್ನಿಂದ ಮರೆಯಾಗಲಿವೆ ಈ ಮಾಹಿತಿಗಳು..!
ಕೇಂದ್ರದ ಸಾರಿಗೆ ಇಲಾಖೆಯು ವಾಹನ ಮಾಲೀಕರ ಹೆಸರನ್ನು ತನ್ನ ವಾಹನ್ ಡೇಟಾಬೇಸ್ನಿಂದ ಮರೆಮಾಡಲು ಮುಂದಾಗಿದೆ. ಡೇಟಾಬೇಸ್ ದುರುಪಯೋಗವಾಗದಂತೆ ತಡೆಯಲು ಹಾಗೂ ಜನರ ಖಾಸಗಿ ಹಕ್ಕುಗಳನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದೆ.
ಸದ್ಯಕ್ಕೆ ದೆಹಲಿಯಲ್ಲಿ ಹಿಂಸಾಚಾರವು ಭುಗಿಲೆದ್ದಿದೆ. ಕೆಲವು ವರದಿಗಳ ಪ್ರಕಾರ ವಾಹನ್ ಡೇಟಾಬೇಸ್ನಿಂದ ಮಾಹಿತಿಯನ್ನು ಪಡೆದು, ವಾಹನ ಮಾಲೀಕರ ವಿರುದ್ಧ ದಾಳಿ ನಡೆಸಲಾಗಿದೆ. ಈ ಕಾರಣಕ್ಕೆ ಸಾರಿಗೆ ಇಲಾಖೆಯು ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.
ದೆಹಲಿ ಮೂಲದ ಇಂಟರ್ನೆಟ್ ಫ್ರೀಡಂ ಫೌಂಡೇಷನ್ ಆದ ಡಿಜಿಟಲ್ ರೈಟ್ಸ್ ಅಡ್ವೊಕೆಸಿ ಗ್ರೂಪ್ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿರವರನ್ನು ಭೇಟಿಯಾಗಿ ವಾಹನ್ ಡೇಟಾಬೇಸ್ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ದೂರು ಸಲ್ಲಿಸಿದೆ.
ಈ ಗ್ರೂಪ್ ವಾಹನ್ ಹಾಗೂ ಸಾರಥಿ ವೆಬ್ಸೈಟ್ಗಳಲ್ಲಿರುವ ಮಾಹಿತಿಯನ್ನು ಸಾರ್ವಜನಿಕರು ಪಡೆಯದಂತೆ ತಡೆಯಬೇಕೆಂದು ಸಹ ಮನವಿಯನ್ನು ಸಲ್ಲಿಸಿತ್ತು. ಈ ಸಂಬಂಧ ಸಾರಿಗೆ ಇಲಾಖೆಗೆ ಇಂಟರ್ನೆಟ್ ಫ್ರೀಡಂ ಫೌಂಡೇಶನ್ನ ಪಾಲಿಸಿ ಹಾಗೂ ಪಾರ್ಲಿಮೆಂಟರಿ ಸಲಹೆಗಾರರಾದ ಸಿದ್ಧಾರ್ಥ್ ದೇಬ್ ಪತ್ರ ಬರೆದಿದ್ದಾರೆ.
ಈ ರೀತಿಯ ಹಿಂಸಾಚಾರಗಳು ಸಾರ್ವಜನಿಕವಾಗಿ ವಾಹನಕ್ಕೆ ಸಂಬಂಧಪಟ್ಟ ಡೇಟಾವನ್ನು ಪ್ರಕಟಿಸುವುದರಿಂದ ಸಂಭವಿಸಿವೆ. ಯಾವುದೇ ವ್ಯಕ್ತಿಯ ಒಪ್ಪಿಗೆಯಿಲ್ಲದೆ ಆತನಿಗೆ ಸಂಬಂಧಪಟ್ಟ ಮಾಹಿತಿಯನ್ನು ಈ ರೀತಿ ಸಾರ್ವಜನಿಕವಾಗಿ ಪ್ರಕಟಿಸುವುದು ಸರಿಯಲ್ಲ.
ಸಾರ್ವಜನಿಕವಾಗಿ ವಾಹನ ಮಾಲೀಕರ ಮಾಹಿತಿಯನ್ನು ನೀಡುವುದರಿಂದ ವ್ಯಕ್ತಿಗಳ ಸುರಕ್ಷತೆಗೆ ಅಪಾಯ ಉಂಟಾಗಲಿದೆ ಎಂಬುದಕ್ಕೆ ದೆಹಲಿಯ ಈ ಘಟನೆಯೇ ಸಾಕ್ಷಿ ಎಂಬುದಾಗಿ ಈ ಪತ್ರದಲ್ಲಿ ಹೇಳಲಾಗಿದೆ.
ಹೆಸರು ಹೇಳಲು ಬಯಸದ ಸಾರಿಗೆ ಇಲಾಖೆಯೆ ಅಧಿಕಾರಿಯೊಬ್ಬರು, ವಾಹನಗಳ ಗುರುತನ್ನು ರಕ್ಷಿಸುವ ಸಲುವಾಗಿ ವಾಹನ ಮಾಲೀಕರ ಹೆಸರಿನ ಕೆಲವು ಅಕ್ಷರಗಳನ್ನು ಮರೆಮಾಡಲು ಇಲಾಖೆಯು ಬಯಸಿದೆ ಎಂದು ಹೇಳಿದರು. ಸರ್ಕಾರವು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ದೆಹಲಿಯ ಹಿಂಸಾಚಾರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಆ ಅಧಿಕಾರಿ ಹೇಳಿದರು.
ವಾಹನ್ ಡೇಟಾಬೇಸ್ ದುರುಪಯೋಗವಾಗುತ್ತಿರುವ ಬಗ್ಗೆ ಆತಂಕಗಳಿದ್ದರೂ, ಸಾರ್ವಜನಿಕರು ಈ ವೆಬ್ಸೈಟ್ನಲ್ಲಿ ವಾಹನ ಮಾಲೀಕರ ವೈಯಕ್ತಿಕ ಮಾಹಿತಿಯನ್ನು ಪಡೆಯಲು ಸಾಧ್ಯವಿಲ್ಲವೆಂದು ಅಧಿಕಾರಿಗಳು ಹೇಳುತ್ತಾರೆ.
ಇನ್ನು ಮುಂದೆ ವಾಹನದ ಮಾಲೀಕರ ಹೆಸರು, ವಾಹನದ ಮಾದರಿ ಹಾಗೂ ಅದರ ಬಣ್ಣದ ಬಗೆಗಿನ ಮಾಹಿತಿಯನ್ನು ಮಾತ್ರ ಪಡೆಯಬಹುದಾಗಿದೆ. ಆದರೆ, ವಾಹನ ಮಾಲೀಕರ ವೈಯಕ್ತಿಕ ಮಾಹಿತಿಯನ್ನು ದೇಶಾದ್ಯಂತವಿರುವ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಸಾರಿಗೆ ಇಲಾಖೆಯ ಬಳಿಯಿರುವ ವೆಹಿಕಲ್ ರಿಜಿಸ್ಟ್ರೇಷನ್ ಸರ್ಟಿಫಿಕೇಟ್, ಡ್ರೈವರ್ ಲೈಸೆನ್ಸ್ ಡೇಟಾ ಮುಂತಾದವುಗಳನ್ನು ಆಟೋ ಮೊಬೈಲ್ ಉದ್ಯಮ, ಬ್ಯಾಂಕ್ ಹಾಗೂ ಹಣಕಾಸು ಕಂಪನಿಗಳಿಗೆ ನಿರ್ದಿಷ್ಟ ದರದಲ್ಲಿ ಮಾರಾಟ ಮಾಡಲಾಗುತ್ತದೆ.
ಈ ಮಾಹಿತಿಯನ್ನು ಹಂಚಿಕೊಳ್ಳುವುದರಿಂದ ಸಾರಿಗೆ ಹಾಗೂ ಆಟೋಮೊಬೈಲ್ ಉದ್ಯಮಕ್ಕೆ ಸಹಕಾರಿಯಾಗಲಿದೆ. ಇದರಿಂದಾಗಿ ಸೇವೆಯು ಸುಧಾರಿಸಲಿದ್ದು ನಾಗರಿಕರಿಗೆ ಹಾಗೂ ಸರ್ಕಾರಕ್ಕೆ ಹಲವು ಪ್ರಯೋಜನಗಳಾಗಲಿವೆ ಎಂಬುದು ಸಾರಿಗೆ ಇಲಾಖೆಯ ನೀತಿಯಾಗಿದೆ.