Just In
- 41 min ago ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- 1 hr ago ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- 1 hr ago 'ಬಾಹುಬಲಿ' ಎಸ್ಯುವಿ ಪರಾಕ್ರಮ: ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ವಿಶೇಷತೆಗಳೇನು?
- 1 hr ago Honda: ಭಾರತ ನಿರ್ಮಿಸಿದ ಹೋಂಡಾ ಕಾರಿಗೆ ಮುಗಿಬಿದ್ದ ಜಪಾನ್ ಜನ!
Don't Miss!
- News ಮತದಾನಕ್ಕೆ ಕೌಂಟ್ಡೌನ್: ಚಾಮರಾಜನಗರ ಲೋಕಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿ ಸಿದ್ಧತೆ ಹೇಗಿದೆ?-ಮಾಹಿತಿ
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Lifestyle ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಳೆಗಾಲದಲ್ಲಿ ನಿಮ್ಮ ಕಾರು ಸುರಕ್ಷತೆಗಾಗಿ ಪ್ರಮುಖ ಸಲಹೆಗಳು
ಮಳೆಗಾಲ ಬಂತೆಂದರೆ ಸಾಕು ಅದೇನು ಒಂಥರ ಖುಷಿ, ಮಳೆಗಾಲದಲ್ಲಿ ಒಂದು ಜಾಲಿ ರೈಡ್ ಹೋಗಲು ಪ್ರತಿಯೊಬ್ಬರಿಗೂ ಬಯಸುತ್ತಾರೆ. ಅಲ್ಲದೇ ಮಳೆಗಾಲದಲ್ಲಿ ನಾವು ದಿನನಿತ್ಯ ಕಾರುಗಳಲ್ಲಿ ಪ್ರಯಾಣ ಮಾಡುವಾಗಲೂ ಕೂಡ ನಾವು ತುಂಬ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಮಳೆ ಬಂದರೆ ಸಾಕು ಕೆಲವು ರಸ್ತೆಗಳು ಕಾಲುವೆಗಳ ರೀತಿಯಲ್ಲಿ ನೀರು ಹರಿಯುತ್ತದೆ. ಇನ್ನು ಕೆಲವು ರಸ್ತೆಗಳು ಕೆಸರು ತುಂಬಿ ವಾಹನ ಸವಾರರು ಮುಂದೆ ಸಾಗಲು ಹರಸಾಹಸ ಪಡಬೇಕಾಗುತ್ತದೆ. ಮಳೆಗಾಲದಲ್ಲಿ ಡ್ರೈವ್ ಮಾಡುವುದು ಒಂದು ಸವಾಲಾಗಿದೆ, ಮಳೆಗಾಲದಲ್ಲಿ ಡ್ರೈವ್ ಮಾಡುವಾಗ ನಾವು ತುಂಭಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅದರಲ್ಲೂ ಮಳೆನಾಡು ರೀತಿಯ ಪ್ರದೇಶಗಳಲ್ಲಿ ಡ್ರೈವ್ ಮಾಡುವಾಗ ತುಂಬಾ ಮುನ್ನಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಮಳೆಗಾಲದಲ್ಲಿ ಕಾರು ಚಾಲಕರಿಗೆ ಪ್ರಮುಖದ ಕೆಲವು ಟಿಪ್ಸ್ ಗಳನ್ನು ನಾವು ಇಲ್ಲಿ ನೀಡುತ್ತೇವೆ.
ನೀರು ನಿಂತಿರುವ ಪ್ರದೇಶದಲ್ಲಿ ಎಂಜಿನ್ ಸ್ಟಾರ್ಟ್ ಮಾಡಬೇಡಿ
ಮಳೆಗಾಲದಲ್ಲಿ ಎಲ್ಲಾ ರಸ್ತೆಗಳು ನೀರು ನಿಲ್ಲುವುದು ಸಾಮಾನ್ಯವಾಗಿದೆ. ಆದರೆ ಭಾರೀ ಮಳೆ ಬಂದು ರಸ್ತೆ ತುಂಬಾ ನೀರು ತುಂಬಿ ಹರಿಯುವ ಪ್ರದೇಶಗಳಲ್ಲಿ ನಿಮ್ಮ ಕಾರಿನ ಎಂಜಿನ್ ಅನ್ನು ಸ್ಟಾರ್ಟ್ ಮಾಡುವ ಪ್ರಯತ್ನ ಮಾಡಬೇಡಿ. ಇದರಿಂದ ಕಾರಿನ ಎಂಜಿನ್ಗೆ ನೀರು ಪ್ರವೇಶಿಸಿ ಹಾನಿಯಾಗುತ್ತದೆ.
MOST READ: ಗ್ಲೋಬಲ್ ಎನ್ಸಿಎಪಿಯ ಸುರಕ್ಷತಾ ಟೆಸ್ಟ್ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು
ಕಾರಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಿ
ಮಳೆಗಾಲದಲ್ಲಿ ಹೆಚ್ಚಿನ ದೂರ ಪ್ರಯಾಣ ಮಾಡುವಾಗ ಎಂಜಿನ್ ಪ್ರೊಟೆಕ್ಟರ್ ಆಡ್-ಆನ್ ಅನ್ನು ಖರೀದಿಸುವುದು ಉತ್ತಮವಾಗಿದೆ. ಇದು ಮಳೆಗಾಲದಲ್ಲಿ ಕಾರಿನ ಎಂಜಿನ್ಗೆ ನೀರು ಪ್ರವೇಶಿಸದ ರೀತಿಯಲ್ಲಿ ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತದೆ.
ಅಪಘಾತದ ನಂತರ ವಿಮೆದಾರರಿಗೆ ಮತ್ತು ಅಧಿಕಾರಿಗಳಿಗೆ ಮಾಹಿತಿ ನೀಡಿ
ನಿಮ್ಮ ಕಾರು ಅಪಘಾತಕ್ಕೀಡಾದರೆ ಅದನ್ನು ಹತ್ತಿರದ ಗ್ಯಾರೇಜ್ಗೆ ಕೊಂಡೊಯ್ಯುವ ಬದಲು, ನಿಮ್ಮ ವಿಮಾದಾರರಿಗೆ ಈ ಘಟನೆಯ ಬಗ್ಗೆ ಆದಷ್ಟು ಬೇಗ ಮಾಹಿತಿಯನ್ನು ನೀಡಿ. ಇನ್ನು ಅಪಘಾತದಲ್ಲಿ ಗಂಭೀರವಾಗಿ ಗಾಯವಾಗಿದ್ದರೆ ಅಥವಾ ಸಾವು ಸಂಭವಿಸಿದ್ದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ.
MOST READ: ವಾಹನ ಸಲಹೆ: ಕಾರಿನಲ್ಲಿ ಈ ಸಮಸ್ಯೆಗಳು ಕಂಡು ಬಂದರೆ ತಕ್ಷಣವೇ ಮೆಕಾನಿಕ್ ಸಂಪರ್ಕಿಸಿ
ಅಂತಹ ಸಂದರ್ಭಗಳಲ್ಲಿ ವಿಮಾ ವಿಮಾದಾರರ ಮತ್ತು ಪೊಲೀಸರ ಅನುಮತಿಯಿಲ್ಲದೆ ನಿಮ್ಮ ಕಾರನ್ನು ಆ ಪ್ರದೇಶದಿಂದ ತೆಗೆದುಕೊಳ್ಳಬಾರದು. ವಿಮಾದಾರರು ಪರಿಶೀಲಿಸಿದ ನಂತರ ಅದನ್ನು ಗ್ಯಾರೇಜ್ಗೆ ಕಳಿಹಿಸಬಹುದಾಗಿದೆ.
ಡಿಜಿಟಲ್ ಆ್ಯಪ್ ಬಳಸಿ
ಸಾಮಾನ್ಯ ವಿಮೆದಾರರಾದ ಐಸಿಐಸಿಐ ಲೊಂಬಾರ್ಡ್, ಇಫ್ಕೊ-ಟೋಕಿಯೊ ಮತ್ತು ಬಜಾಜ್ ಅಲಿಯಾನ್ಸ್ ಜನರಲ್ ವೆಬ್ ಅಥವಾ ಅಪ್ಲಿಕೇಶನ್ ಆಧಾರಿತ ಡಿಜಿಟಲ್ ಕ್ಲೈಮ್ ಸೆಟಲ್ಮೆಂಟ್ ಸೌಲಭ್ಯಗಳನ್ನು ಪರಿಚಯಿಸಿದ್ದಾರೆ. ಅಪಘಾತವಾದ ಸಂದರ್ಭದಲ್ಲಿ ನಿಮ್ಮ ಕಾರಿನ ಫೋಟೋಗಳು ಅಥವಾ ವೀಡಿಯೊಗಳನ್ನು ಸಂಬಂಧಿತ ದಾಖಲೆಗಳನ್ನು ನೀಡಿದಾಗ ರೂ.20,000 ದಿಂದ ರೂ.50,000 ಗಳವರೆಗೆ ವಿಮೆ ದೊರೆಯುತ್ತದೆ.
ಸಣ್ಣ ಪುಟ್ಟ ಅಪಘಾತಗಳಿಗೆ ವಿಮೆ ಬಳಸದಿರಿ
ಅಪಘಾತದಲ್ಲಿ ಕಾರುಗಳಿಗೆ ಸಣ್ಣ ಪುಟ್ಟ ಡ್ಯಾಮೆಜ್ ಸಂಭವಿಸಿದರೆ ವಿಮೆ ಕ್ಲೈಮ್ ಮಾಡದಿರುವುದು ಒಳ್ಳೆಯದು. ಕ್ಲೈಮ್ ಮಾಡದೇ ಇದ್ದರೇ ಕೆಲವು ಪ್ರೀಮಿಯಂ ರಿಯಾಯಿತಿಗಳನ್ನು ಪಡೆಯಬಹುದಾಗಿದೆ. ಮೊದಲ ವರ್ಷದಲ್ಲಿ ಶೇ.20 ರಷ್ಟು ಮತ್ತು ಐದನೇ ವರ್ಷದ ನಂತರ ಕ್ಲೈಮ್ ಮಾಡುವಾಗ ಶೇ.50 ರಿಯಾಯಿತಿಯನ್ನು ಪಡೆಯಬಹುದಾಗಿದೆ