Just In
- 10 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 11 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 13 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 13 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡ್ರೈವಿಂಗ್ ವೇಳೆ ನಿದ್ರಿಸುವಿರಾ? ಕಾದಿದೆ ಅಪಾಯ ಹುಷಾರ್..!!
ನೀವು ಎಷ್ಟೇ ಜಾಣ್ಮೆಯ, ತಾಳ್ಮೆಯ ಹಾಗೂ ಅನುಭವಸ್ಥ ಚಾಲಕರೇ ಆಗಿದ್ದರೂ ರಾತ್ರಿ ವೇಳೆಯಲ್ಲಿ ದೀರ್ಘ ದೂರ ಪ್ರಯಾಣಿಸುವ ವೇಳೆಯಲ್ಲಿ ನಿದ್ರಾ ದೇವಿ ಕಣ್ಣಂಚಿಗೆ ಬಂದೇ ಬಿಡುತ್ತಾಳೆ. ಒಂದು ಕ್ಷಣಕ್ಕೆ ಲೋಕವನ್ನೇ ಮರೆತರೂ ಸಹ ಅಪಾಯ ಕಟ್ಟಿಟ್ಟ ಬುತ್ತಿ.
ನೀವು ಎಷ್ಟೇ ಜಾಣ್ಮೆಯ, ತಾಳ್ಮೆಯ ಹಾಗೂ ಅನುಭವಸ್ಥ ಚಾಲಕರೇ ಆಗಿದ್ದರೂ ರಾತ್ರಿ ವೇಳೆಯಲ್ಲಿ ದೀರ್ಘ ದೂರ ಪ್ರಯಾಣಿಸುವ ವೇಳೆಯಲ್ಲಿ ನಿದ್ರಾ ದೇವಿ ಕಣ್ಣಂಚಿಗೆ ಬಂದೇ ಬಿಡುತ್ತಾಳೆ. ಒಂದು ಕ್ಷಣಕ್ಕೆ ಲೋಕವನ್ನೇ ಮರೆತರೂ ಸಹ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ನಿದ್ರೆ ಎಷ್ಟೊಂದು ಅಪಾಯಕಾರಿ ಎಂಬುದನ್ನು ಮನಗಾಣಬೇಕಾಗುತ್ತದೆ. ಈ ಎಲ್ಲದರ ನಿಟ್ಟಿನಲ್ಲಿ ನಿಮ್ಮ ನೆಚ್ಚಿನ ವಾಹನ ಜಾಲತಾಣ ಕನ್ನಡ ಡ್ರೈವ್ ಸ್ಪಾರ್ಕ್ ಕೆಲವೊಂದು ಮಹತ್ವಪೂರ್ಣ ಸಲಹೆಗಳನ್ನು ಓದುಗರ ಜೊತೆಗೆ ಹಂಚಿಕೊಳ್ಳಲಿದ್ದೇವೆ.
ರಾತ್ರಿ ಪ್ರಯಾಣದ ವೇಳೆ ಚಾಲಕನ ಏಕಾಗ್ರತೆಗೆ ಭಂಗವುಂಟಾಗಬಾರದು. ತುಂಬಾನೇ ಸುಸ್ತಾಗಿದ್ದಲ್ಲಿ ರಾತ್ರಿ ಪ್ರಯಾಣವನ್ನು ಸಾಧ್ಯವಾದಷ್ಟು ತಪ್ಪಿಸುವುದು ಒಳಿತು.
ಚಾಲಕನಿಗೆ ನಿದ್ರೆ ಬರದಂತೆ ನೋಡಿಕೊಳ್ಳಲು ಸಹ ಪ್ರಯಾಣಿಕ ಮಾತುಕತೆಯಲ್ಲಿ ತೊಡಗಿಸಿಕೊಳ್ಳುವುದು ಅಥವಾ ಏಕಾಂಗಿಯಾಗಿ ಗಾಡಿ ಓಡಿಸುವಾಗ ಸಂಗೀತವನ್ನು ಆಲಿಸುವುದನ್ನು ರೂಢಿ ಮಾಡಿಕೊಳ್ಳಬೇಕು.
ಇನ್ನು ಪದೇ ಪದೇ 5-10 ನಿಮಿಷಗಳಷ್ಟು ವಿಶ್ರಾಂತಿ ತೆಗೆದುಕೊಳ್ಳುವುದು ಹೆಚ್ಚು ಸೂಕ್ತವೆನಿಸಲಿದೆ. ಈ ವೇಳೆಯಲ್ಲಿ ಚಹಾ ಕುಡಿಯುವುದು ಹಾಗೂ ಮುಖ ತೊಳೆಯುವುದರಿಂದ ರಿಫ್ರೆಶ್ ಆಗಲಿದೆ.
ರಾತ್ರಿ ಪ್ರಯಾಣದ ವೇಳೆ ನಿದ್ರೆ ಆವರಿಸುವ ಭೀತಿ ಇರುವುದನ್ನು ಮನಗಂಡ ತಕ್ಷಣವೇ ವಾಹನವನ್ನು ಸುರಕ್ಷಿತ ಜಾಗದಲ್ಲಿ ಬದಿಗೆ ಸರಿಸಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಿರಿ. ಈ ವೇಳೆ ಹಜಾರ್ಡ್ ಲೈಟ್ ಆನ್ ಮಾಡಿಟ್ಟುಕೊಳ್ಳಲು ಮರೆಯದಿರಿ.
ವೇಗ ಮಿತಿ ಪಾಲಿಸುವುದು ಅತಿ ಮುಖ್ಯ. ನಿದ್ರೆ ಆವರಿಸಿರುವುದರಿಂದ ವೇಗದ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಭೀತಿಯಿರುತ್ತದೆ. ಈ ಬಗ್ಗೆಯೂ ಎಚ್ಚರ ವಹಿಸಿಕೊಳ್ಳುವುದು ಒಳ್ಳೆಯದು.
ನಿದ್ರೆ ಕಣ್ಣು ಬಿಟ್ಟು ಹೋಗುವುದಿಲ್ಲ ಎಂದಾದ್ದಲ್ಲಿ ಕಾರಲ್ಲೇ ನಿದ್ರಿಸುವುದು ಒಳಿತು. ಇನ್ನು ಸ್ವಲ್ಪ ಹೊತ್ತು ವಾಹನ ನಿಲುಗಡೆ ಮಾಡಿ ಹೊರಗಡೆಯ ಪ್ರಶಾಂತ ವಾಯು ಸೇವಿಸುವುದು ಉತ್ತಮವಾಗಿರಲಿದೆ.
ಸ್ವಲ್ಪ ಹೊತ್ತು ಕಾರಿನ ಸೈಡ್ ಮಿರರ್ ಜಾರಿಸುವ ಮೂಲಕವೂ ಹೊರಗಿನಿಂದ ಗಾಳಿ ಬೀಸುವುದರಿಂದ ನಿಮಗೆ ನಿದ್ರೆ ಆವರಿಸುವುದನ್ನು ತಡೆಯಲಿದೆ.
ಇಲ್ಲಿ ಎಸಿ ಕೂಡಾ ಆನ್ ಮಾಡಿಟ್ಟುಕೊಳ್ಳುವುದರಿಂದ ಸಮರ್ಪಕವಾಗಿ ಕೆಲಸ ಮಾಡಲಿದೆ. ಡ್ರೈವಿಂಗ್ ವೇಳೆ ಹೆಚ್ಚು ಚಳಿ ಆವರಿಸಿದಾಗ ನಿದ್ರೆಯ ಕಂಪನ ಉಂಟಾಗಲಾರದು.
ಇಷ್ಟೆಲ್ಲ ಕಸರತ್ತು ಮಾಡಿಯೂ ನಿದ್ರೆ ಬಿಟ್ಟು ಹೋಗದಿದ್ದಲ್ಲಿ ಕಾರಲ್ಲೇ ನಿದ್ರಿಸುವುದು ಲೇಸು. ಇದಕ್ಕಾಗಿ ಕಾರಿನ ಢಿಕ್ಕಿಯಲ್ಲಿ ಕಂಬಳಿ ಇಟ್ಟುಕೊಳ್ಳುವುದರಲ್ಲಿ ತಪ್ಪೇನಿಲ್ಲ.
MOST READ: ಬೆಂಗಳೂರಿನಲ್ಲಿ ರಸ್ತೆಗಿಳಿಯಲು ಸಜ್ಜಾದ 3 ಸಾವಿರ ಎಲೆಕ್ಟ್ರಿಕ್ ಬಸ್ಗಳು..!
ಇದಕ್ಕಾಗಿ ಸುರಕ್ಷಿತ ಜಾಗದಲ್ಲೇ ಕಾರು ಪಾರ್ಕ್ ಮಾಡಲು ಆರಿಸಬೇಕು. ಯಾಕೆಂದರೆ ರಾತ್ರಿ ವೇಳೆಯಲ್ಲಿ ಹೆದ್ದಾರಿ ಅಥವಾ ಇತರೆ ನಿರ್ಜನ ಪ್ರದೇಶದಲ್ಲಿ ಕಳ್ಳರ ಹಾವಳಿಯುಂಟಾಗುವ ಭೀತಿಯಿರುತ್ತದೆ.
ಮುಚ್ಚಿದ ಕಾರಲ್ಲಿ ಎಸಿ ಆನ್ ಮಾಡಿಟ್ಟುಕೊಂಡು ತುಂಬಾ ಹೊತ್ತು ಮಲಗುವುದು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಉಸಿರಾಟದ ತೊಂದರೆಯನ್ನು ಎದುರಿಸುವ ಸಂಭವವಿರುತ್ತದೆ.
ಹೊರಗಿನಿಂದ ತಾಜಾ ಗಾಳಿ ಪ್ರವೇಶವಾಗದೇ ಇರುವುದರಿಂದ ಉಸಿರುಗಟ್ಟುವಿಕೆ ನಿಮ್ಮನ್ನು ಕಾಡಬಹುದು. ಇಲ್ಲಿ ಕಾರ್ಬನ್ ಮೊನೊಕ್ಸೈಡ್ ವಿಷಾಣು ವಿಲನ್ ರೂಪದಲ್ಲಿ ಪ್ರಾಣಕ್ಕೆ ಅಪಾಯವನ್ನು ಒಡ್ಡಲಿದೆ.
MOST READ: ಬ್ರೇಕ್ ಫೇಲ್ ಆದಾಗ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!
ಸರಿಯಾಗಿ ಕೆಲಸ ಮಾಡದ ಎಸಿ ಸಹ ಭೀತಿಯನ್ನು ಒಡ್ಡಲಿದೆ. ಹಾಗಾಗಿ ನಿರಂತರ ಅಂತರಾಳದಲ್ಲಿ ಎಸಿ ಸಮರ್ಪಕವಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಬೇಕಾಗುತ್ತದೆ.
ಕಾರಿನಲ್ಲಿ ಗ್ಲಾಸ್ ಮುಚ್ಚಿರುವುದರಿಂದ ಏರ್ ಸರ್ಕ್ಯೂಲೇಷನ್ ಆಗುವ ಸಾಧ್ಯತೆ ಕಡಿಮೆಯಾಗುತ್ತದೆ. ಇದರಿಂದ ಕಾರಿನೊಳಗೆ ಆಮ್ಲಜನಕದ ಕೊರತೆ ಕಾಡುತ್ತದೆ. ಪರಿಣಾಮವೆಂಬಂತೆ ಪ್ರಯಾಣಿಕ ಉಸಿರುಗಟ್ಟಿ ಸಾಯುವ ಅಪಾಯ ಕಾದಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕಾಗಿ ವಿಂಡೋಗಳನ್ನು ಸ್ವಲ್ಪ ತೆರೆದಿಟ್ಟುಕೊಳ್ಳುವುದು ಹೆಚ್ಚು ಸೂಕ್ತವೆನಿಸುವುದು. ವಾಹನ ತಜ್ಞರ ಪ್ರಕಾರ ತುಂಬಾ ಹೊತ್ತು ಕಾರಲ್ಲಿ ನಿದ್ರಿಸುವುದು ಅಪಾಯಕಾರಿಯೆನಿಸಿಕೊಂಡಿದೆ.