Just In
- 23 min ago ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- 30 min ago Mahindra Thar: ಸುಲಭವಾಗಿ ಆಫ್ರೋಡ್ ಕಿಂಗ್ ಖರೀದಿಸಬೇಕೆ?: ಆನ್ರೊಡ್ ಬೆಲೆ, EMI ಸಂಪೂರ್ಣ ಮಾಹಿತಿ!
- 42 min ago Mahindra: ಫ್ಯಾಮಿಲಿ ಕಾರು ಮಹೀಂದ್ರಾ ಎಕ್ಸ್ಯುವಿ700 ಖರೀದಿಸುವವರಿಗೆ ಸಿಹಿಸುದ್ದಿ.. ಇನ್ನೂ ತಿಂಗಳೇ ಸಾಕು!
- 2 hrs ago Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
Don't Miss!
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- News Tirumala Property: ತಿರುಪತಿ ತಿರುಮಲ ಶ್ರೀವಾರಿಯ 2023-24ರ ಆಸ್ತಿ ವಿವರ ಇಲ್ಲಿದೆ..
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Movies Sathya ; ಸತ್ಯಾ ತವರು ಮನೆಗೆ ಅವಮಾನ ಮಾಡಿದ ಕೀರ್ತನ..!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೀಪಾವಳಿ ಸಂದರ್ಭದಲ್ಲಿ ಕಾರುಗಳನ್ನು ಸುರಕ್ಷಿತವಾಗಿಸುವ ವಿಧಾನಗಳಿವು
ಕರೋನಾ ಬರುವ ಮುನ್ನ ಇದ್ದ ಸಂಭ್ರಮವಿಲ್ಲದಿದ್ದರೂ ಜನರು ದೀಪಾವಳಿಯನ್ನು ಸರಳವಾಗಿ ಆಚರಿಸುತ್ತಿದ್ದಾರೆ. ಕೆಲವೇ ಕೆಲವು ವರ್ಷಗಳ ಹಿಂದೆ ಜನರು ದೀಪವಳಿಗೂ ಮುನ್ನವೇ ಪಟಾಕಿ ಸಿಡಿಸುತ್ತಿದ್ದರು. ಆದರೆ ಈ ಬಾರಿ ಮೊದಲಿನ ಸಂಭ್ರಮ ಕಾಣುತ್ತಿಲ್ಲ. ಕರೋನಾ ವೈರಸ್ ಹರಡುವಿಕೆಯ ಭೀತಿ ಹಾಗೂ ಆರ್ಥಿಕ ಸಂಕಷ್ಟವೇ ಇದಕ್ಕೆ ಪ್ರಮುಖ ಕಾರಣ.
ಆದರೆ ಎಂತಹ ಪರಿಸ್ಥಿತಿಯಲ್ಲೂ ಹಬ್ಬವನ್ನು ಆಚರಿಸದೇ ಸುಮ್ಮನೆ ಇರಬಾರದು ಎಂಬ ಕಾರಣಕ್ಕೆ ಕೆಲವರು ದೀಪಾವಳಿಯನ್ನು ಆಚರಿಸುತ್ತಿದ್ದಾರೆ. ದೀಪಾವಳಿಯ ಪಟಾಕಿ ಸದ್ದು ಅಲ್ಲಲ್ಲಿ ಕೇಳಿ ಬರುತ್ತಿದೆ. ದೀಪಾವಳಿಯ ಸಂದರ್ಭದಲ್ಲಿ ವಾಹನಗಳಿಗೆ ಹಾನಿಯಾಗುವುದು ಸಹಜ. ದೀಪಾವಳಿ ಸಂದರ್ಭದಲ್ಲಿ ವಾಹನಗಳನ್ನು ಹೇಗೆ ರಕ್ಷಿಸಬೇಕು ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಪೋರ್ಟಬಲ್ ಅಗ್ನಿಶಾಮಕ
ನಿಮ್ಮ ವಾಹನದಲ್ಲಿ ಅಥವಾ ನಿಮ್ಮ ಮನೆಯಲ್ಲಿ ಸಣ್ಣ ಅಗ್ನಿಶಾಮಕಗಳನ್ನು ಇರಿಸಿ. ಇದರಿಂದ ಬೆಂಕಿಯಂತಹ ಯಾವುದೇ ಅವಘಡ ಸಂಭವಿಸಿದಾಗ ತಕ್ಷಣವೇ ಪರಿಹಾರ ಕಂಡು ಕೊಳ್ಳಬಹುದು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಂಭವಿಸುವ ಅಪಘಾತಗಳಲ್ಲಿ ಅಗ್ನಿ ಅವಘಡವೂ ಸೇರಿದೆ.
ಈ ಹಿನ್ನೆಲೆಯಲ್ಲಿ ಅಗ್ನಿಶಾಮಕಗಳನ್ನು ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಬೆಂಕಿಯ ಸಣ್ಣ ಕಿಡಿ ಸಹ ಕ್ಷಣಾರ್ಧದಲ್ಲಿ ದೊಡ್ಡ ಅನಾಹುತವನ್ನು ಉಂಟು ಮಾಡುತ್ತದೆ. ಆದ್ದರಿಂದ ಈ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬಾರದು ಎಂಬುದು ನಮ್ಮ ಸಲಹೆ.
ಕಾರುಗಳನ್ನು ಸರಿಯಾಗಿ ಲಾಕ್ ಮಾಡಿ
ದೀಪಾವಳಿ ಸಂದರ್ಭದಲ್ಲಿ ಕಾರ್ ಅನ್ನು ಸರಿಯಾಗಿ ಮುಚ್ಚಲಾಗಿದೆಯೇ ಎಂದು ಪರಿಶೀಲಿಸಿ. ನಿರ್ದಿಷ್ಟವಾಗಿ ಹೇಳುವುದಾದರೆ, ಕಾರಿನ ಎಲ್ಲಾ ವಿಂಡೋಗಳನ್ನು ಮುಚ್ಚಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. ಕಾರಿನ ಒಳಗಿರುವ ಸೀಟ್ ಹಾಗೂ ಮ್ಯಾಟ್ ಗಳಿಗೆ ಬೆಂಕಿ ಸುಲಭವಾಗಿ ತಗುಲುತ್ತದೆ.
ಬೆಂಕಿಯ ಸಣ್ಣ ಕಿಡಿ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಫ್ಲವರ್ ಪಾಟ್, ಕೋನ್ ವೀಲ್ ಗಳು ಸಣ್ಣ ಪ್ರಮಾಣದ ಬೆಂಕಿಯ ಕಿಡಿಗಳನ್ನು ಅತಿ ವೇಗವಾಗಿ ಎಸೆಯಬಲ್ಲವು. ಇದರಿಂದಾಗಿ ಹಲವೆಡೆ ಬೆಂಕಿ ಕಾಣಿಸಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಕಾರಿನ ಎಲ್ಲಾ ಡೋರ್ ಹಾಗೂ ವಿಂಡೋಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ.
ಪಾರ್ಕಿಂಗ್
ಕಾರನ್ನು ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸುವುದು ಒಳ್ಳೆಯದು. ಪಾರ್ಕಿಂಗ್ ಲಾಟ್ ಅಥವಾ ಸರಿಯಾದ ಪಾರ್ಕಿಂಗ್ ಯಾರ್ಡ್ನಂತಹ ಮುಚ್ಚಿದ ಕಂಟೇನರ್ನಲ್ಲಿ ಕಾರನ್ನು ಸುರಕ್ಷಿತವಾಗಿ ನಿಲ್ಲಿಸುವುದು ಉತ್ತಮ. ಇದೇ ವೇಳೆ ಕಾರ್ ಅನ್ನು ಸಾಮಾನ್ಯ ಕಾರ್ ಕವರ್ ನೊಂದಿಗೆ ಮುಚ್ಚದಂತೆ ಎಚ್ಚರಿಕೆ ವಹಿಸಿ.
ಕಾರ್ ಕವರ್ಗಳಿಗೆ ಸುಲಭವಾಗಿ ಬೆಂಕಿ ತಗುಲುತ್ತದೆ. ಇವುಗಳಿಂದ ಕಾರನ್ನು ಮುಚ್ಚುವುದು ಒಳ್ಳೆಯದಲ್ಲ. ಅದರಲ್ಲೂ ದೀಪಾವಳಿ ಹಬ್ಬದಲ್ಲಿ ಪಟಾಕಿ ಹೆಚ್ಚು ಸಿಡಿಯುವ ಸಮಯದಲ್ಲಿ ಕಾರಿನ ಕವರ್'ಗೆ ಬೆಂಕಿ ತಗುಲಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಕಾರ್ ಅನ್ನು ಮುಚ್ಚಿದ ಪ್ರದೇಶದಲ್ಲಿ ನಿಲ್ಲಿಸುವುದು ಒಳ್ಳೆಯದು.
ಜವಾಬ್ದಾರಿಯಿಂದ ಚಾಲನೆ ಮಾಡಿ
ರಸ್ತೆ ಅಥವಾ ವಸತಿ ಪ್ರದೇಶವನ್ನು ಪ್ರವೇಶಿಸುವಾಗ ಎಚ್ಚರಿಕೆಯಿಂದ ಚಾಲನೆ ಮಾಡಿ. ಹಬ್ಬದ ಸಮಯವಾದ್ದರಿಂದ ರಸ್ತೆಗಳಲ್ಲಿ ಹೆಚ್ಚು ಜನ ಸೇರಿರುತ್ತಾರೆ. ಪಟಾಕಿ ಹೊಗೆಯಿಂದ ಕೆಲವೊಮ್ಮೆ ವಾಹನಗಳು ಸಂಚರಿಸುವುದು ಜನರಿಗೆ ತಿಳಿಯದಂತಾಗುತ್ತದೆ. ಈ ಕಾರಣಕ್ಕೆ ಇತರರ ಸುರಕ್ಷತೆಗಾಗಿಯಾದರೂ ಕಡಿಮೆ ವೇಗದಲ್ಲಿ ವಾಹನ ಚಾಲನೆ ಮಾಡುವುದು ಉತ್ತಮ.
ಪಟಾಕಿಗಳನ್ನು ಸುಡುವವರು ಕೆಲವೊಮ್ಮೆ, ಅವುಗಳನ್ನು ಹತ್ತಿಸಿದ ನಂತರ ಸ್ಫೋಟಕ್ಕೆ ಹೆದರಿ ಮನೆಯೊಳಗೆ ಅವಿತು ಕೊಳ್ಳುತ್ತಾರೆ. ಅಂತಹ ಪ್ರದೇಶಗಳಿಗೆ ತೆರಳುವ ವಾಹನ ಸವಾರರು ತೊಂದರೆಗೆ ಸಿಲುಕುತ್ತಾರೆ. ಇದರಿಂದ ದೊಡ್ಡ ಅಪಾಯವುಂಟಾಗ ಬಹುದು. ಇಂತಹ ಪ್ರದೇಶಗಳನ್ನು ಪ್ರವೇಶಿಸುವಾಗ ಹೆಚ್ಚು ಕಾಳಜಿ ವಹಿಸುವುದು ಅವಶ್ಯಕ.
ಪ್ರಥಮ ಚಿಕಿತ್ಸೆ ಪೆಟ್ಟಿಗೆ
ಪ್ರಥಮ ಚಿಕಿತ್ಸಾ ಕಿಟ್ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಸಣ್ಣ ಬೆಂಕಿ ಸಹ ಗಂಭೀರ ಹಾನಿ ಉಂಟು ಮಾಡಬಹುದು. ಆದ್ದರಿಂದ ಹೆಚ್ಚಿನ ಗಮನ ಹರಿಸುವುದು ಅಗತ್ಯ. ಪ್ರಥಮ ಚಿಕಿತ್ಸಾ ಕಿಟ್ನಂತಹ ವೈದ್ಯಕೀಯ ಉಪಕರಣಗಳನ್ನು ಹೊಂದಿರುವುದು ಒಳ್ಳೆಯದು.
ಇನ್ನು ದೀರ್ಘಕಾಲದವರೆಗೆ ಕಾರುಗಳನ್ನು ಹೊಂದಿದ್ದರೆ, ಅವುಗಳ ಜೊತೆಗೆ ಮರೆಯಲಾಗದ ನೆನಪುಗಳಿರುತ್ತವೆ. ಈ ಕಾರಣಕ್ಕೆ ಬಹುತೇಕ ಜನರು ಆ ಕಾರುಗಳನ್ನು ಮಾರಾಟ ಮಾಡಲು ಇಚ್ಛಿಸುವುದಿಲ್ಲ. ಆದರೆ ಹಳೆಯ ಕಾರುಗಳಲ್ಲಿ ಕಂಡು ಬರುವ ಕೆಲವು ಲಕ್ಷಣಗಳು ಆ ಕಾರುಗಳನ್ನು ಮಾರಾಟ ಮಾಡಿ ಹೊಸ ಖರೀದಿಸುವುದು ಉತ್ತಮ ಎಂಬುದನ್ನು ಸೂಚಿಸುತ್ತವೆ. ಹಳೆಯ ಕಾರು ಅಂದಾಕ್ಷಣ ಅದು ಬಳಕೆಗೆ ಯೋಗ್ಯವಿಲ್ಲ ಎಂದು ತೀರ್ಮಾನಿಸಲು ಸಾಧ್ಯವಿಲ್ಲ. ಆದರೆ ಬಳಕೆಯ ಯೋಗ್ಯವಾದ ಮಾನದಂಡಗಳಿದ್ದಲ್ಲಿ ಮುಂದುವರಿಸಬಹುದು.
ಈ ಲಕ್ಷಣಗಳು ಕಂಡುಬಂದಲ್ಲಿ ಹೊಸ ಕಾರು ಖರೀದಿಸುವುದು ಒಳಿತು. ಕೆಲವೊಮ್ಮೆ ಹಳೆಯ ಕಾರುಗಳು ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತವೆ. ಹಳೆಯ ಕಾರುಗಳಲ್ಲಿರುವ ಸಸ್ಪೆಂಷನ್ ಅಥವಾ ಟ್ರಾನ್ಸ್ ಮಿಷನ್ ಸೆಟಪ್'ಗಳನ್ನು ಸರಿಪಡಿಸಲು ದುಬಾರಿ ಬೆಲೆ ತೆರಬೇಕಾಗುತ್ತದೆ. ಈ ಸಂದರ್ಭಗಳಲ್ಲಿ ಹಳೆ ಕಾರುಗಳ ಸರಿಪಡಿಸಲು ಪದೇ ಪದೇ ಖರ್ಚು ಮಾಡುವುದಕ್ಕಿಂತ ಎಕ್ಸ್ಚೆಂಜ್ ಆಫರ್ಗಳಲ್ಲಿ ಹೊಸ ಕಾರು ಖರೀದಿಸುವುದು ಸೂಕ್ತ.
ಇಂತಹ ಸಮಸ್ಯೆಗಳನ್ನು ತಕ್ಷಣವೇ ಪತ್ತೆ ಹಚ್ಚಿ ಸರಿಪಡಿಸಬೇಕು. ಕೆಲವೊಮ್ಮೆ ಈ ಭಾಗಗಳನ್ನು ಸರಿಪಡಿಸಲು ಕಾರಿನ ಮೌಲ್ಯಕ್ಕಿಂತ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಹಳೆಯ ಕಾರಿಗೆ ಹೆಚ್ಚು ಹಣ ಖರ್ಚು ಮಾಡುತ್ತಲೇ ಇರಬೇಕಾಗುತ್ತದೆ. ಈ ರೀತಿ ಖರ್ಚು ಮಾಡುವುದಕ್ಕಿಂತ ಹೊಸ ಕಾರು ಖರೀದಿಸುವುದು ಉತ್ತಮ. ಅನಗತ್ಯ ಖರ್ಚು ತಪ್ಪಿಸಲು ಇದರಿಂದ ಸಹಾಯವಾಗುತ್ತದೆ. ಕೆಲವೊಮ್ಮೆ ಕಾರುಗಳು ಎಂಜಿನ್ ಹೊಂದಿರುತ್ತವೆ ಎಂಬುದನ್ನು ಮರೆಯುತ್ತೇವೆ. ಕಾರುಗಳನ್ನು ಒಂದು ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚಾಗಿ ಸತತವಾಗಿ ಚಾಲನೆ ಮಾಡಲು ಸಾಧ್ಯವಿಲ್ಲ. ಧೀರ್ಘಕಾಲದ ಎಂಜಿನ್ ಬಳಕೆಯು ಕೆಲವೊಮ್ಮೆ ವಿಶ್ವಾಸಾರ್ಹತೆಯನ್ನು ಕಳೆದು ಕೊಳ್ಳುತ್ತದೆ.
ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.