Just In
- 5 hrs ago Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- 5 hrs ago ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- 6 hrs ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 7 hrs ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
Don't Miss!
- Movies Shobha Shetty ; ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ ನಟಿ ಶೋಭಾ ಶೆಟ್ಟಿ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೆಲಸಮವಾಯ್ತು 190 ವರ್ಷ ಹಳೆಯ ಸೇತುವೆ
ಮುಂಬೈ-ಪುಣೆ ಎಕ್ಸ್ಪ್ರೆಸ್ ಹೆದ್ದಾರಿ ಬಳಿಯಿದ್ದ 190 ವರ್ಷದ ಹಳೆಯ ಅಮೃತಾಂಜನ್ ರೈಲ್ವೆ ಬ್ರಿಡ್ಜ್ ಅನ್ನು ಭಾನುವಾರ ಸಂಜೆ ನೆಲಸಮಗೊಳಿಸಲಾಗಿದೆ. ವಾಹನಗಳ ದಟ್ಟಣೆ ಹೆಚ್ಚಿದ್ದ ಕಾರಣಕ್ಕೆ ಸುಗಮ ಸಂಚಾರ ಕಲ್ಪಿಸುವ ಸಲುವಾಗಿ ಈ ಈ ರೈಲ್ವೆ ಸೇತುವೆಯನ್ನು ನೆಲಸಮಗೊಳಿಸಲಾಗಿದೆ.
ಈ ಸೇತುವೆಯು ಹಳೆ ಲೋನವಾಲಾ ರೈಲು ನೆಟ್ ವರ್ಕ್ ನ ಭಾಗವಾಗಿತ್ತು. ಎಂಎಸ್ಆರ್ಡಿಸಿ ಸ್ಫೋಟಕಗಳ ಸಹಾಯದಿಂದ ಈ ಸೇತುವೆಯನ್ನು ನೆಲಸಮಗೊಳಿಸಿದೆ. ಈ ಸೇತುವೆ ತುಂಬಾ ದುರ್ಬಲವಾಗಿದೆಯೆಂದು 2017ರ ಲೆಕ್ಕಪರಿಶೋಧನೆ ವರದಿಯಲ್ಲಿ ಹೇಳಲಾಗಿತ್ತು.
ಸೇತುವೆಯು ದುರ್ಬಲಗೊಂಡಿದ್ದ ಕಾರಣಕ್ಕೆ ಅದರ ಕೆಳಗೆ ಹೋಗುವ ವಾಹನಗಳ ದಟ್ಟಣೆಯನ್ನು ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಸೇತುವೆಯು ಯಾವುದೇ ಸಮಯದಲ್ಲಿ ಕುಸಿದು ಬಿದ್ದುಅಪಘಾತವಾಗುವ ಸಾಧ್ಯತೆಗಳಿದ್ದವು.
ಲಾಕ್ಡೌನ್ ಸಮಯದಲ್ಲಿ ಯಾವುದೇ ವಾಹನಗಳ ಸಂಚಾರವಿಲ್ಲ. ಈ ಕಾರಣಕ್ಕೆ ಎಂಎಸ್ಆರ್ಡಿಸಿ ಈ ಸೇತುವೆಯನ್ನು ನೆಲಸಮಗೊಳಿಸಲು ಮುಂದಾಗಿದೆ. ಈಗ ನೆಲಸಮಗೊಂಡಿರುವ ಸೇತುವೆಯ ಭಗ್ನಾವಶೇಷಗಳನ್ನು ತೆಗೆದುಹಾಕಲಾಗುತ್ತಿದೆ.
ಮುಂದಿನ 4 ದಿನಗಳಲ್ಲಿ ಈ ಸೇತುವೆಯ ಅವಶೇಷಗಳನ್ನು ಸಂಪೂರ್ಣವಾಗಿ ತೆಗೆದು ಹಾಕಿ ಸ್ವಚ್ವಗೊಳಿಸಲಾಗುವುದೆಂದು ಎಂಎಸ್ಆರ್ಡಿಸಿ ತಿಳಿಸಿದೆ. ಇದಕ್ಕಾಗಿ ಸುಮಾರು 1200 ಟ್ರಕ್ ಗಳನ್ನು ಬಳಸಲಾಗುವುದು. ಈ ವೇಳೆ ಇಲ್ಲಿ ಸಂಚರಿಸುವ ವಾಹನಗಳ ಮಾರ್ಗವನ್ನು ಕಂಡಾಲಾಗೆ ತಿರುಗಿಸಲಾಗುವುದು ಎಂದು ಎಂಎಸ್ಆರ್ಡಿಸಿ ಹೇಳಿದೆ.
ಅಮೃತಾಂಜನ್ ಸೇತುವೆಯನ್ನು ಮೊದಲ ಬಾರಿಗೆ 1830ರ ನವೆಂಬರ್ 10ರಂದು ಬಳಕೆಗೆ ಆರಂಭಿಸಲಾಯಿತು. ಈ ಸೇತುವೆ ಮುಂಬೈ ಹಾಗೂ ಪುಣೆ ನಗರಗಳನ್ನು ಸಂಪರ್ಕಿಸಲು ನೆರವಾಗುತ್ತಿತ್ತು.
ನಂತರದ ದಿನಗಳಲ್ಲಿ ಈ ಸೇತುವೆಯನ್ನು ರೈಲ್ವೆಯ ಮೂರನೇ ಸಾಲಿನ ಟ್ರಾಕ್ ನಂತೆ ಬಳಸಲಾಯಿತು. ಈ ಟ್ರಾಕ್ ನಲ್ಲಿ ಬೋರ್ ಘಾಟ್ ಸೆಕ್ಷನ್ ನ ಎಂಜಿನ್ಗಳನ್ನು ಇಡಲಾಗುತ್ತಿತ್ತು. ಬಲಶಾಲಿಯಾದ ಎಂಜಿನ್ ಬಂದ ನಂತರ ಈ ಎಂಜಿನ್ ಗಳ ಬಳಕೆಯನ್ನು ನಿಲ್ಲಿಸಲಾಯಿತು.