Just In
- 5 min ago ಜಾವಾ ಮೋಟಾರ್ಸೈಕಲ್ ಮಾಲೀಕರಿಗೆ ಸಿಹಿಸುದ್ದಿ: ಈ ಅವಕಾಶ ಕಳೆದುಕೊಳ್ಳಬೇಡಿ!
- 24 min ago ದೊಡ್ಡ ಸಿಗ್ನಲ್ ಕೊಟ್ಟ ಫೋರ್ಡ್: ಭಾರತಕ್ಕೆ ಬರುತ್ತಿದೆ ಹೊಸ ಎಸ್ಯುವಿ... ಟಾಟಾಗೆ ಆತಂಕ ಶುರು
- 1 hr ago ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- 1 hr ago ನಿಮ್ಮ ಬಳಿ 7 ಲಕ್ಷ ರೂಪಾಯಿ ಇದ್ದರೆ ಸಾಕು.. ಕನಸಿನ ಕಾರನ್ನು ಮನೆ ತರಬಹುದು!
Don't Miss!
- Lifestyle ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- Finance ಎಮರ್ಜೆನ್ಸಿ ಲೋನ್ ಅಂದ್ರೆ ಏನು, ಇದನ್ನು ಪಡೆದುಕೊಳ್ಳುವುದು ಹೇಗೆ ? ಇಲ್ಲಿದೆ ನೋಡಿ ಸುಲಭ ಉಪಾಯ
- News Yaduveer Wadiyar: ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ಗೆ ಶಾಕ್ ಕೊಟ್ಟ ಒಕ್ಕಲಿಗರು!
- Movies ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಾಗ್ವಾರ್ ಬದಲು ಬಿಎಂಡಬ್ಲ್ಯು ಗಿಫ್ಟ್ ಪಡೆದ ಯುವಕ ಮಾಡಿದ್ದೇನು ಗೊತ್ತಾ?
ಹರಿಯಾಣದ ಯುವಕನೊಬ್ಬ ತನ್ನ ಪೋಷಕರಿಂದ ಬಿಎಂಡಬ್ಲ್ಯು ಸೆಡಾನ್ ಕಾರ್ ಅನ್ನು ಗಿಫ್ಟ್ ಆಗಿ ಪಡೆದಿದ್ದಾನೆ. ಈ ಯುವಕ ತನ್ನ ಪೋಷಕರಿಂದ ಜಾಗ್ವಾರ್ ಕಾರ್ ಅನ್ನು ಗಿಫ್ಟ್ ಪಡೆಯಲು ಬಯಸಿದ್ದ. ಅದರ ಬದಲಿಗೆ ಬಿಎಂಡಬ್ಲ್ಯು ಕಾರ್ ಪಡೆದಿದ್ದಾನೆ.
ಇದರಿಂದ ಕುಪಿತಗೊಂಡ ಆತ ತನ್ನ ಹೊಸ ಕಾರ್ ಅನ್ನು ನದಿಗೆ ತಳ್ಳಿದ್ದಾನೆ. ಇಷ್ಟಕ್ಕೆ ಸುಮ್ಮನಾಗದೇ ಅದರ ವೀಡಿಯೊವನ್ನು ಮಾಡಿದ್ದಾನೆ. ಈ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಯುವಕನು ನದಿಗೆ ತಳ್ಳಿರುವ ಬಿಎಂಡಬ್ಲ್ಯು ಸೆಡಾನ್ನ ನಿಖರವಾದ ಮಾದರಿ ಬಗ್ಗೆ ತಿಳಿದು ಬಂದಿಲ್ಲ. ಆದರೆ ಈ ಕಾರು 3 ಸೀರಿಸ್ ಅಥವಾ 5 ಸೀರಿಸ್ ಕಾರಿನಂತೆ ಕಾಣುತ್ತದೆ. ಈ ಎರಡೂ ಮಾದರಿಯ ಕಾರುಗಳ ಬೆಲೆಯು ದುಬಾರಿಯಾಗಿದ್ದು ಸುಮಾರು ರೂ.50 ಲಕ್ಷ ಬೆಲೆಯನ್ನು ಹೊಂದಿವೆ.
ಯಮುನಾ ನಗರದ ಯುವಕನು ಈ ಕಾರನ್ನು ತನ್ನ ಪೋಷಕರಿಂದ ಗಿಫ್ಟ್ ಆಗಿ ಪಡೆದಿದ್ದಾನೆ. ಯಾವ ಕಾರಣಕ್ಕಾಗಿ ಗಿಫ್ಟ್ ನೀಡಲಾಯಿತು ಎಂದು ತಿಳಿದು ಬಂದಿಲ್ಲ. ಕಳೆದ ಕೆಲವು ದಿನಗಳಿಂದ ವ್ಯಾಪಕವಾಗಿ ಮಳೆ ಬೀಳುತ್ತಿರುವುದರಿಂದ ನದಿಯು ತುಂಬಿದ್ದು, ಹೆಚ್ಚಿನ ಹರಿವಿನ್ನು ಹೊಂದಿದೆ.
ಈ ಹರಿವಿನ ಕಾರಣದಿಂದಾಗಿ ಹೊಸ ಕಾರು ಕೊಚ್ಚಿ ಕೊಂಡು ಹೋಗಿದೆ. ಯುವಕನು ತನ್ನ ಹೊಸ ಕಾರನ್ನು ನದಿಗೆ ತಳ್ಳಿ ಅದರ ವೀಡಿಯೊವನ್ನು ಸಹ ಮಾಡಿದ್ದಾನೆ ಎಂದು ವರದಿಯಾಗಿದೆ. ತನ್ನ ಕೋಪವನ್ನು ತೋರಿಸಲು ಆ ವೀಡಿಯೊವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ.
ಆದರೆ ಆ ಕಾರು ನದಿಯ ಮಧ್ಯದಲ್ಲಿರುವ ನೈಸರ್ಗಿಕ ದ್ವೀಪವೊಂದರಲ್ಲಿದ್ದ ಎತ್ತರದ ಹುಲ್ಲಿನಲ್ಲಿ ಸಿಲುಕಿಕೊಂಡ ನಂತರ, ಯುವಕನು ಸ್ಥಳೀಯ ಜನರ ಸಹಾಯ ಪಡೆದು ಕಾರನ್ನು ಹಿಂದಕ್ಕೆ ತೆಗೆದುಕೊಂಡು ಹೋಗಲು ಯತ್ನಿಸಿದ್ದಾನೆ. ಇದೇ ವೀಡಿಯೊವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಅಪ್ಲೋಡ್ ಮಾಡಲಾಗಿದೆ.
ಯುವಕನ ಬಗ್ಗೆ ಖಚಿತ ಮಾಹಿತಿ ತಿಳಿದು ಬಂದಿಲ್ಲ. ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಸಹ ಯುವಕನ ಬಗೆಗಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಈ ಯುವಕನು ಹರಿಯಾಣದ ಯಮುನಾ ನಗರಕ್ಕೆ ಸೇರಿದವನು ಎಂಬುದಾಗಿ ವರದಿಯಾಗಿದೆ.
ಯುವಕನನ್ನು ಬಂಧಿಸಲಾಗಿದೆಯೋ ಇಲ್ಲವೋ ಎಂಬುದು ತಿಳಿದುಬಂದಿಲ್ಲ. ಕಾರನ್ನು ವಶಪಡಿಸಿಕೊಳ್ಳಲಾಗಿದೆಯೇ ಎಂಬುದು ಸಹ ತಿಳಿದು ಬಂದಿಲ್ಲ. ಯುವಕನನ್ನು ಬಂಧಿಸಿದ ನಂತರ ಯಾವ ಪ್ರಕರಣಗಳನ್ನು ದಾಖಲಿಸಲಾಗುವುದು ಎಂಬುದರ ಬಗ್ಗೆ ಇನ್ನಷ್ಟೆ ತಿಳಿಯಬೇಕಿದೆ.
MOST READ: ಕಾರಿನೊಳಗೆ ಸಿಲುಕಿದ್ದ ಮಗು- ಕೊನೆಗೂ ಬಚಾವ್ ಆಗಿದ್ದು ಹೇಗೆ ಗೊತ್ತಾ?
ಯುವಕನ ತಂದೆ ಹರಿಯಾಣದಲ್ಲಿ ಭೂಮಾಲೀಕರು ಎಂಬುದನ್ನು ಬಿಟ್ಟರೆ ಬೇರೆ ಮಾಹಿತಿಗಳು ತಿಳಿದು ಬಂದಿಲ್ಲ. ಯುವಕನು ಇನ್ನೂ ಚಿಕ್ಕ ವಯಸ್ಸಾವನಾಗಿದ್ದು, ತನ್ನ ಕೋಪವನ್ನು ತೋರಿಸಲು ಈ ರೀತಿಯಾಗಿ ಮಾಡಿದ್ದಾನೆ. ಐಷಾರಾಮಿ ಕಾರುಗಳಾದ ಬಿಎಂಡಬ್ಲ್ಯು, ಆಡಿ ಹಾಗೂ ಮರ್ಸಿಡಿಸ್ ಬೆಂಜ್, ಹರಿಯಾಣದ ಬಹುತೇಕ ಭಾಗಗಳಲ್ಲಿ ಸಾಮಾನ್ಯವಾಗಿವೆ.
MOST READ: ಸಾವಿನಂಚಿನಿಂದ ಬಚಾವ್ ಆದ ಕೆಟಿಎಂ ಬೈಕ್ ಸವಾರ
ಮೂಲಸೌಕರ್ಯ ಯೋಜನೆಗಳಿಗಾಗಿ ಜಮೀನುಗಳನ್ನು ಸರ್ಕಾರಕ್ಕೆ ಮಾರಾಟ ಮಾಡುವ ಮೂಲಕ ಭೂಮಾಲೀಕರು ಹಾಗೂ ರೈತರು ಸರ್ಕಾರದಿಂದ ಭಾರಿ ಮೊತ್ತವನ್ನು ಪಡೆಯುತ್ತಿದ್ದಾರೆ. ಅನೇಕ ಜನ ಆ ಹಣದಿಂದಲೇ ಇಂತಹ ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಖರೀದಿಸುತ್ತಿದ್ದಾರೆ.
MOST READ: ಕಳಪೆ ಕಾಮಗಾರಿ ಮಾಡಿದ ಎಂಜಿನಿಯರ್ ಮೇಲೆ ಕೆಸರು ಸುರಿದ ಶಾಸಕ
ನಿರ್ವಹಣಾ ವೆಚ್ಚವು ತುಂಬಾ ಹೆಚ್ಚಾಗಿರುವುದರಿಂದ ಇಂತಹ ದುಬಾರಿ ಬೆಲೆಯ ವಾಹನಗಳನ್ನು ಖರೀದಿಸುವುದಕ್ಕೆ ಜನರು ಹಿಂದೇಟು ಹಾಕುತ್ತಿದ್ದು, ಹೊಸ ಕಾರುಗಳನ್ನು ಖರೀದಿಸುವಾಗ ಅವುಗಳನ್ನು ಪರಿಗಣಿಸುತ್ತಿಲ್ಲ.
ಐಷಾರಾಮಿ ಕಾರುಗಳಾದ ಆಡಿ, ಜಾಗ್ವಾರ್, ಬಿಎಂಡಬ್ಲ್ಯು ಹೆಸರುಗಳನ್ನು ಸ್ಥಳೀಯ ಹಾಡುಗಳಲ್ಲಿ ಹಾಗೂ ಪಂಜಾಬಿ ಹಾಡುಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ಇದು ಯುವಕರು ಅಂತಹ ಕಾರುಗಳನ್ನು ಖರೀದಿಸಲು ಪ್ರಭಾವ ಬೀರುತ್ತವೆ.