Just In
- 1 hr ago ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- 1 hr ago ಸಾಮಾನ್ಯರಂತೆ ಹಳ್ಳಿಯಲ್ಲಿರುವ ದೇಶದ 55ನೇ ಶ್ರೀಮಂತ ಶ್ರೀಧರ್ ವೆಂಬು: ಕಚೇರಿಗೆ ಹೋಗಲು ಎಲೆಕ್ಟ್ರಿಕ್ ಆಟೋ ಖರೀದಿ!
- 4 hrs ago ಹ್ಯುಂಡೈ ವೆರ್ನಾ ಕಾರಿಗೆ ಭಾರೀ ಡಿಸ್ಕೌಂಟ್: ರಾಶಿ ಫೀಚರ್ನ ಕಾರಿಗೆ ಇಷ್ಟು ಆಫರ್ ಯಾಕೆಂದ ನೆಟ್ಟಿಗರು!
- 17 hrs ago ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಲು ಹೊಸ ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ಅನಾವರಣ
Don't Miss!
- News Ballari Lok Sabha Election: ಶ್ರೀರಾಮುಲು ಪತ್ನಿ ನಾಮಪತ್ರ ವಾಪಸ್, ಅಂತಿಮ ಕಣದಲ್ಲಿ 10 ಅಭ್ಯರ್ಥಿಗಳು
- Technology ನಾಳೆ ವಿವೋದ ಈ ಹೊಸ ಫೋನ್ ಫಸ್ಟ್ ಸೇಲ್!..ಬಜೆಟ್ ಬೆಲೆಗೆ ಲಭ್ಯ!
- Movies ಕಲರ್ಫುಲ್ ಲೈಟು.. ಡಿಂಪಲ್ ಸ್ಮೈಲು.. 'ಸಂಜು ವೆಡ್ಸ್ ಗೀತಾ 2' ಒಂದು ಹಾಡಿನ ಸೆಟ್ಟಿಗೆ ಬರೋಬ್ಬರಿ ₹50 ಲಕ್ಷ!
- Lifestyle ಪ್ರತಿ ಲೀ ಕತ್ತೆ ಹಾಲಿಗೆ ₹5,000..! 20 ಕತ್ತೆಗಳ ಮೂಲಕ ₹2.5 ಕೋಟಿ ವ್ಯವಹಾರ..!
- Sports T20 World Cup 2024: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆರಂಭಿಕರನ್ನು ಸೂಚಿಸಿದ ಸೌರವ್ ಗಂಗೂಲಿ
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೊಬೈಲ್ ಸಲೂನ್ ಮೂಲಕ ಹೊಸ ಕ್ರಾಂತಿಯನ್ನುಂಟು ಮಾಡಿದ ಚಿಕ್ಕಮಗಳೂರಿನ ಯುವಕ
ಕರೋನಾ ವೈರಸ್'ನಿಂದಾಗಿ ಹಲವಾರು ಜನರು ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ. ಭಾರತವೂ ಸೇರಿದಂತೆ ವಿಶ್ವಾದ್ಯಂತ ಜನ ಜೀವನ ಕಳೆದ ಒಂದೂವರೆ ವರ್ಷದಿಂದ ಕರೋನಾ ವೈರಸ್ ಕಾರಣಕ್ಕೆ ತತ್ತರಿಸಿ ಹೋಗಿದೆ.
ಉದ್ಯೋಗ ಅರಸಿ ಹೊರ ದೇಶಗಳಿಗೆ ಹೋಗಿದ್ದವರು ಯಾವುದೇ ಕೆಲಸವಿಲ್ಲದೆ ಭಾರತಕ್ಕೆ ಹಿಂತಿರುಗಿದರು. ಇನ್ನೇನು ಜನ ಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ ಎನ್ನುವಷ್ಟರಲ್ಲಿಯೇ ಕರೋನಾ ವೈರಸ್ ಎರಡನೇ ಅಲೆ ಅಟ್ಟಹಾಸ ಮೆರೆಯಿತು.
ಕರೋನಾ ವೈರಸ್ ಕಾರಣಕ್ಕೆ ಹಲವಾರು ಜನರು ಉದ್ಯೋಗ ಕಳೆದುಕೊಂಡು ಪರಿತಪಿಸುತ್ತಿದ್ದಾರೆ. ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮಾತ್ರವಲ್ಲದೇಪದವೀಧರರು ಸಹ ಉಳಿವಿಗಾಗಿ ಲಭ್ಯವಿರುವ ಉದ್ಯೋಗಗಳನ್ನು ಮಾಡುತ್ತಿದ್ದಾರೆ.
ಈ ಲೇಖನದಲ್ಲಿ ತಮ್ಮ ಬುದ್ದಿವಂತಿಕೆಯಿಂದ ವಿಭಿನ್ನ ಸಾಹಸಕ್ಕೆ ಕೈ ಹಾಕಿರುವ ಯುವಕನ ಬಗೆಗಿನ ಸುದ್ದಿಯನ್ನು ನೋಡೋಣ. ಚಿಕ್ಕಮಗಳೂರಿನ 32 ವರ್ಷದ ಶಿವಪ್ಪ ಎಂಬ ಈ ಯುವಕ ಮೊಬೈಲ್ ಸಲೂನ್ ತೆರೆದು ಇತರರಿಗೆ ಮಾದರಿಯಾಗಿದ್ದಾರೆ.
ಕಳೆದ ವರ್ಷ ಏಕಾಏಕಿ ಲಾಕ್ಡೌನ್ ಜಾರಿಗೊಳಿಸಿದ ಕಾರಣಕ್ಕೆ ದಿನ ನಿತ್ಯದ ದುಡಿಮೆಯನ್ನು ನಂಬಿಕೊಂಡಿದ್ದವರು ಕೆಲಸ ಕಳೆದುಕೊಂಡರು. ಅಂತಹ ಜನರಲ್ಲಿ ಶಿವಪ್ಪ ಸಹ ಒಬ್ಬರು. ಅವರು ತಮ್ಮ ಹತ್ತನೇ ವಯಸ್ಸಿನಲ್ಲಿ ರಾಯಚೂರಿನಿಂದ ಚಿಕ್ಕಮಗಳೂರಿಗೆ ಬಂದು ನೆಲೆಸಿದರು.
ತಮ್ಮ ಹತ್ತನೇ ವಯಸ್ಸಿನಲ್ಲಿಯೇ ಅವರು ಕ್ಷೌರ ವೃತ್ತಿಯನ್ನು ಶುರು ಮಾಡಿದ್ದರು. ಲಾಕ್ಡೌನ್ ನಂತರ ಏನು ಮಾಡಬೇಕೆಂದು ತೋಚದೇ ಗೊಂದಲದಲ್ಲಿದ್ದ ಶಿವಪ್ಪನವರಲ್ಲಿ ಹೊಸ ಆಲೋಚನೆ ಹುಟ್ಟಿದೆ.
ಮೊಬೈಲ್ ತರಕಾರಿ ಅಂಗಡಿಗಳಂತೆಯೇ ಮೊಬೈಲ್ ಹೇರ್ ಸಲೂನ್ ಏಕೆ ಆರಂಭಿಸಬಾರದು ಎಂಬ ಆಲೋಚನೆ ಅವರಲ್ಲಿ ಮೂಡಿದೆ. ನಂತರ ಅವರು ಸಣ್ಣ ಗೂಡ್ಸ್ ಆಟೋವನ್ನು ಖರೀದಿಸಿ ಅದನ್ನು ಮೊಬೈಲ್ ಸಲೂನ್ ಆಗಿ ಬದಲಿಸಿದ್ದಾರೆ.
ಈಗ ಅವರು ತಾವು ವಾಸಿಸುವ ಪ್ರದೇಶದಲ್ಲಿ ಮಾತ್ರವಲ್ಲದೆ ಸುತ್ತಮುತ್ತಲ ಪ್ರದೇಶಗಳಿಗೂ ತೆರಳಿ ಸೇವೆ ನೀಡುತ್ತಿದ್ದಾರೆ. ಫೇಸ್ಬುಕ್'ನಲ್ಲಿ ವ್ಯಕ್ತಿಯೊಬ್ಬ ಮೊಬೈಲ್ ಸಲೂನ್ ಮುಂದೆ ನಿಂತು ಪೋಸ್ ನೀಡುತ್ತಿದ್ದಿದ್ದು ಅವರಲ್ಲಿ ಹೊಸ ಆಲೋಚನೆ ಮೂಡುವಂತೆ ಮಾಡಿದೆ.
ತಮ್ಮ ಮೊಬೈಲ್ ಸಲೂನ್ ಬಗ್ಗೆ ಮಾತನಾಡಿರುವ ಶಿವಪ್ಪ ನಾನು ಮೊದಲು ತಿಂಗಳಿಗೆ ರೂ.10,000 ದುಡಿಯುತ್ತಿದ್ದೆ. ಆದರೆ ಈಗ ಮೊಬೈಲ್ ಸಲೂನ್ ಮೂಲಕ ದಿನಕ್ಕೆ ರೂ.1,500ದಿಂದ ರೂ.2,000 ಗಳಿಸುತ್ತಿರುವುದಾಗಿ ತಿಳಿಸಿದರು.
ಶಿವಪ್ಪ ತನ್ನ ವಾಹನದಲ್ಲಿ ಚಿಕ್ಕಮಗಳೂರಿನ ಸುತ್ತ ಮುತ್ತಲಿರುವ ಜನರಲ್ಲಿ ತಮ್ಮ ಫೋನ್ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ. ಶಿವಪ್ಪನವರು ತಮ್ಮ ಮೊಬೈಲ್ಸಲೂನ್'ಗೆ ಸಂಚಾರಿ ಹೆಬ್ಬುಲಿ ಹೇರ್ ಡ್ರೆಸರ್ ಎಂಬ ಹೆಸರನ್ನಿಟ್ಟಿದ್ದಾರೆ.
ಚಿತ್ರ ಕೃಪೆ: ಮೊದಲ ಚಿತ್ರವನ್ನು ನ್ಯೂಸ್ 18ನಿಂದ ಪಡೆಯಲಾಗಿದ್ದು, ಉಳಿದ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.