Just In
- 45 min ago ನಟ ವಿಜಯ್ ನೋಡಲು ಬಂದ ಜನಸಾಗರ: ಅಭಿಮಾನಿಗಳಿಂದ ನಟನ ಕಾರಿಗೆ ಹಾನಿ!
- 1 hr ago ಕಾಶ್ಮೀರ ಟು ಕನ್ಯಾಕುಮಾರಿ ಟ್ರಿಪ್ ಮುಗಿಸಿದ ಎಲೆಕ್ಟ್ರಿಕ್ ಸ್ಕೂಟರ್: ಗೇಮ್ ಚೇಂಜರ್ ಅಖಾಡಕ್ಕೆ
- 2 hrs ago Mahindra Bolero: ಅಪಘಾತವಾದ ಕಾರಿಗೆ ಅದ್ದೂರಿ ಮಾಡಿಫಿಕೇಷನ್: ವಿಡಿಯೋಗೆ ವಾವ್ ಎನ್ನಲೇಬೇಕು!
- 3 hrs ago ಭಾರತದ ರಸ್ತೆಯಲ್ಲಿ ಘರ್ಜಿಸಲು ಬಂದ ಪವರ್ಫುಲ್ ಎಪ್ರಿಲಿಯಾ ಬೈಕ್ ವಿತರಣೆ ಮಾಹಿತಿ ಬಹಿರಂಗ
Don't Miss!
- Lifestyle ಫಳ ಫಳ ಹೊಳೆಯುವ ಕೆಂಪು ನಾಗರ ನೋಡಿದ್ದೀರಾ..? ವೈರಲ್ ಆಗ್ತಿದೆ ವಿಡಿಯೋ..!
- Technology ಬಹುನಿರೀಕ್ಷಿತ ರಿಯಲ್ಮಿ ನಾರ್ಜೋ 70 ಪ್ರೊ 5G ಲಾಂಚ್!..ಇಯರ್ಬಡ್ಸ್ ಉಚಿತ!
- Movies ಅಪ್ಪು ಮನೆಗೆ ಭೇಟಿ ಕೊಟ್ಟ ಶೋಭಾ ಕರಂದ್ಲಾಜೆ; ಸಾಥ್ ಕೊಟ್ಟ ಸಿ ಎನ್ ಅಶ್ವತ್ಥನಾರಾಯಣ
- News ಜಗದೀಶ್ ಶೆಟ್ಟರ್ಗೆ ಬೆಳಗಾವಿ ಸ್ಪರ್ಧೆ ಮತ್ತಷ್ಟು ಜಟೀಲ: ಗೋಬ್ಯಾಕ್ ಅಭಿಯಾನ ಯಶಸ್ವಿ ಆಯ್ತಾ?
- Sports IPL ಬಿಡಿ, WPLನಲ್ಲಿ ಆರ್ಸಿಬಿಗೆ ಗೆದ್ದ ಮೊತ್ತಕ್ಕೂ ಸಮವಿಲ್ಲ PSL ವಿಜೇತರಿಗೆ ಸಿಕ್ಕ ಬಹುಮಾನ
- Finance ಬೆಂಗಳೂರಿನ ಮೇಘನಾ ಫುಡ್ಸ್ ಹೋಟೆಲ್ ಮಳಿಗೆಗಳ ಮೇಲೆ ಐಟಿ ದಾಳಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೊಬೈಲ್ ಸಲೂನ್ ಮೂಲಕ ಹೊಸ ಕ್ರಾಂತಿಯನ್ನುಂಟು ಮಾಡಿದ ಚಿಕ್ಕಮಗಳೂರಿನ ಯುವಕ
ಕರೋನಾ ವೈರಸ್'ನಿಂದಾಗಿ ಹಲವಾರು ಜನರು ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ. ಭಾರತವೂ ಸೇರಿದಂತೆ ವಿಶ್ವಾದ್ಯಂತ ಜನ ಜೀವನ ಕಳೆದ ಒಂದೂವರೆ ವರ್ಷದಿಂದ ಕರೋನಾ ವೈರಸ್ ಕಾರಣಕ್ಕೆ ತತ್ತರಿಸಿ ಹೋಗಿದೆ.
ಉದ್ಯೋಗ ಅರಸಿ ಹೊರ ದೇಶಗಳಿಗೆ ಹೋಗಿದ್ದವರು ಯಾವುದೇ ಕೆಲಸವಿಲ್ಲದೆ ಭಾರತಕ್ಕೆ ಹಿಂತಿರುಗಿದರು. ಇನ್ನೇನು ಜನ ಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ ಎನ್ನುವಷ್ಟರಲ್ಲಿಯೇ ಕರೋನಾ ವೈರಸ್ ಎರಡನೇ ಅಲೆ ಅಟ್ಟಹಾಸ ಮೆರೆಯಿತು.
ಕರೋನಾ ವೈರಸ್ ಕಾರಣಕ್ಕೆ ಹಲವಾರು ಜನರು ಉದ್ಯೋಗ ಕಳೆದುಕೊಂಡು ಪರಿತಪಿಸುತ್ತಿದ್ದಾರೆ. ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮಾತ್ರವಲ್ಲದೇಪದವೀಧರರು ಸಹ ಉಳಿವಿಗಾಗಿ ಲಭ್ಯವಿರುವ ಉದ್ಯೋಗಗಳನ್ನು ಮಾಡುತ್ತಿದ್ದಾರೆ.
ಈ ಲೇಖನದಲ್ಲಿ ತಮ್ಮ ಬುದ್ದಿವಂತಿಕೆಯಿಂದ ವಿಭಿನ್ನ ಸಾಹಸಕ್ಕೆ ಕೈ ಹಾಕಿರುವ ಯುವಕನ ಬಗೆಗಿನ ಸುದ್ದಿಯನ್ನು ನೋಡೋಣ. ಚಿಕ್ಕಮಗಳೂರಿನ 32 ವರ್ಷದ ಶಿವಪ್ಪ ಎಂಬ ಈ ಯುವಕ ಮೊಬೈಲ್ ಸಲೂನ್ ತೆರೆದು ಇತರರಿಗೆ ಮಾದರಿಯಾಗಿದ್ದಾರೆ.
ಕಳೆದ ವರ್ಷ ಏಕಾಏಕಿ ಲಾಕ್ಡೌನ್ ಜಾರಿಗೊಳಿಸಿದ ಕಾರಣಕ್ಕೆ ದಿನ ನಿತ್ಯದ ದುಡಿಮೆಯನ್ನು ನಂಬಿಕೊಂಡಿದ್ದವರು ಕೆಲಸ ಕಳೆದುಕೊಂಡರು. ಅಂತಹ ಜನರಲ್ಲಿ ಶಿವಪ್ಪ ಸಹ ಒಬ್ಬರು. ಅವರು ತಮ್ಮ ಹತ್ತನೇ ವಯಸ್ಸಿನಲ್ಲಿ ರಾಯಚೂರಿನಿಂದ ಚಿಕ್ಕಮಗಳೂರಿಗೆ ಬಂದು ನೆಲೆಸಿದರು.
ತಮ್ಮ ಹತ್ತನೇ ವಯಸ್ಸಿನಲ್ಲಿಯೇ ಅವರು ಕ್ಷೌರ ವೃತ್ತಿಯನ್ನು ಶುರು ಮಾಡಿದ್ದರು. ಲಾಕ್ಡೌನ್ ನಂತರ ಏನು ಮಾಡಬೇಕೆಂದು ತೋಚದೇ ಗೊಂದಲದಲ್ಲಿದ್ದ ಶಿವಪ್ಪನವರಲ್ಲಿ ಹೊಸ ಆಲೋಚನೆ ಹುಟ್ಟಿದೆ.
ಮೊಬೈಲ್ ತರಕಾರಿ ಅಂಗಡಿಗಳಂತೆಯೇ ಮೊಬೈಲ್ ಹೇರ್ ಸಲೂನ್ ಏಕೆ ಆರಂಭಿಸಬಾರದು ಎಂಬ ಆಲೋಚನೆ ಅವರಲ್ಲಿ ಮೂಡಿದೆ. ನಂತರ ಅವರು ಸಣ್ಣ ಗೂಡ್ಸ್ ಆಟೋವನ್ನು ಖರೀದಿಸಿ ಅದನ್ನು ಮೊಬೈಲ್ ಸಲೂನ್ ಆಗಿ ಬದಲಿಸಿದ್ದಾರೆ.
ಈಗ ಅವರು ತಾವು ವಾಸಿಸುವ ಪ್ರದೇಶದಲ್ಲಿ ಮಾತ್ರವಲ್ಲದೆ ಸುತ್ತಮುತ್ತಲ ಪ್ರದೇಶಗಳಿಗೂ ತೆರಳಿ ಸೇವೆ ನೀಡುತ್ತಿದ್ದಾರೆ. ಫೇಸ್ಬುಕ್'ನಲ್ಲಿ ವ್ಯಕ್ತಿಯೊಬ್ಬ ಮೊಬೈಲ್ ಸಲೂನ್ ಮುಂದೆ ನಿಂತು ಪೋಸ್ ನೀಡುತ್ತಿದ್ದಿದ್ದು ಅವರಲ್ಲಿ ಹೊಸ ಆಲೋಚನೆ ಮೂಡುವಂತೆ ಮಾಡಿದೆ.
ತಮ್ಮ ಮೊಬೈಲ್ ಸಲೂನ್ ಬಗ್ಗೆ ಮಾತನಾಡಿರುವ ಶಿವಪ್ಪ ನಾನು ಮೊದಲು ತಿಂಗಳಿಗೆ ರೂ.10,000 ದುಡಿಯುತ್ತಿದ್ದೆ. ಆದರೆ ಈಗ ಮೊಬೈಲ್ ಸಲೂನ್ ಮೂಲಕ ದಿನಕ್ಕೆ ರೂ.1,500ದಿಂದ ರೂ.2,000 ಗಳಿಸುತ್ತಿರುವುದಾಗಿ ತಿಳಿಸಿದರು.
ಶಿವಪ್ಪ ತನ್ನ ವಾಹನದಲ್ಲಿ ಚಿಕ್ಕಮಗಳೂರಿನ ಸುತ್ತ ಮುತ್ತಲಿರುವ ಜನರಲ್ಲಿ ತಮ್ಮ ಫೋನ್ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ. ಶಿವಪ್ಪನವರು ತಮ್ಮ ಮೊಬೈಲ್ಸಲೂನ್'ಗೆ ಸಂಚಾರಿ ಹೆಬ್ಬುಲಿ ಹೇರ್ ಡ್ರೆಸರ್ ಎಂಬ ಹೆಸರನ್ನಿಟ್ಟಿದ್ದಾರೆ.
ಚಿತ್ರ ಕೃಪೆ: ಮೊದಲ ಚಿತ್ರವನ್ನು ನ್ಯೂಸ್ 18ನಿಂದ ಪಡೆಯಲಾಗಿದ್ದು, ಉಳಿದ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.