Just In
- 39 min ago Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- 12 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 13 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 15 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
Don't Miss!
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Movies Neha Murder Case: ನೇಹಾ ಹತ್ಯೆ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಾಕ್ ಡೌನ್ ಎಫೆಕ್ಟ್: ಸಂಕಷ್ಟಕ್ಕೆ ಸಿಲುಕಿದ ಕ್ಯಾಬ್ ಚಾಲಕರು
ಕೋವಿಡ್ -19 ವೈರಸ್ ಭಾರತದಲ್ಲಿ ವೇಗವಾಗಿ ಹರಡುತ್ತಿರುವ ಕಾರಣಕ್ಕೆ ಏಪ್ರಿಲ್ 14ರವರೆಗೆ 21 ದಿನಗಳ ಕಾಲ ಲಾಕ್ ಡೌನ್ ಘೋಷಿಸಲಾಗಿದೆ. ಕೋವಿಡ್ -19 ವೈರಸ್ ಹರಡದಂತೆ ತಡೆಯಲು ಇದು ಸೂಕ್ತವಾದ ಕ್ರಮವಾಗಿದ್ದರೂ, ಅನೇಕರ ಜೀವನ ಅತಂತ್ರಕ್ಕೆ ಸಿಲುಕಿದೆ.
ಎಲ್ಲಾ ರೀತಿಯ ಸಾರಿಗೆ ಸೌಲಭ್ಯಗಳನ್ನು ರದ್ದುಪಡಿಸಲಾಗಿದೆ. ಇದರಿಂದಾಗಿ ಕ್ಯಾಬ್ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವರದಿಗಳ ಪ್ರಕಾರ ಆಂಧ್ರ ಪ್ರದೇಶವೊಂದರಲ್ಲೇ 3,500ಕ್ಕೂ ಹೆಚ್ಚು ಕ್ಯಾಬ್ ಚಾಲಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಸ್ವಯಂಸೇವಕರಿಂದ ಸ್ವಲ್ಪ ಮಟ್ಟಿನ ನೆರವು ದೊರೆಯುತ್ತಿರುವುದು ಕ್ಯಾಬ್ ಚಾಲಕರಿಗೆ ಅಲ್ಪ ಪ್ರಮಾಣದ ಸಮಾಧಾನ ತಂದಿದೆ. ಕ್ಯಾಬ್ ಚಾಲಕರೊಬ್ಬರು ಮಾತನಾಡಿ ಲಾಕ್ ಡೌನ್ ನಿಂದಾಗಿ ನಾನು ಉಳಿಸಿದ್ದ ಹಣವೆಲ್ಲಾ ಖಾಲಿಯಾಗಿದೆ ಎಂದು ಹೇಳಿದ್ದಾರೆ.
ವಿಶಾಖಪಟ್ಟಣದ ಕ್ಯಾಬ್ ಯೂನಿಯನ್ ಅಧ್ಯಕ್ಷ ಜಗನ್ ರವರು ಮಾತನಾಡಿ, ದಿನನಿತ್ಯದ ಖರ್ಚುಗಳನ್ನು ನಿಭಾಯಿಸುವುದೇ ದೊಡ್ಡ ಸವಾಲಾಗಿದೆ. ಕೆಲವು ಎನ್ಜಿಒಗಳು ಕ್ಯಾಬ್ ಚಾಲಕರಿಗೆ ಅಗತ್ಯ ಸಾಮಗ್ರಿಗಳನ್ನು ನೀಡಲು ಮುಂದೆ ಬಂದಿವೆ. ಆದರೆ ಇನ್ನೂ ಹೆಚ್ಚಿನ ಸಹಾಯದ ಅಗತ್ಯವಿದೆ ಎಂದು ಹೇಳಿದ್ದಾರೆ.
ಅನೇಕ ಕ್ಯಾಬ್ ಚಾಲಕರು ತಮ್ಮ ದೈನಂದಿನ ವೆಚ್ಚವನ್ನು ನಿಭಾಯಿಸಲು ಹೆಣಗಾಡಲಾರಂಭಿಸಿದ್ದಾರೆ ಎಂಬ ವರದಿಗಳಾಗಿವೆ. ಇದರ ಜೊತೆಗೆ ತಮ್ಮ ಕಾರುಗಳನ್ನು ಚಾಲನೆ ಮಾಡದೇ ಒಂದೇ ಕಡೆ ನಿಲ್ಲಿಸಬೇಕಾಗಿದೆ.
ಕಾರುಗಳು ದೀರ್ಘಕಾಲದವರೆಗೆ ಕಾರ್ಯನಿರ್ವಹಿಸದಿದ್ದಾಗ ವಿವಿಧ ಸಮಸ್ಯೆಗಳು ಎದುರಾಗುತ್ತವೆ. ಇದಕ್ಕಾಗಿಯೇ ಆಟೋಮೊಬೈಲ್ ಕಂಪನಿಗಳು ಕ್ಯಾಬ್ ಚಾಲಕರು ಹಾಗೂ ಕಾರು ಮಾಲೀಕರಿಗೆ ಕೆಲವು ಸಲಹೆಗಳನ್ನು ನೀಡುತ್ತಿವೆ.
ಕಾರುಗಳು ಹೆಚ್ಚು ಕಾಲದವರೆಗೆ ನಿಂತಾಗ ಕಾರಿನ ಬ್ಯಾಟರಿ ಹಾಗೂ ಎಂಜಿನ್ ದುರ್ಬಲವಾಗುತ್ತವೆ. ಈ ಕಾರಣಕ್ಕೆ ಕಾರಿನ ಎಂಜಿನ್ ಅನ್ನು ಕನಿಷ್ಠ ಐದು ನಿಮಿಷಗಳ ಕಾಲ ಆನ್ ಮಾಡಬೇಕು ಎಂದು ಹೇಳಿವೆ.
ಲಾಕ್ ಡೌನ್ ಜಾರಿಗೆ ಬಂದ ನಂತರ ಪ್ರಮುಖ ಕಾರು ಕಂಪನಿಗಳು ಈ ಅವಧಿಯಲ್ಲಿ ವಾಹನಗಳನ್ನು ಹೇಗೆ ನಿರ್ವಹಿಸಬೇಕು ಎಂದು ತಮ್ಮ ಗ್ರಾಹಕರಿಗೆ ಸಲಹೆಗಳನ್ನು ನೀಡುತ್ತಿವೆ. ಭಾರತದ ನಂಬರ್ ಒನ್ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಗ್ರಾಹಕರಿಗೆ ಕಾರು ನಿರ್ವಹಣೆ ಬಗ್ಗೆ ಸಲಹೆಗಳನ್ನು ಕಳುಹಿಸುತ್ತಿದೆ.
ನಿಮ್ಮ ವಾಹನವನ್ನು ಆರಂಭಿಸಿ, ಎಂಜಿನ್ ಅನ್ನು 15 ನಿಮಿಷಗಳ ಕಾಲ ಚಾಲನೆಯಲ್ಲಿಡಿ. ಎಸ್ಎಚ್ವಿಎಸ್ ವಾಹನಗಳ ಎಂಜಿನ್ ಹಾಗೂ ಹೆಡ್ಲೈಟ್ ಅನ್ನು ಆನ್ ಮಾಡಿ, 30 ನಿಮಿಷಗಳ ಕಾಲ ಚಾಲನೆಯಲ್ಲಿಡಿ ಎಂದು ಮಾರುತಿ ಸುಜುಕಿ ಕಂಪನಿಯು ತನ್ನ ಸಂದೇಶದಲ್ಲಿ ಹೇಳಿದೆ.
ಮಾರುತಿ ಸುಜುಕಿಯಂತೆ ಇತರ ಕಾರು ಕಂಪನಿಗಳು ಸಹ ತಮ್ಮ ವೆಬ್ಸೈಟ್ ಹಾಗೂ ಅಪ್ಲಿಕೇಶನ್ ಮೂಲಕ ಗ್ರಾಹಕರಿಗೆ ಸಲಹೆ ನೀಡುತ್ತಿವೆ. ಇದರ ಬಗ್ಗೆ ಮಾತನಾಡಿರುವ ಕಾರು ಮಾಲಿಕರೊಬ್ಬರು ಹೆಚ್ಚು ಕಾಲ ಕಾರ್ ಅನ್ನು ಸ್ಟಾರ್ಟ್ ಮಾಡದೇ ಇದ್ದರೆ, ತುರ್ತು ಸಮಯದಲ್ಲಿ ಕಾರು ಸ್ಟಾರ್ಟ್ ಆಗುವುದಿಲ್ಲ.
ಲಾಕ್ ಡೌನ್ ಇನ್ನೂ ಎಷ್ಟು ಕಾಲ ಇರಲಿದೆ ಎಂದು ತಿಳಿದಿಲ್ಲ. ದೀರ್ಘಕಾಲದವರೆಗೆ ಕಾರುಗಳನ್ನು ಸ್ಟಾರ್ಟ್ ಮಾಡದೇ ಇರುವುದರಿಂದ, ಲಾಕ್ ಡೌನ್ ನಂತರ ಕಾರು ಸಮಸ್ಯೆಗಳಿಗೆ ಗುರಿಯಾಗುತ್ತದೆ. ಕಾರು ಕಂಪನಿಗಳು ನೀಡುತ್ತಿರುವ ಸಲಹೆ ನಮಗೆ ತುಂಬಾ ಉಪಯುಕ್ತವಾಗಿದೆ ಎಂದು ಹೇಳಿದ್ದಾರೆ.
ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.