Just In
- 8 hrs ago ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- 9 hrs ago KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- 10 hrs ago ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- 10 hrs ago Maruti Suzuki: 2024ರ ಮಾರುತಿ ಸ್ವಿಫ್ಟ್ ವಿಶೇಷತೆಗಳು: ಸನ್ರೂಫ್, 35 ಕಿ.ಮೀ ಮೈಲೇಜ್!
Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾರು ಸ್ಕ್ರಾಚ್ ಮಾಡಿದ ಪಾದ್ರಿ ಮೇಲೆ ಬಿತ್ತು ಕೇಸ್..!
ಕಳ್ಳತನ, ಕೊಲೆ, ರಾಬರಿ, ಅತ್ಯಾಚಾರದಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಪರಾಧಗಳನ್ನು ತಡೆಗಟ್ಟಲು ಹಾಗೂ ಆರೋಪಿಗಳನ್ನು ಪತ್ತೆಹಚ್ಚಲು ಹಲವೆಡೆ ಸಿಸಿಟಿವಿಗಳನ್ನು ಅಳವಡಿಸಲಾಗಿರುತ್ತಿದೆ.
ಸಿಸಿಟಿವಿಗಳು ರಸ್ತೆ ಅಪಘಾತ, ವಾಹನ ಕಳ್ಳತನ, ರಾಬರಿಗಳಂತಹ ಪ್ರಕರಣಗಳನ್ನು ಪತ್ತೆಹಚ್ಚಲು ನೆರವಾಗುತ್ತಿವೆ. ಇದರ ಜೊತೆಗೆ ಸಿಸಿಟಿವಿಗಳಲ್ಲಿ ಕೆಲವು ಹಾಸ್ಯದ ಸನ್ನಿವೇಶಗಳು ಸಹ ಸೆರೆಯಾಗುತ್ತಿವೆ. ಸಿಸಿಟಿವಿಯಲ್ಲಿ ಕೇರಳದ ಪಾದ್ರಿಯೊಬ್ಬರ ವಿಚಿತ್ರ ವರ್ತನೆ ಸೆರೆಯಾಗಿದೆ.
ಈ ಮೂಲಕ ಪಾದ್ರಿಗಳು ಈ ರೀತಿಯಲ್ಲಿಯೂ ಇರುತ್ತಾರೆ ಎಂಬುದು ಜಗತ್ತಿಗೆ ತಿಳಿದು ಬಂದಿದೆ. ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಬೇರೊಬ್ಬ ವ್ಯಕ್ತಿಗೆ ಸೇರಿದ್ದ ಕಾರ್ ಅನ್ನು ಪಾದ್ರಿಯೊಬ್ಬರು ಕಲ್ಲಿನಿಂದ ಕೆರೆಯುತ್ತಿರುವ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪಾದ್ರಿ ಎಂದಿನಂತೆ ತಮ್ಮ ಪೂಜಾ ಕಾರ್ಯಗಳನ್ನು ಮುಗಿಸಿಕೊಂಡು ಮನೆಗೆ ವಾಪಸಾಗುವಾಗ ಈ ಘಟನೆ ನಡೆದಿದೆ. ಪಾದ್ರಿ ಮನೆಗೆ ಕಾರಿನಲ್ಲಿ ವಾಪಸಾಗುವಾಗ ಆ ರಸ್ತೆಯಲ್ಲಿ ಕೆಂಪು ಬಣ್ಣದ ಮಾರುತಿ ಸುಜುಕಿ ಬಲೆನೊ ಕಾರ್ ಅನ್ನು ಪಾರ್ಕ್ ಮಾಡಲಾಗಿದೆ.
ಪಾದ್ರಿ ತನ್ನ ಕಾರಿನಿಂದ ಕೆಳಗಿಳಿದು ಕಾರು ಚಲಾಯಿಸುತ್ತಿದ್ದ ವ್ಯಕ್ತಿಗೆ ಮುಂದೆ ಹೇಗೆ ಬರಬೇಕೆಂದು ಹೇಳುತ್ತಿದ್ದಾರೆ. ಕಾರು ಮುಂದೆ ಬಂದ ನಂತರ ಪಾರ್ಕ್ ಮಾಡಲಾಗಿದ್ದ ಕಾರಿನ ಪಕ್ಕಕ್ಕೆ ತೆರಳಿ ಅಲ್ಲಿ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ಆ ಕಾರಿನ ಮುಂಭಾಗದಲ್ಲಿ ಕೆರೆದು ಓಡಿಹೋಗಿ ತಮ್ಮ ಕಾರಿನಲ್ಲಿ ಕುಳಿತುಕೊಂಡಿದ್ದಾರೆ.
ಬೆಳಿಗ್ಗೆ ತನ್ನ ಕಾರ್ ಅನ್ನು ಹೊರತೆಗೆದಾಗ ಕಾರು ಮಾಲೀಕನಿಗೆ ತನ್ನ ಕಾರಿನಲ್ಲಿ ಸ್ಕ್ರಾಚ್ಗಳಿರುವುದು ಕಂಡು ಬಂದಿದೆ. ಈ ಸ್ಕ್ರಾಚ್ಗಳು ಪ್ರಾಣಿಗಳಿಂದ ಉಂಟಾಗಿಲ್ಲ ಎಂದು ತಿಳಿದ ನಂತರ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ.
ಸಿಸಿಟಿವಿ ನೋಡಿದ ನಂತರ ಗಾಬರಿಗೊಳಗಾದ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆ ಪಾದ್ರಿಯ ವಿರುದ್ಧ ಕಾರು ನಾಶ ಪಡಿಸಿರುವ ಪ್ರಕರಣವನ್ನು ದಾಖಲಿಸಿದ್ದಾರೆ. ಮತ್ತೊಬ್ಬರ ವಾಹನವನ್ನು ನಾಶಪಡಿಸುವಂತಹ ವಿಕೃತ ಘಟನೆಗಳು ಭಾರತದಲ್ಲಿ ನಡೆಯುತ್ತಲೇ ಇರುತ್ತವೆ.
ಬಹುತೇಕ ಪ್ರಕರಣಗಳು ಹೊಟ್ಟೆ ಉರಿಯ ಕಾರಣಕ್ಕೆ, ಇನ್ನು ಕೆಲವು ಪ್ರಕರಣಗಳು ತಮ್ಮ ಸಿಟ್ಟನ್ನು ಹೊರ ಹಾಕುವ ಕಾರಣಕ್ಕೆ ನಡೆಯುತ್ತವೆ. ಜನರು ತಮ್ಮ ವಾಹನಗಳನ್ನು ಸರಿಯಾಗಿ ಪಾರ್ಕ್ ಮಾಡಿರದಿದ್ದರೆ, ಬೇರೆಯವರಿಗಿಂತ ಬೆಲೆಬಾಳುವ ಕಾರುಗಳನ್ನು ಹೊಂದಿದ್ದರೆ ಈ ರೀತಿಯ ಘಟನೆಗಳು ನಡೆಯುತ್ತವೆ.
ಈ ಕಾರಣಕ್ಕೆ ಜನರು ತಮ್ಮ ವಾಹನಗಳನ್ನು ತಾವೇ ರಕ್ಷಿಸಿಕೊಳ್ಳಬೇಕು. ಆದಷ್ಟು ಸುರಕ್ಷಿತವಾದ ಜಾಗಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡಬೇಕು. ಇದರ ಜೊತೆಗೆ ತಮ್ಮ ವಾಹನಗಳಲ್ಲಿ ಅಲಾರಾಂ ಅಥವಾ ಕ್ಯಾಮರಾಗಳನ್ನು ಅಳವಡಿಸಿಕೊಳ್ಳಬೇಕು.
ವಾಹನಗಳಲ್ಲಿ ಅಲಾರಾಂ ಹೊಂದುವುದರಿಂದ ಯಾರಾದರೂ ವಾಹನವನ್ನು ಕದಿಯಲು ಪ್ರಯತ್ನಿಸಿದರೆ ಅಥವಾ ಹಾಳು ಮಾಡಲು ಪ್ರಯತ್ನ ಪಟ್ಟರೆ ಅಲಾರಾಂಗಳು ಅಲರ್ಟ್ ನೀಡುತ್ತವೆ. ವಾಹನಗಳಲ್ಲಿ ಕ್ಯಾಮರಾಗಳಿದ್ದರೆ ಹಾಳು ಮಾಡುವವರು ಸಿಕ್ಕಿ ಬೀಳುತ್ತಾರೆ.