Just In
- 5 min ago Google Maps: ಇವಿ ಮಾಲೀಕರೇ ಆತಂಕ ಬಿಡಿ... ಗೂಗಲ್ ಮ್ಯಾಪ್ಸ್ ಭರ್ಜರಿ ಅಪ್ಡೇಟ್!
- 31 min ago ಫ್ಯಾಮಿಲಿ ಕಾರಾಗಿ ಜನರ ಮನಗೆದ್ದ ಹ್ಯುಂಡೈ ಅಲ್ಕಾಜರ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- 1 hr ago Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- 2 hrs ago ಜಾವಾ ಮೋಟಾರ್ಸೈಕಲ್ ಮಾಲೀಕರಿಗೆ ಸಿಹಿಸುದ್ದಿ: ಈ ಅವಕಾಶ ಕಳೆದುಕೊಳ್ಳಬೇಡಿ!
Don't Miss!
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- News Bengaluru Suburban Rail Project: ಹಳ್ಳ ಹಿಡಿದ ₹15,767 ಕೋಟಿ ವೆಚ್ಚದ ಕಾಮಗಾರಿ, ಜನಸಾಮಾನ್ಯರು ಹೇಳೋದೇನು ಗೊತ್ತಾ?
- Movies ನಟಿ ಪ್ರೀತಿ ಜಿಂಟಾ ಮದುವೆ ಮುನ್ನವೇ 34 ಮಕ್ಕಳಿಗೆ ತಾಯಿ ಪ್ರೀತಿ ನೀಡಿದ ವಿಷಯ ನಿಮಗೆ ಗೊತ್ತೇ?
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾರು ಸ್ಕ್ರಾಚ್ ಮಾಡಿದ ಪಾದ್ರಿ ಮೇಲೆ ಬಿತ್ತು ಕೇಸ್..!
ಕಳ್ಳತನ, ಕೊಲೆ, ರಾಬರಿ, ಅತ್ಯಾಚಾರದಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಪರಾಧಗಳನ್ನು ತಡೆಗಟ್ಟಲು ಹಾಗೂ ಆರೋಪಿಗಳನ್ನು ಪತ್ತೆಹಚ್ಚಲು ಹಲವೆಡೆ ಸಿಸಿಟಿವಿಗಳನ್ನು ಅಳವಡಿಸಲಾಗಿರುತ್ತಿದೆ.
ಸಿಸಿಟಿವಿಗಳು ರಸ್ತೆ ಅಪಘಾತ, ವಾಹನ ಕಳ್ಳತನ, ರಾಬರಿಗಳಂತಹ ಪ್ರಕರಣಗಳನ್ನು ಪತ್ತೆಹಚ್ಚಲು ನೆರವಾಗುತ್ತಿವೆ. ಇದರ ಜೊತೆಗೆ ಸಿಸಿಟಿವಿಗಳಲ್ಲಿ ಕೆಲವು ಹಾಸ್ಯದ ಸನ್ನಿವೇಶಗಳು ಸಹ ಸೆರೆಯಾಗುತ್ತಿವೆ. ಸಿಸಿಟಿವಿಯಲ್ಲಿ ಕೇರಳದ ಪಾದ್ರಿಯೊಬ್ಬರ ವಿಚಿತ್ರ ವರ್ತನೆ ಸೆರೆಯಾಗಿದೆ.
ಈ ಮೂಲಕ ಪಾದ್ರಿಗಳು ಈ ರೀತಿಯಲ್ಲಿಯೂ ಇರುತ್ತಾರೆ ಎಂಬುದು ಜಗತ್ತಿಗೆ ತಿಳಿದು ಬಂದಿದೆ. ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಬೇರೊಬ್ಬ ವ್ಯಕ್ತಿಗೆ ಸೇರಿದ್ದ ಕಾರ್ ಅನ್ನು ಪಾದ್ರಿಯೊಬ್ಬರು ಕಲ್ಲಿನಿಂದ ಕೆರೆಯುತ್ತಿರುವ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪಾದ್ರಿ ಎಂದಿನಂತೆ ತಮ್ಮ ಪೂಜಾ ಕಾರ್ಯಗಳನ್ನು ಮುಗಿಸಿಕೊಂಡು ಮನೆಗೆ ವಾಪಸಾಗುವಾಗ ಈ ಘಟನೆ ನಡೆದಿದೆ. ಪಾದ್ರಿ ಮನೆಗೆ ಕಾರಿನಲ್ಲಿ ವಾಪಸಾಗುವಾಗ ಆ ರಸ್ತೆಯಲ್ಲಿ ಕೆಂಪು ಬಣ್ಣದ ಮಾರುತಿ ಸುಜುಕಿ ಬಲೆನೊ ಕಾರ್ ಅನ್ನು ಪಾರ್ಕ್ ಮಾಡಲಾಗಿದೆ.
ಪಾದ್ರಿ ತನ್ನ ಕಾರಿನಿಂದ ಕೆಳಗಿಳಿದು ಕಾರು ಚಲಾಯಿಸುತ್ತಿದ್ದ ವ್ಯಕ್ತಿಗೆ ಮುಂದೆ ಹೇಗೆ ಬರಬೇಕೆಂದು ಹೇಳುತ್ತಿದ್ದಾರೆ. ಕಾರು ಮುಂದೆ ಬಂದ ನಂತರ ಪಾರ್ಕ್ ಮಾಡಲಾಗಿದ್ದ ಕಾರಿನ ಪಕ್ಕಕ್ಕೆ ತೆರಳಿ ಅಲ್ಲಿ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ಆ ಕಾರಿನ ಮುಂಭಾಗದಲ್ಲಿ ಕೆರೆದು ಓಡಿಹೋಗಿ ತಮ್ಮ ಕಾರಿನಲ್ಲಿ ಕುಳಿತುಕೊಂಡಿದ್ದಾರೆ.
ಬೆಳಿಗ್ಗೆ ತನ್ನ ಕಾರ್ ಅನ್ನು ಹೊರತೆಗೆದಾಗ ಕಾರು ಮಾಲೀಕನಿಗೆ ತನ್ನ ಕಾರಿನಲ್ಲಿ ಸ್ಕ್ರಾಚ್ಗಳಿರುವುದು ಕಂಡು ಬಂದಿದೆ. ಈ ಸ್ಕ್ರಾಚ್ಗಳು ಪ್ರಾಣಿಗಳಿಂದ ಉಂಟಾಗಿಲ್ಲ ಎಂದು ತಿಳಿದ ನಂತರ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ.
ಸಿಸಿಟಿವಿ ನೋಡಿದ ನಂತರ ಗಾಬರಿಗೊಳಗಾದ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆ ಪಾದ್ರಿಯ ವಿರುದ್ಧ ಕಾರು ನಾಶ ಪಡಿಸಿರುವ ಪ್ರಕರಣವನ್ನು ದಾಖಲಿಸಿದ್ದಾರೆ. ಮತ್ತೊಬ್ಬರ ವಾಹನವನ್ನು ನಾಶಪಡಿಸುವಂತಹ ವಿಕೃತ ಘಟನೆಗಳು ಭಾರತದಲ್ಲಿ ನಡೆಯುತ್ತಲೇ ಇರುತ್ತವೆ.
ಬಹುತೇಕ ಪ್ರಕರಣಗಳು ಹೊಟ್ಟೆ ಉರಿಯ ಕಾರಣಕ್ಕೆ, ಇನ್ನು ಕೆಲವು ಪ್ರಕರಣಗಳು ತಮ್ಮ ಸಿಟ್ಟನ್ನು ಹೊರ ಹಾಕುವ ಕಾರಣಕ್ಕೆ ನಡೆಯುತ್ತವೆ. ಜನರು ತಮ್ಮ ವಾಹನಗಳನ್ನು ಸರಿಯಾಗಿ ಪಾರ್ಕ್ ಮಾಡಿರದಿದ್ದರೆ, ಬೇರೆಯವರಿಗಿಂತ ಬೆಲೆಬಾಳುವ ಕಾರುಗಳನ್ನು ಹೊಂದಿದ್ದರೆ ಈ ರೀತಿಯ ಘಟನೆಗಳು ನಡೆಯುತ್ತವೆ.
ಈ ಕಾರಣಕ್ಕೆ ಜನರು ತಮ್ಮ ವಾಹನಗಳನ್ನು ತಾವೇ ರಕ್ಷಿಸಿಕೊಳ್ಳಬೇಕು. ಆದಷ್ಟು ಸುರಕ್ಷಿತವಾದ ಜಾಗಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡಬೇಕು. ಇದರ ಜೊತೆಗೆ ತಮ್ಮ ವಾಹನಗಳಲ್ಲಿ ಅಲಾರಾಂ ಅಥವಾ ಕ್ಯಾಮರಾಗಳನ್ನು ಅಳವಡಿಸಿಕೊಳ್ಳಬೇಕು.
ವಾಹನಗಳಲ್ಲಿ ಅಲಾರಾಂ ಹೊಂದುವುದರಿಂದ ಯಾರಾದರೂ ವಾಹನವನ್ನು ಕದಿಯಲು ಪ್ರಯತ್ನಿಸಿದರೆ ಅಥವಾ ಹಾಳು ಮಾಡಲು ಪ್ರಯತ್ನ ಪಟ್ಟರೆ ಅಲಾರಾಂಗಳು ಅಲರ್ಟ್ ನೀಡುತ್ತವೆ. ವಾಹನಗಳಲ್ಲಿ ಕ್ಯಾಮರಾಗಳಿದ್ದರೆ ಹಾಳು ಮಾಡುವವರು ಸಿಕ್ಕಿ ಬೀಳುತ್ತಾರೆ.