Just In
- 7 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 8 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 9 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 9 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾರು ಚಾಲಕನ ಎಡವಟ್ಟು- ಚಲಿಸುತ್ತಿದ್ದ ರೈಲಿಗೆ ಅಡ್ಡ ನಿಂತ ಬೊಲೆರೊ.!
ಬೊಲೆರೊ ಕಾರೊಂದು ಹಳಿ ಮಧ್ಯದಲ್ಲಿ ಸಿಲುಕಿದ ಪರಿಣಾಮ ರೈಲು ತಡವಾಗಿ ಚಲಿಸಿರುವ ಘಟನೆ ನಡೆದಿದ್ದು, ಅದೃಷ್ಟವಶಾತ್ ಸ್ಥಳೀಯ ನೆರವಿನಿಂದಾಗಿ ಕಾರು ಮಾಲೀಕನು ಆಗಬಹುದಾದ ಭೀಕರ ದುರಂತದಿಂದ ಪಾರಾಗಿದ್ದಾನೆ.
ಭಾರತದಲ್ಲಿ ರೈಲು ಹಳಿ ದಾಟುವ ವೇಳೆ ದಿನಂಪ್ರತಿ ಹತ್ತಾರು ಭೀಕರ ದುರಂತಗಳು ಸಂಭವಿಸುತ್ತಲೇ ಇರುತ್ತವೆ. ಕೆಲವು ಕಡೆಗಳಲ್ಲಿ ರೈಲ್ವೆ ಹಳಿಗೆ ಹೊಂದಿಕೊಂಡತ್ತಿರುವ ಪ್ರಮುಖ ರಸ್ತೆಗಳಲ್ಲಿ ಗೇಟ್ ಹಾಕಿದ್ದರು ಸಹ ಅವಸರದಲ್ಲಿ ರೈಲು ಹಳಿ ದಾಟುವಾಗ ಆಗುವ ಕೆಲವು ಪ್ರಮಾದಗಳಿಂದಲೂ ಅನೇಕ ಅಪಘಾತಗಳು ಸಂಭವಿಸುತ್ತಿದ್ದು, ಇಲ್ಲೂ ಕೂಡಾ ಮಹೀಂದ್ರಾ ಬೊಲೆರೊ ಕಾರು ಚಾಲಕ ಕೂಡಾ ಹೀಗೆ ಅಡ್ಡಮಾರ್ಗದಲ್ಲಿ ಹೋಗಲು ಪ್ರಯತ್ನಿಸಿ ಹಳಿ ಮಧ್ಯೆ ಸಿಲುಕಿ ಪರದಾಟಿದ್ದಾನೆ.
ರೈಲ್ವೆ ಅಂಡರ್ ಬ್ರಿಡ್ಜ್ ನಿರ್ಮಾಣ ಹಿನ್ನೆಲೆಯಲ್ಲಿ ಹಳಿ ಮೇಲಿನ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದರು ಸಹ ಅದೇ ಮಾರ್ಗದಲ್ಲಿ ಸಂಚರಿಸಲು ಯತ್ನಿಸುತ್ತಿರುವಾಗ ಈ ಘಟನೆ ನಡೆದಿದ್ದು, ಇದೇ ವೇಳೆ ವೇಗದಲ್ಲಿದ್ದ ರೈಲು ಸ್ಥಳೀಯರ ಸಮಯ ಪ್ರಜ್ಞೆಯಿಂದ ಸರಿಯಾದ ಸಮಯಕ್ಕೆ ನಿಲುಗಡೆಯಾಗಿದೆ.
ಅಂದಹಾಗೆ ಈ ಘಟನೆಯು ಉತ್ತರಾಖಂಡ್ನಲ್ಲಿ ನಡೆದಿದ್ದು, ಅವಸರದಲ್ಲಿ ಹಳಿ ದಾಟುತ್ತಿದ್ದ ಬೊಲೆರೊ ಚಾಲಕನಿಗೆ ಹಳಿ ಮಧ್ಯೆದಲ್ಲೇ ಕಾರು ಕೈಕೊಟ್ಟಿದೆ. ಹೀಗಾಗಿ ಹಿಂದಕ್ಕೂ ಹೋಗಲಾಗದೇ ಮುಂದುಕ್ಕೂ ಬರಲಾಗದ ಪರಿಸ್ಥಿತಿಗೆ ಸಿಲುಕಿದ್ದ.
ಇದೇ ಸಮಯದಲ್ಲಿ ಆ ಕಡೆಯಿಂದ ರೈಲು ಬರುತ್ತಿರುವುದು ಚಾಲಕನಿಗೆ ಮತ್ತಷ್ಟು ಆತಂಕ ಮೂಡಿಸಿದ್ದಲ್ಲದೇ ಕಾರನ್ನುಅಲ್ಲಿಯೇ ಬಿಟ್ಟು ಬರಲು ಸಹ ಮನಸ್ಸಾಗಿಲ್ಲ. ಈ ವೇಳೆ ಸ್ಥಳೀಯರು ಕೂಡಾ ಚಾಲಕನಿಗೆ ಸಹಾಯ ಮಾಡಿದ್ದಲ್ಲದೇ ಅತ್ತ ಕಡೆಯಿಂದ ಬರುತ್ತಿದ್ದ ರೈಲ್ ಅನ್ನು ಕೆಂಪು ಬಟ್ಟೆ ತೂರುತ್ತಾ ನಿಲುಗಡೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ದೂರದಿಂದಲೇ ಪರಿಸ್ಥಿತಿ ಅರಿತ ರೈಲ್ವೆ ಅಧಿಕಾರಿಗಳು ಸಹ ಹಳಿಯಲ್ಲಿ ಸಿಲುಕಿದ್ದ ಕಾರನ್ನು ಹೊರತೆಗೆಯುವ ತನಕ ಕಾಯ್ದು ಮಾನವೀಯತೆ ಮೆರೆದಿದ್ದಾರೆ. ಇತ್ತ ರೈಲ್ವೆ ಹಳಿಯಿಂದ ಕಾರು ಮೇಲೆ ಎತ್ತುತ್ತಿದ್ದಂತೆ ಒಂದು ನಿಮಿಷ ಕೂಡಾ ಕಾರು ಚಾಲಕ ಅಲ್ಲಿ ನಿಲ್ಲಲೇ ಇಲ್ಲ.