Just In
- 6 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 7 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 9 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 9 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಈ ಕಾರು ಮಾಲೀಕ ಮಾಡಿದ ಉಪಾಯ ಹೇಗಿದೆ ನೋಡಿ.
ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದ ನಾನಾ ರೀತಿಯ ಸಮಸ್ಯೆಗಳು ಎದುರಾಗುತ್ತಿವೆ. ಜಾಗತಿಕ ತಾಪಮಾನ ವಿಪರೀತವಾಗಿ ಏರಿಕೆಯಾಗುಗುತ್ತಿರುವುದರಿಂದ ಮನೆ, ಕಛೇರಿ, ಕಾರ್ ಹೀಗೆ ನಾನಾ ಕಡೆಗಳಲ್ಲಿ ಸೆಕೆಯಿಂದಾಗಿ ಎಲ್ಲರಿಗೂ ಕಿರಿಕಿರಿಯಾಗುತ್ತಿರುವುದಂತೂ ನಿಜ. ಹೀಗಿರುವಾಗ ಇಲ್ಲೊಬ್ಬ ಕಾರ್ ಒಳಗಡೆ ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳಲು ಮಾಡಿದ ಒಂದು ವಿಶೇಷವಾದ ಐಡಿಯಾ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ತನ್ನ ಕಾರಿನ ಹೊರಭಾಗದಲ್ಲಿ ಸಂಪೂರ್ಣವಾಗಿ ಸೆಗಣಿಯನ್ನು ಹಚ್ಚಿದ್ದು, ಬಿಸಿಲಿನ ಬೇಗೆಗೆ ಆ ವ್ಯಕ್ತಿ ಮಾಡಿದ ಉಪಾಯ ಎಲ್ಲರ ಗಮನ ಸೆಳೆದಿದೆ. ಪುಣೆ ಮೂಲದ ವ್ಯಕ್ತಿಯೊಬ್ಬ ತನ್ನ ಕಾರ್ಗೆ ವಿಶೇಷವಾದ ನೈಸರ್ಗಿಕ ಕೋಟಿಂಗ್ ಮಾಡಿದ್ದು, ಈಗಾಗಲೇ ಹಲವಾರು ವಾಹನಗಳಿಂದ ಬರುವ ಹೊಗೆಯಿಂದಾಗಿ ನಗರದಲ್ಲಿ ತಾಪಮಾನ ವಿಪರೀತವಾಗಿ ಹೆಚ್ಚಾಗಿದೆ.
ಬಿಸಿಲಿನ ಧಗೆ ಹೆಚ್ಚಾದಾಗ ಕಾರಿನಲ್ಲಿ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಹಾಕಿಕೊಂಡರಂತೂ ಅದರಷ್ಟು ದೊಡ್ಡ ಹಿಂಸೆ ಬೇರೆ ಯಾವುದೂ ಅಲ್ಲ. ಇದರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಆತ ತನ್ನ ಕಾರ್ನ ಹೊರಭಾಗದಲ್ಲಿ ಸಂಪೂರ್ಣವಾಗಿ ಹಸುಗಳ ಸೆಗಣಿಯನ್ನು ಮೆತ್ತಿದ್ದು, ಇದರಿಂದ ಕಾರ್ ಒಳಗಡೆ ಬಿಸಿ ಕಮ್ಮಿಯಾಗಿದೆ ಎಂದು ಹಂಚಿಕೊಂಡಿದ್ದಾನೆ.
ಕಾರಿನ ಹೊರಭಾಗದಲ್ಲಿ ದನದ ಸೆಗಣಿ ಹಚ್ಚಿಕೊಳ್ಳುವುದು ಇದೇ ಮೊದಲೇನಲ್ಲವಾಗಿದ್ದರೂ ಪುಣೆ ನಗರದಲ್ಲಿ ಇದು ಮೊಟ್ಟ ಮೊದಲ ಪ್ರಯತ್ನವಾಗಿದೆ.
ಇದಕ್ಕಿಂತಲೂ ಹಿಂದೆ ೨೦೧೯ ರಲ್ಲೂ ಅಹಮದಾಬಾದ್ ನಗರದಲ್ಲಿ ಟೊಯೋಟಾ ಕಾರಿನಲ್ಲಿ ಸಹ ಇದೇ ರೀತಿಯಲ್ಲಿ ಬೇಸಿಗೆಯ ಧಗೆಯಿಂದ ತಪ್ಪಿಸಿಕೊಳ್ಳಲು ಸೆಗಣಿಯನ್ನು ಹಚ್ಚಿ ಓಡಾಡುತ್ತಿದ್ದ ಫೋಟೋಗಳು ವೈರಲಾಗಿದ್ದವು.
ಇನ್ನು ಇದು ಅನೇಕರಿಗೆ ಹಾಸ್ಯಾಸ್ಪದವಾಗಿ ಕಂಡರೂ, ಸೆಗಣಿಗೆ ಸೂರ್ಯನಿಂದ ನೇರವಾಗಿ ಬರುವಂತಹ ಶಾಖವನ್ನು ತಡೆಯುವ ಸಾಮರ್ಥ್ಯವಿದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿಲ್ಲದೇ ಇದ್ದರೂ, ಶಾಖವನ್ನು ದನದ ಸೆಗಣಿ ತಡೆಯುತ್ತದೆ ಎಂಬುದು ಹಲವರ ಅಭಿಪ್ರಾಯ. ಈ ಕುರಿತಾಗಿ ಪರ ವಿರೋಧ ಚರ್ಚೆಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುತ್ತವೆ.
ಸಾಧಾರಣವಾಗಿ ಮಣ್ಣಿನ ಮನೆಗಳ ಗೋಡೆ ಮತ್ತು ನೆಲಕ್ಕೆ ಸೆಗಣಿಯನ್ನು ಮೆತ್ತುವುದು/ಬಳಿಯುವುದು ಹಿಂದಿನಿಂದಲೂ ಚಾಲ್ತಿಯಲ್ಲಿರುವ ವಿಚಾರ. ಇದರಿಂದಾಗಿ ಮನೆಗೆ ಹೆಚ್ಚುವರಿಯಾದ ಥರ್ಮಲ್ ಪ್ರೊಟೆಕ್ಷನ್ ದೊರಕುತ್ತದೆ ಎಂಬುದು ಜನರ ನಂಬಿಕೆ. ಹಿಂದಿನ ಕಾಲದಲ್ಲಿ ಬೇಸಿಗೆಯ ಬಿಸಿ ಹೆಚ್ಚಾದಾಗ ಅದನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ನೆಲದ ಮೇಲೆ ತಣ್ಣೀರನ್ನು ಚಿಮುಕಿಸುತ್ತಿದ್ದರು.
ಏನೇ ಆದರೂ ದನದ ಸೆಗಣಿ ಬಳಸುವುದರಿಂದ ಶಾಖ ಕಮ್ಮಿಯಾಗುತ್ತದೆಯೋ ಅಥವಾ ಅಧಿಕವಾಗುತ್ತಿದೆಯೋ ಎಂಬುದು ಎರಡನೇ ವಿಷಯ. ಆದರೆ ಕಾರ್ನಲ್ಲಿ ಇದು ಎಷ್ಟರ ಮಟ್ಟಿಗೆ ಕೆಲಸಮಾಡುತ್ತದೆ ಮತ್ತು ಒಣಗಿದ ಸೆಗಣಿಗೆ ಬೆಂಕಿ ಹಚ್ಚಿಕೊಳ್ಳುವ ಸಾಧ್ಯತೆಯೂ ಸಹ ಹೆಚ್ಚು. ಹೀಗಿರುವಾಗ ಸೆಗಣಿಯನ್ನು ಕಾರ್ಗೆ ಹಚ್ಚಿಕೊಂಡು ಬಿಸಿಲಲ್ಲಿ ತಿರುಗಾಡುವುದು ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬುದೂ ಕೂಡ ಯೋಚನೆ ಮಾಡಬೇಕಾದ ವಿಚಾರವೇ. ಯಾವುದಾದರೂ ಸಂಧರ್ಭದಲ್ಲಿ ಅಕಸ್ಮಾತಾಗಿ ಕಾರಿನ ಹೊರಭಾಗದಲ್ಲಿ ಬೆಂಕಿಯೇನಾದರು ತಾಗಿದರೆ ಮುಂದೆ ಆ ಕಾರು ಹೊತ್ತಿ ಉರಿಯುವುದಂತೂ ಖಚಿತ.
ಇನ್ನು ಕಾರಿನ ಹೊರಭಾಗದಲ್ಲಿ ಸೆಗಣಿಯನ್ನು ಹಚ್ಚಿ ಓಡಿಸುವುದರಿಂದ ಬೆಂಕಿಯ ಅವಘಡದ ಸಾಧ್ಯತೆ ಹೆಚ್ಚು ಎಂಬುದು ಮಾತ್ರವಲ್ಲದೆ ಕಾರಿನ ಗುಣಮಟ್ಟಕ್ಕೆ ಇದು ಒಂದು ಸವಾಲಾಗಲೂಬಹುದು. ಯಾಕೆಂದರೆ ಅಧಿಕ ಕಾಲ ಸೆಗಣಿ ಹಚ್ಚುವುದರಿಂದ ಕಾರ್ನ ಬಣ್ಣದಲ್ಲಿ ಯಾವ ರೀತಿಯಾಗಿ ಪರಿಣಾಮ ಬೀರುತ್ತದೆ ಎಂಬ ಶಂಕೆ ಮೂಡುವುದಂತೂ ಖಂಡಿತ. ಒಂದು ಬಾರಿ ಕಾರಿನ ಬಣ್ಣವೇನಾದರೂ ಮಾಸಿದರೆ ಮುಂದೆ ಮರು ಪೈಂಟ್ ಮಾಡಲು ಪೈಂಟ್ನ ಗುಣಮಟ್ಟಕ್ಕೆ ಅನುಸಾರವಾಗಿ ಸಾಕಷ್ಟು ಹಣ ವ್ಯಯ ಮಾಡಬೇಕಾಗುತ್ತದೆ.
ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಒಟ್ಟಾರೆಯಾಗಿ ಈ ಬಿಸಿಲಿನ ಬೇಗೆಯ ಸಮಸ್ಯೆಗಳಿಂದ ನೈಸರ್ಗಿಕವಾಗಿ ಹೊರಬರಲು ಈ ರೀತಿಯ ವೀಶೇಷ ಐಡಿಯಾಗಳನ್ನು ತರುವುದು ಶ್ಲಾಘನೀಯವೇ. ಆದರೆ ಅದನ್ನು ಕಣ್ಣುಮುಚ್ಚಿಕೊಂಡು ಹಿಂಬಾಲಿಸುವುದಕ್ಕೂ ಮುನ್ನ, ಸಾಮಾನ್ಯವಾದ ಕೆಲವೊಂದು ವಿಚಾರಗಳನ್ನು ಆಲೋಚನೆ ಮಾಡಿ ನಂತರ ಅಳವಡಿಸಿಕೊಳ್ಳುವುದು ಉತ್ತಮ.
Source: Rushlane