Just In
- 11 min ago ಯುಎಸ್ಎ, ಕೆನಡಾಗೂ ಕಾಲಿಟ್ಟ ಭಾರತೀಯ ಬೈಕ್: ಮುಂದುವರೆದ ವಿಶ್ವಗುರು ಭಾರತದ ನಾಗಾಲೋಟ
- 30 min ago Honda: ಭಾರತದಲ್ಲಿ ಹೋಂಡಾ ಹೊಸ ಮೈಲಿಗಲ್ಲು: ಎಷ್ಟು ಮಂದಿಯ ಬಳಿ ಆಕ್ಟೀವಾ, ಶೈನ್ ಇದೆ ಹೇಳಿ?
- 1 hr ago ಜನಪ್ರಿಯ ಕಂಪನಿಗಳಿಂದ ಮುಂಬರುವ ಪುಟ್ಟ ಕಾರುಗಳಿವು.. ಇವೇ ಮಿಡಲ್ ಕ್ಲಾಸ್ ಜನರ ಫೇವರಿಟ್ ಆಗುವುದು ಪಕ್ಕಾ!
- 3 hrs ago ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
Don't Miss!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- News Agniveer: 'ಅಗ್ನಿವೀರ್' ಯೋಜನೆಗೆ ಬದಲಾವಣೆ ತರಲು ಕೇಂದ್ರ ಮುಕ್ತ: ರಕ್ಷಣಾ ಸಚಿವ
- Movies ಗುರುಪ್ರಸಾದ್ಗೆ ತಿರುಗೇಟು ಕೊಟ್ಟ ಶ್ರುತಿ ಹರಿಹರನ್ ; ನನ್ನ ಮೀಟೂ ಕಥೆ ಇನ್ನೂ ಮುಗಿದಿಲ್ಲ ಎಂದ ನಟಿ..!
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ MLA ಮಾಡಿದ ಕೆಲಸವನ್ನು ನಿಜವಾಗಿಯೂ ಮೆಚ್ಚಲೇಬೇಕು..
ಟೋಲ್ ಗೇಟ್ನೊಂದಿಗಿನ ಹೆಚ್ಚಿನ ಭಾರತೀಯ ಪ್ರವೇಶ ನಿಯಂತ್ರಣ ಹೆದ್ದಾರಿಗಳು ಸುದೀರ್ಘ ಜಾಮ್ ಸಮಸ್ಯೆಯಿಂದ ಬಳಲುತ್ತಿವೆ. ಟೋಲ್ನ ಬಳಿ ಚಿಲ್ಲರೆಯನ್ನು ಕೊಡುವುದು ಅಥವಾ ಸ್ವೀಕರಿಸುವಲ್ಲಿಯೇ ಹೆಚ್ಚು ಸಮಯವು ವ್ಯರ್ಥವಾಗುತ್ತಿದೆ.
ಟೋಲ್ ಗೇಟ್ನೊಂದಿಗಿನ ಹೆಚ್ಚಿನ ಭಾರತೀಯ ಪ್ರವೇಶ ನಿಯಂತ್ರಣ ಹೆದ್ದಾರಿಗಳು ಸುದೀರ್ಘ ಜಾಮ್ ಸಮಸ್ಯೆಯಿಂದ ಬಳಲುತ್ತಿವೆ. ಟೋಲ್ನ ಬಳಿ ಚಿಲ್ಲರೆಯನ್ನು ಕೊಡುವುದು ಅಥವಾ ಸ್ವೀಕರಿಸುವಲ್ಲಿಯೇ ಹೆಚ್ಚು ಸಮಯವು ವ್ಯರ್ಥವಾಗುತ್ತಿದ್ದು, ಚಾಲಕರು ತಮ್ಮ ಬಹುತೇಕ ಸಮಯವನ್ನು ಇಲ್ಲಿಯೆ ಕಳೆಯುವ ಪರಿಸ್ಥಿತಿ ಇದೆ.
ಇಂತಹ ಟೋಲ್ ಗೇಟ್ನ ದೀರ್ಘ ಸಾಲಿನಲ್ಲಿ ಹರಿಯಾಣದ ಕ್ಯಾಬಿನೆಟ್ ಮಿನಿಸ್ಟರ್ ಕೂಡಾ ಸಿಲಿಕಿದ್ದು, ಆ ಜಾಮ್ನಿಂದ ಬೇಸತ್ತು ಈತ ಮಾಡಿದ ಕೆಲಸವು ಅವರೊಂದಿಗೆ ಆ ಲೇನ್ನಲ್ಲಿ ಸಿಲಿಕ್ಕಿದ್ದ ಚಾಲಕರಿಗೆ ಟೋಲ್ ಫ್ರೀ ಭಾಗ್ಯವನ್ನು ಕಲ್ಪಿಸಿಕೊಟ್ಟರು.
ಹೌದು, ಹರಿಯಾಣದ ಎಮ್ಎಲ್ಎ ಮತ್ತು ಬಿಜೆಪಿ ಪಕ್ಷದ ಮಂತ್ರಿಯಾದ ವಿಪುಲ್ ಗೊಯಾಲ್ರವರು ಟೋಲ್ ಗೇಟ್ನ ಟ್ರಾಫಿಕ್ನಲ್ಲಿ ಸಿಲುಕಿದ್ದು, ತನ್ನದೊಂದಿಗೆ ಟೋಲ್ ಪ್ಲಾಜಾದಲ್ಲಿನ ಧೀರ್ಘ ಜಾಮ್ನಲ್ಲಿ ಸಿಲುಕಿದ್ದ ಬಹುತೇಕ ವಾಹನಗಳಿಗೆ ಉಚಿತವಾಗಿ ಟೋಲ್ ಸುಂಕವನ್ನು ಕಟ್ಟದೆಯೆ ಹೋಗಲು ದಾರಿ ಮಾಡಿಕೊಟ್ಟ ಘಟನೆ ಬದರ್ಪುರ್ನ ಟೋಲ್ ಗೇಟ್ನ ಬಳಿ ನಡೆದಿದೆ.
ಸುದೀರ್ಘ ಟ್ರಾಫಿಕ್ ಜಾಮ್ ನೋಡಿದಾಗ, ಸಚಿವರು ತನ್ನ ಅಧಿಕೃತ ಕಾರಿನಿಂದ ಕೆಳಗಿಳಿದು, ರಾಜ್ಯ ಪೊಲೀಸ್ ವಾಹನ ಬೆಂಗಾವಲು ಮತ್ತು ಪ್ರತಿ ನಿಯಂತ್ರಣಾ ಅವರಿಗೆ ಕೊಠಡಿಯನ್ನು ಟೋಲ್ನ ಬೂಮ್ ತಡೆಗೋಡೆ ತೆರೆಯಲು ಆದೇಶಿಸಿದರು.
ಸಾಮಾನ್ಯವಾಗಿ, ಮಂತ್ರಿಗಳು ಮತ್ತು ವಿಐಪಿಗಳು ಇಂತಹ ಟೋಲ್ ಗೇಟ್ಸ್ ಮೂಲಕ ಹಾದುಹೋಗಲು ವಿಶೇಷ ಲೇನ್ ಅನ್ನು ಪಡೆಯುತ್ತಾರೆ, ಹಾಗು ಯಾವುದೇ ಸುಂಕವನ್ನು ಪಾವತಿಸದೆ ಉಚಿತ ಪ್ರವೇಶವನ್ನು ಪಡೆಯುತ್ತಾರೆ.
ವಿಡೀಯೊನಲ್ಲಿ ಮಂತ್ರಿ ಮತ್ತು ಟೋಲ್ ಸಿಬ್ಬಂದಿಯ ನಡುವೆ ನಡೆದ ಮಾತುಗಳನ್ನು ಗಮನಿಸಿದಲ್ಲಿ, ಟೋಲ್ ಸಿಬ್ಬಂದಿ ಸಿಸ್ಟಮ್ನಲ್ಲಿ ಕೊಂಚ ಎಡವಟ್ಟು ಆಗಿದ್ದ ಕಾರಣ ವಾಹನಗಳನ್ನು ನಿಲ್ಲಿಸಬೇಕಾಗಿತ್ತು ಎಂದು ಹೇಳಿಕೊಂಡರು. ವಾಹನಗಳನ್ನು ನಿಲ್ಲಿಸಿದ ಕಾರಣದಿಂದಾಗಿ ಆದ ಜಾಮ್ನಲ್ಲಿ ಮಂತ್ರಿಗಳು ಕೂಡ ಸುಮಾರು 15 ನಿಮಿಷಗಳ ಕಾಲ ಸಿಲುಕ್ಕಿದ್ದರು.
ನಂತರ ವಿಪುಲ್ ಗೊಯಾಲ್ ಅಲ್ಲಿನ ಎಲ್ಲಾ ಟೋಲ್ ಗೇಟ್ಗಳನ್ನು ತೆರೆಯಲು ಆದೇಶಿಸಿ ತಾನೆ ಸ್ವತಃ ಟೋಲ್ನ ಪಕ್ಕದಲ್ಲಿ ನಿಂತು ಜಾಮ್ನಲ್ಲಿ ಸಿಲಿಕ್ಕಿದ್ದ ಎಲ್ಲಾ ವಾಹನಗಳನ್ನು ಸುಂಕವಿಲ್ಲದೆ ಟೋಲ್ ದಾಟಲು ಅನುಮತಿ ನೀಡಿದರು.
ವಾಹನಗಳ ಮುಕ್ತ ಚಾಲನೆಗೆ ಎಷ್ಟು ಸಮಯದವರೆಗೆ ಟೋಲ್ ಗೇಟ್ ಮಂತ್ರಿಗಳು ಅವಕಾಶ ಕಲ್ಪಿಸಿದರು ಎಂಬುದು ತಿಳಿದಿಲ್ಲ, ಆದರೆ ಇದು ಮಂತ್ರಿಯಿಂದ ಜನಸಾಮಾನ್ಯ ರಸ್ತೆ ಬಳಕೆದಾರರಿಗೆ ಒಂದು ಪಾಠವಾಗಿದೆ. ಸಾಮಾನ್ಯ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪರಿಹರಿಸಲು ಮಂತ್ರಿಗಳು ಸಾಮಾನ್ಯ ಜನರು ಅನುಭವಿಸುತ್ತಿರುವ ಅದೇ ಸಂಚಾರ ಪರಿಸ್ಥಿತಿಗಳನ್ನು ಅನುಭವಿಸಬೇಕಾಗಿದೆ.
ಸರ್ಕಾರವು ಫಾಸ್ಟ್ ಟ್ಯಾಗ್ ಅನ್ನು ಈಗಾಗಲೆ ದೇಶದಲ್ಲಿ ಜಾರಿಗೊಳಿಸಿದ್ದು, ಭಾರತಕ್ಕೆ ಖರೀದಿಸಿದ ಎಲ್ಲಾ ಹೊಸ ಕಾರುಗಳಿಗೆ ಕಡ್ಡಾಯವಾಗಿ ಫಾಸ್ಟ್ ಟ್ಯಾಗ್ ಅನ್ನು ಪಡೆಯಲೇಬೇಕಾಗಿದೆ.
ಅಂತಹ ಟ್ಯಾಗ್ಗಳು NFC ಚಿಪ್ಗಳನ್ನು ಹೊಂದಿರುತ್ತವೆ, ಅವು ಟೋಲ್ ಗೇಟ್ಗಳೊಂದಿಗೆ ಸಂವಹನ ಮಾಡಲು ಸಹಕಾರಿಯಾಗುತ್ತವೆ ಮತ್ತು ಟೋಲ್ ಅನ್ನು ಪಾವತಿಸಲು ಕಡಿಮೆ ಸಮಯ ತೆಗೆದುಕೊಳ್ಳುವ ಫಾಸ್ಟ್ ಟ್ಯಾಗ್ ಬಳಕೆದಾರರಿಗೆ ವಿಶೇಷ ಲೇನ್ ಅನ್ನು ಸರ್ಕಾರವು ಕಡ್ಡಾಯವಾಗಿ ಮಾಡಿದೆ.
ಈ ಟ್ಯಾಗ್ಗಳು ಮೊದಲೇ ಪಾವತಿಸಲ್ಪಡುತ್ತವೆ ಮತ್ತು ಹಣ ಸ್ವಯಂಚಾಲಿತವಾಗಿ ತಮ್ಮ ಖಾತೆಯಿಂದ ಕಡಿತಗೊಳಿಸಲ್ಪಡುತ್ತದೆ, ಈ ಕ್ರಿಯೆಯು ವೇಗವಾದ ಮತ್ತು ಮೃದುವಾದ ಚಾಲನೆಗೆ ಸಹಕರಿಸುತ್ತವೆ.