Just In
- 10 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 11 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 13 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 13 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಬ್ಬನೇ ಒಬ್ಬ ಪ್ರಯಾಣಿಕನನ್ನು ಹೊತ್ತು ಅಮೃತಸರದಿಂದ ದುಬೈಗೆ ಹಾರಿದ ವಿಮಾನ
ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಭಾರಿ ವಿಮಾನದಲ್ಲಿ ಪ್ರಯಾಣ ಮಾಡಬೇಕು ಅನ್ನುವ ಕನಸಿರುತ್ತದೆ ಎಂದೇ ಹೇಳಬಹುದು. ಆದರೆ ಆ ಕನಸು ಕೆಲವರಿಗೆ ನನಸಾಗುತ್ತದೆ. ಇನ್ನು ಕೆಲವು ಜನರಿಗೆ ಇದು ಕನಸಾಗಿಯೇ ಉಳಿಯುತ್ತದೆ.
ಆದರೆ ಅಮೃತಸರದ ಒಬ್ಬ ವ್ಯಕ್ತಿಯು ಒಂದು ವಿಮಾನದಲ್ಲಿ ಏಕೈಕ ಪ್ರಯಾಣಿಕನಾಗಿ ಮಹಾರಾಜರ ರೀತಿಯಲ್ಲಿ ದುಬೈಗೆ ಹಾರಾಟ ಮಾಡಿರುವುದು ವರದಿಯಾಗಿದೆ. ಯುಎಇ ಮೂಲದ ಭಾರತೀಯ ಉದ್ಯಮಿಯೊಬ್ಬರು ಇತ್ತೀಚೆಗೆ ಅಮೃತಸರದಿಂದ ದುಬೈಗೆ ಏರ್ ಇಂಡಿಯಾದ ಏಕೈಕ ಪ್ರಯಾಣಿಕರಾಗಿದ್ದರು. ಹತ್ತು ವರ್ಷಗಳ ಗೋಲ್ಡನ್ ವೀಸಾ ಹೊಂದಿರುವ ಮತ್ತು ದುಬೈನಲ್ಲಿ ವ್ಯವಹಾರ ನಡೆಸುತ್ತಿರುವ ಒಬೆರಾಯ್ ಅವರು ಈ ಏಕೈಕ ಪ್ರಯಾಣಿಕ.
ಎಎನ್ಐ ಜೊತೆ ಮಾತನಾಡಿದ ಅವರು, "ನಾನು ಜೂನ್ 23 ರಂದು ಬೆಳಿಗ್ಗೆ 4 ಗಂಟೆಗೆ ಏರ್ ಇಂಡಿಯಾ (ಎಐ -929) ಮೂಲಕ ಅಮೃತಸರದಿಂದ ದುಬೈಗೆ ನನ್ನ ವಿಮಾನವನ್ನು ಹತ್ತಿಕೊಂಡೆ. ಇಡೀ ವಿಮಾನದಲ್ಲಿ ಒಬ್ಬನೇ ಪ್ರಯಾಣಿಕನಾಗಲು ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇನೆ.
ನಾನು ಏಕೈಕ ಪ್ರಯಾಣಿಕನಾಗಿ ವಿಮಾನದಲ್ಲಿ ಪ್ರಯಾಣಿಸುವಾಗ ನಾನು ಮಹಾರಾಜನಂತೆ ಅನುಭವಾಯ್ತು. ನನ್ನನ್ನು ಇಡೀ ಸಿಬ್ಬಂದಿವರ್ಗ ಚೆನ್ನಾಗಿ ನೋಡಿಕೊಂಡರು ಮತ್ತು ಖಾಲಿ ವಿಮಾನದಲ್ಲಿ ಪೋಟೋ ತೆಗೆದರು, ನಾನು ವಿಮಾನದ ಸಿಬ್ಬಂದಿ ಮತ್ತು ಪೈಲಟ್ಗಳೊಂದಿಗೆ ಫೋಟೋಗಳನ್ನು ತೆಗೆದುಕೊಂಡೆ ಎಂದು ಹೇಳಿದ್ದಾರೆ.
ಒಬೆರಾಯ್ ಅವರು 70 ದಿರ್ಹಾಮ್ ಹಣವನ್ನು ಟೆಕೆಟ್ ಗಾಗಿ ಪಾವತಿಸಿದ್ದಾರೆ, ಭಾರತೀಯ ಕರೆನ್ಸಿಯಲ್ಲಿ ಸುಮಾರು ರೂ.15,000 ಗಳಾಗಿರುತ್ತದೆ. ಇವರು ಪ್ರಯಾಣಿಸಿರುವುದು ಸುಮಾರು 320 ಸೀಟುಗಳನ್ನು ಹೊಂದಿರುವ ಏರ್ಬಸ್ ವಿಮಾನವಗಿದೆ.
ಕರೋನಾ ಎರಡನೇ ಅಲೆಯ ಕಾರಣದಿಂದ ಏಪ್ರಿಲ್ 24 ರಿಂದ ಭಾರತ ಮತ್ತು ಯುಎಇ ನಡುವೆ ವಿಮಾನ ಕಾರ್ಯಾಚರಣೆಯನ್ನು ಸಾರ್ವಜನಿಕರಿಗೆ ಸ್ಥಗಿತಗೊಳಿಸಲಾಗಿತ್ತು. ಆದರೆ ಪ್ರಯಾಣ ನಿಷೇಧದ ಮಧ್ಯೆ ಯುಎಇ ಅಧಿಕಾರಿಗಳು ರಾಜತಾಂತ್ರಿಕರು, ಗೋಲ್ಡನ್ ವೀಸಾ ಹೊಂದಿರುವವರು ಮತ್ತು ಎಮಿರಾಟಿಸ್ಗೆ ಭಾರತದಿಂದ ಪ್ರಯಾಣಿಸಲು ಅವಕಾಶ ನೀಡಿದ್ದರು.
ಯುನೈಟೆಡ್ ಅರಬ್ ಎಮಿರೇಟ್ಸ್ "ಗೋಲ್ಡನ್" ವೀಸಾ ವ್ಯವಸ್ಥೆಯು ಗಲ್ಫ್ ರಾಜ್ಯದಲ್ಲಿ 10 ವರ್ಷಗಳ ರೆಸಿಡೆನ್ಸಿಯನ್ನು ಕೆಲವು ವೃತ್ತಿಪರರಿಗೆ ಮತ್ತು ಪ್ರಮುಖ ಜಾಗತಿಕ ವ್ಯಕ್ತಿಗಳಿಗೆ ನೀಡುತ್ತದೆ. ಒಬೆರಾಯ್ ಅವರು ಪ್ರಸಿದ್ಧ ಉದ್ಯಮಿಯಾಗಿದ್ದಾರೆ.
ಎಎನ್ಐ ವರದಿಯ ಪ್ರಕಾರ, ಈ ಮೊದಲು ಒಬೆರಾಯ್ ಅವರಿಗೆ ಅನುಮತಿ ನಿರಾಕರಿಸಲಾಗಿತ್ತು ಆದರೆ ನಂತರ ವಿಮಾನಯಾನ ಸಚಿವಾಲಯದ ಅಧಿಕಾರಿಗಳ ಹಸ್ತಕ್ಷೇಪದ ನಂತರ ಅನುಮತಿಯನ್ನು ನೀಡಿದರು. ಯುಎಇ ಅನುಮೋದಿಸಿದ ಪೂರ್ಣ ವ್ಯಾಕ್ಸಿನೇಷನ್ ಪ್ರೂಫ್ ಸೇರಿದಂತೆ ಎಲ್ಲಾ ಸಂಬಂಧಿತ ಪ್ರಯಾಣ ದಾಖಲೆಗಳನ್ನು ಅವರು ಹೊಂದಿದ್ದಾರೆ ಎಂದು ಅವರು ಹೇಳಿದರು.
ಸ್ಮರಣೀಯ ಪ್ರಯಾಣಕೆಕ್ಕೆ ಅವಕಾಶ ನೀಡಿರುವುದಕ್ಕೆ ಯುಎಇ ಮತ್ತು ಭಾರತೀಯ ಸರ್ಕಾರಗಳಿಗೆ ಒಬೆರಾಯ್ ಅವರು ಧನ್ಯವಾದ ತಿಳಿಸಿದ್ದಾರೆ. ವಿಶೇಷ ಸೇವೆಗಳಿಗಾಗಿ ಏರ್ ಇಂಡಿಯಾಕ್ಕೆ ಧನ್ಯವಾದಗಳು, ನೀವು ನಿಜವಾಗಿಯು ಅದ್ಭುತ ಪ್ರಯಾಣವನ್ನಾಗಿ ಮಾಡಿದ್ದೀರಿ ಎಂದು ಅವರು ಫೇಸ್ಬುಕ್ನಲ್ಲಿ ಹೇಳಿಕೊಂಡಿದ್ದಾರೆ.
ಇನ್ನು ಒಬೆರಾಯ್ ಅವರು ಸರ್ಕಾರದ ಗೋಲ್ಡನ್ ವೀಸಾ ಪಡೆದುಕೊಂಡಿದ್ದ ಕಾರಣ ಏಕೈಕ ಪ್ರಯಾಣಿಕನಿದ್ದರು ಕೂಡ ವಿಮಾನ ಹಾರಾಟ ನಡೆಸಿದೆ. ರಾಜ ತಾಂತ್ರಿಕ ಅಧಿಕಾರಿಗಳು ಮತ್ತು ದುಬೈ ಪ್ರಜೆಗಳು ವಿಮಾನದಲ್ಲಿ ಇಂತಹ ಸಂದರ್ಭದಲ್ಲಿ ಒಬ್ಬರಿದ್ದರೂ ಕೂಡ ವಿಮಾನ ಹಾರಾಟ ಮಾಡಬೇಕಾಗುತ್ತದೆ.
Image Courtesy: Air India