Just In
- 2 hrs ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- 4 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 5 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
- 6 hrs ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Movies ನಿರಂತರ ಪ್ಲಾಫ್ ಸಿನಿಮಾಳನ್ನ ನೀಡಿದ ಈ ವಿಶ್ವಸುಂದರಿ ಯಾರು ಗೊತ್ತಾ...?
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
51ನೇ ವಯಸ್ಸಿನಲ್ಲೂ ಸೈಕಲ್ಲೇ ಈ ಪೊಲೀಸಪ್ಪನ ಸಾರಥಿ
ಹಲವು ವರ್ಷಗಳ ಹಿಂದೆ ಸೈಕಲ್ ಗಳು ಜನರ ಜೀವನದ ಪ್ರಮುಖ ಭಾಗವಾಗಿದ್ದವು. ಬಹು ಸಂಖ್ಯೆಯ ಸಾರಿಗೆಗಾಗಿ ಸೈಕಲ್ಗಳನ್ನು ಅವಲಂಬಿಸಿದ್ದರು. ಬಹುತೇಕ ಎಲ್ಲರ ಮನೆಯಲ್ಲಿ ಸೈಕಲ್ ಗಳಿದ್ದವು. ಸೈಕಲ್ ಗಳು ಜನರ ಆರೋಗ್ಯವನ್ನು ಕಾಪಾಡುತ್ತಿದ್ದವು.
ರೋಗಗಳಿಂದ ಹಾಗೂ ಖಿನ್ನತೆಯಿಂದ ಜನರನ್ನು ಕಾಪಾಡುತ್ತಿದ್ದವು. ಈಗ ಸೈಕಲ್ ಬದಲಿಗೆ ಬೈಕ್ ಗಳು ಬಂದಿವೆ. ಬೈಕ್ ಗಳು ಸಂಚಾರವನ್ನು ಸುಲಭವಾಗಿಸಿವೆ. ಜೊತೆಗೆ ದೇಹಕ್ಕೆ ಆರಾಮವನ್ನು ನೀಡುತ್ತವೆ. ಇದರ ಜೊತೆಗೆ ಅನೇಕ ರೋಗಗಳನ್ನು ಆಹ್ವಾನಿಸಿವೆ. ಈ ಆಧುನಿಕ ಯುಗದಲ್ಲೂ ಕೆಲವರು ಸೈಕಲ್ ಗಳನ್ನೇ ನೆಚ್ಚಿಕೊಂಡಿದ್ದಾರೆ. ಪ್ರತಿದಿನವು ತಮ್ಮ ಓಡಾಟಕ್ಕಾಗಿ ಸೈಕಲ್ ಗಳನ್ನೇ ಬಳಸುತ್ತಿದ್ದಾರೆ.
ಸೈಕಲ್ ಬಳಕೆಯಿಂದಾಗಿ ಮೊದಲಿನಂತೆಯೇ ಆರೋಗ್ಯವಾಗಿದ್ದಾರೆ. ತಮಿಳುನಾಡಿನ 51 ವರ್ಷದ ಪೊಲೀಸ್ ಕಾನ್ಸ್ ಸ್ಟೇಬಲ್ ಒಬ್ಬರು ಕಚೇರಿಗೆ ಸೈಕಲ್ ನಲ್ಲಿಯೇ ಹೋಗುತ್ತಿದ್ದಾರೆ. ಶ್ರವಣನ್ ಎಂಬುವವರೇ ಈ ವಯಸ್ಸಿನಲ್ಲೂ ಸೈಕಲ್ ಸವಾರಿ ಮಾಡುತ್ತಿರುವವರು.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!
ಅವರು 23 ವರ್ಷಗಳಿಂದ ಸೈಕಲ್ ಸವಾರಿ ಮಾಡುತ್ತಿದ್ದಾರೆ. ಪ್ರತಿದಿನ ಸೈಕಲ್ ಮೂಲಕವೇ ತಮ್ಮ ಕಚೇರಿಗೆ ಹೋಗುತ್ತಾರೆ. ಸೈಕಲ್ ಸವಾರಿಯಿಂದಾಗಿ ತಾವು ಸ್ಥೂಲಕಾಯವನ್ನು ಹೊಂದದೇ ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ.
ತಮ್ಮ ಅನೇಕ ಸಹೋದ್ಯೋಗಿಗಳು ಮಧುಮೇಹ ಹಾಗೂ ಸ್ಥೂಲಕಾಯದಿಂದ ಬಳಲುತ್ತಿದ್ದಾರೆಂದು ಶ್ರವಣನ್ ಹೇಳುತ್ತಾರೆ. ನಂದಂಬಕ್ಕಂ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರವಣನ್ ಪ್ರತಿದಿನ ಸುಮಾರು 40 ಕಿ.ಮೀ ಸೈಕಲ್ ಸವಾರಿ ಮಾಡುತ್ತಾರೆ.
MOSTREAD: ನಟ ವಿಕ್ರಮ್ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್
ಯಾರನ್ನಾದರೂ ಭೇಟಿ ಮಾಡಲು ಸೈಕಲ್ ಮೂಲಕವೇ ಹೋಗುವುದಾಗಿ ಹೇಳಿದ್ದಾರೆ. ಅವರಿಂದ ಸ್ಫೂರ್ತಿ ಪಡೆದ ಅನೇಕರು ಸೈಕಲ್ ಸವಾರಿಯನ್ನು ಆರಂಭಿಸಿದ್ದಾರೆ. ಹಿಂದಿನ ಕಾಲದ ಪೊಲೀಸರು ಸೈಕಲ್ಗಳನ್ನು ಮಾತ್ರ ಬಳಸುತ್ತಿದ್ದರು.
ಪೊಲೀಸರು ಸೈಕಲ್ ಗಳನ್ನು ಬಳಸುತ್ತಿದ್ದಾಗ ಅವರ ದೇಹವು ಆರೋಗ್ಯಕರವಾಗಿತ್ತು. ಆದರೆ ಈಗ ಆ ರೀತಿಯ ಪರಿಸ್ಥಿತಿಯಿಲ್ಲ ಎಂದು ಶ್ರವಣನ್ ಹೇಳುತ್ತಾರೆ. ಸೈಕಲ್ ತುಳಿಯುವುದರಿಂದ ಒಳ್ಳೆಯ ನಿದ್ರೆ ಮಾಡುತ್ತಿರುವುದಾಗಿ ಹೇಳುತ್ತಾರೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ
ಜೊತೆಗೆ ಸೈಕಲ್ ನಿಂದ ಯಾವುದೇ ರೀತಿಯ ಮಾಲಿನ್ಯ ಉಂಟಾಗುವುದಿಲ್ಲ. ತಾವು ಎಂದಿಗೂ ಬೈಕು ಖರೀದಿಸಿಲ್ಲ. ಇದಕ್ಕಾಗಿ ತಮ್ಮ ಸ್ನೇಹಿತರು ತಮ್ಮನ್ನು ಹೀಯಾಳಿಸಿದರೆಂದು ಅವರು ಹೇಳುತ್ತಾರೆ. ಸೈಕಲ್ ಬಳಕೆಯಿಂದಾಗಿ ಕಾಯಿಲೆಗಳಿಂದ ದೂರವಾಗಿದ್ದೇನೆ ಎಂದು ಸಹ ಹೇಳಿದ್ದಾರೆ.