Just In
- 31 min ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 1 hr ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 1 hr ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
- 2 hrs ago Hero: ಮಧ್ಯಮ ವರ್ಗದವರ ನೆಚ್ಚಿನ ಬೈಕ್.. ರೂ.75 ಸಾವಿರ ಬೆಲೆ.. ಮೈಲೇಜ್ನಲ್ಲಿ ಸರಿ ಸಾಟಿಯಿಲ್ಲ!
Don't Miss!
- Sports IPL 2024: ಸೋತು ಸುಣ್ಣವಾದರೂ ಪಾರ್ಟಿ ಮಾಡಿದ ಆರ್ಸಿಬಿ ಪ್ಲೇಯರ್ಸ್; ಕೊಹ್ಲಿ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್
- News ನೇಹಾ ಹತ್ಯೆ: ಸಾವಿನ ಮನೆಯಲ್ಲಿ ರಾಜಕಾರಣ ಸರಿಯಲ್ಲ, 90 ದಿನದಲ್ಲಿ ನ್ಯಾಯ ಸಿಗಲಿದೆ: ಸುರ್ಜೇವಾಲ
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Movies ಮದುವೆ ಆಗದೇ ಗರ್ಭಿಣಿಯಾಗಿದ್ರಾ ಮಾಧುರಿ ದಿಕ್ಷಿತ್? ವಿವಾದಾತ್ಮಕ ಟ್ವೀಟ್ಗೆ ಫ್ಯಾನ್ಸ್ ಆಕ್ರೋಶ!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
51ನೇ ವಯಸ್ಸಿನಲ್ಲೂ ಸೈಕಲ್ಲೇ ಈ ಪೊಲೀಸಪ್ಪನ ಸಾರಥಿ
ಹಲವು ವರ್ಷಗಳ ಹಿಂದೆ ಸೈಕಲ್ ಗಳು ಜನರ ಜೀವನದ ಪ್ರಮುಖ ಭಾಗವಾಗಿದ್ದವು. ಬಹು ಸಂಖ್ಯೆಯ ಸಾರಿಗೆಗಾಗಿ ಸೈಕಲ್ಗಳನ್ನು ಅವಲಂಬಿಸಿದ್ದರು. ಬಹುತೇಕ ಎಲ್ಲರ ಮನೆಯಲ್ಲಿ ಸೈಕಲ್ ಗಳಿದ್ದವು. ಸೈಕಲ್ ಗಳು ಜನರ ಆರೋಗ್ಯವನ್ನು ಕಾಪಾಡುತ್ತಿದ್ದವು.
ರೋಗಗಳಿಂದ ಹಾಗೂ ಖಿನ್ನತೆಯಿಂದ ಜನರನ್ನು ಕಾಪಾಡುತ್ತಿದ್ದವು. ಈಗ ಸೈಕಲ್ ಬದಲಿಗೆ ಬೈಕ್ ಗಳು ಬಂದಿವೆ. ಬೈಕ್ ಗಳು ಸಂಚಾರವನ್ನು ಸುಲಭವಾಗಿಸಿವೆ. ಜೊತೆಗೆ ದೇಹಕ್ಕೆ ಆರಾಮವನ್ನು ನೀಡುತ್ತವೆ. ಇದರ ಜೊತೆಗೆ ಅನೇಕ ರೋಗಗಳನ್ನು ಆಹ್ವಾನಿಸಿವೆ. ಈ ಆಧುನಿಕ ಯುಗದಲ್ಲೂ ಕೆಲವರು ಸೈಕಲ್ ಗಳನ್ನೇ ನೆಚ್ಚಿಕೊಂಡಿದ್ದಾರೆ. ಪ್ರತಿದಿನವು ತಮ್ಮ ಓಡಾಟಕ್ಕಾಗಿ ಸೈಕಲ್ ಗಳನ್ನೇ ಬಳಸುತ್ತಿದ್ದಾರೆ.
ಸೈಕಲ್ ಬಳಕೆಯಿಂದಾಗಿ ಮೊದಲಿನಂತೆಯೇ ಆರೋಗ್ಯವಾಗಿದ್ದಾರೆ. ತಮಿಳುನಾಡಿನ 51 ವರ್ಷದ ಪೊಲೀಸ್ ಕಾನ್ಸ್ ಸ್ಟೇಬಲ್ ಒಬ್ಬರು ಕಚೇರಿಗೆ ಸೈಕಲ್ ನಲ್ಲಿಯೇ ಹೋಗುತ್ತಿದ್ದಾರೆ. ಶ್ರವಣನ್ ಎಂಬುವವರೇ ಈ ವಯಸ್ಸಿನಲ್ಲೂ ಸೈಕಲ್ ಸವಾರಿ ಮಾಡುತ್ತಿರುವವರು.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!
ಅವರು 23 ವರ್ಷಗಳಿಂದ ಸೈಕಲ್ ಸವಾರಿ ಮಾಡುತ್ತಿದ್ದಾರೆ. ಪ್ರತಿದಿನ ಸೈಕಲ್ ಮೂಲಕವೇ ತಮ್ಮ ಕಚೇರಿಗೆ ಹೋಗುತ್ತಾರೆ. ಸೈಕಲ್ ಸವಾರಿಯಿಂದಾಗಿ ತಾವು ಸ್ಥೂಲಕಾಯವನ್ನು ಹೊಂದದೇ ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ.
ತಮ್ಮ ಅನೇಕ ಸಹೋದ್ಯೋಗಿಗಳು ಮಧುಮೇಹ ಹಾಗೂ ಸ್ಥೂಲಕಾಯದಿಂದ ಬಳಲುತ್ತಿದ್ದಾರೆಂದು ಶ್ರವಣನ್ ಹೇಳುತ್ತಾರೆ. ನಂದಂಬಕ್ಕಂ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರವಣನ್ ಪ್ರತಿದಿನ ಸುಮಾರು 40 ಕಿ.ಮೀ ಸೈಕಲ್ ಸವಾರಿ ಮಾಡುತ್ತಾರೆ.
MOSTREAD: ನಟ ವಿಕ್ರಮ್ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್
ಯಾರನ್ನಾದರೂ ಭೇಟಿ ಮಾಡಲು ಸೈಕಲ್ ಮೂಲಕವೇ ಹೋಗುವುದಾಗಿ ಹೇಳಿದ್ದಾರೆ. ಅವರಿಂದ ಸ್ಫೂರ್ತಿ ಪಡೆದ ಅನೇಕರು ಸೈಕಲ್ ಸವಾರಿಯನ್ನು ಆರಂಭಿಸಿದ್ದಾರೆ. ಹಿಂದಿನ ಕಾಲದ ಪೊಲೀಸರು ಸೈಕಲ್ಗಳನ್ನು ಮಾತ್ರ ಬಳಸುತ್ತಿದ್ದರು.
ಪೊಲೀಸರು ಸೈಕಲ್ ಗಳನ್ನು ಬಳಸುತ್ತಿದ್ದಾಗ ಅವರ ದೇಹವು ಆರೋಗ್ಯಕರವಾಗಿತ್ತು. ಆದರೆ ಈಗ ಆ ರೀತಿಯ ಪರಿಸ್ಥಿತಿಯಿಲ್ಲ ಎಂದು ಶ್ರವಣನ್ ಹೇಳುತ್ತಾರೆ. ಸೈಕಲ್ ತುಳಿಯುವುದರಿಂದ ಒಳ್ಳೆಯ ನಿದ್ರೆ ಮಾಡುತ್ತಿರುವುದಾಗಿ ಹೇಳುತ್ತಾರೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ
ಜೊತೆಗೆ ಸೈಕಲ್ ನಿಂದ ಯಾವುದೇ ರೀತಿಯ ಮಾಲಿನ್ಯ ಉಂಟಾಗುವುದಿಲ್ಲ. ತಾವು ಎಂದಿಗೂ ಬೈಕು ಖರೀದಿಸಿಲ್ಲ. ಇದಕ್ಕಾಗಿ ತಮ್ಮ ಸ್ನೇಹಿತರು ತಮ್ಮನ್ನು ಹೀಯಾಳಿಸಿದರೆಂದು ಅವರು ಹೇಳುತ್ತಾರೆ. ಸೈಕಲ್ ಬಳಕೆಯಿಂದಾಗಿ ಕಾಯಿಲೆಗಳಿಂದ ದೂರವಾಗಿದ್ದೇನೆ ಎಂದು ಸಹ ಹೇಳಿದ್ದಾರೆ.