Just In
- 1 hr ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 2 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 4 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 4 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
Don't Miss!
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- News ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ, ಕಾರಣ ಏನು?
- Movies Puttakkana Makkalu:ಸ್ನೇಹಾ ಕೈ ಸೇರಿಯೇ ಬಿಡ್ತು ವಿಚ್ಛೇದನದ ಪೇಪರ್; ಮುಂದೇನು?
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರೈಲು ಹಳಿಯ ಮೇಲೆಯೇ ಕಾರ್ ಪಾರ್ಕ್ ಮಾಡಿದ ಭೂಪ..!
ಭಾರತದಲ್ಲಿ ಅಸಾಧಾರವಾದ ಸಂಘಟನೆಗಳು ನಡೆಯುವುದು ಸಾಧಾರಣವೇನಲ್ಲ. ಪ್ರಪಂಚದಲ್ಲಿ ರಸ್ತೆ ಸಾರಿಗೆಯಲ್ಲಿ ಭಾರತ ದೇಶವು ಎರಡನೆಯ ಸ್ಥಾನವನ್ನು ಪಡೆದಿದ್ದರೆ, ಇನ್ನಿ ರೈಲು ಸಂಚಾರದಲ್ಲಿ ನಾಲ್ಕನೆಯ ಸ್ಥಾನವನ್ನು ಪಡೆದುಕೊಂಡಿದೆ.
ಭಾರತದಲ್ಲಿ ಅಸಾಧಾರಣವಾದ ಘಟನೆಗಳು ನಡೆಯುವುದು ಹೊಸತಲ್ಲ. ಕಾರ್ ಪಾರ್ಕ್ ಮಾಡಲು ಜಾಗವಿಲ್ಲ ಅಂತಾ ಇಲ್ಲೊಬ್ಬ ಅಸಾಮಿ ರೈಲಿನ ಹಳಿ ಮೇಲೆಯೇ ಕಾರು ನಿಲ್ಲಿಸಿರುವ ಘಟನೆ ನಡೆದಿದೆ.
ದೇಶದಲ್ಲಿನ ಬಹುತೇಕ ರಸ್ತೆ ಮತ್ತು ರೈಲು ಮಾರ್ಗಗಳು ಬಹುತೇಕ ಕಡೆಗಳಲ್ಲಿ ಹತ್ತಿರದಲ್ಲೇ ಇವೆ. ಆದರೆ ಇವೆರಡರ ನಡುವೆ ಸ್ವಲ್ವ ದೂರವಾದರೂ ಇರುತ್ತದೆ. ಕೆಲ ಪ್ರದೇಶಗಳಲ್ಲಿ ಒಂದನೊಂದು ಹಾದುಹೋಗಲು ಲೆವೆಲ್ ಕ್ರಾಸಿಂಗ್, ಫ್ಲೈ-ಓವರ್ ಮತ್ತು ಸುರಂಗ ಮಾರ್ಗಗಗಳನ್ನು ನಿರ್ಮಿಸಲಾಗಿದೆ.
ಆದರೆ ಪಂಜಾಬ್ನಲ್ಲಿನ ಪಠಾನ್ಕೋಟ್ ನಗರದಲ್ಲಿ ರಸ್ತೆ ಮತ್ತು ರೈಲು ಮಾರ್ಗ ಎರಡೂ ತುಂಬ ಸಮೀಪದಲ್ಲಿವೆ. ಸರಿಯಾದ ಮಾರ್ಗ ಇಲ್ಲದಿರುವುದರಿಂದ ಎರಡರ ಮಧ್ಯೆ ಬ್ಯಾರಿಕೇಡ್ಗಳನ್ನು ಕೂಡಾ ಅಳವಡಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ.
ಹೀಗಿರುವಾಗ ಇಲ್ಲೊಬ್ಬ ಅಸಾಮಿ ತನ್ನ ಟಾಟಾ ಪಿಕ್ ಅಪ್ ಕಾರುನ್ನು ರೈಲಿನ ಹಳಿಯ ಮೇಲೆಯೇ ಪಾರ್ಕ್ ಮಾಡಿದ್ದ. ಆ ಸಮಯದಲ್ಲಿ ನಿಧಾನವಾಗಿ ಬಂದ ರೈಲು ಪಾರ್ಕ್ ಆಗಿದ್ದ ಕಾರಿಗಿಂತ ಕೊಂಚ ದೂರದಲ್ಲಿಯೆ ನಿಂತಿದೆ. ಆದರೆ ಆ ಕಾರ್ ಡ್ರೈವರ್ ಮಾತ್ರ ತನಗೆ ಏನೂ ತಿಳಿಯದಂತೆ ರೈಲು ತನ್ನ ಕಾರಿನ ಹಿಂದೆ ಇರುವುದನ್ನು ಕೂಡಾ ಗಮನಿಸಿಲ್ಲ.
ಇಷ್ಟರಲ್ಲಿ ಪೂರ್ತಿಯಾಗಿ ನಿಂತ ರೈಲು ದಾರಿ ನೀಡಲು ಸಂದೇಶಿಸಿ ಗಟ್ಟಿಯಾಗಿ ಶಬ್ದ ಮಾಡಿದೆ. ರೈಲು ಮಾಡಿದ ಶಬ್ದದಿಂದ ಎಚ್ಚರಗೊಂಡ ಟಾಟಾ ಪಿಕ್ ಅಪ್ ಡ್ರೈವರ್ ತನ್ನ ಕಾರಿನ ಹಿಂದೆ ರೈಲು ನಿಂತಿರುವುದನ್ನು ಗ್ರಹಿಸಿ ಕಾರನ್ನು ಆಲ್ಲಿಂದ ಹಿಂದೆ ತೆಗೆದಿದ್ದಾನೆ.
ಯಾವುದೇ ಕಾರಣ ಇಲ್ಲದೆ ರೈಲನ್ನು ನಿಲ್ಲಿಸುವುದು ಶಿಕ್ಷಾರ್ಹ ಅಪರಾಧ. ಅದಕ್ಕೆ ಕಾರಣರಾದವರ ಮೇಲೆ ದಂಡ ಹಾಕಿ ಜೈಲು ಶಿಕ್ಷೆಯನ್ನು ಕೂಡಾ ವಿಧಿಸಬಹುದು. ಆದ್ರೆ ಇಲ್ಲಿ ನಡೆದ ಘಟನೆಯು ಅಲ್ಲಿನ ಪರಿಸ್ಥಿತಿಯನ್ನು ಗಮನಿಸಿದ್ದಲ್ಲಿ ಇವೆಲ್ಲಾ ಸರ್ವೆ ಸಾಧಾರಣ ಎನ್ನಿಸುತ್ತದೆ.
ವೀಡಿಯೊವನ್ನು ಗಮನಿಸಿದ್ದಲ್ಲಿ, ರೈಲು ಹಳಿಯ ಪಕ್ಕದಲ್ಲೇ ಹಲವು ಕಾರುಗಳನ್ನು ಸಹ ಪಾರ್ಕ್ ಮಾಡಲಾಗಿದೆ. ಆದ್ರೆ ಟಾಟಾ ಕಾರಿನ ಚಾಲಕ ಮಾತ್ರ ತನ್ನ ರೈಲು ಹಳಿಯ ಮೇಲೆಯೇ ಪಾರ್ಕ್ ಮಾಡಿದ್ದ ಕಾರಣ ರೈಲು ನಿಂತಿದೆ. ರೈಲು ಮತ್ತು ರಸ್ತೆ ಮಾರ್ಗವು ಪಕ್ಕಪಕ್ಕದಲ್ಲಿಯೇ ಇರುವ ಕಾರಣ ಸ್ವಲ್ಪ ಇಕ್ಕಟ್ಟಾಗಿ ಇರುತ್ತದೆ. ಇನ್ನು ಅಲ್ಲಿನ ಪ್ರದೇಶದಲ್ಲಿ ರೈಲು ಕೂಡಾ ಕಡಿಮೆ ವೇಗದಲ್ಲಿ ಚಲಿಸುತ್ತವೆ.
ವಿಭಿನ್ನ ಪ್ರಾಂತ್ಯ, ಪ್ರಜೆಗಳು, ಅವರ ಜೀವನ ಶೈಲಿ, ಭಾಷೆ, ವೇಷಧಾರಣೆ, ಆಹಾರ ಪದ್ಧತಿ ಮತ್ತು ಐತಿಹಾಸಿಕ ಕಟ್ಟಡಗಳಿಗೆ ಭಾರತ ದೇಶವು ವಿಭಿನ್ನತೆಯನ್ನು ಹೊಂದಿದ್ದು, ಇದರಿಂದ ಇಂತಹ ಅದೆಷ್ಟೋ ಘಟನೆಗಳು ನಮ್ಮಲ್ಲಿ ನಡೆಯುತ್ತಲೇ ಇರುತ್ತವೆ.