Just In
- 2 hrs ago Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- 2 hrs ago ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- 4 hrs ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 4 hrs ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
Don't Miss!
- News ಹಾಸನ ಪೆನ್ಡ್ರೈವ್ ಪ್ರಕರಣ: ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಮಹಿಳಾ ಆಯೋಗ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Movies ''ಹೆಣ್ಮಕ್ಕಳು ಎಲ್ಲೆಲ್ಲೋ ಹೋದರು'' ಎಂದ ಶ್ರುತಿಗೆ ಮಹಿಳಾ ಆಯೋಗ ನೋಟಿಸ್ ; 07 ದಿನದ ಗಡುವು..!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತದ ಮೊದಲ ರಾಕೆಟ್ ಸಾಗಿಸಲು ಸೈಕಲ್ ಬಳಸಿದ್ರು !!
ಕಳೆದ ಮೂರು ವರ್ಷಗಳ ಹಿಂದೆ ಬಲಿಷ್ಠ ಭಾರತವು ತನ್ನ ಪ್ರಪ್ರಥಮ ರಾಕೆಟ್ ಉಡಾವಣೆಯ ಸುವರ್ಣ ಮಹೋತ್ಸವವನ್ನು ಆಚರಿಸಿದ್ದನ್ನು ನಮಗೆಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ.
ಕಳೆದ ಮೂರು ವರ್ಷಗಳ ಹಿಂದೆ ಬಲಿಷ್ಠ ಭಾರತವು ತನ್ನ ಪ್ರಪ್ರಥಮ ರಾಕೆಟ್ ಉಡಾವಣೆಯ ಸುವರ್ಣ ಮಹೋತ್ಸವವನ್ನು ಆಚರಿಸಿದ್ದನ್ನು ನಮಗೆಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಆದ್ರೆ, ಮೊಟ್ಟ ಮೊದಲ ರಾಕೆಟ್ ಉಡಾವಣೆ ಹೇಗೆ ಕೈಗೊಳ್ಳಲಾಯಿತು ಎಂಬ ಮಾಹಿತಿ ಎಷ್ಟೋ ಜನಕ್ಕೆ ತಿಳಿಯದೆ ಇರುವ ಸಂಗತಿಯಾಗಿದೆ. ಇದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಹೌದು, ಇತ್ತೀಚಿಗೆ ಭಾರತವು ಪ್ರತಿಯೊಂದು ವಿಭಾಗದಲ್ಲಿ ಅಚ್ಚರಿ ಮೂಡಿಸುವ ರೀತಿಯಲ್ಲಿ ಸಾಧನೆ ಮಾಡುತ್ತಿರುವುದು ಪ್ರತಿಯೊಬ್ಬ ಭಾರತೀಯನಿಗೂ ಖುಷಿಯ ವಿಚಾರವೇ ಆಗಿದೆ. ಅದರಲ್ಲಿಯೂ ತಂತ್ರಜ್ಞಾನ, ಬಾಹ್ಯಾಕಾಶ, ನೌಕೆ ಹಾಗು ಮತ್ತಿತರ ವಿಭಾಗಗಳಲ್ಲಿ ತನ್ನ ಅಧಿಪತ್ಯ ಸಾಧಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.
ತಿರುವನಂತಪುರದ ಎಂಬ ಹೆಸರಿನ ಪುಟ್ಟ ಗ್ರಾಮವೊಂದರಲ್ಲಿ ಆರಂಭವಾದ ಭಾರತ ದೇಶದ ಬಾಹ್ಯಾಕಾಶ ಪಯಣ ಇಂದು ಮಂಗಳಯಾನ, ಚಂದ್ರಯಾನದಂತಹ ಐತಿಹಾಸಿಕ ಸಾಧನೆ ಮಾಡುವವರೆಗೆ ತಲುಪಿರುವುದು ಹೆಚ್ಚು ಸಂತೋಷವುಂಟು ಮಾಡುತ್ತದೆ.
Recommended Video
ಆದರೆ ನಮ್ಮ ದೇಶದ ಪ್ರಪ್ರಥಮ ರಾಕೆಟ್ ಹೇಗಿತ್ತು..? ಅದನ್ನ ಹೇಗೆ ಸಾಗಿಸಲಾಗಿತ್ತು..? ಅದನ್ನ ಹೇಗೆ ಉಡಾಯಿಸಲಾಗಿತ್ತು..? ಎಂಬುದರ ಕುರಿತು ಚರ್ಚಿಸುತ್ತ ಹೋದಷ್ಟು ನಮಗೆ ಸ್ವಾರಸ್ಯಕರ ವಿಚಾರಗಳು ಕಣ್ಣು ಮುಂದೆ ಹಾದು ಹೋಗುತ್ತವೆ.
1960ರಲ್ಲಿ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ರಾಷ್ಟ್ರೀಯ ಸಮಿತಿಯೊಂದನ್ನು ರಚಿಸಲಾಗಿತ್ತು. ಅದರ ನೇತೃತ್ವವನ್ನು ವಿಕ್ರಂ ಸಾರಾಭಾಯ್ ಅವರೇ ವಹಿಸಿಕೊಂಡರು. ಆದ್ರೆ, ಉಡಾವಣೆ ಮಾಡಲು ಸೂಕ್ತ ಸ್ಥಳಕ್ಕಾಗಿ ಹುಡುಕಾಟ ನೆಡೆಸಲಾಯಿತು.
1962ರ ದಶಕದಲ್ಲಿ ಕೇರಳದ ತಿರುವನಂತಪುರದ ಬಳಿ ಇರುವಂತಹ ಮೀನುಗಾರಿಕಾ ಗ್ರಾಮವಾದ 'ತುಂಬಾ'ವನ್ನು ರಾಕೆಟ್ ಉಡಾವಣೆಗೆ ಸೂಕ್ತ ಸ್ಥಳ ಎಂದು ವಿಕ್ರಂ ಸಾರಾಭಾಯಿ ಆಯ್ಕೆ ಮಾಡಿಕೊಂಡರು. ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಇಂದು ಭಾರತದ ಖ್ಯಾತ ಉಡಾವಣಾ ಕೇಂದ್ರ ಎಂಬ ಖ್ಯಾತಿ ಪಡೆದಿರುವ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ಸ್ಥಳದಲ್ಲಿ ಕ್ಯಾಥೋಲಿಕ್ ಚರ್ಚ್ ನಿರ್ಮಾಣವಾಗಿತ್ತು.
ಅಂದಿನ ಬಿಷಪ್ ರೆವರಂಡ್ ಫಾದರ್ ಡಾ.ಪೀಟರ್ ಬರ್ನಾರ್ಡ್ ಪೆರೇರಾ ಅವರ ಜತೆ ಚರ್ಚ್ ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಿ ಅಗತ್ಯ ಅನುಮತಿ ಪಡೆದ ಬಳಿಕ ಚರ್ಚ್ ಅನ್ನು ಸ್ಥಳಾಂತರಿಸಲಾಯಿತು.
ಭೂಮಿಯ ಅಯಸ್ಕಾಂತೀಯ ಸಮಭಾಜಕ ವೃತ್ತ ಪ್ರದೇಶದಲ್ಲಿ ಇರುವಂತಹ 'ಸೆಂಟ್ ಮೇರಿ ಮ್ಯಾಗ್ದಲೀನ್ ಚರ್ಚ್' ಸೂಕ್ತ ಜಾಗ ಎಂಬ ತೀರ್ಮಾನಕ್ಕೆ ವಿಜ್ಞಾನಿಗಳ ಗುಂಪು ಬಂದ ನಂತರವಷ್ಟೇ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು ಎಂಬುದು ನಿಮಗೆ ತಿಳಿದಿರಲಿ ಓದುಗರೇ.
ಅಗತ್ಯ ವ್ಯವಸ್ಥೆಗಳನ್ನು ಕೈಗೊಂಡ ನಂತರ, ಚರ್ಚ್ ಮುಂದಿನ ಉದ್ಯಾನವನವನ್ನು ಮೊಟ್ಟಮೊದಲ ಉಡಾವಣಾ ಸ್ಥಳವಾಗಿ ಮಾರ್ಪಾಡು ಮಾಡಲಾಯಿತು. ಈ ವಿಜ್ಞಾನಿಗಳ ಗುಂಪಿನಲ್ಲಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರೂ ಇದ್ದರು.
ಮೊಟ್ಟಮೊದಲ ರಾಕೆಟ್ ವಿಜ್ಞಾನದ ಮೊದಲ ಹೆಜ್ಜೆ ಸೈಕಲ್ನಲ್ಲಿ ಆರಂಭವಾಯಿತು ಎಂದರೆ ನೀವು ನಂಬಲೇ ಬೇಕು. ಹೌದು, ಭಾರತದ ಮೊಟ್ಟ ಮೊದಲ ರಾಕೆಟ್ ಹೊತ್ತೊಯ್ಯಲು ಸೈಕಲ್ ರಿಕ್ಷ ಬಳಕೆ ಮಾಡಲಾಯಿತು.
1963ರ ನವೆಂಬರ್ 21ರಂದು ಅಮೆರಿಕದಲ್ಲಿ ಅಭಿವೃದ್ಧಿಪಡಿಸಿದ ರಾಕೆಟ್ ಅನ್ನು ಉಡಾಯಿಸಲಾಗಿತ್ತು. ಅಂದಿನಿಂದ ಪ್ರಾರಂಭವಾದ ಭಾರತದ ವೈಜ್ಞಾನಿಕ ಸಂಶೋಧನೆಯ ದಾಹ ಇಂದಿಗೂ ನಿಂತಿಲ್ಲ.
ಅಂದು ರಾಕೆಟ್ ಉಡಾಯಿಸಲಾಗಿದ್ದ ಪ್ರದೇಶವನ್ನು ಥುಂಬಾ ಈಕ್ವೆಟೋರಿಯಲ್ ರಾಕೆಟ್ ಲಾಂಚ್ ಸ್ಟೇಷನ್(ಟಿಇಆರ್ಎಲ್ಎಸ್) ಎಂದು ಕರೆಯಲಾಗಿತ್ತು. ಬಳಿಕ ಅದರ ಹೆಸರು ವಿಕ್ರಂ ಸಾರಾಭಾಯ್ ಸ್ಪೇಸ್ ಸೆಂಟರ್(ವಿಎಸ್ಎಸ್ಸಿ) ಎಂದು ಬದಲಾಯಿತು.