Just In
- 47 min ago ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- 59 min ago TVS iQube: ಲಕ್ಷಾಂತರ ಭಾರತೀಯರ ನೆಚ್ಚಿನ ಸ್ಕೂಟರ್ನ ಡೌನ್ಪೇಮೆಂಟ್, ಇಎಂಐ, ಲೋನ್ ವಿವರ!
- 1 hr ago viral video: ಬೆಂಗಳೂರಿನಲ್ಲಿ ಮಾತ್ರ ಸಾಧ್ಯ: ಹೆಣ್ಮಗು.. ಹೆಣ್ಮಗು ಓಹ್.. ಎಂದ ನೆಟ್ಟಿಗರು!
- 1 hr ago ಯುಗಾದಿ ಜಾತ್ರೆ: ಶ್ರೀಶೈಲ ಮಲ್ಲಿಕಾರ್ಜುನನ ಭಕ್ತರಿಗೆ ಸಿಹಿಸುದ್ದಿ.. NWKRTCಯಿಂದ ವಿಶೇಷ ಬಸ್ ಸೇವೆ
Don't Miss!
- News ಬಿಜೆಪಿ ಅಭ್ಯರ್ಥಿ ಬದಲಾವಣೆ ಬಗ್ಗೆ ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದ್ದೇನು?
- Technology ಮತ್ತೊಂದು ಅಗ್ಗದ 5G ಫೋನ್ ಲಾಂಚ್ ಮಾಡಲು ಸಜ್ಜಾದ ರಿಯಲ್ಮಿ!..ಫೀಚರ್ಸ್ ಏನು?
- Movies 'ರಾಮಾಯಣ'ದಲ್ಲಿ 'ಯಶ್' ಗೆ 'ಸಾಕ್ಷಿ ತನ್ವರ್' ನಾಯಕಿ ; 'ಬೇಡವೇ ಬೇಡ' ಎಂದ ಅಭಿಮಾನಿಗಳು..!
- Finance ಜಗತ್ತಿನಾದ್ಯಂತ 6,000 ಉದ್ಯೋಗಿಗಳನ್ನು ವಜಾ ಮಾಡಿದ ಡೆಲ್
- Sports IPL 2024 RR vs DC: ರಾಯಲ್ಸ್ ವಿರುದ್ಧ ಗೆಲುವಿನೊಂದಿಗೆ ಪುಟಿದೇಳುವುದೇ ಕ್ಯಾಪಿಟಲ್ಸ್?; ಸಂಭಾವ್ಯ ಆಡುವ 11ರ ಬಳಗ
- Lifestyle ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೊಮಾಟೊ ಡೆಲಿವರಿ ಬಾಯ್ ಸಂಕಷ್ಟಕ್ಕೆ ಸ್ಪಂದಿಸಿದ ಸಾರ್ವಜನಿಕರು
ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಹಲವಾರು ಜನರ ಜೀವನವು ಸಂಕಷ್ಟಕ್ಕೆ ಸಿಲುಕಿದೆ. ತೆಲಂಗಾಣದ ರಾಜಧಾನಿ ಹೈದರಾಬಾದ್ನಲ್ಲಿಯೂ ಹಲವಾರು ಜನರು ಸಂಕಷ್ಟಕ್ಕೀಡಾಗಿದ್ದಾರೆ.
ತಂದೆ, ತಾಯಿ ಸೇರಿದಂತೆ 7 ಸದಸ್ಯರ ಕುಟುಂಬದ ಜವಾಬ್ದಾರಿ ಹೊತ್ತು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನಿಗೆ ವ್ಯಕ್ತಿಯೊಬ್ಬರು ಸಹಾಯ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ತಿಂಗಳ ಆರಂಭದಲ್ಲಿ ರಾಬಿನ್ ಮುಖೇಶ್ ಎಂಬುವವರು ಜೊಮಾಟೊ ಮೂಲಕ ಊಟವನ್ನು ಆರ್ಡರ್ ಮಾಡಿದ್ದರು.
ಆರ್ಡರ್ ಮಾಡಿದ ವೇಳೆ ಹೈದರಾಬಾದ್ನಲ್ಲಿ ಭಾರಿ ಮಳೆಯಾಗುತ್ತಿದ್ದ ಕಾರಣ ರಾಬಿನ್'ರವರು ಊಟ ತಲುಪುವುದು ತಡವಾಗಬಹುದು ಎಂದು ನಿರೀಕ್ಷಿಸಿದ್ದರು. ಆದರೆ ಸೈಕಲ್'ನಲ್ಲಿಯೇ ಬಂದ ಡೆಲಿವರಿ ಬಾಯ್ ನಿಗದಿತ ಸಮಯದಲ್ಲಿಯೇ ಆಹಾರವನ್ನು ತಲುಪಿಸಿದ್ದಾನೆ.
ಸಮಯಕ್ಕೆ ಸರಿಯಾಗಿ ಆಹಾರ ತಲುಪಿಸಿದ ಡೆಲಿವರಿ ಹುಡುಗನ ಹೆಸರು ಮೊಹಮ್ಮದ್ ಅಕೀಲ್. ಆತನನ್ನು ಶ್ಲಾಘಿಸಿದ ರಾಬಿನ್ ಮುಖೇಶ್ ಆತನ ಹಿನ್ನೆಲೆಯ ಬಗ್ಗೆ ವಿಚಾರಿಸಿದ್ದಾರೆ. ಓಲ್ಡ್ ಸಿಟಿಯ ತಲಾಬ್ ಕಟ್ಟಾ ನಿವಾಸಿಯಾದ 21 ವರ್ಷದ ಅಕೀಲ್ ತನ್ನ ಕುಟುಂಬದ ಏಕೈಕ ದುಡಿಯುವ ವ್ಯಕ್ತಿ ಎಂದು ತಿಳಿದುಬಂದಿದೆ.
ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಆತ ಲಾಕ್ಡೌನ್'ಗೂ ಮುನ್ನ ಪಾರ್ಟ್ ಟೈಮ್'ನಲ್ಲಿ ಕೆಲಸ ಮಾಡಿ, ವೃತ್ತಿಯಲ್ಲಿ ಶೂ ತಯಾರಕರಾಗಿರುವ ಅವರ ತಂದೆಗೆ ನೆರವಾಗುತ್ತಿದ್ದ. ಈ ಮೂಲಕ 7 ಸದಸ್ಯರ ಕುಟುಂಬಕ್ಕೆ ನೆರವಾಗುತ್ತಿದ್ದ.
ಲಾಕ್ಡೌನ್ ವಿಧಿಸಲಾಗುತ್ತಿದ್ದಂತೆ, ಕುಟುಂಬದ ಹಿರಿಯ ಮಗನಾದ ಅಕೀಲ್ ತನ್ನ ಪಾರ್ಟ್ ಟೈಮ್ ಕೆಲಸವನ್ನು ಕಳೆದುಕೊಂಡ. ಆತನ ತಂದೆ ಸಹ ನಿರುದ್ಯೋಗಿಗಳಾದರು. ನಂತರ ಅಕೀಲ್ ಜೊಮಾಟೊದಲ್ಲಿ ಕೆಲಸಕ್ಕೆ ಸೇರಿಕೊಂಡ.
ತಿಂಗಳಿಗೆ ರೂ.8,000 ಸಂಬಳ ನೀಡುವ ಜೊಮಾಟೊ ಕಂಪನಿಯಲ್ಲಿ ಅಕೀಲ್ ಸೈಕಲ್ ಮೂಲಕವೇ ಆಹಾರ ತಲುಪಿಸುತ್ತಿದ್ದ. ಅಕೀಲ್'ನ ವಿವರಗಳನ್ನು ರಾಬಿನ್ ಮುಖೇಶ್ ಟ್ವಿಟರ್'ನಲ್ಲಿ ಶೇರ್ ಮಾಡಿದರು.
ಈ ಬಗ್ಗೆ ತಿಳಿದ ಹಲವಾರು ಜನರು ಅಕೀಲ್'ಗೆ ನೆರವು ನೀಡಲು ಮುಂದಾದರು. ದಿ ಗ್ರೇಟ್ ಹೈದರಾಬಾದ್ ಫುಡ್ ಅಂಡ್ ಟ್ರಾವೆಲ್ ಕ್ಲಬ್'ನ ರವಿ ಕಾಂತ್ ರೆಡ್ಡಿ ಅಕೀಲ್'ಗಾಗಿ ಬೈಕ್ ನೀಡುವ ಅಭಿಯಾನವನ್ನು ಆರಂಭಿಸಿದರು.
ಈ ಅಭಿಯಾನದಲ್ಲಿ ರೂ.73 ಸಾವಿರಕ್ಕಿಂತ ಹೆಚ್ಚು ಹಣ ಸಂಗ್ರಹವಾಯಿತು. ಈ ಮೂಲಕ ನಿಗದಿ ಪಡಿಸಿದ ಗುರಿಗಿಂತ ಅಧಿಕ ಹಣ ಸಂಗ್ರಹವಾಯಿತು. ನಿನ್ನೆ ಎಂಜಿನಿಯರಿಂಗ್ ವಿದ್ಯಾರ್ಥಿ ಅಕೀಲ್'ಗೆ ಹೊಸ ದ್ವಿಚಕ್ರ ವಾಹನ ವಿತರಿಸುವ ಸಮಾರಂಭವನ್ನು ಆಯೋಜಿಸಲಾಗಿತ್ತು.
ಈ ಸಮಾರಂಭದಲ್ಲಿ ಅಕೀಲ್'ಗೆ ಹೊಸ ಟಿವಿಎಸ್ ಎಕ್ಸ್ಎಲ್ 100, ಹೆಲ್ಮೆಟ್ ಹಾಗೂ ರೇನ್ ಕೋಟ್ ವಿತರಿಸಲಾಯಿತು. ಈ ಅಭಿಯಾನದ ಮೂಲಕ ಸಂಗ್ರಹವಾದ ಹೆಚ್ಚುವರಿ ಹಣವನ್ನು ಸಹ ಆತನಿಗೆ ನೀಡಲಾಯಿತು.