Just In
- 1 hr ago ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- 2 hrs ago KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- 3 hrs ago ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- 3 hrs ago Maruti Suzuki: 2024ರ ಮಾರುತಿ ಸ್ವಿಫ್ಟ್ ವಿಶೇಷತೆಗಳು: ಸನ್ರೂಫ್, 35 ಕಿ.ಮೀ ಮೈಲೇಜ್!
Don't Miss!
- News ಕುಡಿಯುವ ನೀರಿಲ್ಲದೇ ಜನ ಬೆಂಗಳೂರಿಗೆ ಬಾಯ್ ಹೇಳುತ್ತಿದ್ದಾರೆ: ಆರ್.ಅಶೋಕ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Movies Puttakkana Makkalu:ಈ ಬಾರಿ ಸಹನಾ ಹೊಗಳಿದ ಅಭಿಮಾನಿಗಳು: ಪುಟ್ಟಕ್ಕನ ನಡವಳಿಕೆಗೆ ಫ್ಯಾನ್ಸ್ ಬೇಸರ
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೆಲ್ಮೆಟ್ ವಿಚಾರವಾಗಿ ಅಲ್ಲಿನ ಜನತೆಗೆ ಹೊಸ ಆದೇಶವನ್ನು ನೀಡಿದ ತಮಿಳುನಾಡು ಹೈಕೋರ್ಟ್
ದ್ವಿಚಕ್ರ ವಾಹನ ಚಾಲಕರಿಗೆ ಮತ್ತು ಪಿಲಿಯಾನ್ ರೈಡರ್ಗೆ ಹೆಲ್ಮೆಟ್ ಕಡ್ಡಾಯಾವಾಗಿ ಇರಲೇಬೇಕೆಂದು ಹೈ ಕೋರ್ಟ್ ನಮ್ಮ ಬೆಂಗಳೂರು, ದೆಹಲಿ ಮತ್ತು ಇನ್ನಿತರೆ ಪ್ರಮುಖ ನಗರಗಳಲ್ಲಿ ಆದೇಶ ಮಾಡಿದರೂ, ಸಹ ಇನ್ನು ಕೆಲವು ನಗರಗಳಲ್ಲಿ ಹೈ ಕೋರ್ಟ್ನ ಆದೇಶವನ್ನು ಉಲ್ಲಂಘನೆ ಮಾಡುತ್ತಿದ್ದಾರೆ.
ಅಂತಹ ನಗರಗಳಲ್ಲಿ ಮದ್ರಾಸ್ ಕೂಡಾ ಒಂದಾಗಿದ್ದು, ಅಲ್ಲಿನ ಹೈ ಕೋರ್ಟ್ ಅಧಿಕಾರಿಗಳೊಂದಿಗೆ ವಿಚಾರಣೆ ಮಾಡಲು ಮುಂದಾಗಿದ್ದಾರೆ. ದ್ವಿಚಕ್ರ ವಾಹನ ಚಾಲಕನು ಮತ್ತು ಪಿಲಿಯಾನ್ ರೈಡರ್ ಇಬ್ಬರೂ ಸಹ ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸಬೇಕೆಂಬ ಆದೇಶವನ್ನು ನಾವು ನೀಡಿದ್ದರೂ ಸಹ ಹಲವಾರು ಚಾಲಕರು ಇದನ್ನು ಉಲ್ಲಂಘಿಸುತ್ತಿದ್ದಾರೆ.
ಈ ನಿಯಮಗಳು ಮಹಾ ನಗರಗಳಾದ ಬೆಂಗಳೂರು ಮತ್ತು ದೆಹಲಿಯಲ್ಲಿನ ಚಾಲಕರು ಪಾಲಿಸುತ್ತಿರುವಾಗ ನಮ್ಮಲ್ಲಿ ಏಕಿನ್ನು ಇದನುನ್ ಪಾಲಿಸಲು ಹಿಂದೇಟು ಹಾಕುತ್ತಿದ್ದೇವೆ ಎಂದು ಜಸ್ಟಿಸ್ ಎಸ್. ಮಣಿಕುಮಾರ್ ಮತ್ತು ಜಸ್ಟಿಸ್ ಸುಬ್ರಮನ್ಯಂರವರು ಅಧಿಕಾರಿಗಳನ್ನು ವಿಚಾರಣೆ ಮಾಡಲಾಗುತ್ತಿದೆ.
ಈ ಹಿಂದೆಯೆ ತಾವು ಹೆಲ್ಮೆಟ್ ವಿಚಾರವಾಗಿ ಆದೇಶವನ್ನು ನೀಡಲಾಗಿದ್ದು, ಕಡ್ಡಾಯ ಹೆಲ್ಮೆಟ್ ನಿಯಮವನ್ನು ರೈಡರ್ ಮತ್ತು ಪಿಲಿಯಾನ್ ರೈಡರ್ಗೆ ಅನುಷ್ಠಾನಗೊಳಿಸಲು ಕೋರಿ ಕೆ.ರಾಜೇಂದ್ರನ್ ಅವರು ಸಲ್ಲಿಸಿದ ಮನವಿಯನ್ನು ಕೇಳಿದ ಬಳಿಕ ಗುರುವಾರ ಗುರುವಾರ ಈ ವಿಚಾರಣೆಯನ್ನು ಮಾಡಲಾಗಿತ್ತು.
ವಿಚಾರಣೆಗಾಗಿ ಪಿಎಲ್ಐ ಬಂದಾಗ ನ್ಯಾಯಾಲಯವು ಉಲ್ಲಂಘನೆಗಾರರ ವಿರುದ್ಧ ಭಾರೀ ದಂಡವನ್ನು ವಿಧಿಸಿತು ಮತ್ತು ವಾಹನಗಳನ್ನು ದುರ್ಬಲಗೊಳಿಸುವ ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿತು. ಇದಕ್ಕೆ, ಹೆಚ್ಚುವರಿ ವಕೀಲ ಜನರಲ್ ಅರವಿಂದ್ ಪಾಂಡಿಯನ್ ಮೋಟಾರ್ ವಾಹನ ಕಾಯಿದೆ ಪ್ರಕಾರ, ಹೆಲ್ಮೆಟ್ ನಿಯಮ ಉಲ್ಲಂಘನೆಗಾಗಿ ಪೆನಾಲ್ಟಿಯಾಗಿ ರೂ. 100 ಮಾತ್ರ ವಿಧಿಸಬಹುದು ಎಂದು ಹೇಳಿದರು.
ಹೆಲ್ಮೆಟ್ ರಹಿತ ವಾಹನ ಚಾಲನೆ ಮಾಡುವ ರೈಡರ್ಗಳ ಮೇಲೆ ಕಠಿಣವಾದ ನಿಯಮವನ್ನು ತೆಗೆದುಕೊಳ್ಳಲು ನ್ಯಾಯಾಲಯದ ಬೆಂಚ್ ಈಗಾಗಲೇ ಆದೇಶವನ್ನು ಹೊರ ಹಾಕಿದ್ದು, ಅವಶ್ಯಕತೆ ಇದ್ದಲ್ಲಿ ಇಂತಹ ಚಾಲಕರ ವಾಹನಗಳನ್ನು ಕೂಡಾ ಸೀಜ್ ಮಾಡಲು ಕೂಡಾ ಆದೇಶ ನೀಡಲಾಗಿದೆ.
ಹೀಗಿರುವಾಗ ಚೆನ್ನೈನಲ್ಲಿ ಒಂದು ಹೊಸ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ತಮಿಳುನಾಡಿನಲ್ಲಿ ನೀವು ಯಾವುದೇ ಹೊಸ ದ್ವಿಚಕ್ರ ವಾಹನವನು ಖರೀದಿ ಮಾಡಿದ್ದಲ್ಲಿ ಆ ಡೀಲರ್ಗಳು ರೈಡರ್ಗೆ ಮತ್ತು ಪಿಲಿಯಾನ್ ರೈಡರ್ಗೆ ವಾಹನದ ಜೊತೆಗೆ ಹೆಲ್ಮೆಟ್ ಅನ್ನು ನೀಡಬೇಕಾಗಿ ಆದೇಶ ನೀಡಲಾಗಿದೆ.
ಈ ಕುರಿತಾದ ಆದೇಶವನ್ನು ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ತಮಿಳುನಾಡಿನಲ್ಲಿರುವ ಎಲ್ಲಾ ಡೀಲರ್ಗಳಿಗೆ ನೋಟಿಸ್ ಅನ್ನು ನೀಡಲಾಗಿದ್ದು, ಆ ಡೀಲರ್ಗಳು ಹೆಲ್ಮೆಟ್ ಅನ್ನು ಸಂಗ್ರಹಿಸಲು ಸಮಯವನ್ನು ಕೇಳಿದ್ದರು. ಹಾಗೆಯೆ ಅಲ್ಲಿನ ಸಾರಿಗೆ ಕಮಿಷನರ್ ಸಿ. ಸಮಮಮೂರ್ತಿ ಅವರು ತಮ್ಮ ಸಹಕಾರವನ್ನು ನಿರೀಕ್ಷಿಸುತ್ತಿರುವುದನ್ನು ವಿತರಕರು ಪುನರುಚ್ಚರಿಸಿದ್ದಾರೆ.
ಕೇಂದ್ರ ಮೋಟಾರ್ ವಾಹನ ನಿಯಮಗಳ ನಿಯಮ 138 (4) (ಎಫ್), 1989, ಈ ಶಿರಸ್ತ್ರಾಣಗಳು ರಾಷ್ಟ್ರೀಯ ಮಾನದಂಡಗಳ ಸಂಸ್ಥೆಯಾದ ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಸೂಚಿಸಿರುವ ನಿರ್ದಿಷ್ಟತೆಗಳಿಗೆ ದೃಢಪಡಿಸಬೇಕು ಎಂದು ಹೇಳಿದೆ.
ಇವುಗಳ ಜೊತೆಗೆ ಪೆಟ್ರೋಲ್ ಬಂಕ್ ಮಾಲೀಕರ ಸಂಘದವರು ಹೆಲ್ಮೆಟ್ ಇಲ್ಲದ ಬೈಕ್ ಸವಾರರ ವಿರುದ್ದ ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದು, ಹೆಲ್ಮೆಟ್ ಇಲ್ಲದೇ ಪೆಟ್ರೋಲ್ ಬಂಕ್ಗೆ ಬರುವವರಿಗೆ ಪೆಟ್ರೋಲ್ ಹಾಕದಿರಲು ನಿರ್ಧರಿಸಲಾಗಿದೆ.
ಜೂನ್ 1ರಿಂದಲೇ ಹೆಲ್ಮೆಟ್ ಇಲ್ಲದೆ ಪೆಟ್ರೋಲ್ ಬಂಕ್ಗೆ ಬರುವ ಬೈಕ್ ಸವಾರರಿಗೆ ಪೆಟ್ರೋಲ್ ಸಿಗುವುದಿಲ್ಲ ಎಂದು ಹೇಳಲಾಗಿದ್ದು, ದೆಹಲಿ ಬಳಿಯ ನೋಯ್ಡಾದಲ್ಲಿ ಇದನ್ನು ಮೊದಲ ಹಂತವಾಗಿ ಜಾರಿಗೆ ತರಲಾಗುತ್ತಿದೆ.