7ನೇ ದಿನಕ್ಕೆ ಕಾಲಿಟ್ಟ ಮಾರುತಿ ಸುಜುಕಿ ನೌಕರರ ಮುಷ್ಕರ

Workers Strike
ಬಾಬಾ ರಾಮದೇವ್ ಅವರ ಉಪವಾಸ ಸತ್ಯಾಗ್ರಹ ಸತತ 7 ದಿನಕ್ಕೆ ಕಾಲಿಟ್ಟಿದ್ದೆ. ಇದೇ ರೀತಿ ದೇಶದ ಬೃಹತ್ ಕಾರು ಕಂಪನಿ ಮಾರುತಿ ಸುಜುಕಿ ನೌಕರರ ಮುಷ್ಕರವೂ ಏಳನೇ ದಿನಕ್ಕೆ ಕಾಲಿಟ್ಟಿದ್ದೆ.

ವ್ಯತ್ಯಾಸವೆಂದರೆ ರಾಮದೇವ್ ಕಪ್ಪು ಹಣದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಆದರೆ ಮಾರುತಿ ನೌಕರರು ಹೊಸ ಸಂಘಟನೆಯನ್ನು ಪರಿಗಣಿಸುವ ಬೇಡಿಕೆಯನ್ನಿಟ್ಟು ಮುಷ್ಕರ ನಡೆಸುತ್ತಿದ್ದಾರೆ.

ಇದೀಗ ಕಂಪನಿಯ ಮಾನೆಸರ್ ಘಟಕದಲ್ಲಿ ಉತ್ಪಾದನೆಯೂ ಸಂಪೂರ್ಣ ಸ್ಥಗಿತಗೊಂಡಿದೆ. "ಶುಕ್ರವಾರದ ಪರಿಸ್ಥಿತಿಯೂ ನಿನ್ನೆಯಂತೆಯೇ ಇದೆ" ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.

ಕಳೆದ ಶನಿವಾರದಿಂದ ಸುಮಾರು 2 ಸಾವಿರ ನೌಕರರು ಮುಷ್ಕರ ನಿರತರಾಗಿದ್ದಾರೆ. ಇಲ್ಲಿವರೆಗೆ ಕಂಪನಿಗೆ ಸುಮಾರು 5,400 ಕಾರುಗಳ ಉತ್ಪಾದನೆ ನಷ್ಟವಾಗಿದೆ ಎನ್ನಲಾಗಿದೆ. ಕಂಪನಿಗೆ ಸುಮಾರು 270 ಕೋಟಿ ರು. ನಷ್ಟವಾಗಿದೆ ಎಂದು ಮೂಲಗಳು ಹೇಳಿವೆ.

ನೌಕರರ ಮುಷ್ಕರದ ಬಿಸಿ ಕಂಪನಿಯ ಷೇರಿಗೂ ತಟ್ಟಿದೆ. ಮುಂಬೈ ಷೇರುಪೇಟೆಯಲ್ಲಿ ಮಾರುತಿ ಷೇರು ಶೇ. 1.68ರಷ್ಟು ಇಳಿಕೆ ಕಂಡಿದ್ದು 1196.80 ರು.ಗೆ ತಲುಪಿದೆ.

More from DriveSpark

Article Published On: Friday, June 10, 2011, 12:20 [IST]
English summary
"Production at its Manesar facility continues to be completely stopped as the workers' strike at the plant entered its 7th day" Maruti Suzuki India Friday said.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+